Namma JanaNamma JanaNamma Jana
  • ಇಂದಿನ ಸುದ್ದಿ
  • ರಾಜಕೀಯ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಕ್ರೀಡೆ
  • ಆರೋಗ್ಯ
  • ದಿನ ಭವಿಷ್ಯ
Reading: ಹಿಂದುಳಿದ ಹಳ್ಳಿಗಳನ್ನು ಸೇರಿಸಿ ಪುರಸಭೆ ಮಾಡಿರುವವರಿಗೆ ದೂರದೃಷ್ಟಿಯಿಲ್ಲ : ಹೆಚ್.ಆಂಜನೇಯ | Holalkere
Share
Notification Show More
Font ResizerAa
Font ResizerAa
Namma JanaNamma Jana
  • ಇಂದಿನ ಸುದ್ದಿ
  • ರಾಜಕೀಯ
  • ವಿಶೇಷ ಸುದ್ದಿ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಆರೋಗ್ಯ
  • ಕ್ರೀಡೆ
  • ದಿನ ಭವಿಷ್ಯ
  • ರಾಜಕೀಯ
Search
  • ಇಂದಿನ ಸುದ್ದಿ
  • ರಾಜಕೀಯ
  • ವಿಶೇಷ ಸುದ್ದಿ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಆರೋಗ್ಯ
  • ಕ್ರೀಡೆ
  • ದಿನ ಭವಿಷ್ಯ
  • ರಾಜಕೀಯ
Have an existing account? Sign In
Follow US
  • Advertise
© 2024 Namma Janna. Kannada News Portal. All Rights Reserved.
Namma Jana > Blog > ರಾಜಕೀಯ > ಹಿಂದುಳಿದ ಹಳ್ಳಿಗಳನ್ನು ಸೇರಿಸಿ ಪುರಸಭೆ ಮಾಡಿರುವವರಿಗೆ ದೂರದೃಷ್ಟಿಯಿಲ್ಲ : ಹೆಚ್.ಆಂಜನೇಯ | Holalkere
ರಾಜಕೀಯ

ಹಿಂದುಳಿದ ಹಳ್ಳಿಗಳನ್ನು ಸೇರಿಸಿ ಪುರಸಭೆ ಮಾಡಿರುವವರಿಗೆ ದೂರದೃಷ್ಟಿಯಿಲ್ಲ : ಹೆಚ್.ಆಂಜನೇಯ | Holalkere

Editor Nammajana
Last updated: 1 December 2024 04:58
By Editor Nammajana 3 Min Read
Share
SHARE

Chitradurga news|nammajana.com|1-12-2024

ನಮ್ಮಜನ.ಕಾಂ, ಹೊಳಲ್ಕೆರೆ: ಹಿಂದುಳಿದ ಹಳ್ಳಿಗಳನ್ನು ಸೇರಿಸಿ ಪಟ್ಟಣವನ್ನು ಪುರಸಭೆಯನ್ನಾಗಿ ಪರಿವರ್ತಿಸಿದ್ದು ದೂರದೃಷ್ಟಿ (Holalkere) ಇಲ್ಲದ ನಾಯಕತ್ವ ಪ್ರದರ್ಶಿಸುತ್ತದೆ ಎಂದು ಮಾಜಿ ಸಚಿವ ಹೆಚ್.ಆಂಜನೇಯ ಪರೋಕ್ಷವಾಗಿ ಶಾಸಕ ಎಂ.ಚಂದ್ರಪ್ಪ ವಿರುದ್ದ ವಾಗ್ದಾಳಿ ನಡೆಸಿದರು.

ಅವರು ಪುರಸಭೆ ಕಚೇರಿಯಲ್ಲಿ ಕಾಂಗ್ರೇಸ್ ಪಕ್ಷ ಶನಿವಾರ ಪುರಸಭೆಯ ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರಿಗೆ ಹಮ್ಮಿಕೊಂಡ ಸನ್ನಾನ ಕಾರ್ಯಕ್ರಮದಲ್ಲಿ ಆಕ್ರೋಶ ವ್ಯಕ್ತಪಡಿಸಿದರು.

ಪಟ್ಟಣ ಪುರಸಭೆಯಾಗುವಷ್ಟು ಜನಸಂಖ್ಯೆ ಜತೆಗೆ ಅಭಿವೃದ್ಧಿ ಹೊಂದಿಲ್ಲದ ಪಟ್ಟಣದ ಸುತ್ತಲಿನ ಹಳ್ಳಿಗಳನ್ನು ಸೇರಿಸಿ (Holalkere) ಪುರಸಭೆಯನ್ನಾಗಿ ಘೋಷಣೆ ಮಾಡಿದ್ದಾರೆ. ಇದು ಹಳ್ಳಿ ಜನರ ಬದುಕಿಗೆ ಮಾರಕವಾಗಿದೆ.

ಹಳ್ಳಿಯ ಬಡಜನರಿಗೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲು ಪುರಸಭೆಗೆ ಸಾಧ್ಯವಾಗುತ್ತಿಲ್ಲ. ಹಳ್ಳಿ ಜನರಿಗೆ ತೆರಿಗೆ ಹೆಚ್ಚಾಗುತ್ತಿದೆ. ಸೌಲಭ್ಯವಿಲ್ಲದ ಹಳ್ಳಿಗಳನ್ನು ಪುರಸಭೆಗೆ ಸೇರಿಸಿದ್ದು ದೂರದೃಷ್ಟಿ ಇಲ್ಲದವರು ಮಾಡಿದ ಅಪರಾಧಕ್ಕೆ ಹಳ್ಳಿಗರು ಬೆಲೆ ತೆರಬೇಕಾಗಿದೆ ಎಂದರು.

ನಾನು ಸಚಿವನಾಗಿದ್ದಾಗ ನಾಲೈದು ಸಾವಿರ ಕೋಟಿ ಅನುದಾನ ತಂದು ಸಾಕಷ್ಟು ಕಾರ್ಯಕ್ರಮಗಳ ಯೋಜನೆ ರೂಪಿಸಿದ್ದೆ. 19 ಎಕರೆ ಜಮೀನು ಪಡೆದು ಬಡವರಿಗೆ ನಿವೇಶ ಮತ್ತು ಮನೆ ಕಟ್ಟುವ ಯೋಜನೆಯಲ್ಲಿ 1000 ಸಾವಿರ ಮನೆ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಮಾಡಿಸಿದ್ದರೂ 10 ವರ್ಷ ಕಳೆದರೂ (Holalkere) ಇನ್ನು ಮನೆಗಳ ಕಟ್ಟುವ ಕೆಲಸ ಆಗಿಲ್ಲ. ಸಾವಿರ ನಿವೇಶ ಸಿದ್ದಪಡಿಸಿದ್ದು ನಾವು 200 ಜನರಿಗೆ ನಿವೇಶದ ಹಕ್ಕು ಪತ್ರ ನೀಡಿದೆ.ಇನ್ನೂಳಿದ ನಿವೇಶನದ ಹಕ್ಕು ಪತ್ರ ನೀಡಿಲ್ಲ. ಪಟ್ಟಣದಲ್ಲಿ ಸಂವಿದಾನ ಸೌಧ ಸುತ್ತಲು ವಾಣಿಜ್ಯ ಮಳಿಗೆ ಕಟ್ಟಿಸಿದ್ದರೂ ಇನ್ನೂ ಟೆಂಡರ್ ನೀಡಿಲ್ಲ.

ಒಟ್ಟಾರೆ ನಾವು ರೂಪಿಸಿದ ಬಹುತೇಕ ಯೋಜನೆಗಳನ್ನು ತಿರುಚಿ ಬೇರೆ ರೀತಿಯಲ್ಲಿ ರೂಪಿಸಿದ್ದಾರೆ. ನಮ್ಮ ಕಾಲದ ಕಾಮಗಾರಿಗಳನ್ನು ಪಾಳು ಬಿಟ್ಟಿದ್ದಾರೆ. ಅವುಗಳಲ್ಲಿ ಕಮಿಷನ್ ಸಿಕ್ಕಲ್ಲ ಎನ್ನುವ ಕಾರಣ ಇರಬಹುದೆಂದು ಅಭಿಪ್ರಾಯಪಟ್ಟರು.

ಅಧಿಕಾರ ಸಿಕ್ಕಾಗ ಪ್ರಾಮಾಣಿಕ ಅಡಳಿತ ನೀಡಬೇಕು. ಜನರಿಗೆ ಬೆಳಕು, ಸ್ವಚ್ಚತೆ, ಮನೆ, ನಿವೇಶನ, ಸರಕಾರಿ ಸೌಲಭ್ಯಗಳು ಸಿಕ್ಕಬೇಕು. ಜನರ ಮನೆ ಭಾಗಿಲಿಗೆ ಸೇವೆಯನ್ನು ನೀಡಬೇಕು. (Holalkere) ಧರ್ಮ, ಜಾತಿ ಎನ್ನದೆ ಎಲ್ಲರಿಗೂ ಎಲ್ಲಾ ರೀತಿಯ ಅಧಿಕಾರ ಸಿಕ್ಕಬೇಕು. ಇಂದು ಎಸ್ಸಿ ಜನಕ್ಕೆ ಸಿಕ್ಕಿದೆ. ಮುಂದೆ ಲಿಂಗಾಯ್ತರಿಗೆ, ಗೊಲ್ಲರಿಗೆ, ಕುರುಬರಿಗೆ ಮತ್ತಿತರ ಜಾತಿಗಳಿಗೆ ಸಿಗಲಿದೆ. ವೃಣಾತ್ಮಕ ಚಿಂತನೆ ಜತೆ ಜನರ ಸೇವೆ ಅಗತ್ಯ ಎಂದರು.

ಈ ಸಂದರ್ಭದಲ್ಲಿ  ಪುರಸಭೆ ಅಧ್ಯಕ್ಷ ವಿಜಯಸಿಂಹ ಖಾಟ್ರೂತ್, ಉಪಾಧ್ಯಕ್ಷೆ ಹೆಚ್.ಆರ್.ನಾಗರತ್ನವೇದಮೂರ್ತಿ, ಸದಸ್ಯರಾದ ಕೆ.ಸಿ.ರಮೇಶ್, ಸೈಯದ್ ಸಜೀಲ್, ಮನ್ಸೂರು, ವಸಂತರಾಜ್, ಡಿ.ಎಸ್.ವಿಜಯ್, ಶಭಿನಾ ಅಶ್ರಪ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹನುಮಂತಪ್ಪ, ಟೌನ್ ಅಧ್ಯಕ್ಷ ಮಹಜರೂಲ್ಲ ಖಾನ್, ಜಿ.ಪಂ.ಮಾಜಿ ಅಧ್ಯಕ್ಷ ಪಿ.ಆರ್.ಶಿವಕುಮಾರ್, ಮಾಜಿ ಸದಸ್ಯರಾದ ಎಸ್.ಜಿ.ರಂಗಸ್ವಾಮಿ, ಎಂ.ಜಿ.ಲೋಹಿತ್ ಕುಮಾರ್, ತಾ.ಪಂ.ಮಾಜಿ ಸದಸ್ಯರಾದ ರುದ್ರಪ್ಪ, ಬೋವಿ ನಿಗಮದ ಮಾಜಿ ಸದಸ್ಯ ಹನುಮಂತಪ್ಪಗೋಡೆಮನೆ, ಪಟ್ಟಣ ಪಂಚಾಯ್ತಿ ಮಾಜಿ ಅಧ್ಯಕ್ಷರಾದ ಜಗದೀಶ್ ನಾಡಿಗ್, ಅಲಿಮುಲ್ಲ ಷರೀಪ್, ಸದಸ್ಯರಾದ ಡಿ.ಆರ್.ಪಾಂಡುರಂಗಸ್ವಾಮಿ, ಅಲ್ಲಭಕಷ್, ಸೈಪುಲ್ಲ, ಸಾಸಲು ದೇವರಾಜ್, ನಾಮನಿರ್ದೇಶನ ಸದಸ್ಯರಾದ ಸಂಗನಗುAಡಿ ಮಂಜುನಾಥ, ಬಸವರಾಜ್, ಮುಖಂಡರಾದ ರಾಮಗಿರಿ ರಾಜಪ್ಪ, ಗಂಗಸಮುದ್ರದೇವೇಂದ್ರಪ್ಪ, ವಕೀಲ ಬಿ.ಎನ್.ಪ್ರಶಾಂತ್, ಕೆಂಗುಂಡೆ ಜಯಣ್ಣ, ಉದ್ಯೋಮಿ ಕಾಂತರಾಜ್, ಸುರೇಶ್ ಪಾಡಿಗಟ್ಟೆ, ರಾಜಪ್ಪ ಮಾತನಾಡಿದರು.

ಇದನ್ನೂ ಓದಿ: ಚಿತ್ರದುರ್ಗ | ಸಿಟಿ ಕ್ಲಬ್‌ ಚುನಾವಣೆಯಲ್ಲಿ ವೆಂಕಟೇಶರೆಡ್ಡಿಗೆ ಭರ್ಜರಿ ಗೆಲುವು | City Institute Election

ಬಾಕ್ಸ್

ಕಣಿವಯಲ್ಲಿ ಪುರಸಭೆ ಸಿಬ್ಬಂದಿಗೆ ವಸತಿ ನಿಲಯ ಹಾಗೂ ಪೌರಕಾರ್ಮಿಕರಿಗೆ ಮನೆ ನಿರ್ಮಾಣಕ್ಕೆ ಒತ್ತು ನೀಡಿದೆ. ಇನ್ನೂ 20 ಎಕರೆ ಜಾಗ ಸರಕಾರದ ವಶಕ್ಕೆ ಪಡೆದು ಮನೆ ಇಲ್ಲದವರಿಗೆ ಮನೆ ಕಟ್ಟಿಕೊಡಲು ಪುರಸಭೆ ಸಿದ್ದವಾದಲ್ಲಿ ನಮ್ಮ ಸರಕಾರದಿಂದ ಅನುದಾನ ಕೊಡಿಸುವೆ.

ಇಲ್ಲಿನ ಅಭಿವೃದ್ಧಿ ಗಣಿ ಭಾದಿತ ಪ್ರದೇಶ ಅನುದಾನ ಕೊಡಿಸಲು ಜಿಲ್ಲಾಧಿಕಾರಿ ಜತೆ ಮಾತನಾಡುತ್ತೇನೆ. ಸಂಸದರು ಪುರಸಭೆ ಚುನಾವಣೆಯಲ್ಲಿ ಪಾಲ್ಗೊಂಡು ಪಟ್ಟಣದ ಅಭಿವೃದ್ಧಿಗೆ ಪ್ರೋತ್ಸಾಹ ಜತೆ ಅನುದಾನ ನೀಡುವ ಭರವಸೆ ನೀಡಿದ್ದು ಶ್ಘಾಘನೀಯ. ಪಕ್ಷ ಬೇದ ಬಿಟ್ಟು ಅಭಿವೃದ್ಧಿಗೆ ಒತ್ತು ನೀಡಬೇಕು. ಎಲ್ಲಾರು ಜತೆಗಿದ್ದು ಕೆಲಸ ಮಾಡಬೇಕು.

ಹೆಚ್.ಅಂಜನೇಯ. ಮಾಜಿ ಸಚಿವ.

You Might Also Like

POWER CUT | ಇಂದು ಬೆಳಗ್ಗೆಯಿಂದ ಸಂಜೆವರೆಗೆ ಕರೆಂಟ್ ಇರಲ್ಲ

Dina Bhavishya | ದಿನ ಭವಿಷ್ಯ, ಇವತ್ತು ಯಾವ್ಯಾವ ರಾಶಿಗೆ ಶುಭ ಲಾಭ, ನಷ್ಟ ನೋಡಿ

Dina Bhavishya | ದಿನ ಭವಿಷ್ಯ, ಇವತ್ತು ಯಾವ್ಯಾವ ರಾಶಿಗೆ ಶುಭ?

Dina Bhavishya | ದಿನ ಭವಿಷ್ಯ, ಇವತ್ತು ಯಾವ್ಯಾವ ರಾಶಿಗೆ ಶುಭ ಯೋಗ?

Chitradurga BJP ಗೆ ನೂತನ ಜಿಲ್ಲಾಧ್ಯಕ್ಷರಾಗಿ ಕೆ.ಟಿ.ಕುಮಾರಸ್ವಾಮಿ ನೇಮಕ

TAGGED:Chitradurga NewscongratulationH. AnjaneyaholalkereKannada Newskannada suddiNammajana.comNew PresidentVice Presidentಅಭಿನಂದನೆಉಪಾಧ್ಯಕ್ಷಕನ್ನಡ ನ್ಯೂಸ್ಕನ್ನಡ ಸುದ್ದಿಚಿತ್ರದುರ್ಗ ನ್ಯೂಸ್ಚಿತ್ರದುರ್ಗ ಸುದ್ದಿನಮ್ಮಜನ.ಕಾಂನೂತನ‌ ಅಧ್ಯಕ್ಷಹೆಚ್.ಆಂಜನೇಯಹೊಳಲ್ಕೆರೆ
Share This Article
Facebook Twitter Whatsapp Whatsapp Telegram Email Print
ಈ ಮೇಲಿನ ಸುದ್ದಿ, ಲೇಖನದ ಬಗ್ಗೆ ನಿಮ್ಮ ಅನಿಸಿಕೆ ಏನು?
Love0
Sad0
Happy1
Sleepy0
Angry0
Dead0
Wink0
Previous Article ಚಿತ್ರದುರ್ಗ | ಸಿಟಿ ಕ್ಲಬ್‌ ಚುನಾವಣೆಯಲ್ಲಿ ವೆಂಕಟೇಶರೆಡ್ಡಿಗೆ ಭರ್ಜರಿ ಗೆಲುವು | City Institute Election
Next Article ಚಿತ್ರದುರ್ಗ ಸುತ್ತಲೂ ರಿಯಲ್ ಎಸ್ಟೇಟ್ ಅಬ್ಬರ | ಲಕ್ಷಗಳ‌ ಲೆಕ್ಕದಲ್ಲಿದ್ದ ಜಮೀನಿಗೆ ಕೋಟಿ ಡಿಮ್ಯಾಂಡ್ | Real estate
Leave a comment

Leave a Reply Cancel reply

Your email address will not be published. Required fields are marked *

Stay Connected

TelegramFollow

Latest News

Gold Rate | ಬಂಗಾರದ ಬೆಲೆಯಲ್ಲಿ ಇಳಿಕೆ
ಇಂದಿನ ಸುದ್ದಿ
Transfer | ಜಿಲ್ಲಾ ಬಿಸಿಎಂ ಅಧಿಕಾರಿ ಆರ್.ಸುಬ್ರಾನಾಯಕ್ ವರ್ಗಾವಣೆ, ನೂತನ ಅಧಿಕಾರಿ ಅಧಿಕಾರ ಸ್ವೀಕಾರ
ಇಂದಿನ ಸುದ್ದಿ
Gold Rate | ಬಂಗಾರದ ಬೆಲೆಯಲ್ಲಿ ಏರಿಕೆ
ಇಂದಿನ ಸುದ್ದಿ
POWER CUT | ಇಂದಿನಿಂದ ಎರಡು ದಿನ ಬೆಳಗ್ಗೆಯಿಂದ ಸಂಜೆವರೆಗೂ ಕರೆಂಟ್ ಇರಲ್ಲ
ಇಂದಿನ ಸುದ್ದಿ

Kannada News (ಕನ್ನಡ ಸುದ್ದಿ): Get the latest updates of karnataka news, world news, india news, political News and celebrity Kannada news and more on Nammajana (nammajana.com).

Sign Up for Our Newsletter

Subscribe to our newsletter to get our newest articles instantly!

Namma JanaNamma Jana
© 2025 NammaJanna. Kannada News Portal. All Rights Reserved.
adbanner
AdBlock Detected
Our site is an advertising supported site. Please whitelist to support our site.
Okay, I'll Whitelist
Welcome Back!

Sign in to your account

Lost your password?