Chitradurga news | nammajana.com | 28-07-2025
ನಮ್ಮಜನ.ಕಾಂ,ಚಿತ್ರದುರ್ಗ: ಭೀಮಸಮುದ್ರದಲ್ಲಿ (Bhimasamudra) ನಾಲ್ಕಾರು ದಿನಗಳಿಂದ ಬರುತ್ತಿರುವ ಜಿಟಿಜಿಟಿ ಮಳೆ ಕಾರಣದಿಂದಾಗಿ ಭೀಮಸಮುದ್ರದ ముఖ్య ರಸ್ತೆಯು ಕೆಸರು ರಾಡಿಯಂತಾಗಿದ್ದು, ಅಲ್ಲಿನ ಜನರು ಓಡಾಟಕ್ಕೆ ಕಷ್ಟಪಡುವಂತಾಗಿದೆ.
ಇದನ್ನೂ ಓದಿ: ರಾಜ್ಯ ಸರ್ಕಾರ ರೈತರಿಗೆ ಯೂರಿಯಾ ಗೊಬ್ಬರ ನೀಡದೇ ಅಭಾವ ಸೃಷ್ಟಿಸಿದೆ : ಕೆ.ಎಸ್. ನವೀನ್ ಆರೋಪ

ಚಿತ್ರದುರ್ಗ ಭೀಮಸಮುದ್ರ ಹೊಳಲ್ಕೆರೆ ಮಾರ್ಗದ ಈ ರಸ್ತೆ ಸಂಪೂರ್ಣ ಕೆಸರುಮಯ ಆಗಲು ಇಲ್ಲಿ ಗಣಿಗಾರಿಕೆಯ ಸಾಮಗ್ರಿ ಸಾಗಿಸುವ ಲಾರಿಗಳ ಕೊಡುಗೆಯೂ ಅಪಾರವಾಗಿದೆ.
ಗರಿಷ್ಠ ಮಿತಿಗಿಂತ ಹೆಚ್ಚು ಗಣಿಯ ಅದಿರನ್ನು ಈ ತುಂಬಿಕೊಂಡ ಲಾರಿಗಳು ರಸ್ತೆಗಳನ್ನು ಬಳಸುವುದರಿಂದ ಕೆಲ ವರ್ಷಗಳ ಹಿಂದೆಯಷ್ಟೇ ದುರಸ್ತಿ-ಯಾಗಿದ್ದ ಡಾಂಬರ್ ರಸ್ತೆಗಳು ಕಿತ್ತು ಹೋಗಿ, ಗುಂಡಿ ಬಿದ್ದು, ಅಲ್ಲಲ್ಲಿ ನೀರು ತುಂಬಿಕೊಂಡಿರುವ ಪರಿಣಾಮ ಕೆಸರು ಗದ್ದೆಗಳ ರೂಪಕ್ಕೆ ಈ ರಸ್ತೆಗಳು ತಿರುಗಿವೆ.
ರಸ್ತೆಗಳಲ್ಲಿ ದ್ವಿಚಕ್ರ(Bhimasamudra) ವಾಹನಗಳ ಸವಾರರು ಓಡಾಡುವುದು ದುಸ್ತರ-ವಾಗಿದ್ದರೆ, ರಸ್ತೆಯನ್ನು ಬಳಸಿಕೊಂಡು ಜಮೀನುಗಳಿಗೆ ಹೋಗುವ ರೈತರು, ಶಾಲೆಗಳಿಗೆ ತೆರಳುವ ಮಕ್ಕಳು ಉಸಿರು ಬಿಗಿ ಹಿಡಿದು ಓಡಾಡುವಂತಾಗಿದೆ.
ಇದನ್ನೂ ಓದಿ: ಸಾಧನೆಗೆ ಬದ್ಧತೆ ಮತ್ತು ಕಠಿಣ ಪರಿಶ್ರಮ ಅತ್ಯಗತ್ಯ: MC ರಘುಚಂದನ್
ಅನೇಕ ಹಳ್ಳಿಗಳಿಗೆ ಮುಖ್ಯ ರಸ್ತೆಯಾಗಿ, ಜೀವನಾಡಿಯಾಗಿದ್ದ ರಸ್ತೆ ಈಗ ಗುಂಡಿ, ಕೆಸರು, ಕೊಚ್ಚೆಯಿಂದ ಕೂಡಿದೆ. ಈ ಮಾರ್ಗದ ಮೂಲಕ ಸಾಗುವ ಮಳಲಿ, ವಿ.ಪಾಳ್ಯ, ನೆಲ್ಲಿಕಟ್ಟೆ, ಬಿಜ್ಜನಾಳ್, ಹಿರೇಕಂದವಾಡಿ, ಬಿ. ದುರ್ಗ ಹಳ್ಳಿಗಳ ವಿದ್ಯಾರ್ಥಿಗಳು, ರೈತರು, ಕೂಲಿ ಕಾರ್ಮಿಕರು, ಜನಸಾಮಾನ್ಯರು ಬೇಸತ್ತು ಹೋಗಿದ್ದಾರೆ.
ಸಂಬಂಧಿಸಿದ(Bhimasamudra) ಇಲಾಖೆಯ ಅಧಿಕಾರಿಗಳು ಈ ಸಮಸ್ಯೆಯನ್ನು ಗಮನಿಸಿ ದುರಸ್ತಿ ಕಾರ್ಯವನ್ನು ಕೂಡಲೇ ನಡೆಸಬೇಕು ಎಂಬುದು ಗ್ರಾಮಸ್ಥರು ಕೋರಿಕೆಯಾಗಿದೆ.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ನಮ್ಮ ವರದಿಗಾರರು. ನಿಮ್ಮೂರಿನ ಸಭೆ, ಸಮಾರಂಭ, ಶಾಲೆ ಕಾಲೇಜು ಕಾರ್ಯಕ್ರಮಗಳು, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಉತ್ತಮವಾದ ಫೋಟೋ ಜೊತೆಗೆ ಕಳುಹಿಸಬಹುದು. ಸುದ್ದಿ ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ. ಮತ್ತು ಜಾಹಿರಾತುಗಳನ್ನು ಆಕರ್ಷಕ ದರದಲ್ಲಿ ಪ್ರಕಟಿಸಲಾಗುವುದು.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ನಮ್ಮಜನ.ಕಾಂ gmail: nammajananews@gmail.com
» Whatsapp Number-9686622252