
Chitradurga news|Nammajana.com|21-1-2025
ನಮ್ಮಜನ.ಕಾಂ, ಚಿತ್ರದುರ್ಗ: ರೆಮ್ಸ್ ತಂತ್ರಾಂಶದಲ್ಲಿ ಹಾಫ್ ರಿಜೆಕಷನ್ ಪರ್ಮಿಟ್ ಕ್ಯಾನ್ಸಲೇಷನ್ ಮಾಡುವಂತೆ ಕೋರಿ ದವಸಧಾನ್ಯ ಖರೀದಿದಾರ ಒಕ್ಕೂಟ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ಮನವಿ ಮಾಡಿದ್ದಾರೆ. ಈ ಮನವಿಯನ್ನು (January 24) ಪುರಸ್ಕರಿಸದಿದ್ದರೆ ಇದೇ ಜ.24 ರಿಂದ ಮೆಕ್ಕಜೋಳ ಟೆಂಡರ್ನಲ್ಲಿ ಭಾಗವಹಿಸುವುದಿಲ್ಲ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: Guarantee scheme | ನಿರುದ್ಯೋಗಿ ವಿದ್ಯಾರ್ಥಿಗಳಿಗೆ ಆಸರೆಯಾಗಿದೆ “ಯುವನಿಧಿ”: ಜಿಲ್ಲಾ ಗ್ಯಾರಂಟಿ ಅಧ್ಯಕ್ಷ ಆರ್.ಶಿವಣ್ಣ

ಆದರೆ ತಂತ್ರಾಂಶದಲ್ಲಿ ಇದಕ್ಕೆ ಅವಕಾಶವಿರುವುದಿಲ್ಲ. ಈ ಹಿನ್ನಲೆಯಲ್ಲಿ ಜ.24 ರಿಂದ ಅನಿರ್ಧಿಷ್ಟಾವಧಿಯವರೆಗೆ (January 24) ಮೆಕ್ಕಜೋಳ ಮಾರ್ಕೆಟ್ ನಡೆಯುವುದಿಲ್ಲ. ಮುಂದಿನ ದಿನಾಂಕ ತಿಳಿಸುವವರೆಗೆ ರೈತಬಾಂಧವರು ಚಿತ್ರದುರ್ಗ ಕೃಷಿ ಉತ್ಪನ್ನ ಮಾರುಕಟ್ಟೆಗೆ ಮಾರುಕಟ್ಟೆಗೆ ಮೆಕ್ಕೆಜೋಳವನ್ನು ಮಾರಾಟಕ್ಕೆ ತರದಂತೆ ಎಪಿಎಂಸಿ ಕಾರ್ಯದರ್ಶಿ ಪ್ರಕಟಣೆಯಲ್ಲಿ ಕೋರಿದ್ದಾರೆ.