
Chitradurga news|nammajana.com|24-6-2024
ನಮ್ಮಜನ.ಕಾಂ, ಚಿತ್ರದುರ್ಗ: ಮಳೆಗಾಗಿ ಪ್ರಾರ್ಥಿಸಿ ತರಳಬಾಳು ಜಗದ್ಗುರು ಬೃಹನ್ಮಠದ ವಿರಕ್ತ ಚೇತನರಾಗಿದ್ದ ಕಾಶಿ ಮಹಲಿಂಗ ಸ್ವಾಮಿಗಳವರ ಪರುವ (Sirigere paruvu) ಇಂದು ಮಾವಿನ ತೋಪಿನ ಅವರ ಗದ್ದುಗೆ ಆವರಣದಲ್ಲಿ ನಡೆಯಲಿದೆ.
ಜನರ ಮನದಲ್ಲಿ ಹಲವು ವಿಸ್ಮಯಗಳಿಗೆ ಸಾಕ್ಷೀಭೂತರಾಗಿ ದ್ದವರು ಕಾಶಿ ಮಹಲಿಂಗ ಸ್ವಾಮಿಗಳು. ಸಿರಗೆರೆ ಭಾಗದಲ್ಲಿ ಮಳೆ ಕೊರತೆ ಉಂಟಾದಾಗ ಜನರು ಕಾಶಿ ಗುರುಗಳ ಭಾವಚಿತ್ರ ಮೆರವಣಿಗೆ ಮಾಡುವುದು, ಅವರ ಹೆಸರಿನಲ್ಲಿ ಧಾರ್ಮಿಕ ಕಾರ್ಯ ನಡೆಸುವುದು, ಗದ್ದುಗೆ ಪೂಜೆ ಮಾಡಿ ದಾಸೋಹ (Sirigere paruvu) ಏರ್ಪಡಿಸುವುದು ವಾಡಿಕೆ. ಇಂತಹ ಎಲ್ಲ ಸಂದರ್ಭಗಳಲ್ಲಿಯೂ ಜನರ ನಿರೀಕ್ಷೆಗೆ ಅನುಗುಣವಾಗಿ ಮಳೆಯಾಗಿ ಕೃಷಿಕರನ್ನು ಕೈ ಹಿಡಿದಿರುವುದು ಅವರ ಮೇಲಿನ ಅನನ್ಯ ಶ್ರದ್ಧಾಭಕ್ತಿಗೆ ಕಾರಣವಾಗಿದೆ.

ಇದನ್ನೂ ಓದಿ: Molakalmuru crime news: ಇಸ್ಪೀಟ್: ಜೂಜಾಟ ಆರೋಪಿ ಬಂಧನ
ಹಾಗಾಗಿ ಭಾನುವಾರ ರಾತ್ರಿಯಿಂದಲೇ ಅವರ ಗದ್ದುಗೆ ಆವರಣದಲ್ಲಿ ಭಜನೆ ಏರ್ಪಡಿಸಲಾಗಿದೆ. ಸೋಮವಾರ ಬೆಳಗಿನ ಜಾವದಿಂದ ಸಮಾಧಿ ಮಂಟಪದಲ್ಲಿ ವಿಶೇಷ ಪೂಜಾದಿ ಕಾರ್ಯಕ್ರಮಗಳು ನಡೆಯಲಿವೆ. ಪರುವದ (Sirigere paruvu) ಅಂಗವಾಗಿ ಸಿರಿಗೆರೆ ಹಾಗೂ ಸುತ್ತಮುತ್ತಲಿನ ಎಲ್ಲ ಹಳ್ಳಿಗಳ ಜನರಿಗೂ ಮಾವಿನ ತೋಪಿನ ಅವರ ಮಂಟಪದ ಬಳಿ ದಾಸೋಹ ಏರ್ಪಡಿಸಿದೆ. ತರಳಬಾಳು ಜಗದ್ಗುರು ಶಿವಮೂರ್ತಿ ಶಿವಾಚಾರ್ಯರು ದಾಸೋಹಕ್ಕೆ ಚಾಲನೆ ನೀಡುವರು.