Namma JanaNamma JanaNamma Jana
  • ಇಂದಿನ ಸುದ್ದಿ
  • ರಾಜಕೀಯ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಕ್ರೀಡೆ
  • ಆರೋಗ್ಯ
  • ದಿನ ಭವಿಷ್ಯ
Reading: Illegal marijuana | ಗಾಂಜಾ ಮಾರಾಟ ವ್ಯಕ್ತಿಯಿಂದ ಪೋಲಿಸ್ ಮೇಲೆ ಹಲ್ಲೆಗೆ ಯತ್ನ, ಪೋಲಿಸರಿಂದ ವ್ಯಕ್ತಿ ಕಾಲಿಗೆ ಗುಂಡು
Share
Notification Show More
Font ResizerAa
Font ResizerAa
Namma JanaNamma Jana
  • ಇಂದಿನ ಸುದ್ದಿ
  • ರಾಜಕೀಯ
  • ವಿಶೇಷ ಸುದ್ದಿ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಆರೋಗ್ಯ
  • ಕ್ರೀಡೆ
  • ದಿನ ಭವಿಷ್ಯ
  • ರಾಜಕೀಯ
Search
  • ಇಂದಿನ ಸುದ್ದಿ
  • ರಾಜಕೀಯ
  • ವಿಶೇಷ ಸುದ್ದಿ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಆರೋಗ್ಯ
  • ಕ್ರೀಡೆ
  • ದಿನ ಭವಿಷ್ಯ
  • ರಾಜಕೀಯ
Have an existing account? Sign In
Follow US
  • Advertise
© 2024 Namma Janna. Kannada News Portal. All Rights Reserved.
Namma Jana > Blog > ಕ್ರೈಂ ಸುದ್ದಿ > Illegal marijuana | ಗಾಂಜಾ ಮಾರಾಟ ವ್ಯಕ್ತಿಯಿಂದ ಪೋಲಿಸ್ ಮೇಲೆ ಹಲ್ಲೆಗೆ ಯತ್ನ, ಪೋಲಿಸರಿಂದ ವ್ಯಕ್ತಿ ಕಾಲಿಗೆ ಗುಂಡು
ಕ್ರೈಂ ಸುದ್ದಿ

Illegal marijuana | ಗಾಂಜಾ ಮಾರಾಟ ವ್ಯಕ್ತಿಯಿಂದ ಪೋಲಿಸ್ ಮೇಲೆ ಹಲ್ಲೆಗೆ ಯತ್ನ, ಪೋಲಿಸರಿಂದ ವ್ಯಕ್ತಿ ಕಾಲಿಗೆ ಗುಂಡು

Editor Nammajana
Last updated: 11 May 2025 5:56 PM
By Editor Nammajana 1 Min Read
Share
SHARE
Telegram Group Join Now
WhatsApp Group Join Now

Chitradurga news|nammajana.com|11-05-2025

ನಮ್ಮಜನ.ಕಾಂ, ಚಿತ್ರದುರ್ಗ: ತಾಲ್ಲೂಕಿನ ಸೀಬಾರ ಬಳಿ ಶುಕ್ರವಾರ ಅಕ್ರಮವಾಗಿ ಗಾಂಜಾ ಮಾರಾಟ ಮಾಡಿದ (Illegal marijuana)  ಪ್ರಕರಣದ ಆರೋಪಿಯೊಬ್ಬನನ್ನು ಬಂಧಿಸುವ ವೇಳೆ ಹಲ್ಲೆಗೆ ಮುಂದಾಗಿದ್ದರಿಂದ ಆತ್ಮರಕ್ಷಣೆಗಾಗಿ ಪೊಲೀಸರು ಆತನ ಕಾಲಿಗೆ ಗುಂಡು ಹಾರಿಸಿದ್ದಾರೆ.

ahobala tvs ದಸರಾ ಹಾಗು ದೀಪಾವಳಿ ಹಬ್ಬದ ವಿಶೇಷ ಕೊಡುಗೆಗಳು 2

ತಾಲ್ಲೂಕಿನ ಚೇಳುಗುಡ್ಡದ ನಿವಾಸಿ ಮೊಹಮ್ಮದ್ ಕಮ್ರಾನ್ (25) ಗುಂಡೇಟಿನಿಂದ ಗಾಯಗೊಂಡ ಆರೋಪಿ. ಈಗ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಗ್ರಾಮಾಂತರ ಠಾಣೆ ಪೊಲೀಸರು ಗಾಂಜಾ ಮಾರಾಟ ಪ್ರಕರಣದಲ್ಲಿ ಈಚೆಗೆ ಮೂವರನ್ನು ಬಂಧಿಸಿದ್ದರು. ಆದರೆ ಮೊಹಮ್ಮದ್ ಕಮ್ರಾನ್ ತಪ್ಪಿಸಿಕೊಂಡು ಓಡಿಹೋಗಿದ್ದ. ಆತ ಸೀಬಾರ ಬಳಿ ಇದ್ದಾನೆ ಎಂದು ಮಾಹಿತಿ ಬಂದ ಕಾರಣ (Illegal marijuana)  ಗ್ರಾಮಾಂತರ ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್ ವೈ. ಮುದ್ದುರಾಜು ಹಾಗೂ ತಂಡದ ಸದಸ್ಯರು ಶುಕ್ರವಾರ ಬೆಳಿಗ್ಗೆ 5.10ರ ಸಮಯದಲ್ಲಿ ದಾಳಿ ನಡೆಸಿದ್ದರು.

ಆರೋಪಿಯನ್ನು ಹಿಡಿಯಲು ಹೋದಾಗ ಆತ ಚಾಕು ತೆಗೆದು ಪೊಲೀಸ್ ಸಿಬ್ಬಂದಿ ತಿಮ್ಮರಾಯಪ್ಪ ಅವರಿಗೆ ಇರಿಯಲು ಮುಂದಾದ. ಅವರು ಮುಂದೆ ಕೈನೀಡಿದ ಕಾರಣ ಚಾಕು ಕೈಗೆ ತಗುಲಿತ್ತು.

ಇನ್‌ಸ್ಪೆಕ್ಟರ್ ಮುದ್ದುರಾಜ ಅವರು ತಮ್ಮ ಸರ್ವೀಸ್ ರಿವಾಲ್ವಾರ್‌ನಿಂದ ಗಾಳಿಯಲ್ಲಿ ಗುಂಡು ಹಾರಿಸಿ ಶರಣಾಗುವಂತೆ ಸೂಚಿಸಿದರು. ಆದರೂ ಆತ ತಿಮ್ಮರಾಯಪ್ಪ ಅವರಿಗೆ ಇರಿಯಲು ಮುಂದಾದಾಗ ಆತ್ಮರಕ್ಷಣೆಗಾಗಿ ಇನ್‌ಸ್ಪೆಕ್ಟರ್ (Illegal marijuana)  ಆರೋಪಿಯ ಎಡಗಾಲಿಗೆ ಗುಂಡು ಹಾರಿಸಿದ್ದಾರೆ.

ಇದನ್ನೂ ಓದಿ: Uchchhangi Yallamma | ರಾಜಬೀದಿಯಲ್ಲಿ ಮದಕರಿ ನಾಯಕನ ಮನೆ ದೇವರು ಉಚ್ಚಂಗಿ ಯಲ್ಲಮ್ಮ ದೇವರ ಭವ್ಯ ಮೆರವಣಿಗೆ

ಗಾಯಗೊಂಡ ಆರೋಪಿ ಹಾಗೂ ತಿಮ್ಮರಾಯಪ್ಪ ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Telegram Group Join Now
WhatsApp Group Join Now

You Might Also Like

Gold price | ಬಂಗಾರದ ಬೆಲೆಯಲ್ಲಿ ಇಳಿಕೆ

Gold price rise | ಬಂಗಾರದ ಓಟಕ್ಕೆ ಬ್ರೇಕ್ ಹಾಕೋರಿಲ್ಲ, ಎಷ್ಟಿದೆ ಇಂದಿನ ಬೆಲೆ

V V Sagara Dam | ವಾಣಿ ವಿಲಾಸ ಸಾಗರ ಡ್ಯಾಂ ಲೇವೆಲ್ ಎಷ್ಟು | ಇಲ್ಲಿದೆ ಮಾಹಿತಿ

ವಾಲ್ಮೀಕಿ ಜಯಂತಿ ಅದ್ದೂರಿ ಮೆರವಣಿಗೆಗೆ ಶಾಸಕ ಟಿ.ರಘುಮೂರ್ತಿ ಚಾಲನೆ | Valmiki Jayanti

Valmiki Jayanti | ಚಳ್ಳಕೆರೆ ಪಿ.ತಿಪ್ಪೇಸ್ವಾಮಿ ಸೇರಿ ರಾಜ್ಯದ ಐವರಿಗೆ ಮಹರ್ಷಿ ವಾಲ್ಮೀಕಿ ಪ್ರಶಸ್ತಿ ಪ್ರಕಟ

TAGGED:arrest of personattempted assault by personChitradurgaIllegal marijuanaPolicepolice custodySaleshootingಅಕ್ರಮ ಗಾಂಜಾಗುಂಡಿನ ದಾಳಿಚಿತ್ರದುರ್ಗಪೊಲೀಸ್ಪೊಲೀಸ್ ವಶಮಾರಟವ್ಯಕ್ತಿ ಬಂಧನವ್ಯಕ್ತಿಯಿಂದ ಹಲ್ಲೆ ಯತ್ನ
Share This Article
Facebook Twitter Whatsapp Whatsapp Telegram Email Print
ಈ ಮೇಲಿನ ಸುದ್ದಿ, ಲೇಖನದ ಬಗ್ಗೆ ನಿಮ್ಮ ಅನಿಸಿಕೆ ಏನು?
Love0
Sad0
Happy0
Sleepy0
Angry0
Dead0
Wink0
Previous Article Uchchhangi Yallamma | ರಾಜಬೀದಿಯಲ್ಲಿ ಮದಕರಿ ನಾಯಕನ ಮನೆ ದೇವರು ಉಚ್ಚಂಗಿ ಯಲ್ಲಮ್ಮ ದೇವರ ಭವ್ಯ ಮೆರವಣಿಗೆ
Next Article Dina Bhavishya | ದಿನ ಭವಿಷ್ಯ | 12-05-2025
Leave a comment

Leave a Reply Cancel reply

Your email address will not be published. Required fields are marked *

Stay Connected

TelegramFollow

Latest News

Today Adike Rate | ಇಂದಿನ‌ ಅಡಕೆ ರೇಟ್
ಅಡಿಕೆ ಧಾರಣೆ
ಕಾಂಗ್ರೆಸ್ ಶಾಸಕ ಕೆ.ಸಿ. ವೀರೇಂದ್ರ ಪಪ್ಪಿ ಮನೆ ಮೇಲೆ ಮತ್ತೆ ಇಡಿ ದಾಳಿ | ED Raid challakere
ಇಂದಿನ ಸುದ್ದಿ
Challakere Rain | ಹಸ್ತ ಮಳೆಗೆ ಮುಳುಗಿದ ಲಾರಿ, ಕಾರು, ಮನೆಗಳು
ಇಂದಿನ ಸುದ್ದಿ
Astrology | ಇಂದಿನ‌ ರಾಶಿ ಭವಿಷ್ಯ, ಯಾರಿಗೆಲ್ಲ ಶುಭ, ಅಶುಭ
ದಿನ ಭವಿಷ್ಯ

Kannada News (ಕನ್ನಡ ಸುದ್ದಿ): Get the latest updates of karnataka news, world news, india news, political News and celebrity Kannada news and more on Nammajana (nammajana.com).

More

  • About Us!
  • Blog
  • Contact Us
  • Customize Interests
  • Disclaimer
  • Kannada News- NammaJana
  • My Bookmarks
  • ಶ್ರೀ ಅಹೋಬಲ ಟಿವಿಎಸ್

Sign Up for Our Newsletter

Subscribe to our newsletter to get our newest articles instantly!

Namma JanaNamma Jana
© 2025 NammaJanna. Kannada News Portal. All Rights Reserved.
adbanner
AdBlock Detected
Our site is an advertising supported site. Please whitelist to support our site.
Okay, I'll Whitelist
Welcome Back!

Sign in to your account

Lost your password?