Chitradurga news|Nammajana.com|10-7-2025
ನಮ್ಮಜನ.ಕಾಂ, ಚಿತ್ರದುರ್ಗ: ನಗರಸಭೆ ಉಪಾಧ್ಯಕ್ಷೆ ಜಿ. ಎಸ್.ಶ್ರೀದೇವಿ ವಿರುದ್ಧ ಬುಧವಾರ ಅವಿಶ್ವಾಸ (Chitradurga) ಮಂಡಿಸಲಾಯಿತು.
ನಗರದ ಕೌನ್ಸಿಲ್ ಸಭಾಂಗಣದಲ್ಲಿ ಅಧ್ಯಕ್ಷೆ ಬಿ.ಎನ್.ಸುಮಿತ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ವಿಶೇಷ ಸಾಮಾನ್ಯ ಸಭೆಯಲ್ಲಿ ಹಾಜರಿದ್ದ ಎಲ್ಲ 32 ಸದಸ್ಯರು ಕೈ ಎತ್ತುವ ಮೂಲಕ ಆವಿಶ್ವಾಸ ಮಂಡಿಸಿದರು.

ಉಪಾಧ್ಯಕ್ಷೆ ಕೌನ್ಸಿಲ್ ಸಭೆಗಳಲ್ಲಿ ಆಗೌರವದಿಂದ ವರ್ತಿಸಿ, ಅಧಿಕಾರಿಗಳಿಗೆ ಏಕವಚನದಲ್ಲಿಸಂಬೋಧಿಸಿದ್ದು, ಇದರಿಂದ ದಿನಪತ್ರಿಕೆಗಳಲ್ಲಿ ಸುದ್ದಿಗಳು ಪ್ರಕಟಗೊಂಡು ನಗರಸಭೆ ಸದಸ್ಯರಿಗೆ ಮುಜುಗರವಾಗಿದೆ. ಈ ಬಗ್ಗೆ ನಗರಸಭೆ ಸಿಬ್ಬಂದಿ ರೇಣುಕಾ ಟಿಪ್ಪಣಿ ಓದಿದರು.
ಅಧ್ಯಕ್ಷೆ ಸುಮಿತ ಮಾತನಾಡಿ, ಉಪಾಧ್ಯಕ್ಷರ ವಿರುದ್ಧ ಅವಿಶ್ವಾಸ ಇರುವವರು ಕೈಯೆತ್ತುವಂತೆ ತಿಳಿಸಿದಾಗ, ಅಧ್ಯಕ್ಷೆ ಹಾಗೂ ಸ್ಥಾಯಿ ಸಮಿತಿ ಅಧ್ಯಕ್ಷ ಸೈಯದ್ ನಸರುಲ್ಲಾ ಸೇರಿದಂತೆ ಸಭೆಯಲ್ಲಿ ಹಾಜರಿದ್ದ ಎಲ್ಲ ಸದಸ್ಯರು ಕೈಯೆತ್ತಿದರು.
ಇದನ್ನೂ ಓದಿ: Gold Rate Today | ಬಂಗಾರದ ಬೆಲೆಯಲ್ಲಿ ಇಂದು ಏರಿಕೆ
ಪೌರಾಯುಕ್ತ ಎಂ.ರೇಣುಕಾ ಮಾತನಾಡಿ, ಇಂದಿನ ವಿಶೇಷ ಸಾಮಾನ್ಯ ಸಭೆಯಲ್ಲಿ ಉಪಾಧ್ಯಕ್ಷರ ವಿರುದ್ಧ ಮಂಡಿಸಿರುವ ಅವಿಶ್ವಾಸದ ವರದಿಯನ್ನು ಜಿಲ್ಲಾಧಿಕಾರಿ ಅವರಿಗೆ (Chitradurga) ಸಲ್ಲಿಸುವುದಾಗಿ ಹೇಳಿದರು. ಸಭೆಯಲ್ಲಿ ಉಪಾಧ್ಯಕ್ಷೆ ಜಿ. ಎಸ್.ಶ್ರೀದೇವಿ, ಸದಸ್ಯರಾದ ಲಕ್ಷ್ಮಮ್ಮ, ಎಚ್.ಶ್ರೀನಿವಾಸ್ ಗೈರಾಗಿದ್ದರು.
ಇದನ್ನೂ ಓದಿ: Kabbadi: ನಾಳೆ ಪುರುಷರ ಹೊನಲು ಬೆಳಕಿನ ಕಬಡ್ಡಿ ಆರಂಭ
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ನಮ್ಮ ವರದಿಗಾರರು. ನಿಮ್ಮೂರಿನ ಸಭೆ, ಸಮಾರಂಭ, ಶಾಲೆ ಕಾಲೇಜು ಕಾರ್ಯಕ್ರಮಗಳು, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಉತ್ತಮವಾದ ಫೋಟೋ ಜೊತೆಗೆ ಕಳುಹಿಸಬಹುದು. ಸುದ್ದಿ ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ. ಮತ್ತು ಜಾಹಿರಾತುಗಳನ್ನು ಆಕರ್ಷಕ ದರದಲ್ಲಿ ಪ್ರಕಟಿಸಲಾಗುವುದು.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ನಮ್ಮಜನ.ಕಾಂ gmail: nammajananews@gmail.com
» Whatsapp Number-9686622252