
Chitradurga news|nammajana.com|16-7-2024
ನಮ್ಮಜನ.ಕಾಂ, ಹೊಸದುರ್ಗ: ಕಳೆದ ಒಂದು ತಿಂಗಳಿನಿಂದ ಶ್ರೀ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ 187.ಕೋಟಿ ರೂ.ಅಕ್ರಮ ನಡೆದಿದೆ ಎನ್ನಲಾಗುತ್ತಿರು ಸದ್ದು ಬಹಳ (Valmiki Corporation Scam) ಜೋರಾಗಿಯೇ ಕೇಳಿ ಬರುತ್ತಿದೆ.
ಈ ಪ್ರಕರಣವನ್ನು ಜಾರಿ (Valmiki Corporation Scam) ನಿರ್ದೇಶನಾಲಯದ ಅಧಿಕಾರಿಗಳು ಮತ್ತು ಎಸ್ಐಟಿ ಅಧಿಕಾರಿಗಳು ಕೈಗೆತ್ತಿಕೊಂಡು ತನಿಖೆ ನಡೆಸುತ್ತಿದ್ದು, ವಾಲ್ಮೀಕಿ ನಾಯಕ ಜನಾಂಗದ ಬಡವರಿಗೆ ಸೇರಬೇಕಾಗಿರುವ ಹಣ, ಪ್ರಭಾವಿಗಳ ಪಾಲಾಗಿರುವುದು ಬಹಳ ನೋವಿನ ಸಂಗತಿ. ಈ ಅಕ್ರಮದಲ್ಲಿ ಭಾಗಿಯಾಗಿರುವ ವ್ಯಕ್ತಿ ಎಷ್ಟೇ ಪ್ರಭಾವಿಯಾಗಿದ್ದರು, ಅವರ ವಿರುದ್ಧ ಕಾನೂನು ಕ್ರಮವಾಗಬೇಕು.

ತನಿಖೆ ಎಲ್ಲಾ ಆಯಾಮಗಳಲ್ಲೂ ನಡೆಯಬೇಕಾದರೆ, ಕೂಡಲೇ ಮುಖ್ಯಮಂತ್ರಿಗಳು ಮತ್ತು ರಾಷ್ಟ್ರಪತಿಗಳು ಕೇಸನ್ನು (Valmiki Corporation Scam) ಸಂಪೂರ್ಣವಾಗಿ ಕೇಂದ್ರೀಯ ತನಿಖಾ ದಳಕ್ಕೆ ವರ್ಗಾಯಿಸಬೇಕೆಂದು ಒತ್ತಾಯಿಸಿ, ತಾಲೂಕು ವಾಲ್ಮೀಕಿ ನಾಯಕ ಸಮುದಾಯದ ಮುಖಂಡರು ಹಾಗೂ ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ ಹೊಸದುರ್ಗ ತಾಲ್ಲೂಕು ಯುವ ಘಟಕದ ಪದಾಧಿಕಾರಿಗಳು ಮಂಗಳವಾರ ತಹಶೀಲ್ದಾರ್ ಮೂಲಕ ಮನವಿ ಪತ್ರ ಸಲ್ಲಿಸಿದರು.
ಇದೇ ಸಂದರ್ಭದಲ್ಲಿ ತಾಲ್ಲೂಕು ನಾಯಕ ಸಮುದಾಯದ ಮುಖಂಡ ಮಳಲಿ ವಿಜಯ್ ಕುಮಾರ್ ಮಾತನಾಡಿ, ವಿವಿಧ ಅಭಿವೃದ್ಧಿ ಯೋಜನೆಗಳ ಮೂಲಕ ವಾಲ್ಮೀಕಿ ನಾಯಕ ( ಸಮುದಾಯದ ಬಡ ಜನರಿಗೆ ಸೇರಬೇಕಾಗಿದ್ದ 187.ಕೋಟಿValmiki Corporation Scam) ಹಣ ಪ್ರಭಾವಿಗಳ ಪಾಲಾಗಿರುವುದು ಸಮುದಾಯದ ಜನರಿಗೆ ಮಾಡಿದ ಬಹುದೊಡ್ಡದ್ರೋಹ. ಎಷ್ಟೇ ಬಹುದೊಡ್ಡ ಪ್ರಭಾವಿಗಳ ಪಾತ್ರ ಇದರಲ್ಲಿ ಇದ್ದರು, ಪ್ರಾಮಾಣಿಕವಾಗಿ ಅಂತವರ ವಿರುದ್ಧ ಕಾನೂನು ಕ್ರಮವಾಗಬೇಕು.
ಎಸ್ಐಟಿ ರಾಜ್ಯ ಸರ್ಕಾರ ರಚಿಸಿರುವ ತನಿಖಾ ತಂಡವಾಗಿದ್ದು, ಇದರ ಬಗ್ಗೆ ನಮಗೆ ಅಷ್ಟು ವಿಶ್ವಾಸವಿಲ್ಲ. ನಾನು ಅಹಿಂದ ನಾಯಕ, ದಲಿತರ ಪರವಾಗಿರುವ ವ್ಯಕ್ತಿ ಎಂದು ಹೇಳಿಕೊಳ್ಳುವ ಸಿದ್ದರಾಮಯ್ಯ ಇದರಲ್ಲಿ ತಮ್ಮ ಪಾತ್ರ ಇಲ್ಲ ಎಂದಾದರೆ, (Valmiki Corporation Scam) ಕೂಡಲೇ ಪ್ರಕರಣವನ್ನು ಕೇಂದ್ರೀಯ ತನಿಖಾ ತಂಡಕ್ಕೆ ವರ್ಗಾವಣೆ ಮಾಡಬೇಕು. ಆಗ ಪ್ರಕರಣದಲ್ಲಿ ಎಷ್ಟೇ ದೊಡ್ಡ ವ್ಯಕ್ತಿ ಭಾಗಿಯಾಗಿದ್ದರು.
ಭ್ರಷ್ಟಾಚಾರಿಗಳ ಮುಖವಾಡ ಬಯಲಾಗುತ್ತದೆ. ನಮಗೆ ಸಿಬಿಐ ಮೇಲೆ ಸಂಪೂರ್ಣ ವಿಶ್ವಾಸವಿದ್ದು, ಈ ಕೇಸ್ ಅನ್ನು ಸರ್ಕಾರ (Valmiki Corporation Scam) ಸಂಪೂರ್ಣವಾಗಿ ಕೇಂದ್ರೀಯ ತನಿಖಾ ದಳಕ್ಕೆ ವರ್ಗಾವಣೆ ಮಾಡಬೇಕೆಂದು ಒತ್ತಾಯಿಸಿದರು.
ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾದ ಯುವ ಮುಖಂಡ ಅರುಣ್ ಗಂಗಾಧರಪ್ಪ ಮಾತನಾಡಿ, ನಮ್ಮ ವಾಲ್ಮೀಕಿ ನಾಯಕ ಸಮುದಾಯ ಆರ್ಥಿಕವಾಗಿ ಬಹಳ ಹಿಂದುಳಿದಿದ್ದು, (Valmiki Corporation Scam) ಇಂದಿಗೂ ಕೂಡ ಬಡತನದಲ್ಲಿಯೇ ಜೀವನ ಮಾಡುವಂತಹ ಕುಟುಂಬಗಳು ಬಹಳಷ್ಟಿವೆ. ಬಡ ಜನರ ಅಭ್ಯುದಾಯಕ್ಕಾಗಿ ಬಳಕೆಯಾಗಬೇಕಾಗಿದ್ದ ಹಣ, ಭ್ರಷ್ಟರ ಪಾಲಾಗಿರುವುದು ತುಂಬಾ ಬೇಸರವನ್ನುಂಟು ಮಾಡಿದೆ.
ತನಿಖೆ ವೇಳೆ ಒಂದೊಂದೇ ಅಕ್ರಮಗಳು ಹೊರ ಬರುತ್ತಿವೆ. ಎಂತಹ ದೊಡ್ಡ ವ್ಯಕ್ತಿಯಾಗಿದ್ದರು ಅಂತವರನ್ನು ವಶಕ್ಕೆ ಪಡೆದು ತನಿಖೆ ನಡೆಸಬೇಕು. ಅಕ್ರಮವಾಗಿ ವರ್ಗಾವಣೆ ಆಗಿರುವ ವಾಲ್ಮೀಕಿ ನಿಗಮದ ಹಣ, ಬಡ ಜನರ ಸರ್ವಾಂಗಿಣಾ (Valmiki Corporation Scam) ಅಭಿವೃದ್ಧಿಗೆ ಪೂರಕವಾಗಿ ಬಳಕೆಯಾಗಬೇಕು.
ಇದನ್ನೂ ಓದಿ: sheep farming: ಕುರಿ ಸಾಕಾಣಿಕೆಗೆ ಅರ್ಜಿ ಆಹ್ವಾನ
ಸಮುದಾಯದ ಜನರಿಗೆ ಅನ್ಯಾಯವಾಗಲು ಬಿಡಲಾರೆವು. ತನಿಖಾ ಸಂಸ್ಥೆಗಳು ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಿ, ಅಪರಾಧಿಗಳಿಗೆ ಕಠಿಣ ಶಿಕ್ಷೆ ನೀಡಲು ಮುಂದಾಗ ಬೇಕೆಂದು ಆಗ್ರಹಿಸಿದರು.
ಈ ವೇಳೆ ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ ಯುವ ಘಟಕದ ಪದಾಧಿಕಾರಿಗಳಾದ ಶಶಿಧರ್, ಲೋಹಿತ್, ಸಿದ್ದೇಶ್, ರೂಪೇಶ್ ಮತ್ತು ಚೇತನ್ ಸೇರಿದಂತೆ ಇತರರಿದ್ದರು.