Chitradurga news|Nammajana.com|06-10-2025
ನಮ್ಮಜನ.ಕಾಂ, ಚಳ್ಳಕೆರೆ: ಕರ್ನಾಟಕ ಸರ್ಕಾರದ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಮಹರ್ಷಿ ವಾಲ್ಮೀಕಿ (Valmiki Award) ಜಯಂತಿಯಂದು ಸಮುದಾಯದ ವಿಶೇಷ ಸೇವೆ ಸಲ್ಲಿಸಿದವರನ್ನು ಆಯ್ಕೆ ಮಾಡಿ ಅವರಿಗೆ ವಾಲ್ಮೀಕಿ ಪ್ರಶಸ್ತಿ ನೀಡಿ ಗೌರವಿಸುತ್ತದೆ.

ಚಳ್ಳಕೆರೆಗೆ ಮೂರನೇ ಬಾರಿಗೆ ವಾಲ್ಮೀಕಿ ಪ್ರಶಸ್ತಿ
ಪ್ರಸ್ತುತ 2025 ರ ಮಹರ್ಷಿವಾಲ್ಮೀಕಿ ಪ್ರಶಸ್ತಿಯನ್ನು ಹಿರಿಯ ರಂಗತಜ್ಞ, ನಿರ್ದೇಶಕ, ನಿವೃತ್ತ ಮುಖ್ಯೋಪಾಧ್ಯಾಯ ಹಾಗೂ ಲೇಖಕ ಪಿ.ತಿಪ್ಪೇಸ್ವಾಮಿಯವರಿಗೆ ಘೋಷಿಸಿದ್ದು ಅ.೭ರಂದು (Valmiki Award) ಬೆಂಗಳೂರಿನಲ್ಲಿ ನಡೆಯುವ ರಾಜ್ಯಮಟ್ಟದ ಕಾರ್ಯಕ್ರಮದಲ್ಲಿ ಪಿ.ತಿಪ್ಪೇಸ್ವಾಮಿಯವರಿಗೆ ಶ್ರೀಮಹರ್ಷಿ ವಾಲ್ಮೀಕಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುವುದು.
ಚಳ್ಳಕೆರೆ ರಂಗಭೂಮಿ ಕಲಾವಿದ ತಿಪ್ಪೇಸ್ವಾಮಿಗೆ ರಾಜ್ಯ ವಾಲ್ಮೀಕಿ ಪ್ರಶಸ್ತಿ
ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯ ಅಧೀನ ಕಾರ್ಯದರ್ಶಿ ಎಂ.ಎಸ್.ಜ್ಯೋತಿ ಈ ಬಗ್ಗೆ ಪ್ರಕಟಣೆ ನೀಡಿ ರಾಜ್ಯದ ವಿವಿಧ ರಂಗದಲ್ಲಿ ಸೇವೆಸಲ್ಲಿಸಿದ ವಾಲ್ಮೀಕಿ ಸಮುದಾಯದ ಹಿರಿಯರನ್ನು ಗುರುತಿಸಿ ಗೌರವಿಸಲಾಗಿದೆ. ಚಳ್ಳಕೆರೆ ನಗರದ ವಿಠಲನಗರ ನಿವಾಸಿ ಪಿ.ತಿಪ್ಪೇಸ್ವಾಮಿಯವರಿಗೆ ಪ್ರಸ್ತುತ ವರ್ಷದ ಮಹರ್ಷಿ ವಾಲ್ಮೀಕಿ ಪ್ರಶಸ್ತಿ ದೊರಕಿದೆ ಎಂದಿದ್ಧಾರೆ.
ಐವತ್ತು ವರ್ಷಗಳ ಕಲಾಸೇವೆ
ಹಿರಿಯ ರಂಗತಜ್ಞ ಪಿ.ತಿಪ್ಫೇಸ್ವಾಮಿ ಕಳೆದ ಸುಮಾರು ೫೦ ವರ್ಷಗಳಿಂದ ಕಲೆ, ನಾಟಕ, ರಂಗಭೂಮಿ, ಸಾಹಿತ್ಯ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ನಿರಂತರ ತೊಡಗಿಕೊಂಡು ಸೇವೆಸಲ್ಲಿಸಿದ್ಧಾರೆ.
ವಿಶೇಷವಾಗಿ ತಾಲ್ಲೂಕಿನಲ್ಲಿ ರಂಗಭೂಮಿಯಲ್ಲಿ ಸೇವೆ ಸಲ್ಲಿಸಿದ ಹಿರಿಯರನ್ನು ಗುರುತಿಸಿ ಅವರಿಗೆ ಸರ್ಕಾರದಿಂದ ನೆರವು ಕಲ್ಪಿಸುವಲ್ಲಿ ಯಶಸ್ವಿಯಾಗಿದ್ಧಾರೆ. ತಾಲ್ಲೂಕು ಅಲ್ಲದೆ, ಜಿಲ್ಲೆಯ ಬಹುತೇಕ ಭಾಗಗಳ ಹಿರಿಯ ರಂಗಕಲಾವಿದರಿಗೆ ಇವರು ಆಸರೆಯಾಗಿದ್ಧಾರೆ.
ಮಾಜಿ ಸಚಿವ ದಿವಂಗತ ತಿಪ್ಫೇಸ್ವಾಮಿಯವರ ಒಡನಾಡಿಯಾಗಿದ್ದು, ಅವರೊಂದಿಗೆ ಅನೇಕ ಪಾತ್ರಗಳಲ್ಲಿ ನಡೆಸಿದ್ದಾರೆ. ಅನೇಕ ಸಾಮಾಜಿಕ, ಪೌರಾಣಿಕ ನಾಟಕಗಳಲ್ಲಿ ಅಭಿನಯಿಸಿ, ನಿರ್ದೇಶಿಸಿದ್ಧಾರೆ. ಸಂಗೀತ ಕಲೆಯಲ್ಲೂ ಸಹ ಇವರ ಆಸಕ್ತಿ ಹೆಚ್ಚು. ಮ್ಯಾಸಬೇಡರ ಮೌಖಿಕ ಕಥನಗಳು, ಮ್ಯಾಸಬೇಡರ ಪಾರಂಪರಿಕ ನೆಲೆಗಳು ಎಂಬ ಬುಡಕಟ್ಟು (Valmiki Award) ಸಮುದಾಯಕ್ಕೆ ಸೇರಿದ ಪರಂಪರೆಯ ಬಗ್ಗೆ ಪುಸ್ತಕಗಳನ್ನು ಪ್ರಕಟಿಸಿರುವುದು ಇವರ ಹೆಗ್ಗಳಿಕೆಗೆ ಸಾಕ್ಷಿ.
ಹಿರಿಯ ರಂಗತಜ್ಞ ಪಿ.ತಿಪ್ಪೇಸ್ವಾಮಿಯವರ ಸಾಮಾಜಿಕ ಸೇವೆ ಹಾಗೂ ಕಳಕಳಿಯನ್ನು ಗುರುತಿಸಿ ರಾಜ್ಯ ಸರ್ಕಾರ ೨೦೨೩ರ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ಗೌರವಿಸಿತ್ತು. ಪಿ.ತಿಪ್ಪೇಸ್ವಾಮಿಯವರಿಗೆ ಮತ್ತೊಮ್ಮೆ ಎರಡನೇ ಬಾರಿಗೆ ರಾಜ್ಯಮಟ್ಟದ ಶ್ರೀಮಹರ್ಷಿವಾಲ್ಮೀಕಿ ಪ್ರಶಸ್ತಿ ಲಭಿಸಿದೆ.
ವಿಶೇಷವಾಗಿ ಚಳ್ಳಕೆರೆ ತಾಲ್ಲೂಕು ಮಹರ್ಷಿವಾಲ್ಮೀಕಿ (Valmiki Award) ಪ್ರಶಸ್ತಿಯಲ್ಲಿ ಹ್ಯಾಟ್ರಿಕ್ ಸಾಧನೆ ಮಾಡಿದೆ. ಮೊದಲ ಬಾರಿಗೆ ಮಾಜಿ ಸಚಿವ ದಿವಂಗತ ತಿಪ್ಪೇಸ್ವಾಮಿ, ಎರಡನೇ ಬಾರಿಗೆ ನನ್ನಿವಾಳದ ಕಿಲಾರಿಜ್ಯೋಗಯ್ಯಗೆ ದೊರೆಕಿದ್ದು, ಮೂರನೇ ಬಾರಿ ಪಿ.ತಿಪ್ಪೇಸ್ವಾಮಿಯವರಿಗೆ ದೊರಕಿದೆ.
ಇದನ್ನೂ ಓದಿ: Valmiki Jayanti | ಚಳ್ಳಕೆರೆ ಪಿ.ತಿಪ್ಪೇಸ್ವಾಮಿ ಸೇರಿ ರಾಜ್ಯದ ಐವರಿಗೆ ಮಹರ್ಷಿ ವಾಲ್ಮೀಕಿ ಪ್ರಶಸ್ತಿ ಪ್ರಕಟ
ಅಭಿನಂದನೆಗಳು ಮಹಾಪೂರ
ಮಹರ್ಷಿ ವಾಲ್ಮೀಕಿ ಪ್ರಶಸ್ತಿ ವಿಜೇತ ಪಿ.ತಿಪ್ಪೇಸ್ವಾಮಿಯವರನ್ನು ಕ್ಷೇತ್ರದ ಶಾಸಕ ಟಿ.ರಘುಮೂರ್ತಿ, ಬಾಳೆಮಂಡಿರಾಮದಾಸ್, ಕೆ.ಟಿ.ಕುಮಾರಸ್ವಾಮಿ, ಸಿ.ಟಿ.ಶ್ರೀನಿವಾಸ್, ಕೆ.ಸೂರನಾಯಕ, ಬಿ.ತಿಮ್ಮಣ್ಣಮರಿಕುಂಟೆ, ಯು.ಎಸ್.ವಿಷ್ಣುಮೂರ್ತಿರಾವ್, ಎಂ.ಎನ್.ಮೃತ್ಯುಂಜಯ, ಜಿ.ಟಿ.ವೀರಭದ್ರಸ್ವಾಮಿ, ಸಿ.ಟಿ.ವೀರೇಶ್, ಎಲ್ಐಸಿತಿಪ್ಪೇಸ್ವಾಮಿ ಎಸ್.ಟಿ.ತಾಲ್ಲೂಕು ಕಲ್ಯಾಣಾಧಿಕಾರಿ ಎಂ.ಟಿ.ಶಿವರಾಜ್, ಮುಂತಾದವರು ಅಭಿನಂದಿಸಿದ್ಧಾರೆ.
