
Chitradurga news|Nammajana.com|27-6-2025
ನಮ್ಮಜನ.ಕಾಂ, ನಮ್ಮಜನ ವಿಶೇಷ: ಬೆಂಗಳೂರು ನಮ್ಮ ಪ್ರತಿಸ್ಪರ್ಧಿ’ ಎಂದು ಅಮೆರಿಕಾದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಉಲ್ಲೇರು ಕರ್ನಾಟಕದ ರಾಜಧಾನಿ (Kempegowda) ಅಂತಾರಾಷ್ಟ್ರೀಯ ಮಟ್ಟಕ್ಕೆ ಬೆಳೆದು ನಿಂತಿದೆ. ಜಗತ್ತಿನ ಮಾಹಿತಿ ತಂತ್ರಜ್ಞಾನದ ಆಲದ ಮರವಾಗಿದೆ.
ದೇಶದ ಯುವ ಉದ್ಯಮಿಗಳ ಕನಸಿನ ನಗರವಾಗಿ, ಜ್ಞಾನ ಕಾಶಿಯಾಗಿ, ಆರೋಗ್ಯದ ಧನ್ವಂತರಿಯಾಗಿ ರೂಪುಗೊಂಡಿದೆ. ಇಂತಹ ಊರಿನ ಬದಲಾವಣೆಯ ಭವಿಷ್ಯವೊಂದು ಸರಿಸುಮಾರು 516 ವರ್ಷಗಳ ಹಿಂದೆ ಜನನವಾಯಿತು ಎಂದರೆ ಅತಿಶಯೋಕ್ತಿ ಯಲ್ಲ ಎನ್ನುವುದು ನನ್ನ ಭಾವನೆ. (Kempegowda) ನಮಗೆಲ್ಲರಿಗೂ ಬೆಂದಕಾಳೂರಾಗಿರುವ ಊರು ಪ್ರಪಂಚದ ಕಣ್ಣಿನಲ್ಲಿ ಗ್ರೇಟರ್ doristeah ಬದಲಾಗುತ್ತಿದೆ.

ಇದೆಲ್ಲದರ ಹಿಂದಿರುವ ಪ್ರೇರಕ ಶಕ್ತಿ, ಇತಿಹಾಸದಲ್ಲಿ ಎಂದೂ ಅಳಿಸದ ಅಜರಾಮರ ವ್ಯಕ್ತಿ, ಕಾಡು ಮೇಡು, ಕಲ್ಲುಗುಂಡಿಗಳ ಒಡಲಾಗಿದ್ದ ಈ ಭೂಮಿಯಲ್ಲಿ ಕನಸನ್ನು ಬಿತ್ತಿ ಬೆಳೆದ ಯುಗಪುರುಷ ಕೆಂಪನಂಜೇಗೌಡ, ಲಿಂಗಾಂಬೆಯ (Kempegowda) ಸುಪುತ್ರರಾಗಿ ಜನಿಸಿದ ನಾಡಪ್ರಭು ಕೆಂಪೇಗೌಡರು.
ದೂರದೃಷ್ಟಿಗೆ ಜ್ವಲಂತ ನಿದರ್ಶನ ಬೆಂಗಳೂರಿಗರಾದ ನಾವು ಕೆಂಪೇಗೌಡರು, ಕೆಂಗಲ್ ಹನುಮಂತಯ್ಯನವರು, ಹಾಗೂ ಎಸ್.ಎಂ.ಕೃಷ್ಣ ಅವರನ್ನು ಸ್ಮರಿಸದೆ ಬೆಂಗಳೂರನ್ನು ಕಲ್ಪಿಸಿ ಕೊಳ್ಳಲೂ ಅಸಾಧ್ಯ. ನಾನು ಯಾವುದೇ ದೇಶಕ್ಕೆ ಹೋದರು ಆ ಊರಿನ ನಗರ ಯೋಜನಾ ವಿನ್ಯಾಸ, ಕಟ್ಟಡ ವಿನ್ಯಾಸಗಳನ್ನು ತಿಳಿದುಕೊಳ್ಳುವ ಕುತೂಹಲದಿಂದ ಫೋಟೊ ತೆಗೆದುಕೊಳ್ಳುತ್ತೇನೆ.
ಸೋಜಿಗದ ಸಂಗತಿ ಎಂದರೆ ತಂತ್ರಜ್ಞಾನ ಇಲ್ಲದ ಕಾಲದಲ್ಲಿ ಕೆಂಪೇಗೌಡರು ವಿಜ್ಞಾನ, ಯೋಜನೆ, ಮತ್ತು ಜನರ ಜೀವನದ ದೃಷ್ಟಿಯಿಂದ ಸುಂದರ ಬೆಂಗಳೂರನ್ನು ಕಟ್ಟಿದ್ದರು. ಭಾರತದ ಮೊದಲ ಸಂಘಟಿತ ನಗರಯೋಜನೆ ಕೆಂಪೇಗೌಡರ ಕೊಡುಗೆ ಎಂದರೆ ತಪ್ಪಾಗಲಾರದು. ದೂರದೃಷ್ಟಿಗೆ ಜೀವಂತ ಸಾಕ್ಷಿ.
“ಭಾರತದಿಂದ ಅಮೆರಿಕಾದ ಯಶಸ್ಸು”
2010ರಲ್ಲಿ ಪ್ರಪಂಚದ ಬಲಿಷ್ಠ ರಾಷ್ಟ್ರವೊಂದರ ಅಧ್ಯಕ್ಷರು ಪದೇ, ಪದೇ ಬೆಂಗಳೂರಿನ ಬಗ್ಗೆ ಪುನರಾಚ್ಚರಿಸುತ್ತಲೇ ಇದ್ದರು. ಯಾವುದೇ ಕಾರ್ಯಕ್ರಮಗಳಿಗೆ ಹೋದರು ಸರಿ. ಭಾರತಕ್ಕೆ (Kempegowda) ಬಂದರೂ ಸರಿ ‘ಬೆಂಗಳೂರು ಭಾರತದ ಹೆಮ್ಮೆ’ ಎನ್ನುವ ಮಾತುಗಳನ್ನಾಡಿದ್ದರು.
ಇವರು ಒಮ್ಮೆ ತಮ್ಮ ದೇಶದ ಬ್ಯಾಕ್ ಟು ಸ್ಕೂಲ್” ಎನ್ನಾವ ಕಾರ್ಯಕ್ರಮದಲ್ಲಿ ಮಕ್ಕಳನ್ನು ಕುರಿತು ಮಾತನಾಡುತ್ತಾ ‘ಇತರ ದೇಶಗಳು ನಮ್ಮೊಂದಿಗೆ ಹಿಂದೆಂದಿಗಿಂತಲೂ ಹೆಚ್ಚು ಪೈಪೋಟಿ ನಡೆಸುತ್ತಿರುವ ಸಮಯದಲ್ಲಿ, ಬೀಜಿಂಗ್ ಅಥವಾ ಬೆಂಗಳೂರಿನಲ್ಲಿ ಪ್ರಪಂಚದಾದ್ಯಂತದ ವಿದ್ಯಾರ್ಥಿಗಳು (Kempegowda) ಎಂದಿಗಿಂತಲೂ ಹೆಚ್ಚು ಶ್ರಮಿಸುತ್ತಿರುವಾಗ ಮತ್ತು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವಾಗ ಶಾಲೆಯಲ್ಲಿ ನಿಮ್ಮ ಯಶಸ್ಸನ್ನು ಮಾತ್ರ ನಿರ್ಧರಿಸುವುದಿಲ್ಲ.
ಇದನ್ನೂ ಓದಿ: Minister | ನಾನು ಮಂತ್ರಿ ಸ್ಥಾನದ ಪ್ರಬಲ ಆಕಾಂಕ್ಷಿ: ಟಿ.ರಘುಮೂರ್ತಿ
ಅದು 21ನೇ ಶತಮಾನದಲ್ಲಿ ಅಮೆರಿಕದ ಯಶಸ್ಸನ್ನೂ ನಿರ್ಧರಿಸುತ್ತದೆ, ಎಂದು ತನ್ನ ದೇಶದ ಶಾಲಾ ಮಕ್ಕಳಿಗೆ ತಿಳಿ ಹೇಳುತ್ತಾರೆ. ಅಂದರೆ ಬೆಂಗಳೂರಿನ ಗತ್ತು ಇಡೀ ಪ್ರಪಂಚಕ್ಕೆ ಗೊತ್ತು ಎಂದರೆ ತಪ್ಪಾಗಲಾರದು.