Chitradurganews|nammajana.com|1-2-2025
ನಮ್ಮಜನ.ಕಾಂ, ಚಿತ್ರದುರ್ಗ: ವೈದ್ಯ ವೃತ್ತಿಯ ಸಾರ್ಥಕತೆ ಚಿಕಿತ್ಸೆ (Basaveshwar Hospital) ಪಡೆದ ರೋಗಿಯ ಮುಖದಲ್ಲಿ ಕಾಣುತ್ತದೆ ಎಂದು ನಿವೃತ್ತ ತಹಶೀಲ್ದಾರ್ ಎನ್.ರಘುಮೂರ್ತಿ ಹೇಳಿದರು.
ಚಿತ್ರದುರ್ಗ ನಗರದ ಬಸವೇಶ್ವರ ಮೆಡಿಕಲ್ ಕಾಲೇಜಿನ ವೈದ್ಯಾಧಿಕಾರಿಗಳು ಇಂದು ನಲಕೇತನಟ್ಟಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ಸಾರ್ವಜನಿಕರಿಗೆ ಉಚಿತ ಆರೋಗ್ಯ ಚಿಕಿತ್ಸಾ ಶಿಬಿರದ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದರು.
ವೈದ್ಯೋ ನಾರಾಯಣ ಹರಿ ಎಂದು ವೈದ್ಯರನ್ನು ಸಮಾಜ ಗುರಿತಿಸುತ್ತದೆ. ಹಲವಾರು ಸವಾಲುಗಳನ್ನು ಮೆಟ್ಟಿನಿಂತು ಕೂಡ ವೈದ್ಯರು ತಮ್ಮ ನಿಸ್ವಾರ್ಥ ಸೇವೆ ಸಮಾಜಕ್ಕೆ ನೀಡುತ್ತಿದ್ದಾರೆ. ಔಷಧಿಗಳು ಕಾಯಿಲೆಯನ್ನು ಗುಣಪಡಿಸಿದರೆ ವೈದ್ಯರು (Basaveshwar Hospital) ರೋಗಿಗಳನ್ನು ಆತ್ಮ ವಿಶ್ವಾಸ ತುಂಬಿ ಸಂತೈಸುತ್ತಾರೆ.
ಭಾವನಾತ್ಮಕವಾದ ಮತ್ತು ಆತ್ಮಸ್ಥೈರ್ಯದ ಸಂಬಂಧ ವೈದ್ಯ ಮತ್ತು ರೋಗಿಯಲ್ಲಿ ಅಡಗಿದೆ. ಹಿಂದುಳಿದಂತ ಇಂತಹ ಗ್ರಾಮಗಳಲ್ಲಿ ಚಿತ್ರದುರ್ಗದ ಬಸವೇಶ್ವರ ಮೆಡಿಕಲ್ ಕಾಲೇಜಿನ ವೈದ್ಯರು ಆಗಮಿಸಿ ಊಟ, ಉಪಚಾರ ಮತ್ತು ಮತ್ತಿತರ ಸೌಲಭ್ಯಗಳಿಲ್ಲದೆ ಇಂತಹ ಮುಗ್ಧ ರೋಗಿಗಳ ಸೇವೆ ಮಾಡುತ್ತಿರುವುದು ಅವರುಗಳ ನಿಸ್ವಾರ್ಥತೆಗೆ ಹಿಡಿದ (Basaveshwar Hospital) ಕೈಗನ್ನಡಿಯಾಗಿದೆ
ಬಸವೇಶ್ವರ ವೈದ್ಯಕೀಯ ಕಾಲೇಜಿನ ವೈದ್ಯರು ಮತ್ತು ಎಲ್ಲ ಸಿಬ್ಬಂದಿಗಳಿಗೆ ಅನಂತ ಅನಂತ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದು ಹೇಳಿದರು.
ನಲಗೇತನಟ್ಟಿ ಗ್ರಾಮ ಪಂಚಾಯಿತಿ ಸದಸ್ಯ ಮುತ್ತಯ್ಯ ಬಸವೇಶ್ವರ ಮೆಡಿಕಲ್ ಕಾಲೇಜಿನ ವೈದ್ಯ ಅಧಿಕಾರಿ ಪ್ರಸಾದ್ ಮತ್ತಿತರು ಉಪಸ್ಥಿತರಿದ್ದರು.