Chitradurga news |nammajana.com|17-03-2025
ನಮ್ಮಜನ.ಕಾಂ, ಚಳ್ಳಕೆರೆ (ಚಿತ್ರದುರ್ಗ): ಚಳ್ಳಕೆರೆ ತಾಲೂಕಿನ ಲಕ್ಷಾಂತರ ಭಕ್ತರ ಆರಾಧ್ಯ ದೈವ ಶ್ರೀ ಗುರು ತಿಪ್ಪೇರುದ್ರಸ್ವಾಮಿ ರಥದ ಮೇಲೆ ಅಳವಡಿಸಿದ್ದ ಮುಕ್ತಿ ಬಾವುಟವನ್ನು (Nayakanahatty) ಬೆಂಗಳೂರಿನ ಉದ್ಯಮಿ ಹಾಗೂ ನಾಯಕನಹಟ್ಟಿಯ ಅಳಿಯ ತೇಜಸ್ವಿ ಆರಾಧ್ಯ, 63 ಲಕ್ಷ ರೂ.ಗೆ ತಮ್ಮದಾಗಿಸಿಕೊಂಡರು.
ಕಳೆದ ವರ್ಷಕ್ಕೆ ಹೋಲಿಸಿದರೆ, ಈ ಬಾರಿ ಹರಾಜಿನಲ್ಲಿ 2 ಲಕ್ಷ ರೂ. ಹೆಚ್ಚುವರಿ ಮೌಲ್ಯ ದೊರೆಯಿತು. 2023 ಮತ್ತು 2024ರಲ್ಲಿ ಸಚಿವ ಡಿ. ಸುಧಾಕರ್ ಕ್ರಮವಾಗಿ 55 ಲಕ್ಷ ಹಾಗೂ 61 ಲಕ್ಷ ರೂ.ಗೆ ಬಾವುಟ ಪಡೆದಿದ್ದರು.

ಸ್ಥಳೀಯರಾದ ಜಯಪಾಲಯ್ಯ ಮತ್ತು ನಿವೃತ್ತ ಡಿಎಚ್ಒ ಡಾ.ಪಾಲಾಕ್ಷ ಹರಾಜು ಪ್ರಕ್ರಿಯೆ ಆರಂಭಿಸಿದರು. ಡಾ. ಪಾಲಾಕ್ಷ 10 ಲಕ್ಷ ರೂ.ಗೆ ಹರಾಜು ಕೂಗಿದ್ದು, ತೇಜಸ್ವಿ ಆರಾಧ್ಯ ದಿಢೀರನೆ 50 ಲಕ್ಷ ರೂ. ಕೂಗಿದರು. ಬಳಿಕ ಶಾಸಕ ವೀರೇಂದ್ರ ಪಪ್ಪಿ (Nayakanahatty) ಮತ್ತು ತೇಜಸ್ವಿ ಆರಾಧ್ಯ ನಡುವೆ ಸ್ಪರ್ಧೆ ನಡೆದು, ತೇಜಸ್ವಿ ಆರಾಧ್ಯ 63 ಲಕ್ಷ ರೂ.ಗೆ ಮುಕ್ತಿ ಬಾವುಟ ತಮ್ಮದಾಗಿಸಿಕೊಂಡರು.
ಇದನ್ನೂ ಓದಿ: Nayakanahatti Fair | ಕಾಯಕಯೋಗಿ ನಾಯಕನಹಟ್ಟಿ ಶ್ರೀಗುರುತಿಪ್ಪೇರುದ್ರಸ್ವಾಮಿಗೆ ನಮೋ ಎಂದ ಭಕ್ತರು
ಮುಕ್ತಿ ಬಾವುಟ ಪಡೆದರೆ ಸಂಪತ್ತು, ಅಂತಸ್ತು, ಪದವಿ ಹೆಚ್ಚಲಿದೆ, ಇಷ್ಟಾರ್ಥಗಳು ಸಿದ್ಧಿಸಲಿವೆ ಎನ್ನುವ ನಂಬಿಕೆಯಿದೆ. ರಥೋತ್ಸವ ಆರಂಭಕ್ಕೆ ಮುನ್ನ ಮುಕ್ತಿ ಬಾವುಟ ಹರಾಜು ಮಾಡುವ ಸಂಪ್ರದಾಯವಿದೆ. 2018ರಲ್ಲಿ ಬೆಂಗಳೂರಿನ ಉದ್ಯಮಿ ಮುಖೇಶ್ 72 ಲಕ್ಷ ರೂ.ಗೆ ಮುಕ್ತಿ ಬಾವುಟ ಪಡೆದದ್ದು ಈವರೆಗಿನ ದಾಖಲೆ. 2017ರಲ್ಲಿ ಮೈಸೂರಿನ (Nayakanahatty) ಉದ್ಯಮಿ ಎಲ್.ಸೋಮಣ್ಣ 71 ಲಕ್ಷ ರೂ.ಗಳಿಗೆ ಪಡೆದಿದ್ದರು.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ನಮ್ಮ ವರದಿಗಾರರು. ನಿಮ್ಮೂರಿನ ಸಭೆ, ಸಮಾರಂಭ, ಶಾಲೆ ಕಾಲೇಜು ಕಾರ್ಯಕ್ರಮಗಳು, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಉತ್ತಮವಾದ ಫೋಟೋ ಜೊತೆಗೆ ಕಳುಹಿಸಬಹುದು. ಸುದ್ದಿ ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ. ಮತ್ತು ಜಾಹಿರಾತುಗಳನ್ನು ಆಕರ್ಷಕ ದರದಲ್ಲಿ ಪ್ರಕಟಿಸಲಾಗುವುದು.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ನಮ್ಮಜನ.ಕಾಂ gmail: nammajananews@gmail.com
» Whatsapp Number-9686622252