
Chitradurga news|nammajana.com|16-7-2024
ನಮ್ಮಜನ.ಕಾ, ಚಿತ್ರದುರ್ಗ: ಮುರುಘಾಮಠದ (Chitradurga Silver idol) ರಾಜಾಂಗಣದಿಂದ ಕಳವಾಗಿದ್ದ ಶಿವಮೂರ್ತಿ ಮುರುಘಾಶರಣರ ಪ್ರತಿರೂಪದ ಬೆಳ್ಳಿ ಪುತ್ಥಳಿ ಜುಲೈ 11 ರಂದು ಇದ್ದಕ್ಕಿದ್ದಂತೆ ಪುತ್ಥಳಿ ನಾಪತ್ತೆಯಾಗಿ ಕುತೂಹಲ ಮೂಡಿಸಿತ್ತು.
ಪುತ್ಥಳಿ ಕಳವು ಹಿನ್ನೆಲೆ ಗ್ರಾಮಾಂತರ ಠಾಣೆ ಪೊಲೀಸರಿಗೆ ದೂರು ನೀಡಲಾಗಿತ್ತು. ಆರೋಪಿಗಳ ಶೋಧದಲ್ಲಿ ಇರುವಾಗಲೆ ನಾಲ್ಕು ದಿನಗಳ ನಂತರ ಮುರುಘಾಮಠದ ಒಳ (Chitradurga Silver idol) ಆವರಣದಲ್ಲಿರುವ ಶಾಲಾ ಕಾಂಪೌಂಡ್ ಪಕ್ಕದಲ್ಲಿ ಗೋಣಿ ಚೀಲವೊಂದರಲ್ಲಿ ಪುತ್ಥಳಿ ಇಟ್ಟು ಬಿಸಾಕಿ ಹೋಗಲಾಗಿದೆ.

ಸೋಮವಾರ ಬೆಳಿಗ್ಗೆ ಮಠದಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಬಾಲಕನೋರ್ವನ ಶಿವಮೂರ್ತಿ ಮುರುಘಾಮಠದಿಂದ ಕಳುವಾಗಿದ್ದ ಮುರುಘಾಶ್ರೀ ಪ್ರತಿರೂಪದ 22 ಕೆಜಿ ತೂಕದ ಬೆಳ್ಳಿ ವಿಗ್ರಹ, ಮುರುಘಾಶರಣರ ಪುತ್ಥಳಿಗೋಣಿಚೀಲದಲ್ಲಿ ತುಂಬಿ ಬಿಸಾಕಿ ಹೋಗಿದ್ದ ಬೆಳ್ಳಿ ವಿಗ್ರಹ ಕಂಡಿದೆ. ನಂತರ (Chitradurga Silver idol) ಮುರುಘಾಮಠದ ವಕ್ತಾರರಿಗೆ ಈ ವಿಷಯ ಬಂದಿದೆ.
ಮಠದಲ್ಲಿರುವ ಸಿಸಿ ಟಿವಿ ಆಫ್ ಮಾಡಿ 20ಲಕ್ಷ ಬೆಲೆ ಬಾಳುವ ಬೆಳ್ಳಿ ಪುತ್ಥಳಿ ಕಳವು ಮಾಡಲಾಗಿತ್ತು. ಪೊಲೀಸರು ತನಿಖೆ ಚುರುಕುಗೊಳಿಸುತ್ತಿದ್ದಂತೆ ಆರೋಪಿಗಳು ಮಠದ ಆವರಣದಲ್ಲಿ ಬೆಳ್ಳಿ ಪುತ್ಥಳಿ ಎಸೆದು ಎಸ್ಕೇಪ್ ಆಗಿರಬಹುದೆಂದು (Chitradurga Silver idol) ಶಂಕಿಸಲಾಗಿದೆ. ಬೆಳಿಗ್ಗೆಯೇ ಬೆಳ್ಳಿ ಪುತ್ಥಳಿ ಪತ್ತೆಯಾದ ಹಿನ್ನಲೆ ಮುರುಘಾಮಠದ ಆಡಳಿತ ಮಂಡಳಿ ಸದಸ್ಯ ಡಾ. ಬಸವಕುಮಾರ ಸ್ವಾಮಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಪುತ್ಥಳಿ ಮೊದಲಬಾರಿಗೆ ನೋಡಿದ ವಿದ್ಯಾರ್ಥಿಯಿಂದ ಮಾಹಿತಿ ಪಡೆದರು. ಬೆಳ್ಳಿ ಪುತ್ಥಳಿಪತ್ತೆ ಸ್ಥಳಕ್ಕೆ ಡಾಗ್ಸ್ ಕ್ವಾಡ್ ಟೀಮ್ರೆಯಿಸಲಾಗಿತ್ತು. ಗ್ರಾಮಾಂತರ ಠಾಣೆ ಸಿಪಿಐ ಮುದ್ದುರಾಜು ನೇತೃತ್ವದಲ್ಲಿ ಬೆರಳಚ್ಚು ತಜ್ಞರು ಆಗಮಿಸಿ ಪರಿಶೀಲನೆ ನಡೆಸಿದರು.
ಬೆಳ್ಳಿ ಪುತ್ಥಳಿ ಮಠದ ಆವರಣದಲ್ಲಿ ಪತ್ತೆಯಾದ ಹಿನ್ನೆಲೆ ದಾವಣಗೆರೆ ವಿರಕ್ತ ಮಠದ ಬಸವಪ್ರಭು ಸ್ವಾಮೀಜಿ ಸ್ಥಳಕ್ಕೆ ಆಗಮಿಸಿ, ಘಟನಾವಳಿಗಳ ವೀಕ್ಷಿಸಿದರು. ಈ ವೇಳೆ (Chitradurga Silver idol) ಮಾತನಾಡಿದ ಅವರು ಕಳುವಾಗಿದ್ದ ಮುರುಘಾಶ್ರೀ ಬೆಳ್ಳಿ ಪುತ್ಥಳಿ ಪತ್ತೆ ಅಗಿದ್ದು ಖುಷಿತಂದಿದೆ. ಕಳ್ಳತನದ ಬಗ್ಗೆ ಕೆಲವರಮೇಲೆ ಶಂಕಿಸಿ ಪೊಲೀಸರು ತೀವ್ರ ವಿಚಾರಣೆ ನಡೆಸಿದ್ದರು. ತನಿಖೆ ತೀವ್ರಗೊಂಡ ಹಿನ್ನೆಲೆ ಕಳ್ಳರುಪುತ್ಥಳಿತಂದುಹಾಕಿದ್ದಾರೆ ಎಂದರು.
ಬೆಳ್ಳಿ ಪುತ್ಥಳಿ ಕಳ್ಳತನದ ಬಗ್ಗೆ ಸಮಗ್ರ ತನಿಖೆ ಆಗಬೇಕು. ಕದ್ದವರು ಯಾರು, ಮರಳಿ ತಂದವರು ಯಾರೆಂಬುದು ಬಯಲಾಗಲಿ. ಮಠದಕಾಂಪೌಂಡ್ ಹೊರಗಿನಿಂದಲೇ ಗೋಣಿಚೀಲ ಎಸೆದಿದ್ದಾರೆ ಎನಿಸುತ್ತದೆ. ಕಳ್ಳತನಕ್ಕೂ ಮೊದಲು ಸಿಸಿಟಿವಿ ಆಫ್ ಮಾಡಿರುವುದು ಕಳ್ಳರು ಬುದ್ದಿವಂತರು (Chitradurga Silver idol) ಎಂಬುದು ಗೊತ್ತಾಗುತ್ತದೆ. ನನ್ನ ಮೇಲೂ ಕಳ್ಳತನದ ಆರೋಪ ಹೊರಿಸಲು ಷಡ್ಯಂತ್ರ ನಡೆದಿತ್ತು. ಪೊಲೀಸರ ತನಿಖೆಯಿಂದ ಕಳ್ಳತನ ಪ್ರಕರಣ ಪೂರ್ಣ ಬಯಲಾಗಬೇಕು ಎಂದರು.
ಇದನ್ನೂ ಓದಿ: Today Dina Bhavishya kannada: ದಿನ ಭವಿಷ್ಯ 16-7-2024
ಬಸವಕೇಂದ್ರ ಮುರುಘಾಮಠದಲ್ಲಿ ಕಳ್ಳತನವಾಗುವುದು ಇದೇ ಮೊದಲಲ್ಲ. ಕಳೆದ ವರ್ಷ ಶರಣಸಂಸ್ಕೃತಿ ಉತ್ಸವದ ವೇಳೆ ಗೋಡೆ ಮೇಲೆ ನೇತು ಹಾಕಿದ್ದ ಭಾವಚಿತ್ರಗಳ (Chitradurga Silver idol) ಕದ್ದೊಯ್ಯಲಾಗಿತ್ತು. ಮಠದ ತುಂಬಾ ಜನರು ಸುಳಿದಾಡುವಾಗಲೇ ಈ ಕೃತ್ಯ ನಡೆದಿತ್ತು. ಇದೀಗ ಮುರುಘಾಶ್ರೀ ಬೆಳ್ಳಿ ಪುತ್ಥಳಿ ಕದ್ದೊಯ್ದು ಮಠದ ಉಸ್ತುವಾರಿಗಳಲ್ಲಿ ಆತಂಕ ಮೂಡಿಸಲಾಗಿತ್ತು.