
Chitradurga news|nammajana.com|17-12-2024
ನಮ್ಮಜನ.ಕಾಂ, ಚಳ್ಳಕೆರೆ: ರಾಷ್ಟೀಯ ಹೆದ್ದಾರಿ(೧೫೦ಎ) ಸಾಣೀಕೆರೆ ಬಳಿ ಎತ್ತಿನ ಗಾಡಿಗೆ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮವಾಗಿ ಗಾಡಿಯಲ್ಲಿದ್ದ ಸಾಣಿಕೆರೆ ಹೆಂಜಮ್ಮ(46) ಸ್ಥಳದಲ್ಲೇ ಮೃತಪಟ್ಟಿದ್ಧಾರೆ. ಆಕೆಯ ಪತಿ ದೊಡ್ಡಪ್ಪ(50) (Accident) ತೀರ್ವವಾಗಿ ಗಾಯಗೊಂಡು ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗಿ ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಸಾಣೀಕೆರೆ ಗ್ರಾಮದ ಕಲ್ಲುಗುಡ್ಡೆಗೊಲ್ಲರಹಟ್ಟಿಯ ನಿವಾಸಿಗಳಾದ ದೊಡ್ಡಪ್ಪ, ಆತನ ಪತ್ನಿ ಹೆಂಜಮ್ಮ ತಮ್ಮ ಟೈಯರ್ನ ಎತ್ತಿನ ಗಾಡಿಯಲ್ಲಿ ಜಮೀನಿಗೆ ಹೋಗಿ ಸಂಜೆ ವಾಪಾಸ್ ಆಗುವಾಗ ಸಂದರ್ಭದಲ್ಲಿ ಗಾಡಿಯಲ್ಲಿ ಹುಲ್ಲು ಹಾಕಿಕೊಂಡು ರಾಷ್ಟೀಯ ಹೆದ್ದಾರಿಗೆ ಎತ್ತಿನಗಾಡಿ ಆಗಮಿಸಿದ ಕೂಡಲೇ ಹಿರಿಯೂರು ಕಡೆಗೆ ಹೋಗುತ್ತಿದ್ದ ಐಶರ್ ಲಾರಿ ಹಿಂಬದಿಯಿಂದ ಎತ್ತಿನ (Accident) ಗಾಡಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ಗಾಡಿ ಪುಡಿಪುಡಿಯಾಗಿ ಒಂದು ಎತ್ತು ಸ್ಥಳದಲ್ಲೇ ಮೃತಪಟ್ಟು, ಮತ್ತೊಂದು ಎತ್ತಿಗೂ ರಕ್ತಗಾಯವಾಗಿದೆ.

ಇದನ್ನೂ ಓದಿ: love marriage | ದುರ್ಗದ ಹುಡುಗನಿಗೆ ಮನಸೋತ ಅಮೇರಿಕಾ ಹುಡುಗಿ | ಭರ್ಜರಿ ಮದುವೆಗೆ ಸಾಕ್ಷಿಯಾದ ಕೋಟೆನಾಡು
ಗಾಡಿಯಲ್ಲಿ ಪ್ರಯಾಣಿಸುತ್ತಿದ್ದ ಹೆಂಜಮ್ಮ ತಲೆಗೆ ಪೆಟ್ಟುಬಿದ್ದು ಸ್ಥಳದಲ್ಲೇ ಮೃತಪಟ್ಟಿರುತ್ತಾಳೆ. ಸುದ್ದಿತಿಳಿದ ಸ್ಥಳೀಯರು, ಸಂಬಂಧಿಕರು ಸ್ಥಳಕ್ಕೆ ದಾವಿಸಿದ್ಧಾರೆ. ಹೆಂಜಮ್ಮಳ ಪುತ್ರಿ ತಾಯಿಯ ಶವವನ್ನು ತೊಡೆಮೇಲೆ ಹಾಕಿಕೊಂಡು (Accident) ರೋಧಿಸುತ್ತಿದ್ದ ದೃಶ್ಯ ಮನಕಲಕುವಂತಿತ್ತು. ಠಾಣಾ ಇನ್ಸ್ಪೆಕ್ಟರ್ ರಾಜಫಕೃದ್ದೀನ್ ದೇಸಾಯಿ ಮತ್ತು ಸಿಬ್ಬಂದಿ ವರ್ಗ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಪಘಾತದಲ್ಲಿ ಲಾರಿಚಾಲಕ ಗಾಯಗೊಂಡಿದ್ದಾನೆ. ಪೊಲೀಸ್ರು ಪ್ರಕರಣ ದಾಖಲಿಸಿದ್ದಾರೆ