Namma JanaNamma JanaNamma Jana
  • ಇಂದಿನ ಸುದ್ದಿ
  • ರಾಜಕೀಯ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಕ್ರೀಡೆ
  • ಆರೋಗ್ಯ
  • ದಿನ ಭವಿಷ್ಯ
Reading: Challakere : ಬಿಡ್ಜ್ ಕಂ ಬ್ಯಾರೇಜ್ ಗೆ ಸರ್ಕಾರ ಗ್ನಿನ್ ಸಿಗ್ನಲ್ | ರಘುಮೂರ್ತಿ ರೈತಪರ ಕಾಳಜಿಗೆ ಮತ್ತೊಂದು ಗರಿ
Share
Notification Show More
Font ResizerAa
Font ResizerAa
Namma JanaNamma Jana
  • ಇಂದಿನ ಸುದ್ದಿ
  • ರಾಜಕೀಯ
  • ವಿಶೇಷ ಸುದ್ದಿ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಆರೋಗ್ಯ
  • ಕ್ರೀಡೆ
  • ದಿನ ಭವಿಷ್ಯ
  • ರಾಜಕೀಯ
Search
  • ಇಂದಿನ ಸುದ್ದಿ
  • ರಾಜಕೀಯ
  • ವಿಶೇಷ ಸುದ್ದಿ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಆರೋಗ್ಯ
  • ಕ್ರೀಡೆ
  • ದಿನ ಭವಿಷ್ಯ
  • ರಾಜಕೀಯ
Have an existing account? Sign In
Follow US
  • Advertise
© 2024 Namma Janna. Kannada News Portal. All Rights Reserved.
Namma Jana > Blog > ಇಂದಿನ ಸುದ್ದಿ > Challakere : ಬಿಡ್ಜ್ ಕಂ ಬ್ಯಾರೇಜ್ ಗೆ ಸರ್ಕಾರ ಗ್ನಿನ್ ಸಿಗ್ನಲ್ | ರಘುಮೂರ್ತಿ ರೈತಪರ ಕಾಳಜಿಗೆ ಮತ್ತೊಂದು ಗರಿ
ಇಂದಿನ ಸುದ್ದಿ

Challakere : ಬಿಡ್ಜ್ ಕಂ ಬ್ಯಾರೇಜ್ ಗೆ ಸರ್ಕಾರ ಗ್ನಿನ್ ಸಿಗ್ನಲ್ | ರಘುಮೂರ್ತಿ ರೈತಪರ ಕಾಳಜಿಗೆ ಮತ್ತೊಂದು ಗರಿ

Nammajana Sub Editor
Last updated: 4 July 2025 17:39
By Nammajana Sub Editor 2 Min Read
Share
SHARE

Chitradurga News|Nammajana.com | 04-07-2025

ನಮ್ಮಜನ.ಕಾಂ, ಚಳ್ಳಕೆರೆ: ಚಳ್ಳಕೆರೆ(challakere)ವಿಧಾನಸಭಾ ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ಕ್ಷೇತ್ರದ ಸರ್ವತೋಮುಖ ಅಭಿವೃದ್ದಿಗೆ ಕಳೆದ ಸುಮಾರು 12 ವರ್ಷಗಳಿಂದ ಪ್ರಾಮಾಣಿಕತೆಯಿಂದ ಕಾರ್ಯನಿರ್ವಹಿಸುತ್ತಿದ್ದು ಕ್ಷೇತ್ರದ ಮತದಾರರ ವಿಶ್ವಾಸವನ್ನು ಗಟ್ಟಿಗೊಳಿಸುವಲ್ಲಿ ಯಶಸ್ವಿಯಾಗಿದ್ಧಾರೆ.

ಇದನ್ನೂ ಓದಿ: Gold Rate | ಇಂದಿನ 22 ಕ್ಯಾರೆಟ್ ಬಂಗಾರದ ಬೆಲೆ ಎಷ್ಟಿದೆ

ಕಳೆದ ಎರಡು ವರ್ಷಗಳಿಂದ ನಿರಂತರವಾಗಿ ಚಳ್ಳಕೆರೆ ವಿಧಾನಸಭಾ ಕ್ಷೇತ್ರಕ್ಕೆ ಎರಡು ಹೆಚ್ಚುವರಿ ಬಿಡ್ಜ್ ಕಂ ಬ್ಯಾರೇಜ್ ನಿರ್ಮಾಣಕ್ಕೆ ಅವಕಾಶ ನೀಡಬೇಕೆಂದು ವಿಧಾನಸಭಾ ಅಧಿವೇಶನವಲ್ಲದೆ, ಸಿಎಂ, ಡಿ.ಸಿಎಂ ಹಾಗೂ ನೀರಾವರಿ ಸಚಿವರಿಗೆ ಮನವಿ ನೀಡಿ ನಿರಂತರ ಒತ್ತಾಯ ಪಡಿಸುತ್ತಿದ್ದರು.

ಪ್ರಸ್ತುತ ಚಳ್ಳಕೆರೆ(challakere) ವಿಧಾನಸಭಾ ಕ್ಷೇತ್ರದಲ್ಲಿ ಪರಶುರಾಮಪುರ, ಭೌಳೂರು, ಬೊಂಬೇರಹಳ್ಳಿ, ಕಲಮರಹಳ್ಳಿಯಲ್ಲಿ ಬಿಡ್ಜ್ ಕಂ ಬ್ಯಾರೇಜ್ ನಿರ್ಮಾಣವಾಗಿದ್ದು, ಸುತ್ತಮುತ್ತಲ ಹತ್ತಾರು ಗ್ರಾಮಗಳ, ಸಾವಿರಾರು ರೈತರ ಜಮೀನು ಹಾಗೂ ಜಾನುವಾರುಗಳಿಗೆ ಸಮೃದ್ದಿ ಕುಡಿಯುವ ನೀರಿನ ಸೌಕರ್ಯವನ್ನು ಶಾಸಕರು ಒದಗಿಸಿದ್ಧಾರೆ.

ಶಾಸಕರ ಒತ್ತಾಯದ ಮೇರೆಗೆ ಜುಲೈ 2ರಂದು ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿಗಿರಿಧಾಮದಲ್ಲಿ ನಡೆದ ಸಂಪುಟ ಸಭೆಯಲ್ಲಿ ಗೋಸಿಗೆರೆ ಗ್ರಾಮದ ಬಳಿ ಬಿಡ್ಜ್ ಕಂ ಬ್ಯಾರೇಜ್ ನಿರ್ಮಾಣಕ್ಕೆ 30.50ಕೋಟಿ ವೆಚ್ಚದ ಕಾಮಗಾರಿಗೆ ಅನುಮೋದನೆ ದೊರಕಿದೆ. ಇದರಿಂದ ವಡೇರಹಳ್ಳಿ, ಬೊಂಬೇರಹಳ್ಳಿ, ಕಸ್ತೂರಿತಿಮ್ಮನಹಳ್ಳಿ, ದ್ಯಾವರನಹಳ್ಳಿ, ದೇವರಮರಿಕುಂಟೆ ಗ್ರಾಮಗಳ ಸುತ್ತಮುತ್ತಲ್ಲಿನಲ್ಲಿ ಅಂತರ್ಜನ ಹೆಚ್ಚುತ್ತದಲ್ಲದೆ, ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ದೊರಕಿದಂತಾಗುತ್ತದೆ.

ತೋರೆಬೀರನಹಳ್ಳಿ ಮತ್ತು ಬೆಳಗೆರೆ ಗ್ರಾಮದ ನಡುವೆ ಸುಮಾರು 28 ಕೋಟಿ ಬಿಡ್ಜ್ ಕಂ ಬ್ಯಾರೇಜ್ ನಿರ್ಮಾಣಕ್ಕೆ ಅನುಮತಿ ದೊರಕಿದ್ದು ಇದರಿಂದ ನಾರಾಯಣಪುರ, ಕೋನಿಗರಹಳ್ಳಿ, ರಂಗನಾಥಪುರ ವ್ಯಾಪ್ತಿಯ ಗ್ರಾಮಗಳಿಗೆ ನೀರಾವರಿ ಸೌಲಭ್ಯ ದೊರಕಲಿದೆ.

ವಿಶೇಷವಾಗಿ ಜಾಜೂರು ಗ್ರಾಮದ ನಾಗಗೊಂಡನಹಳ್ಳಿ ಬಳಿ ಕಳೆದ 2013ಕ್ಕೂ ಮುಂಚೆ ನಿರ್ಮಾಣ ಮಾಡಿದ್ದ ಬಿಡ್ಜ್ ಕಂ ಬ್ಯಾರೇಜ್ ಮಳೆಗೆ ಕೊಚ್ಚಿಹೋಗಿದ್ದು, ನೂತನ ಬ್ಯಾರೇಜ್ ನಿರ್ಮಾಣಕ್ಕಾಗಿ ಸಣ್ಣ ನೀರಾವರಿ ಇಲಾಖೆಗೆ 8.50ಕೋಟಿ ಅನುದಾನವನ್ನು ನೀಡಲಾಗಿದೆ.

ಇದನ್ನೂ ಓದಿ: ಸ್ಪರ್ಧಾತ್ಮಕ ಪರೀಕ್ಷಾ ಪೂರ್ವ ತರಬೇತಿ ಅರ್ಜಿ ಆಹ್ವಾನ

ಕ್ಷೇತ್ರ ವ್ಯಾಪ್ತಿಯಲ್ಲಿ ಎರಡು ಕಡೆ ನೂತನ ಬಿಡ್ಜ್ ಕಂ ಬ್ಯಾರೇಜ್ ನಿರ್ಮಾಣ, ಒಂದು ಬ್ಯಾರೇಜ್ ನಿರ್ಮಾಣಕ್ಕಾಗಿ ಅನುದಾನ ನೀಡಿ ಜನರ ಸಂಕಷ್ಟಗಳಿಗೆ ಸ್ಪಂದಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಣ್ಣನೀರಾವರಿ ಸಚಿವ ಎನ್.ಎಸ್.ಬೋಸರಾಜ್‌ರವರಿಗೆ ಶಾಸಕರು ಕೃತಜ್ಞತೆ ತಿಳಿಸಿದ್ಧಾರೆ.

ತಾಲ್ಲೂಕಿಗೆ ಮತ್ತೊಂದು ಗಿಫ್ಟ್ :

ತಾಲ್ಲೂಕಿನ ಗಡಿಭಾಗದಲ್ಲಿರುವ ಗುಡಿಹಳ್ಳಿ-ತಪ್ಪಗೊಂಡನಹಳ್ಳಿ ಮಾರ್ಗದ ಮಧ್ಯೆ ವೇದಾವತಿ ನದಿಗೆ ಅಡ್ಡಲಾಗಿ ಬಿಡ್ಜ್ ಕಂ ಬ್ಯಾರೇಜ್ ನಿರ್ಮಾಣಕ್ಕೆ 31.40 ಕೋಟಿ ಅನುದಾನ ದೊರಕಿದೆ.

You Might Also Like

law graduates: ಆಡಳಿತ ನ್ಯಾಯಾಧೀಕರಣ ತರಬೇತಿ | ಕಾನೂನು ಪದವೀಧರರಿಂದ ಅರ್ಜಿ ಆಹ್ವಾನ

Municipal Council: ನಗರಸಭೆ | ವಿವಿಧ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನ

Application: ಬೀದಿನಾಟಕ, ಜಾನಪದ ಸಂಗೀತ | ಕಲಾ ತಂಡಗಳಿಂದ ಅರ್ಜಿ ಆಹ್ವಾನ

adike rate | ಇಂದಿನ ಅಡಿಕೆ ರೇಟ್ | 05-07-2025

Development work | ಚಿಕ್ಕಗೊಂಡನಹಳ್ಳಿಯಲ್ಲಿ ಮೂರು ಕೋಟಿ ವೆಚ್ಚದ ಅಭಿವೃದ್ದಿ ಕಾಮಗಾರಿಗೆ ಶಾಸಕ ಟಿ.ರಘುಮೂರ್ತಿ ಚಾಲನೆ

TAGGED:Bidge Co. BarrageChallakereChitradurgaChitradurga NewsKannada Newskannada suddiMLA T. Raghumurthynamjana.comNammajana.comಕನ್ನಡ ನ್ಯೂಸ್ಕನ್ನಡ ಸುದ್ದಿಚಳ್ಳಕೆರೆಚಿತ್ರದುರ್ಗ ನ್ಯೂಸ್ಚಿತ್ರದುರ್ಗ ಸುದ್ದಿನಮ್ಮಜನ.ಕಾಂಬಿಡ್ಜ್ ಕಂ ಬ್ಯಾರೇಜ್ಶಾಸಕ ಟಿ.ರಘುಮೂರ್ತಿ
Share This Article
Facebook Twitter Whatsapp Whatsapp Telegram Email Print
ಈ ಮೇಲಿನ ಸುದ್ದಿ, ಲೇಖನದ ಬಗ್ಗೆ ನಿಮ್ಮ ಅನಿಸಿಕೆ ಏನು?
Love0
Sad0
Happy0
Sleepy0
Angry0
Dead0
Wink0
Previous Article Gold Rate | ಇಂದಿನ 22 ಕ್ಯಾರೆಟ್ ಬಂಗಾರದ ಬೆಲೆ ಎಷ್ಟಿದೆ
Next Article Dina Bhavishya | ದಿನ ಭವಿಷ್ಯ, ಇವತ್ತು ಯಾವ ರಾಶಿಗೆ ಶುಭಯೋಗ?
Leave a comment

Leave a Reply Cancel reply

Your email address will not be published. Required fields are marked *

Stay Connected

TelegramFollow

Latest News

Accident | ಖಾಸಗಿ ಬಸ್- ಬೈಕ್ ಅಪಘಾತ, ಬಸ್ ನಲ್ಲಿ ಹೊತ್ತಿ ಉರಿದ ಬೆಂಕಿ, ಬೈಕ್ ಸವಾರ ಸಾವು
ಕ್ರೈಂ ಸುದ್ದಿ
Gold Rate | ಇಂದಿನ ಬಂಗಾರದ ಬೆಲೆಯಲ್ಲಿ ಏರಿಕೆ
ಇಂದಿನ ಸುದ್ದಿ
Dina Bhavishya | ದಿನ ಭವಿಷ್ಯ, ಇವತ್ತು ಯಾವ ರಾಶಿಗೆ ಶುಭಯೋಗ?
ದಿನ ಭವಿಷ್ಯ
Gold Rate | ಇಂದಿನ 22 ಕ್ಯಾರೆಟ್ ಬಂಗಾರದ ಬೆಲೆ ಎಷ್ಟಿದೆ
ಇಂದಿನ ಸುದ್ದಿ

Kannada News (ಕನ್ನಡ ಸುದ್ದಿ): Get the latest updates of karnataka news, world news, india news, political News and celebrity Kannada news and more on Nammajana (nammajana.com).

Sign Up for Our Newsletter

Subscribe to our newsletter to get our newest articles instantly!

Namma JanaNamma Jana
© 2025 NammaJanna. Kannada News Portal. All Rights Reserved.
adbanner
AdBlock Detected
Our site is an advertising supported site. Please whitelist to support our site.
Okay, I'll Whitelist
Welcome Back!

Sign in to your account

Lost your password?