Namma JanaNamma JanaNamma Jana
  • ಇಂದಿನ ಸುದ್ದಿ
  • ರಾಜಕೀಯ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಕ್ರೀಡೆ
  • ಆರೋಗ್ಯ
  • ದಿನ ಭವಿಷ್ಯ
Reading: Dharmasthala: ವೀರೇಂದ್ರ ಹೆಗ್ಗಡೆಯವರು ಕನ್ನಡ ನಾಡಿನ ಹೆಮ್ಮೆಯ ಸಂಕೇತ: ಉದ್ಯಮಿ ಡಿ.ಎಸ್.ಪ್ರದೀಪ್
Share
Notification Show More
Font ResizerAa
Font ResizerAa
Namma JanaNamma Jana
  • ಇಂದಿನ ಸುದ್ದಿ
  • ರಾಜಕೀಯ
  • ವಿಶೇಷ ಸುದ್ದಿ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಆರೋಗ್ಯ
  • ಕ್ರೀಡೆ
  • ದಿನ ಭವಿಷ್ಯ
  • ರಾಜಕೀಯ
Search
  • ಇಂದಿನ ಸುದ್ದಿ
  • ರಾಜಕೀಯ
  • ವಿಶೇಷ ಸುದ್ದಿ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಆರೋಗ್ಯ
  • ಕ್ರೀಡೆ
  • ದಿನ ಭವಿಷ್ಯ
  • ರಾಜಕೀಯ
Have an existing account? Sign In
Follow US
  • Advertise
© 2024 Namma Janna. Kannada News Portal. All Rights Reserved.
Namma Jana > Blog > ಇಂದಿನ ಸುದ್ದಿ > Dharmasthala: ವೀರೇಂದ್ರ ಹೆಗ್ಗಡೆಯವರು ಕನ್ನಡ ನಾಡಿನ ಹೆಮ್ಮೆಯ ಸಂಕೇತ: ಉದ್ಯಮಿ ಡಿ.ಎಸ್.ಪ್ರದೀಪ್
ಇಂದಿನ ಸುದ್ದಿ

Dharmasthala: ವೀರೇಂದ್ರ ಹೆಗ್ಗಡೆಯವರು ಕನ್ನಡ ನಾಡಿನ ಹೆಮ್ಮೆಯ ಸಂಕೇತ: ಉದ್ಯಮಿ ಡಿ.ಎಸ್.ಪ್ರದೀಪ್

Editor Nammajana
Last updated: 20 June 2024 13:19
By Editor Nammajana 2 Min Read
Share
SHARE

Chitradurga news |nammajana.com|20-6-2023

ನಮ್ಮಜನ.ಕಾಂ, ಹೊಸದುರ್ಗ: ದೇವಸ್ಥಾನದ ಹುಂಡಿಗೆ ಹಾಕಿದ ಹಣವನ್ನು ಭಕ್ತರ ಅಭಿವೃದ್ಧಿಗಾಗಿ ವಿನಯೋಗಿಸುತ್ತಿರುವ ಏಕೈಕ ಧಾರ್ಮಿಕ ಶ್ರದ್ಧಾ ಕೇಂದ್ರವೆಂದರೆ ಅದು ಧರ್ಮಸ್ಥಳ (Dharmasthala) ರಾಜ್ಯದ ಮೂಲೆ ಮೂಲೆಗಳಲ್ಲಿ ಸಾರ್ವಜನಿಕ ಕ್ಷೇತ್ರಗಳಲ್ಲಿ ಅಭಿವೃದ್ಧಿ ಕಾರ್ಯಗಳನ್ನ ಮಾಡುತ್ತಾ ಬಂದಿರುವ ಪೂಜ್ಯ ವೀರೇಂದ್ರ ಹೆಗ್ಗಡೆಯವರು ಕನ್ನಡ ನಾಡಿನ ಹೆಮ್ಮೆಯ ಸಂಕೇತ ಎಂದು ಸದ್ಗುರು ಆಯುರ್ವೇದ ಸಂಸ್ಥೆಯ ಮಾಲೀಕ ಉದ್ಯಮಿ ಡಿ.ಎಸ್.ಪ್ರದೀಪ್ ತಿಳಿಸಿದರು.

ತಾಲೂಕಿನ ಗುರುವಿನ ಕಲ್ಲು ಗ್ರಾಮದಲ್ಲಿ ನಡೆದ ಶ್ರೀಹರಿ ಸೇವಾ ಟ್ರಸ್ಟ್ ನ ಶ್ರೀ ಕಂಬದ ನರಸಿಂಹ ಸ್ವಾಮಿ ದೇವಾಲಯಕ್ಕೆ ಪೂಜ್ಯ ವೀರೇಂದ್ರ ಹೆಗ್ಗಡೆಯವರು (Dharmasthala) ಅರ್ಪಣೆ ಮಾಡಿರುವ ಮೂರು ಲಕ್ಷ ಹಣದ ಚೆಕ್ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ನನ್ನ ಸಾಧನೆಗೆ ಬೆಂಬಲವಾಗಿ ಸಹಕಾರ ನೀಡಿದವರು  ವೀರೇಂದ್ರ ಹೆಗ್ಗಡೆಯವರು

ನಾನು ಒಂದು ಉದ್ಯಮ ಪ್ರಾರಂಭ ಮಾಡಲು 35 ಸಾವಿರ ಹಣ ಸಾಲ ಪಡೆಯಲು ಕರ್ನಾಟಕ ಬ್ಯಾಂಕ್ ಗೆ ಮನವಿ ಮಾಡಿದಾಗ ಅವರು ಧರ್ಮಸ್ಥಳ ಸಂಸ್ಥೆಯ ಸಹಯೋಗದೊಂದಿಗೆ ನಡೆಯುತ್ತಿರುವ ರುಡ್ ಸೆಟ್ ರುಡ್ ಶೆಡ್ ಸಂಸ್ಥೆಯಾ ತರಬೇತಿ ಪಡೆದು ಬಂದವರಿಗೆ ಮಾತ್ರ ಲೋನ್ ಕೊಡಲಾಗುವುದು ಎಂದು ಹೇಳಿದಾಗ ಕೇವಲ 15 ದಿನದ ತರಬೇತಿ ನನ್ನ ಜೀವನದ  ಅಮೂಲ್ಯ ವಾದ ಬದಲಾವಣೆ ತಂದು ಇಂದು ನೂರಾರು ಕೋಟಿ ವಹಿವಾಟು ನಡೆಸುತ್ತಿರುವ ಸದ್ಗುರು ಆಯುರ್ವೇದ ಸಂಸ್ಥೆಗೆ ಪ್ರೇರಣೆ ಪೂಜ್ಯ ವೀರೇಂದ್ರ ಹೆಗ್ಗಡೆಯವರು ಎಂದು ತನ್ನ ನೆನಪನ್ನು ಮೆಲುಕು ಹಾಕಿದರು.

ಕೇವಲ ಮಾತನಾಡುವ ತುಟಿಗಳಿಗಿಂತ ಸೇವೆ ಮಾಡುವ ಕೈಗಳ ಮೇಲು ಎಂಬ ನಾಣ್ಣುಡಿಯಂತೆ ಧರ್ಮಸ್ಥಳ ಪೂಜ್ಯ ವೀರೇಂದ್ರ ಹೆಗ್ಗಡೆಯವರು ಹೊಸದುರ್ಗ ತಾಲೂಕಿನ 234 ದೇವಸ್ಥಾನಗಳಿಗೆ ಮೂರುವರೆ ಕೋಟಿ ಹಣವನ್ನ ದೇವಸ್ಥಾನಗಳಿಗೆ ಅರ್ಪಣೆ ಮಾಡಿ ಧಾರ್ಮಿಕ ಕಾರ್ಯದಲ್ಲಿ ಧರ್ಮಸ್ಥಳ (Dharmasthala) ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ಪಾತ್ರ ಏನೆಂಬುದನ್ನು ತಿಳಿಸಿದ್ದಾರೆ ಎಂದರು.

ಕರ್ನಾಟಕ ರಾಜ್ಯ ಜನ ಜಾಗೃತಿ ವೇದಿಕೆ ಚಿತ್ರದುರ್ಗ ಜಿಲ್ಲಾಧ್ಯಕ್ಷ ಬಿ.ಪಿ.ಓಂಕಾರಪ ಮಾತನಾಡಿ ಮಧ್ಯವರ್ಜನ ಶಿಬಿರ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ, ವಿದ್ಯಾರ್ಥಿ ವೇತನ, ಕೌಶಲ್ಯ ತರಬೇತಿ, ಕೆರೆಗಳ ಅಭಿವೃದ್ಧಿ ಕಾರ್ಯಗಳನ್ನ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ವತಿಯಿಂದ ಪೂಜ್ಯ ವೀರೇಂದ್ರ ಹೆಗ್ಗಡೆಯವರು ನಿರ್ಮಾಅನ್ಡುತ್ತಿರುವುದು ಅಭಿನಂದನಾರ್ಹ, ದುಶ್ಚಟ ಮುಕ್ತ ಸಮಾಜ ನಿರ್ಮಾಣ ಮಾಡಬೇಕೆಂಬುದು ಪೂಜ್ಜರ ಸಂಕಲ್ಪವಾಗಿದ್ದು ಕನ್ನಡ ನಾಡು ಮತ್ತು ಭಾರತ ದೇಶದ ಬಗ್ಗೆ ಪೂಜ್ಯರಿಗೆ ಅತ್ಯಂತ ಹೆಚ್ಚು ಗೌರವವಿದೆ ಎಂದರು.

ಸಮಾಜ ಸೇವಕ ಆಗ್ರೋ ಶಿವಣ್ಣ ಮಾತನಾಡಿ ಮನುಷ್ಯನು ಮನುಷ್ಯತ್ವವನ್ನು ಪ್ರೀತಿಸುವುದೇ ನಿಜವಾದ ಧರ್ಮ ನಾವು ದ್ವೇಷ ಅಸೂಯೆಗಳಿಂದ ದೂರವಾಗಿ ಒಬ್ಬರು ಮತ್ತೊಬ್ಬರನ್ನು ಪ್ರೀತಿಸುವಂತೆ ಆಗಬೇಕು. ಗೊರವಿನಕಲ್ಲು ಕಂಬದ ನರಸಿಂಹ ಸ್ವಾಮಿ ದೇವಸ್ಥಾನ ಕಟ್ಟಡ ಭೌತಿಕವಾಗಿ ನಿರ್ಮಾಣವಾಗಿದೆ. ಆದರೆ ಈ ಒಂದು ಕಟ್ಟಡ ಮುಂದಿನ ಪೀಳಿಗೆಗೆ ಒಂದು ಶ್ರದ್ಧಾ ಕೇಂದ್ರವಾಗಿ ಕಂಬದ ನರಸಿಂಹ ಸ್ವಾಮಿ ನಾಡಿನಲ್ಲಿ ರೈತರ ನೆಮ್ಮದಿ ಬದುಕಿಗೆ ದಾರಿದೀಪವಾಗಿದೆ ದೇವರು ಎಂದರೆ ನಂಬಿಕೆ, ದೇವರು ಎಂದರೆ ಭಕ್ತಿ ದೇವರು ಎಂದರೆ ಭಯ ಈ ಭಯ-ಭಕ್ತಿ ನಂಬಿಕೆಯಿಂದ ಮಂಜುನಾಥನನ್ನು (Dharmasthala) ನಂಬಿದವರನ್ನು ಎಂದೆಂದಿಗೂ ಆ ಮಂಜುನಾಥ ಸ್ವಾಮಿ ಕೈ ಬಿಡುವುದಿಲ್ಲ ಎಂದರು.

ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಹೊಸದುರ್ಗ ವಲಯ ಯೋಜನಾಧಿಕಾರಿ ಶಿವಣ್ಣ, ಪುರಸಭಾ ಸದಸ್ಯ ರಾಮಚಂದ್ರಪ್ಪ, ಶ್ರೀಹರಿ ಸೇವಾ ಟ್ರಸ್ಟ್ ಅಧ್ಯಕ್ಷ ಚಂದ್ರಪ್ಪ, ಅಂಜಿನಪ್ಪ, ಉದ್ಯಮಿ ಹನುಮಂತಪ್ಪ, ದೀಪಿಕಾ ಸತೀಶ್, ಜಿಲ್ಲಾ ಜನಜಗೃತಿ ವೇದಿಕೆ ಸದಸ್ಯ ತುಂಬಿನಕೆರೆ ಬಸವರಾಜ್ ,ನಾಗರಾಜು ,ರವಿಕುಮಾರ್, ದೇವರಾಜ್, ರಾಜಪ್ಪ, ಹಾಗೂ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಸಿಬ್ಬಂದಿ ವರ್ಗದವರು ಹಾಜರಿದ್ದರು.

You Might Also Like

Gold Rate | ಬಂಗಾರದ ಬೆಲೆಯಲ್ಲಿ ಇಳಿಕೆ

Transfer | ಜಿಲ್ಲಾ ಬಿಸಿಎಂ ಅಧಿಕಾರಿ ಆರ್.ಸುಬ್ರಾನಾಯಕ್ ವರ್ಗಾವಣೆ, ನೂತನ ಅಧಿಕಾರಿ ಅಧಿಕಾರ ಸ್ವೀಕಾರ

POWER CUT | ಇಂದು ಬೆಳಗ್ಗೆಯಿಂದ ಸಂಜೆವರೆಗೆ ಕರೆಂಟ್ ಇರಲ್ಲ

Dina Bhavishya | ದಿನ ಭವಿಷ್ಯ, ಇವತ್ತು ಯಾವ್ಯಾವ ರಾಶಿಗೆ ಶುಭ ಲಾಭ, ನಷ್ಟ ನೋಡಿ

Gold Rate | ಬಂಗಾರದ ಬೆಲೆಯಲ್ಲಿ ಏರಿಕೆ

TAGGED:Chitradurga NewsDharmasthala ManjunathGuru's StoneHosdurgaKannada Newskannada suddiNammajana.comSadguru PradeepSeva TrustVirendra Heggadeಕನ್ನಡ ನ್ಯೂಸ್ಕನ್ನಡ ಸುದ್ದಿಗುರುವಿನ ಕಲ್ಲುಚಿತ್ರದುರ್ಗ ನ್ಯೂಸ್ಚಿತ್ರದುರ್ಗ ಸುದ್ದಿಧರ್ಮಸ್ಥಳ ಮಂಜುನಾಥ್ನಮ್ಮಜನ.ಕಾಂವೀರೇಂದ್ರ ಹೆಗ್ಗಡೆಸದ್ಗುರು ಪ್ರದೀಪ್ಸೇವಾ ಟ್ರಸ್ಟ್ಹೊಸದುರ್ಗ
Share This Article
Facebook Twitter Whatsapp Whatsapp Telegram Email Print
ಈ ಮೇಲಿನ ಸುದ್ದಿ, ಲೇಖನದ ಬಗ್ಗೆ ನಿಮ್ಮ ಅನಿಸಿಕೆ ಏನು?
Love0
Sad0
Happy0
Sleepy0
Angry0
Dead0
Wink0
Previous Article Chitradurga BJP protest: ಪೆಟ್ರೋಲ್ ಡಿಸೇಲ್ ಬೆಲೆ ಏರಿಕೆ ಖಂಡಿಸಿ ಕಾರಿಗೆ ಹಗ್ಗ ಕಟ್ಟಿ ಎಳೆದ ಬಿಜೆಪಿ‌ ಕಾರ್ಯಕರ್ತರು
Next Article Challakere accident: ಕರೆಂಟ್ ಕಂಬಕ್ಕೆ ಡಿಕ್ಕಿ ಒಡೆದ ಕಾರು | ಮುಂದೆ ಆಗಿದ್ದೇನು?
Leave a comment

Leave a Reply Cancel reply

Your email address will not be published. Required fields are marked *

Stay Connected

TelegramFollow

Latest News

Dina Bhavishya | ದಿನ ಭವಿಷ್ಯ, ಇವತ್ತು ಯಾವ್ಯಾವ ರಾಶಿಗೆ ಶುಭ?
ದಿನ ಭವಿಷ್ಯ
POWER CUT | ಇಂದಿನಿಂದ ಎರಡು ದಿನ ಬೆಳಗ್ಗೆಯಿಂದ ಸಂಜೆವರೆಗೂ ಕರೆಂಟ್ ಇರಲ್ಲ
ಇಂದಿನ ಸುದ್ದಿ
Adike rate | ಅಡಿಕೆ ಬೆಲೆಯಲ್ಲಿ ಇಳಿಕೆ
ಅಡಿಕೆ ಧಾರಣೆ
Gold Rate | ಬಂಗಾರದ ಬೆಲೆಯಲ್ಲಿ ಭರ್ಜರಿ ಏರಿಕೆ
ಇಂದಿನ ಸುದ್ದಿ

Kannada News (ಕನ್ನಡ ಸುದ್ದಿ): Get the latest updates of karnataka news, world news, india news, political News and celebrity Kannada news and more on Nammajana (nammajana.com).

Sign Up for Our Newsletter

Subscribe to our newsletter to get our newest articles instantly!

Namma JanaNamma Jana
© 2025 NammaJanna. Kannada News Portal. All Rights Reserved.
adbanner
AdBlock Detected
Our site is an advertising supported site. Please whitelist to support our site.
Okay, I'll Whitelist
Welcome Back!

Sign in to your account

Lost your password?