
Chitradurga news|nammajana.com|9-7-2024
ನಮ್ಮಜನ.ಕಾಂ, ಚಿತ್ರದುರ್ಗ: ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಸಚಿವರಾದ ಪ್ರಿಯಾಂಕ್ ಖರ್ಗೆ ಯವರು ಇದೇ ಜುಲೈ10ರಂದು ಚಿತ್ರದುರ್ಗ ಹಾಗೂ ತುಮಕೂರು ಜಿಲ್ಲಾ (Priyank Kharge district tour) ಪ್ರವಾಸ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.
ಇದನ್ನೂ ಓದಿ: ಕಳುವಾಗಿದ್ದ 60 ಚೀಲ ಕಡಲೆ ವಶ | ಇಬ್ಬರ ಬಂಧನ | Arrest of chickpea thieves

ಸಚಿವರು ಅಂದು ಬೆಳಿಗ್ಗೆ 7.30ಕ್ಕೆ ಬೆಂಗಳೂರುನಿಂದ ಹೊರಟು ಬೆಳಿಗ್ಗೆ 10.30ಕ್ಕೆ ಪಾವಗಡದ ಎಂ.ಬಿ.ಆರ್-2 ಪರಿವೀಕ್ಷಣೆ ಮಾಡುವರು. ಬೆಳಿಗ್ಗೆ 11.30ಕ್ಕೆ ಚಳ್ಳಕೆರೆಯ ಕ್ಯಾದಿಗುಂಟೆಯ (Priyank Kharge district tour) ಐ.ಪಿ.ಎಸ್-3 ಕ್ಯಾದಿಗುಂಟೆ (ಕೆಂಚಮ್ಮನಹಳ್ಳಿ ಗೇಟ್) ಯೋಜನೆಯ ಪ್ರಗತಿ ಪರಿವೀಕ್ಷಣೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸುವರು. ನಂತರ ತುಮಕೂರಿಗೆ ಪ್ರಯಾಣ ಬೆಳೆಸುವರು ಎಂದು ಸಚಿವರ ಆಪ್ತ ಕಾರ್ಯದರ್ಶಿ ಭೀಮಾಶಂಕರ್ ತಿಳಿಸಿದ್ದಾರೆ.