Namma JanaNamma JanaNamma Jana
  • ಇಂದಿನ ಸುದ್ದಿ
  • ರಾಜಕೀಯ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಕ್ರೀಡೆ
  • ಆರೋಗ್ಯ
  • ದಿನ ಭವಿಷ್ಯ
Reading: ಶ್ರೀರಾಂಪುರದಲ್ಲಿ 3 ಕೋಟಿ ವೆಚ್ಚದ ಬಸ್ ನಿಲ್ದಾಣ: ಬಿ.ಜಿ.ಗೋವಿಂದಪ್ಪ | Hosadurga
Share
Notification Show More
Font ResizerAa
Font ResizerAa
Namma JanaNamma Jana
  • ಇಂದಿನ ಸುದ್ದಿ
  • ರಾಜಕೀಯ
  • ವಿಶೇಷ ಸುದ್ದಿ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಆರೋಗ್ಯ
  • ಕ್ರೀಡೆ
  • ದಿನ ಭವಿಷ್ಯ
  • ರಾಜಕೀಯ
Search
  • ಇಂದಿನ ಸುದ್ದಿ
  • ರಾಜಕೀಯ
  • ವಿಶೇಷ ಸುದ್ದಿ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಆರೋಗ್ಯ
  • ಕ್ರೀಡೆ
  • ದಿನ ಭವಿಷ್ಯ
  • ರಾಜಕೀಯ
Have an existing account? Sign In
Follow US
  • Advertise
© 2024 Namma Janna. Kannada News Portal. All Rights Reserved.
Namma Jana > Blog > ಇಂದಿನ ಸುದ್ದಿ > ಶ್ರೀರಾಂಪುರದಲ್ಲಿ 3 ಕೋಟಿ ವೆಚ್ಚದ ಬಸ್ ನಿಲ್ದಾಣ: ಬಿ.ಜಿ.ಗೋವಿಂದಪ್ಪ | Hosadurga
ಇಂದಿನ ಸುದ್ದಿ

ಶ್ರೀರಾಂಪುರದಲ್ಲಿ 3 ಕೋಟಿ ವೆಚ್ಚದ ಬಸ್ ನಿಲ್ದಾಣ: ಬಿ.ಜಿ.ಗೋವಿಂದಪ್ಪ | Hosadurga

Editor Nammajana
Last updated: 12 September 2024 03:05
By Editor Nammajana 3 Min Read
Share
SHARE
Chitradurga news | nammajana.com |12-9-2024
ನಮ್ಮಜನ.ಕಾಂ, ಹೊಸದುರ್ಗ: ಬಸ್‌ ನಿಲ್ದಾಣ ಸಾರ್ವಜನಿಕ ಆಸ್ತಿ. ಸಾರ್ವಜನಿಕರು ಅದನ್ನು ಸದ್ಬಳಕೆ ಮಾಡಿಕೊಳ್ಳಬೇಕೇ ಹೊರತು ದುರ್ಬಳಕೆ ಮಾಡಿಕೊಳ್ಳಬಾರದು. ಯಾರಾದರೂ ಇಲ್ಲಿ ಅಕ್ರಮ ಚಟುವಟಿಕೆ ನಡೆಸಿದರೆ, ಮುಲಾಜಿಲ್ಲದೆ ಕಾನೂನು (Hosadurga) ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಬಿಜಿ ಗೋವಿಂದಪ್ಪ ಹೇಳಿದರು.
ತಾಲೂಕಿನ ಶ್ರೀರಾಂಪುರದಲ್ಲಿ ಸುಮಾರು 3.ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ಗ್ರಾಮ ಪಂಚಾಯಿತಿ ನೂತನ ಬಸ್‌ ನಿಲ್ದಾಣದ ಉದ್ಘಾಟನೆ, ಜಲ ಜೀವನ್‌ ಯೋಜನೆಯ ಭೂಮಿಪೂಜೆ, ಪೋಷಣ್‌ ಆಭಿಯಾನ, ಹೊಲಿಗೆ ಯಂತ್ರ ವಿತರಣೆ ಹಾಗೂ ವಾಣಿಜ್ಯ ಮಳಿಗೆಗಳ ಉದ್ಗಾಟನೆ ನೆರವೇರಿಸಿ ಅವರು ಮಾತನಾಡಿದರು.
ಗ್ರಾಮ ಪಂಚಾಯಿತಿಗಳು ಸ್ವಾವಲಂಬಿಗಳಾದಾಗ ಮಾತ್ರ, ಸಾರ್ವಜನಿಕರಿಗೆ ಮೂಲಭೂತ ಸೌಕರ್ಯ ಕಲ್ಪಿಸಲು ಸಾಧ್ಯ. ಈ ನಿಟ್ಟಿನಲ್ಲಿ 11 ವಾಣಿಜ್ಯ ಮಳಿಗೆ ನಿರ್ಮಿಸಿಕೊಡಲಾಗಿದೆ. ಇನ್ನೂ ವಾಣಿಜ್ಯ ಮಳಿಗೆ ನಿರ್ಮಿಸಲು ಜಾಗವು ಇದೆ. ಇದನ್ನು ಸ್ಥಳೀಯ ಗ್ರಾಮಾಡಳಿತ ಸರಿಯಾದ ರೀತಿಯಲ್ಲಿ ಬಳಕೆ ಮಾಡಿಕೊಳ್ಳಬೇಕು. ಈ ಮೂಲಕ ಗ್ರಾ.ಪಂನ ಆರ್ಥಿಕ ಮೂಲವನ್ನು ವೃದ್ದಿಸಿಕೊಳ್ಳಬೇಕು ತಿಳಿಸಿದರು.
ಜನರಿಂದ ಕೆಲಸ ಹೇಳಿಸಿಕೊಂಡು ಮಾಡುವ ವ್ಯಕ್ತಿ ನಾನಲ್ಲ, ನನಗೆ ಮತಹಾಕಿದ ಮತದಾರರ ಮನದಾಳವನ್ನು ಅರಿತು ಕೆಲಸ ಮಾಡುವವನು ನಾನು. ಇಲ್ಲಿಯವರೆಗೂ ನಾನು ತಾಲೂಕಿನ ಅಭಿವೃದ್ದಿಯ ಬಗ್ಗೆ ಯಾರಿಂದಲೂ ಹೇಳಿಸಿಕೊಂಡು ಕೆಲಸ ಮಾಡಿಲ್ಲ. ನನ್ನ ಜನರಿಗೆ ಏನು ಬೇಕು ಎಂಬುದನ್ನು (Hosadurga) ಅರಿತು ಕೆಲಸ ಮಾಡಿದ್ದೇನೆ. ಅದರ ಪರಿಣಾಮವೇ ಇಡೀ ತಾಲೂಕಿಗೆ ನೀರು, ಬೆಳಕು. ರಸ್ತೆ ಅಬೀವೃದ್ದಿ ಪಡಿಸಲು ಸಾಧ್ಯವಾಗಿದೆ ಎಂದರು.

ನನ್ನ ರಾಜಕೀಯ ಕರ್ಮ ಭೂಮಿ ಶ್ರೀರಾಂಪುರ:

 ನನ್ನ ರಾಜಕೀಯ ಕರ್ಮ ಭೂಮಿಯಾದ ಶ್ರೀರಾಂಪುರದ ಜನರ ಋಣ ತೀರಿಸುವ ಕೆಲಸ ಮಾಡಿದ್ದೇನೆ. ಜನರಿಗೆ ಕುಡಿಯುವ ನೀರು, ಕೃಷಿಗೆ ನೀರು, ಕೆರೆಗಳಿಗೆ ನೀರು ಒದಗಿಸಲು ಭದ್ರಾ ಯೋಜನೆಯನ್ನು ಅನುಷ್ಠಾನ ಗೊಳಿಸಿ, ಈಗಾಗಲೇ ಕೆಲಸವೂ ಮುಕ್ತಾಯದ ಹಂತದಲ್ಲಿದೆ. ರೈತರಿಗೆ ತೊಂದರೆಯಾಗದಂತೆ ಹಗಲು ವೇಳೆ ವಿದ್ಯುತ್‌ ನೀಡಲು ಗರಗ ಬಳಿ ಸೋಲಾರ್‌ ಪಾರ್ಕ ನಿರ್ಮಾಣ, ಗ್ರಾಮಗಳಿಗೆ ನಿರಂತರ ವಿದ್ಯುತ್‌ ಸರಬರಾಜಿಗೆ ಎಸ್‌.ನೇರಲಕೆರೆ ಬಳಿ ಮತ್ತೊಂದು ಎಂ.ಯು.ಎಸ್‌ ಘಟಕ ಸ್ಥಾಪನೆಗೆ ಕ್ರಮ ಕೈಗೊಳ್ಳಲಾಗಿದೆ ಎಂದರು.

*ಭದ್ರಾ ನೀರು ಹರಿಸಿಯೇ ತೀರುತ್ತೇನೆ:*

ತಾಲೂಕಿಗೆ ಭದ್ರಾ ನೀರು ಬರಲ್ಲ ಎನ್ನುವ ಮಾತುಗಳನ್ನು ವಿರೋಧಿಗಳು ಆಡುತ್ತಿದ್ದಾರೆ. ಇನ್ನೊಂದು ವರ್ಷದಲ್ಲಿ ತಾಲೂಕಿಗೆ ಭದ್ರಾ ಜಲಾಶಯದಿಂದ ಕುಡಿಯುವ ನೀರನ್ನು ತಂದೇ ತೀರುತ್ತೇನೆ. ನಾನು ಈ ಮಾತನ್ನು ಪ್ರಚಾರಕ್ಕಾಗಿ ಹೇಳುತ್ತಿಲ್ಲ. ನನಗೆ ರಾಜಕೀಯ ಇಚ್ಚಾಶಕ್ತಿ ಇದೆ, ಭದ್ದತೆಯಿದೆ. ನನ್ನ ರಾಜಕೀಯ ಜೀವನದಲ್ಲಿ ಸಾಧಿಸಿದ ಆತ್ಮಸಂತೋಷ ನನಗಿದೆ ಇದನ್ನು ಜನರು ಅರಿಯಬೇಕು. ಯಾವುದೇ ವ್ಯಕ್ತಿಯನ್ನು ಆಯ್ಕೆ ಮಾಡುವಾಗ ಯೋಚಿಸಿ ಆಯ್ಕೆ ಮಾಡಿ ಎಂದರು.
ಇದನ್ನೂ ಓದಿ: ಡಿಸಿಸಿ ಬ್ಯಾಂಕ್ ಚುನಾವಣೆ: ಶಾಸಕ ಟಿ.ರಘುಮೂರ್ತಿ ಅನರ್ಹತೆ ಪ್ರಕರಣ | ಹೊರಬಿದ್ದ ಕೋರ್ಟ್ ತೀರ್ಪು | ಕೋರ್ಟ್ ಹೇಳಿದ್ದೇನು? | DCC Bank Election
ಕಾರ್ಯಕ್ರಮದಲ್ಲಿ ಸ್ಥಳೀಯ ಗ್ರಾ.ಪಂ.ಅಧ್ಯಕ್ಷೆ ಶ್ವೇತಾರಂಗಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ, ಕಾಂಗ್ರೇಸ್‌ ಮುಖಂಡರಾದ ಆಗ್ರೋ ಶಿವಣ್ಣ, ದೀಪಿಕ, ಲೋಕೇಶ್ವರಪ್ಪ, ಆರ್‌ ದಾಸಪ್ಪ, ಜಿ.ಪಂ.ಮಾಜಿ ಅಧ್ಯಕ್ಷೆ ಗಿರಿಜಾ ಪೂಜಾರಿನಿಂಗಪ್ಪ, ಗ್ರಾಮ ಮಾಜಿ ಅಧ್ಯಕ್ಷರುಗಳಾದ ಎಸ್‌ ಸಿ ರಮೇಶ್‌, ಸುಮತಿ ನಿರಂಜನಮೂರ್ತಿ, ತಾಪಂ ಇಓ ಸುನಿಲ್‌ಕುಮಾರ್‌, ಶ್ರೀರಾಂಪುರ ಠಾಣೆ ಪಿಐ ಮಧು, ನಿರ್ಮಿತಿ ಕೇಂದ್ರದ (Hosadurga) ಯೋಜನಾ ನಿರ್ದೇಶಕ ಹರೀಶ್‌ ಕುಮಾರ್‌, ಕುಡಿಯುವ ನೀರು ಇಲಾಕೆ ಎಇಇ ಧನಂಜಯ, ಪಿಡಿಓ ಪಾಲಾಕ್ಷಪ್ಪ, ಗ್ರಾಪಂ ಉಪಾಧ್ಯಕ್ಷ ಶಶಿಧರ, ಗ್ರಾಪಂ ಸದಸ್ಯರುಗಳು ಹಾಜರಿದ್ದರು.
ಇದನ್ನೂ ಓದಿ: Dina Bhavishya: ಇಂದು ಯಾವ ರಾಶಿಗೆ ಮದುವೆ, ಉದ್ಯೋಗ ಯೋಗವಿದೆ ನೋಡಿ?
ಕಾರ್ಯಕ್ರಮಕ್ಕೂ ಮುನ್ನಾ ಅಂಬೇಡ್ಕರ್‌ ವೃತ್ತದಲ್ಲಿ ಜಲ ಜೀವನ್‌ ಯೋಜನೆಯ ಅನುಷ್ಠಾನಕ್ಕೆ ಭೂಮಿಪೂಜೆ ನೆರವೇರಿಸಿದರು. ನೂತನ ಬಸ್‌ ನಿಲ್ದಾಣದಲ್ಲಿ ನಿರ್ಮಿಸಲಾಗಿರುವ ವಾಣಿಜ್ಯ ಮಳಿಗೆಗಳನ್ನು ಉದ್ಗಾಟಿಸಿದರು. ಅಲ್ಲದೆ ಚರ್ಮ ಕುಠೀರ ಯೋಜನೆಯಲ್ಲಿ ತರಬೇತಿ ಹೊಂದಿದ ಫಲಾನೂಭವಿಗಳಿಗೆ ಹೊಲಿಗೆ ಯಂತ್ರಗಳನ್ನು ವಿತರಿಸಿದರು.

You Might Also Like

Gold Rate | ಬಂಗಾರದ ಬೆಲೆಯಲ್ಲಿ ಇಳಿಕೆ

Transfer | ಜಿಲ್ಲಾ ಬಿಸಿಎಂ ಅಧಿಕಾರಿ ಆರ್.ಸುಬ್ರಾನಾಯಕ್ ವರ್ಗಾವಣೆ, ನೂತನ ಅಧಿಕಾರಿ ಅಧಿಕಾರ ಸ್ವೀಕಾರ

POWER CUT | ಇಂದು ಬೆಳಗ್ಗೆಯಿಂದ ಸಂಜೆವರೆಗೆ ಕರೆಂಟ್ ಇರಲ್ಲ

Gold Rate | ಬಂಗಾರದ ಬೆಲೆಯಲ್ಲಿ ಏರಿಕೆ

POWER CUT | ಇಂದಿನಿಂದ ಎರಡು ದಿನ ಬೆಳಗ್ಗೆಯಿಂದ ಸಂಜೆವರೆಗೂ ಕರೆಂಟ್ ಇರಲ್ಲ

Share This Article
Facebook Twitter Whatsapp Whatsapp Telegram Email Print
ಈ ಮೇಲಿನ ಸುದ್ದಿ, ಲೇಖನದ ಬಗ್ಗೆ ನಿಮ್ಮ ಅನಿಸಿಕೆ ಏನು?
Love0
Sad0
Happy0
Sleepy0
Angry0
Dead0
Wink0
Previous Article Dina Bhavishya: ಇಂದು ಯಾವ ರಾಶಿಗೆ ಮದುವೆ, ಉದ್ಯೋಗ ಯೋಗವಿದೆ ನೋಡಿ?
Next Article ಘಟಪರ್ತಿ ಕಾಲೇಜಿನ ಬಾಲಕಿಯರ ಖೋ-ಖೋ ತಂಡ ರಾಜ್ಯಮಟ್ಟಕ್ಕೆ ಆಯ್ಕೆ | Challakere
Leave a comment

Leave a Reply Cancel reply

Your email address will not be published. Required fields are marked *

Stay Connected

TelegramFollow

Latest News

Dina Bhavishya | ದಿನ ಭವಿಷ್ಯ, ಇವತ್ತು ಯಾವ ರಾಶಿಗೆ ಶುಭ?
ದಿನ ಭವಿಷ್ಯ
Dina Bhavishya | ದಿನ ಭವಿಷ್ಯ, ಇವತ್ತು ಯಾವ್ಯಾವ ರಾಶಿಗೆ ಶುಭ ಲಾಭ, ನಷ್ಟ ನೋಡಿ
ದಿನ ಭವಿಷ್ಯ
Dina Bhavishya | ದಿನ ಭವಿಷ್ಯ, ಇವತ್ತು ಯಾವ್ಯಾವ ರಾಶಿಗೆ ಶುಭ?
ದಿನ ಭವಿಷ್ಯ
Adike rate | ಅಡಿಕೆ ಬೆಲೆಯಲ್ಲಿ ಇಳಿಕೆ
ಅಡಿಕೆ ಧಾರಣೆ

Kannada News (ಕನ್ನಡ ಸುದ್ದಿ): Get the latest updates of karnataka news, world news, india news, political News and celebrity Kannada news and more on Nammajana (nammajana.com).

Sign Up for Our Newsletter

Subscribe to our newsletter to get our newest articles instantly!

Namma JanaNamma Jana
© 2025 NammaJanna. Kannada News Portal. All Rights Reserved.
adbanner
AdBlock Detected
Our site is an advertising supported site. Please whitelist to support our site.
Okay, I'll Whitelist
Welcome Back!

Sign in to your account

Lost your password?