
Chitradurga news | nammajana.com | 11-9-2024
ಜಮೀನಿನಲ್ಲಿ 300 ಶ್ರೀಗಂಧ ಸಸಿಗಳ ಹಾಕಿದ್ದ ರೈತ | ಸುಮಾರು ₹1ಲಕ್ಷ ಮೌಲ್ಯದ ಶ್ರೀಗಂಧ ಕದ್ದಿದ್ದ ಕಳ್ಳರು
ನಮ್ಮಜನ.ಕಾಂ, ಹಿರಿಯೂರು: ತಾಲೂಕಿನ ಅಬ್ಬಿನಹೊಳೆ ಠಾಣೆಯ ಪೊಲೀಸರು ಶ್ರೀಗಂಧ ಕಳ್ಳರನ್ನು ಬಂಧಿಸುವಲ್ಲಿ (Abbinahole police) ಯಶಸ್ವಿಯಾಗಿದ್ದಾರೆ.

ತಾಲೂಕಿನ ಶ್ರೀರಂಗ ಬಡಾವಣೆ ಇ-ಕುರುಬರಹಳ್ಳಿ ಗ್ರಾಮದ ವಿ. ರಾಜು ತಂದೆ ಲೇಟ್ ವೆಂಕಟಪ್ಪ ರವರಿಗೆ ಸೇರಿದ ಇಕ್ಕನೂರು ಕುರುಬರಹಳ್ಳಿ ಮಧ್ಯೆಯಿರುವ ರಿನಂ. 13/3 ರ4 ಎಕರೆ (Abbinahole police) ಜಮೀನಿನಲ್ಲಿ 300 ಶ್ರೀಗಂಧದಸಸಿಗಳನ್ನು ಹಾಕಿದ್ದರು.
ಅವುಗಳಲ್ಲಿ ಸೆ.3ರಂದು ರಾತ್ರಿ ವೇಳೆಯಲ್ಲಿ ಯಾರೋ ಕಳ್ಳರು 3 ಶ್ರೀಗಂಧದ ಮರಗಳನ್ನು ಕತ್ತರಿಸಿ ಮರದ ಮೇಲ್ಬಾಗ ಅಲ್ಲಿಯೇ ಬಿಟ್ಟು ಮರದ ಕಾಂಡದ ಭಾಗವನ್ನು ಕಳ್ಳತನ ಮಾಡಿಕೊಂಡು ಹೋಗಿದ್ದಾರೆ.
3 ಮರದ ತುಂಡು ಸುಮಾರು 50 ರಿಂದ 60 ಕೆಜಿ. ತೂಕವಿದ್ದು, ಅವುಗಳ ಅಂದಾಜು ಮೌಲ್ಯ ಸುಮಾರು 1ಲಕ್ಷ ಬೆಲೆ (Abbinahole police) ಬಾಳುತ್ತಿತ್ತು. ಶ್ರೀಗಂಧದ ಮರಗಳನ್ನು ಕಳ್ಳತನ ಮಾಡಿಕೊಂಡು ಹೋದವರ ಮೇಲೆ ಕಾನೂನು ರೀತಿಯ ಕ್ರಮ ಕೈಗೊಳ್ಳಿ ಎಂದು ರೈತರು ಅಬ್ಬಿನಹೊಳೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದರು.
ಕಳುವಾದ ಮಾಲು ಮತ್ತು ಆರೋಪಿಗಳನ್ನು ಪತ್ತೆ ಮಾಡುವ ಸಲುವಾಗಿ ಅಬ್ಬಿನಹೊಳೆ ಪೊಲೀಸ್ ಠಾಣೆಯ ಪಿಎಸ್ಐ ಬಾಹುಬಲಿ ಎಂ. ಪಡನಾಡ, ಜಿ. ಮಂಜುನಾಥ್ ಹಾಗೂ ಸಿಬ್ಬಂದಿಯವರನ್ನು ಒಳಗೊಂಡತಂಡವು ಆರೋಪಿ ತರಕುರಿತಂತೆ ಬಾತ್ಮೀದಾರರಿಂದಮಾಹಿತಿಯನ್ನು ಸಂಗ್ರಹಿಸಿಅಬ್ಬಿನಹೊಳೆ ಠಾಣೆಯ ಪೊಲೀಸರು ಕಳ್ಳರಿಂದ ವಶಪಡಿಸಿಕೊಂಡಿರುವ ಶ್ರೀಗಂಧ ಮರದ ತುಂಡುಗಳ ಚೀಲ.
ಸೆ.8 ರಂದು ಆಂಧ್ರದ ಕುಂದುರ್ಪಿ ನಮಂಡಲದವಡ್ಡೆಪಾಳ್ಯದ ಮಂಡಲದವಡ್ಡೆಪಾಳ್ಯ ರ ಕೊಟ್ಟೂರಪ್ಪ, ಓಬಣ್ಣ, ಈರಣ್ಣ ಹಾಗೂ ಚಳ್ಳಕೆರೆ ತಾಲೂಕು ಜಾಜೂರು ಗ್ರಾಮದ ಸಿದ್ದಣ್ಣ ಎನ್ನುವವರನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದಾರೆ.
ಆಗ ಆರೋಪಿಗಳು ಅಬ್ಬಿನಹೊಳೆ ಪೊಲೀಸ್ ಠಾಣೆ ವ್ಯಾಪ್ತಿಯ ಇಕ್ಕನೂರು, ಕುರುಬರಹಳ್ಳಿ ಗ್ರಾಮದ ಮಧ್ಯವಿರುವ ವಿ.ರಾಜು ಅವರ ಜಮೀನಿನಲ್ಲಿ ಶ್ರೀಗಂಧದ ಮರಗಳನ್ನು ಕಳ್ಳತನ (Abbinahole police) ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ. ಇವರಿಂದ ಸುಮಾರು ₹60000 ಮೌಲ್ಯದ 30 ಕೆಜಿ 640 ಗ್ರಾಂ ತೂಕದ ಶ್ರೀಗಂಧದ ಮರದ ತುಂಡುಗಳನ್ನು ಮತ್ತು ಕಳ್ಳತನಕ್ಕೆ ಬಳಸಿದ 2 ಗರಗಸ, 1 ಬಾಚಿ, 2 ಮೋಟಾರ್ ಸೈಕಲ್ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಇದನ್ನೂ ಓದಿ: Today Dina Bhavishya: ಇಂದಿನ ರಾಶಿ ಭವಿಷ್ಯ 11-9-2025
ಈ ಪತ್ತೆ ಕಾರ್ಯದಲ್ಲಿ ಭಾಗವಹಿಸಿದ ಅಬ್ಬಿನಹೊಳೆ ಪೊಲೀಸ್ ಠಾಣೆಯ ಪಿಎಸ್ಐಬಾಹುಬಲಿ ಎಂ.ಪಡನಾಡ ಮತ್ತು ಜಿ. ಮಂಜುನಾಥ್ ಹಾಗೂ ಸಿಬ್ಬಂದಿಗಳಾದ ನಾಗರಾಜ್, ನಿಂಗರಾಜು, ದೇವೇಂದ್ರಪ್ಪ, ದಾದಾ (Abbinahole police) ಖಲಂದರ್,ನಾಗಣ್ಣ,ನಾಗರಾಜಮತ್ತು ರುದ್ರೇಶರವರನ್ನು ಪೊಲೀಸ್ ಅಧೀಕ್ಷಕರು ಶ್ಲಾಘಿಸಿದ್ದಾರೆ.