Namma JanaNamma JanaNamma Jana
  • ಇಂದಿನ ಸುದ್ದಿ
  • ರಾಜಕೀಯ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಕ್ರೀಡೆ
  • ಆರೋಗ್ಯ
  • ದಿನ ಭವಿಷ್ಯ
Reading: ಕರುನಾಡ ನೆಲ, ಜಲ, ಭಾಷೆ ಸಂರಕ್ಷಿಸುವ ಹೊಣೆ ಕನ್ನಡಿಗರದ್ದು: ಟಿ.ರಘುಮೂರ್ತಿ | Kannada Rajyotsava
Share
Notification Show More
Font ResizerAa
Font ResizerAa
Namma JanaNamma Jana
  • ಇಂದಿನ ಸುದ್ದಿ
  • ರಾಜಕೀಯ
  • ವಿಶೇಷ ಸುದ್ದಿ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಆರೋಗ್ಯ
  • ಕ್ರೀಡೆ
  • ದಿನ ಭವಿಷ್ಯ
  • ರಾಜಕೀಯ
Search
  • ಇಂದಿನ ಸುದ್ದಿ
  • ರಾಜಕೀಯ
  • ವಿಶೇಷ ಸುದ್ದಿ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಆರೋಗ್ಯ
  • ಕ್ರೀಡೆ
  • ದಿನ ಭವಿಷ್ಯ
  • ರಾಜಕೀಯ
Have an existing account? Sign In
Follow US
  • Advertise
© 2024 Namma Janna. Kannada News Portal. All Rights Reserved.
Namma Jana > Blog > ಇಂದಿನ ಸುದ್ದಿ > ಕರುನಾಡ ನೆಲ, ಜಲ, ಭಾಷೆ ಸಂರಕ್ಷಿಸುವ ಹೊಣೆ ಕನ್ನಡಿಗರದ್ದು: ಟಿ.ರಘುಮೂರ್ತಿ | Kannada Rajyotsava
ಇಂದಿನ ಸುದ್ದಿ

ಕರುನಾಡ ನೆಲ, ಜಲ, ಭಾಷೆ ಸಂರಕ್ಷಿಸುವ ಹೊಣೆ ಕನ್ನಡಿಗರದ್ದು: ಟಿ.ರಘುಮೂರ್ತಿ | Kannada Rajyotsava

Editor Nammajana
Last updated: 1 November 2025 8:23 PM
By Editor Nammajana 3 Min Read
Share
SHARE
Telegram Group Join Now
WhatsApp Group Join Now

Chitradurga news|Nammajana.com|1-11-2025

ನಮ್ಮಜನ.ಕಾಂ, ಚಳ್ಳಕೆರೆ:  ರಾಜ್ಯದಲ್ಲಿ ಕನ್ನಡ ಭಾಷೆಯನ್ನು ಆಡಳಿತದಲ್ಲಿ ಅಳವಡಿಸಿಕೊಳ್ಳುವ ಮೂಲಕ ಕನ್ನಡ ಭಾಷೆಯ ಮೌಲ್ಯಹೆಚ್ಚಿಸಿದ ಕೀರ್ತಿ ರಾಜ್ಯಸರ್ಕಾರದ್ದು. ಪ್ರಸ್ತುತ ಸರ್ಕಾರದ ಎಲ್ಲಾ ಸುತ್ತೋಲೆಗಳು ಕನ್ನಡದಲ್ಲೇ ಪ್ರಕಟವಾಗುತ್ತಿವೆ. (Kannada Rajyotsava) ವಿಶೇಷವಾಗಿ ಕನ್ನಡಿಗೆ ಮೇಲೆ ಅಕ್ರಮಣ ಮಾಡುವವರನ್ನು ಸರ್ಕಾರನಿಯಂತ್ರಿಸುವಲ್ಲಿ ಯಶಸ್ವಿಯಾಗಿದೆ. ಎರಡುಸಾವಿರ ವರ್ಷಗಳ ಇತಿಹಾಸವಿರುವ ಕನ್ನಡ ಭಾಷೆ ಎಲ್ಲಾ ಭಾಷೆಗಳನ್ನು ಗೌರವಿಸುತ್ತದೆ. ಇದು ಕನ್ನಡಿಗರ ಹೆಮ್ಮೆ ಎಂದು ಶಾಸಕ, ಸಣ್ಣಕೈಗಾರಿಕೆ ಅಭಿವೃದ್ದಿ ಮಂಡಳಿ ಅಧ್ಯಕ್ಷ ಟಿ.ರಘುಮೂರ್ತಿ ತಿಳಿಸಿದರು.

ahobala tvs ದಸರಾ ಹಾಗು ದೀಪಾವಳಿ ಹಬ್ಬದ ವಿಶೇಷ ಕೊಡುಗೆಗಳು 2

ಅವರು, ನಗರದ ಬಿಎಂ ಸರ್ಕಾರಿ ಪ್ರೌಢಶಾಲಾ ಮೈದಾನದಲ್ಲಿ ತಾಲ್ಲೂಕು ಆಡಳಿತ ಮತ್ತು ಕನ್ನಡಪರ ಸಂಘಟನೆಗಳು ೭೦ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಚಳ್ಳಕೆರೆ ವಿಧಾನಸಭಾ ಕ್ಷೇತ್ರದಲ್ಲಿ ಎಲ್ಲರ ಸಹಕಾರದಿಂದ ಕಳೆದ ಸುಮಾರು ೧೨ ವರ್ಷಗಳಿಂದ ಅಭಿವೃದ್ದಿಪರ ಚಿಂತನೆಗಳು ಹೆಚ್ಚಾಗಿದ್ದು, ಯಾವುದೇ ರೀತಿಯ ಕೊರತೆ ಉಂಟಾಗದಂತೆ ಜಾಗ್ರತೆ ವಹಿಸಿದೆ. ವಿಶೇಷವಾಗಿ ಕ್ಷೇತ್ರದ ನೀರಿನ ಬವಣೆಯನ್ನು ನೀಗಿಸಲು ಈಗಾಗಲೇ ನಾಲ್ಕು ಕಡೆ ಬ್ಯಾರೇಜ್ ಕಂ ಬಿಡ್ಜ್ ನಿರ್ಮಾಣವಾಗಿದ್ದು ಇನ್ನೂ ಗೋಸಿಕೆರೆ, ತೋರೆಬೀರನಹಳ್ಳಿ, ಮತ್ಸಮುದ್ರ ಭಾಗದಲ್ಲಿ ಬ್ಯಾರೇಜ್ ಕಂ ಬಿಡ್ಜ್ ನಿರ್ಮಾಣ ಕಾಮಗಾರಿ ಚಾಲನೆಯಲ್ಲಿದೆ.

ವಿಶೇಷವಾಗಿ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚು ಆದ್ಯತೆ ನೀಡುತ್ತಿದ್ದು, ತಾಲ್ಲೂಕಿನ ಬಹುತೇಕ ಸರ್ಕಾರಿಶಾಲೆಗಳಲ್ಲಿ ಮೂಲಭೂತ ಸೌಕರ್ಯ ಒದಗಿಸಲು ಪ್ರಾಮಾಣಿಕಪ್ರಯತ್ನ ಮಾಡಲಾಗಿದೆ. ಕನ್ನಡ ಭಾಷೆ ಇನ್ನೂ ಎತ್ತರಕ್ಕೆ ಬೆಳೆಯುವ ಸಂಕಲ್ಪವನ್ನು ನಾವೆಲ್ಲರೂ ಮಾಡಬೇಕಿದೆ. ಕನ್ನಡಿಗರ ಮೇಲೆ ಯಾವುದೇ ರೀತಿಯ ವ್ಯತಿರಿಕ್ತಪರಿಣಾಮ ಉಂಟಾದರೆ ಅದನ್ನು ಸೂಕ್ತರೀತಿಯಲ್ಲಿ ನಾವೆಲ್ಲರೂ ಸಂಘಟನಾತ್ಮಕವಾಗಿ (Kannada Rajyotsava) ಎದುರಿಸಬೇಕೆಂದರು. ತಾಲ್ಲೂಕಿನ ರಾಮಜೋಗಿಹಳ್ಳಿ, ನಗರದ ಬಿಎಂಜಿಎಚ್‌ಎಸ್ ಮತ್ತು ಎಚ್‌ಟಿಟಿ ಪ್ರೌಢಶಾಲೆಗಳಿಗೆ ಕರ್ನಾಟಕ ಪಬ್ಲಿಕ್ ಶಾಲೆಗಳ ಮಂಜೂರಾತಿ ದೊರಕಿದೆ ಎಂದರು.

ಕನ್ನಡ ಭಾಷೆ ಈ ನೆಲೆದಲ್ಲಿ ಗಟ್ಟಿಯಾಗಿ ನೆಲೆಯೂರಲು ಎಲ್ಲಾ ರೀತಿಯ ಸರ್ವಪ್ರಯತ್ನ ಮಾಡಿ ಕನ್ನಡ ಭಾಷೆಯನ್ನು ಮುಂಚೂಣಿಗೆ ತಂದ ಜ್ಞಾನಪೀಠಪ್ರಶಸ್ತಿ ವಿಜೇತರಾದ ಗೋಕಾಕ್, ಮಾಸ್ತಿ, ಕುವೆಂಪು, ಶಿವರಾಮ್‌ಕಾರಂತ್, ಯು.ಆರ್.ಅನಂತಮೂರ್ತಿ, ಗಿರೀಶ್‌ಕಾರ್ನಡ್, ದ.ರಾ.ಬೇಂದ್ರೆ, ಚಂದ್ರಶೇಖರ್‌ಕಂಬಾರ್ ಇವರ ಸಾರ್ಥಕಸೇವೆಯನ್ನು ಕನ್ನಡ ನಾಡು ಎಂದೂಮರೆಯದು ಎಂದರು.

ದ್ವಜಾರೋಹಣ ನೆರವೇರಿಸಿ, ರಾಜ್ಯೋತ್ಸವ ಸಂದೇಶ ವಾಚನ ಮಾಡಿದ ತಹಶೀಲ್ಧಾರ್ ರೇಹಾನ್‌ಪಾಷ, ಸರ್ಕಾರದ ಆಡಳಿತಭಾಷೆಯಾಗಿ ಕನ್ನಡ ಹೊರಹೊಮ್ಮಿದೆ. ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬ ನಾಗರೀಕರಿನಿಗೂ ಅನುಕೂಲವಾಗುವಂತೆ ಎಲ್ಲಾ ಆಡಳಿತ ಕನ್ನಡಭಾಷೆಯಲ್ಲೇ ನಡೆಯುತ್ತಿದೆ.

ಆಡಳಿತದಲ್ಲಿ ಕನ್ನಡಭಾಷೆಯ ಜಾರಿಮಾಡಿದ ಫಲವಾಗಿ ಸಾರ್ವಜನಿಕರಿಗೆ ಸುಲಭವಾಗಿ ಕಚೇರಿಯ ಕಾರ್ಯಕಲಾಪಗಳು ಸುಗಮವಾಗಿ ನಡೆಯುತ್ತವೆ. ತಾಲ್ಲೂಕು ಕಚೇರಿಯೂ ಸೇರಿದಂತೆ ಎಲ್ಲಾ ಕಚೇರಿಗಳಲ್ಲೂ ಕನ್ನಡ ಭಾಷೆಯಮೂಲಕ ಆಡಳಿತ ನಡೆಸುತ್ತಿದ್ದು ಇದು ನಾಡಿನ ಜನರಿಗೆ ತೃಪ್ತಿ ತಂದಿದೆ ಎಂದರು.

ಸರ್ಕಾರಿನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಸಿ.ಟಿ.ವೀರೇಶ್ ಮಾತನಾಡಿ, ಕನ್ನಡ ನಮ್ಮಹೆಮ್ಮೆಯ ಭಾಷೆ. ನಾವು ಸದಾಕಾಲ ಕನ್ನಡಿಗರು ಎಂಬ ಅಭಿಮಾನ ನಮ್ಮಲ್ಲಿರಬೇಕು. ಎಂತಹ ಸಂದರ್ಭದಲ್ಲಾದರೂ ಭಾಷೆಯ ಮೇಲೆನಡೆಯುವ (Kannada Rajyotsava) ದೌರ್ಜನ್ಯವನ್ನು ವಿರೋಧಿಸುವ ಪ್ರವೃತ್ತಿಬೆಳೆಸಿಕೊಳ್ಳಬೇಕೆಂದರು.
ವಿ.ತಿಪ್ಪೇಸ್ವಾಮಿ, ಪಿ.ಓಬಣ್ಣ, ಪಿ.ರಾಜಣ್ಣ, ಎಸ್.ಸಾತ್ವಿಕ್, ಎಸ್.ಟಿ.ಮಂಜಣ್ಣನಾಯಕ, ಕೋಲಾಟದ ನರಸಜ್ಜ, ಕುಸುಮ, ಅನಿಲ್, ಕೆಂಚವೀರನಹಳ್ಳಿಮಲ್ಲೇಶ್, ಡಾ.ನಂದಿನಿಲಾವಣ್ಯ, ಶಿಕ್ಷಣ ಇಲಾಖೆ ಮಾರುತಿಭಂಡಾರಿ, ಚಂದನ, ಡಿ.ವೀರೇಶ್‌ರವರನ್ನು ಸನ್ಮಾನಿಸಲಾಯಿತು.

ಇದನ್ನೂ ಓದಿ: ಇಂದಿನ ರಾಶಿ ಭವಿಷ್ಯ | 1-11-2025 | Dina Bhavishya

ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷೆ ಶಿಲ್ಪಮುರುಳಿ, ಉಪಾಧ್ಯಕ್ಷೆ ಕವಿತಾವೀರೇಶ್, ಸದಸ್ಯರಾದ ಎಂ.ಜೆ.ರಾಘವೇಂದ್ರ, ಬಿ.ಟಿ.ರಮೇಶ್‌ಗೌಡ, ಸಿ.ಶ್ರೀನಿವಾಸ್, ಕೆ.ವೀರಭದ್ರಪ್ಪ, ಎಸ್.ಜಯಣ್ಣ, ವೆಂಕಟೇಶ್, ಸುಮ, ಕವಿತಾ, ನಿರ್ಮಲ, ತಿಪ್ಪಮ್ಮ, ವೈ.ಪ್ರಕಾಶ್, ಚಳ್ಳಕೆರೆಯಪ್ಪ, ಸುಮಕ್ಕ, ನಾಗಮಣಿ, ಪಾಲಮ್ಮ ನಾಮಿನಿ ಸದಸ್ಯರಾದ ಕೆ.ನಟರಾಜು, ಅನ್ವರ್‌ಮಾಸ್ಟರ್, ವೀರಭದ್ರಿ, ಇಒ ಎಚ್.ಶಶಿಧರ, ಡಿವೈಎಸ್ಪಿ ಸತ್ಯನಾರಾಯಣರಾವ್, ವೃತ್ತ ನಿರೀಕ್ಷಕ ಕೆ.ಕುಮಾರ್, ಹನುಮಂತಪ್ಪಶಿರೇಹಳ್ಳಿ, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಜಿ.ಟಿ.ವೀರಭದ್ರಸ್ವಾಮಿ, ಸಮಾಜ ಕಲ್ಯಾಣಾಧಿಕಾರಿ ದೇವ್ಲಾನಾಯ್ಕ ಬಿಸಿಎಂ ಅಧಿಕಾರಿ ರಮೇಶ್, ಎಸ್ಟಿ ಅಧಿಕಾರಿ ಶಿವರಾಜು, ಬಿಇಒ ಕೆ.ಎಸ್.ಸುರೇಶ್, ಪೌರಾಯುಕ್ತ ಜಗರೆಡ್ಡಿ, ಕಂದಾಯಾಧಿಕಾರಿ ಆರ್.ತಿಪ್ಪೇಸ್ವಾಮಿ, ಡಿ.ಶ್ರೀನಿವಾಸ್ ಮುಂತಾದವರು ಪಾಲ್ಗೊಂಡಿದ್ದರು.

Telegram Group Join Now
WhatsApp Group Join Now

You Might Also Like

ರಜಾ ದಿನಗಳಲ್ಲೂ ಕೇಂದ್ರ ಸ್ಥಾನದಲ್ಲಿರಲು ಅಧಿಕಾರಿಗಳಿಗೆ DC ಸೂಚನೆ

HIRIYUR | ಶ್ರೀರಾಮ ಆತ್ಮ ಮಹಿಳಾ ಆಹಾರ ಭದ್ರತಾ ಸ್ವ ಸಹಾಯ ಗುಂಪಿಗೆ ರಾಜ್ಯ ಪ್ರಶಸ್ತಿ

ಸರಸ್ವತಿ ಕೆ.ಸಿ. ವೀರೇಂದ್ರ ಪಪ್ಪಿಗೆ “ ಗಿನ್ನಿಸ್ ವಲ್ರ್ಡ್ ರೆಕಾರ್ಡ್ ” ಗೌರವ | Guinness World Record

Pollution | ಮಾಲಿನ್ಯ ನಿಯಂತ್ರಣಕ್ಕೆ ಬೇಕು ಸಾರ್ವಜನಿಕರ ಸಹಕಾರ: ಡಿ.ಸುಧಾಕರ್

ದಿನ ಭವಿಷ್ಯ | 02-11-2025 | Dina Bhavishya

TAGGED:ChallakereKannada RajyotsavaNadu NudiSalchuT Raghumurthyಕನ್ನಡ ರಾಜ್ಯೋತ್ಸವಚಳ್ಳಕೆರೆಟಿ ರಘುಮೂರ್ತಿನಾಡು ನುಡಿರಕ್ಷಣೆ
Share This Article
Facebook Twitter Whatsapp Whatsapp Telegram Email Print
ಈ ಮೇಲಿನ ಸುದ್ದಿ, ಲೇಖನದ ಬಗ್ಗೆ ನಿಮ್ಮ ಅನಿಸಿಕೆ ಏನು?
Love0
Sad0
Happy0
Sleepy0
Angry0
Dead0
Wink0
Previous Article ಇಂದಿನ ರಾಶಿ ಭವಿಷ್ಯ | 1-11-2025 | Dina Bhavishya
Next Article ದಿನ ಭವಿಷ್ಯ | 02-11-2025 | Dina Bhavishya
Leave a comment

Leave a Reply Cancel reply

Your email address will not be published. Required fields are marked *

Stay Connected

TelegramFollow

Latest News

ದಿನ ಭವಿಷ್ಯ |15-11-2025 | Astrology
ದಿನ ಭವಿಷ್ಯ
Dina Bhavishya | ದಿನ ಭವಿಷ್ಯ, ಯಾರಿಗೆ ಶುಭ ಯೋಗ?
ದಿನ ಭವಿಷ್ಯ
Astrology | ಇಂದಿನ ದಿನ ಭವಿಷ್ಯ | 13-11-2025
Blog
Dina Bhavishya | ಇಂದಿನ ರಾಶಿ ಭವಿಷ್ಯ, ಯಾವ್ಯಾವ ರಾಶಿಗೆ ಶುಭ ಯೋಗ?
ದಿನ ಭವಿಷ್ಯ

Kannada News (ಕನ್ನಡ ಸುದ್ದಿ): Get the latest updates of karnataka news, world news, india news, political News and celebrity Kannada news and more on Nammajana (nammajana.com).

More

  • About Us!
  • Blog
  • Contact Us
  • Customize Interests
  • Disclaimer
  • Kannada News- NammaJana
  • My Bookmarks
  • ಶ್ರೀ ಅಹೋಬಲ ಟಿವಿಎಸ್

Sign Up for Our Newsletter

Subscribe to our newsletter to get our newest articles instantly!

Namma JanaNamma Jana
© 2025 NammaJanna. Kannada News Portal. All Rights Reserved.
adbanner
AdBlock Detected
Our site is an advertising supported site. Please whitelist to support our site.
Okay, I'll Whitelist
Welcome Back!

Sign in to your account

Lost your password?