
Chitradurga news|Nammajana.com|14-6-2025
ನಮ್ಮಜನ.ಕಾಂ, ಚಿತ್ರದುರ್ಗ: ದಿನಾಂಕ:14.06.2025 ರಂದು ಬೆಳಿಗ್ಗೆ 10-00 ಗಂಟೆಯಿಂದ ಸಂಜೆ 5-00 ಗಂಟೆಯವರೆವಿಗೂ ಎಫ್-10 ಜಿಲ್ಲಾ ಪಂಚಾಯತ್ 11 ಕೆ.ವಿ. ಮಾರ್ಗದ (POWER CUT) ಐ.ಯು.ಡಿ.ಪಿ. ಲೇಔಟ್, ಕಂದಾಯಗಿರಿ ನಗರ, ಕೆ.ಹೆಚ್.ಬಿ., ಟೀಚರ್ಸ್ ಕಾಲೋನಿ, ಸ್ಟೇಡಿಯಂ ರಸ್ತೆ, ಜೋಗಿಮಟ್ಟಿ ರಸ್ತೆ, ಗಾಂಧಿ ನಗರ, ಬುದ್ಧ ನಗರ, ಪ್ರಶಾಂತ್ ನಗರ, ವಿ.ವಿ ಬಡಾವಣೆ ಮತ್ತು ಸುತ್ತಮುತ್ತಲ ಪ್ರದೇಶದಲ್ಲಿ ತುರ್ತು ನಿರ್ವಹಣಾ ಕಾಮಗಾರಿ ಇರುವುದರಿಂದ ವಿದ್ಯುತ್ ಸರಬರಾಜು ಇರುವುದಿಲ್ಲ.
ಇದನ್ನೂ ಓದಿ: Adike rate | ಅಡಿಕೆ ಬೆಲೆಯಲ್ಲಿ ಇಳಿಕೆ

ದಿನಾಂಕ:15.06.2025 ರಂದು ಬೆಳಿಗ್ಗೆ 10-00 ಗಂಟೆಯಿಂದ ಸಂಜೆ 5-00 ಗಂಟೆಯವರೆವಿಗೂ ಎಫ್-12 ಜೆ.ಸಿ.ಆರ್ 11 ಕೆ.ವಿ. ಮಾರ್ಗದ ಜೆ.ಸಿ.ಆರ್, ವಿ.ಪಿ ಬಡಾವಣೆ, ಜೆ.ಜೆ. ಹಟ್ಟಿ, ಹೊರಪೇಟೆ, ಗೋಪಾಲಪುರ ರಸ್ತೆ, ಪ್ರಸನ್ನ ಟಾಕೀಸ್ ರಸ್ತೆ, ಮಾರುತಿ ನಗರ ಹಾಗೂ ಎಫ್-03 ಬ್ಯಾಂಕ್ ಕಾಲೋನಿ 11 ಕೆ.ವಿ. ಮಾರ್ಗದ ಬ್ಯಾಂಕ್ ಕಾಲೋನಿ, ಸಾಯಿ ಸಿಟಿ, ಕೆ.ಹೆಚ್.ಬಿ ಕಾಲೋನಿ, ಚಿತ್ರಾಡಾನ್ ಬಾಸ್ಕೋ ಸುತ್ತ ಮುತ್ತ, ಶ್ರೀಶೈಲ (POWER CUT) ಬಡಾವಣೆ, ಅಲೆಕ್ಸಾಂಡರ್ ಬಡಾವಣೆ ಮತ್ತು ಸುತ್ತಮುತ್ತಲ ಪ್ರದೇಶದಲ್ಲಿ ತುರ್ತು ನಿರ್ವಹಣಾ ಕಾಮಗಾರಿ ಇರುವುದರಿಂದ ವಿದ್ಯುತ್ ಸರಬರಾಜು ಇರುವುದಿಲ್ಲ. ಆದ್ದರಿಂದ, ಚಿತ್ರದುರ್ಗ ನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳ ಎಲ್ಲಾ ಗ್ರಾಹಕರು ವಿದ್ಯುತ್ ನಿಲುಗಡೆಯ ಸಮಯದಲ್ಲಿ ಸಹಕರಿಸಬೇಕಾಗಿ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ವಿನಂತಸಿದ್ದಾರೆ.