
Chitradurga news|nammajana.com|11-05-2025
ನಮ್ಮಜನ.ಕಾಂ, ಚಿತ್ರದುರ್ಗ: ತಾಲ್ಲೂಕಿನ ಸೀಬಾರ ಬಳಿ ಶುಕ್ರವಾರ ಅಕ್ರಮವಾಗಿ ಗಾಂಜಾ ಮಾರಾಟ ಮಾಡಿದ (Illegal marijuana) ಪ್ರಕರಣದ ಆರೋಪಿಯೊಬ್ಬನನ್ನು ಬಂಧಿಸುವ ವೇಳೆ ಹಲ್ಲೆಗೆ ಮುಂದಾಗಿದ್ದರಿಂದ ಆತ್ಮರಕ್ಷಣೆಗಾಗಿ ಪೊಲೀಸರು ಆತನ ಕಾಲಿಗೆ ಗುಂಡು ಹಾರಿಸಿದ್ದಾರೆ.
ತಾಲ್ಲೂಕಿನ ಚೇಳುಗುಡ್ಡದ ನಿವಾಸಿ ಮೊಹಮ್ಮದ್ ಕಮ್ರಾನ್ (25) ಗುಂಡೇಟಿನಿಂದ ಗಾಯಗೊಂಡ ಆರೋಪಿ. ಈಗ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಗ್ರಾಮಾಂತರ ಠಾಣೆ ಪೊಲೀಸರು ಗಾಂಜಾ ಮಾರಾಟ ಪ್ರಕರಣದಲ್ಲಿ ಈಚೆಗೆ ಮೂವರನ್ನು ಬಂಧಿಸಿದ್ದರು. ಆದರೆ ಮೊಹಮ್ಮದ್ ಕಮ್ರಾನ್ ತಪ್ಪಿಸಿಕೊಂಡು ಓಡಿಹೋಗಿದ್ದ. ಆತ ಸೀಬಾರ ಬಳಿ ಇದ್ದಾನೆ ಎಂದು ಮಾಹಿತಿ ಬಂದ ಕಾರಣ (Illegal marijuana) ಗ್ರಾಮಾಂತರ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ವೈ. ಮುದ್ದುರಾಜು ಹಾಗೂ ತಂಡದ ಸದಸ್ಯರು ಶುಕ್ರವಾರ ಬೆಳಿಗ್ಗೆ 5.10ರ ಸಮಯದಲ್ಲಿ ದಾಳಿ ನಡೆಸಿದ್ದರು.
ಆರೋಪಿಯನ್ನು ಹಿಡಿಯಲು ಹೋದಾಗ ಆತ ಚಾಕು ತೆಗೆದು ಪೊಲೀಸ್ ಸಿಬ್ಬಂದಿ ತಿಮ್ಮರಾಯಪ್ಪ ಅವರಿಗೆ ಇರಿಯಲು ಮುಂದಾದ. ಅವರು ಮುಂದೆ ಕೈನೀಡಿದ ಕಾರಣ ಚಾಕು ಕೈಗೆ ತಗುಲಿತ್ತು.
ಇನ್ಸ್ಪೆಕ್ಟರ್ ಮುದ್ದುರಾಜ ಅವರು ತಮ್ಮ ಸರ್ವೀಸ್ ರಿವಾಲ್ವಾರ್ನಿಂದ ಗಾಳಿಯಲ್ಲಿ ಗುಂಡು ಹಾರಿಸಿ ಶರಣಾಗುವಂತೆ ಸೂಚಿಸಿದರು. ಆದರೂ ಆತ ತಿಮ್ಮರಾಯಪ್ಪ ಅವರಿಗೆ ಇರಿಯಲು ಮುಂದಾದಾಗ ಆತ್ಮರಕ್ಷಣೆಗಾಗಿ ಇನ್ಸ್ಪೆಕ್ಟರ್ (Illegal marijuana) ಆರೋಪಿಯ ಎಡಗಾಲಿಗೆ ಗುಂಡು ಹಾರಿಸಿದ್ದಾರೆ.
ಇದನ್ನೂ ಓದಿ: Uchchhangi Yallamma | ರಾಜಬೀದಿಯಲ್ಲಿ ಮದಕರಿ ನಾಯಕನ ಮನೆ ದೇವರು ಉಚ್ಚಂಗಿ ಯಲ್ಲಮ್ಮ ದೇವರ ಭವ್ಯ ಮೆರವಣಿಗೆ
ಗಾಯಗೊಂಡ ಆರೋಪಿ ಹಾಗೂ ತಿಮ್ಮರಾಯಪ್ಪ ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.