
Chitradurga news|nammajana.com|20-9-2024
ನಮ್ಮಜನ.ಕಾಂ, ಚಿತ್ರದುರ್ಗ: ತಾಲೂಕಿನ ಬೊಮ್ಮಕ್ಕನಹಳ್ಳಿ (Chitradurga crime)ಯಲ್ಲಿ ದಂಪತಿಗಳ ಡಬಲ್ ಮರ್ಡರ್ ಪ್ರಕರಣ ದಾಖಲಾಗಿದೆ.
ಕೊಲೆಯಾದ ದಂಪತಿಗಳ ಕುಟುಂಬಸ್ಥರ ಮಗಳು ಪ್ರತಿಕ್ರಿಯೆ ನೀಡಿದ್ದು ಹನುಮಂತಪ್ಪ, ತಿಪ್ಪಮ್ಮ ದಂಪತಿ ಪುತ್ರಿ ಅರ್ಷಿತಾ ತನ್ನ ಪತಿ (Chitradurga crime) ಕುಟುಂಬದ ವಿರುದ್ದ ಕೊಲೆ ಶಂಕೆ ವ್ಯಕ್ತಪಡಿಸಿದ್ದಾಳೆ.

ಕೊಲೆಯಾದ ದಂಪತಿಗಳ ಪುತ್ರಿ ಅರ್ಷಿತಾ ಪತಿ ಮಂಜಣ್ಣ, ಮಾವ ಚಂದ್ರಪ್ಪ, ಹಾಗೂ ರಘು, ಎಂಬುವರ ಮೇಲೆ ಕೊಲೆ ಶಂಕೆಯನ್ನು ಅರ್ಷಿತಾ ವ್ಯಕ್ತಪಡಿಸಿದ್ದಾಳೆ.
ನಮ್ಮ ಜಮೀನು ವಿವಾದದ ಹಿನ್ನಲೆ ನನ್ನ ತಂದೆ ತಾಯಿಯನ್ನು ನಮ್ಮ ನೆಂಟರು ಕೊಲೆ ಮಾಡಿರಬಹುದು ಎಂದು ಅರ್ಷಿತಾ ಅನುಮಾನ ವ್ಯಕ್ತಪಡಿಸಿದ್ದಾಳೆ.
ಬೊಮ್ಮಕ್ಕನಹಳ್ಳಿ ಗ್ರಾಮದ ಅರ್ಷಿತಾಳನ್ನು 2 ವರ್ಷದ ಹಿಂದೆ ಅದೇ ಗ್ರಾಮದ ಮಂಜಣ್ಣ ವಿವಾಹವಾಗಿದ್ದನು.ಬಳಿಕ ಎರಡೂ ಕುಂಟುಂಬಗಳ ನಡುವೆ ಜಮೀನು ವಿವಾದ ಪ್ರಾರಂಭವಾಗಿತ್ತು. ನಂತರ ಮಗಳ ಪತಿ ಮಂಜಣ್ಣನ ಕುಟುಂಬಕ್ಕೆ ಜಮೀನು (Chitradurga crime) ಬಿಡದೆ ಹಿನ್ನಲೆ. ಹನುಮಂತಪ್ಪ, ತಿಪ್ಪಮ್ಮ ವಿರುದ್ದ ಜಗಳ ಮಾಡಿ ಹರ್ಷಿತಾಳಿಗೆ ಕಿರುಕುಳ ಸಹ ನೀಡುತ್ತಿದ್ದನು ಎಂದು ತಿಳಿದು ಬಂದಿದೆ.
ಈ ವಿವಾದ ಬಳಿಕ ಅರ್ಷಿತಾ ಗಂಡನ ಮನೆ ಬಿಟ್ಟು ತವರಿಗೆ ಬಂದು ವಾಸವಾಗಿದ್ದಳು.ಇದೇ ಸೇಡಿನ ಹಿನ್ನಲೆ ಕೊಲೆ ಮಾಡಿದ ಶಂಕೆಯನ್ನು ಕೊಲೆಯಾದ ದಂಪತಿಗಳ ಮಗಳು ಹರ್ಷಿತಾ (Chitradurga crime) ವ್ಯಕ್ತಪಡಿಸಿದ್ದು ತುರುವನೂರು ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಎಸ್ಪಿ ರಂಜಿತ್ ಕುಮಾರ್ ಬಂಡಾರು ಭೇಟಿ ನೀಡಿ ಸ್ಥಳ ಮಹಜರು ನಡೆಸಿ ಮಾಹಿತಿ ಕಲೆ ಹಾಕುತ್ತಿದ್ದಾರೆ.