Namma JanaNamma JanaNamma Jana
  • ಇಂದಿನ ಸುದ್ದಿ
  • ರಾಜಕೀಯ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಕ್ರೀಡೆ
  • ಆರೋಗ್ಯ
  • ದಿನ ಭವಿಷ್ಯ
Reading: ಶತಮಾನ ಪೂರೈಸಿದ ಸರ್ಕಾರಿ ಶಾಲೆಗೆ ಇಲ್ಲ ಮೂಲಭೂತ ಸೌಲಭ್ಯ: Government School
Share
Notification Show More
Font ResizerAa
Font ResizerAa
Namma JanaNamma Jana
  • ಇಂದಿನ ಸುದ್ದಿ
  • ರಾಜಕೀಯ
  • ವಿಶೇಷ ಸುದ್ದಿ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಆರೋಗ್ಯ
  • ಕ್ರೀಡೆ
  • ದಿನ ಭವಿಷ್ಯ
  • ರಾಜಕೀಯ
Search
  • ಇಂದಿನ ಸುದ್ದಿ
  • ರಾಜಕೀಯ
  • ವಿಶೇಷ ಸುದ್ದಿ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಆರೋಗ್ಯ
  • ಕ್ರೀಡೆ
  • ದಿನ ಭವಿಷ್ಯ
  • ರಾಜಕೀಯ
Have an existing account? Sign In
Follow US
  • Advertise
© 2024 Namma Janna. Kannada News Portal. All Rights Reserved.
Namma Jana > Blog > ಇಂದಿನ ಸುದ್ದಿ > ಶತಮಾನ ಪೂರೈಸಿದ ಸರ್ಕಾರಿ ಶಾಲೆಗೆ ಇಲ್ಲ ಮೂಲಭೂತ ಸೌಲಭ್ಯ: Government School
ಇಂದಿನ ಸುದ್ದಿ

ಶತಮಾನ ಪೂರೈಸಿದ ಸರ್ಕಾರಿ ಶಾಲೆಗೆ ಇಲ್ಲ ಮೂಲಭೂತ ಸೌಲಭ್ಯ: Government School

Nammajana Sub Editor
Last updated: 14 August 2025 10:03 PM
By Nammajana Sub Editor 3 Min Read
Share
SHARE

Chitradurga News | Nammajana.com | 14-08-2025

ವಿಶೇಷ ವರದಿ: RB ಹಿರಿಯೂರು

ನಮ್ಮಜನ.ಕಾಂ, ಹಿರಿಯೂರು: ಕಳೆದ(Government School) ಫೆಬ್ರವರಿಗೆ ಆದಿವಾಲದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಬರೋಬ್ಬರಿ ನೂರು ವರ್ಷ ತುಂಬಿತು. 1925 ರಲ್ಲಿ ಶುರುವಾದ ಈ ಶಾಲೆ ಶತಮಾನ ಕಂಡರೂ ಸಹ ಮೂಲಭೂತ ಸೌಲಭ್ಯಗಳ ಕೊರತೆಯಿಂದ ನಲುಗುತ್ತಿದೆ.

ಇದನ್ನೂ ಓದಿ: ಜಿಲ್ಲಾ ಪಂಚಾಯಿತಿ ಆವರಣದಲ್ಲಿ ಸ್ವಚ್ಛತಾ ಶ್ರಮದಾನ 

ಕೊಠಡಿ ಕೊರತೆ, ಅಡುಗೆ ಕೋಣೆ ಕೊರತೆ, ಮಳೆಗಾಲದಲ್ಲಿ ಸೋರುವ ಕೊಠಡಿಗಳು, ಕೊಚ್ಚೆ ತುಂಬಿದ ಆಟದ ಮೈದಾನ ಹೀಗೇ ಹಲವು ಇಲ್ಲಗಳ ನಡುವೆ ಕೊನೆಗೂ ಶತಮಾನ ಮುಗಿಸಿದೆ. ಒಂದರಿಂದ ಎಂಟನೇ ತರಗತಿವರೆಗೆ ಎಲ್ ಕೆಜಿ, ಯುಕೆಜಿಯೂ ಸೇರಿದಂತೆ 270 ಮಕ್ಕಳಿವೆ. ಅಷ್ಟು ಮಕ್ಕಳಿಗೆ 9 ಶಾಲಾ ಕೊಠಡಿಗಳಿವೆ. ಆದರೆ ಆ 9 ಶಾಲಾ ಕೊಠಡಿಗಳಲ್ಲಿ 4-5 ಕೊಠಡಿಗಳು ಸೋರುತ್ತವೆ. ಕೆಲವೊಮ್ಮೆ ಮಕ್ಕಳು ಹೊರಗೆ ಕುಳಿತು ಪಾಠ ಕೇಳುವ ಪರಿಸ್ಥಿತಿ ಉಂಟಾಗುತ್ತದೆ.

ಈಗಾಗಲೇ ಎಲ್ ಕೆಜಿ ಮತ್ತು ಯುಕೆಜಿ ಮಕ್ಕಳು ಒಂದೇ ಕೊಠಡಿಯಲ್ಲಿ ಕೂರುತ್ತವೆ. ಜಿಂದಾಲ್ ಕಂಪನಿಯವರು ಶಾಲೆಗೆ ಕಂಪ್ಯೂಟರ್, ಅಲ್ಮೆರಾ, ಡೆಸ್ಕ್, ಲೈಬ್ರರಿ ಬುಕ್ಸ್ ಗಳನ್ನು ಕೊಡುಗೆಯಾಗಿ ನೀಡಿದ್ದಾರೆ. ಆದರೆ ಅವುಗಳನ್ನು ಇಡಲು ಕೊಠಡಿ ಕೊರತೆಯಿದೆ.

ಶಾಲೆಗಳನ್ನು ಬಲಪಡಿಸುವ ಸಂಪೂರ್ಣ ಜವಾಬ್ದಾರಿಯೂ ಗ್ರಾಮ ಪಂಚಾಯಿತಿಯದ್ದು ಆಗಿರುತ್ತದೆ. ನಮ್ಮೂರಿನಲ್ಲಿ ಶಾಲೆಯತ್ತ ಗಮನಹರಿಸದಿರುವುದನ್ನು ಕಾಣಬಹುದಾಗಿದೆ. ಶಾಲೆಯ ಅವ್ಯವಸ್ಥೆಯ ಬಗ್ಗೆ ಅರಿವಿದ್ದರೂ ಸಹ ಸೊಲ್ಲು ಎತ್ತದ ಜನ ನಮ್ಮೂರಿನಲ್ಲಿದ್ದಾರೆ. ಜನರ ಅಸಡ್ಡೆಯೂ ಶಾಲೆಯ ಈ ಪರಿಸ್ಥಿತಿಗೆ ಕಾರಣವಾಗಿದೆ. ಶಾಲಾ ವಿದ್ಯಾರ್ಥಿಗಳ ಆರೋಗ್ಯದ ದೃಷ್ಟಿಯಿಂದ ಮೈದಾನದಲ್ಲಿನ ಕೊಳಚೆ ನೀರು ಸರಾಗವಾಗಿ ಚರಂಡಿಗೆ ಹರಿಯುವ ವ್ಯವಸ್ಥೆ ಮಾಡಬೇಕಿದೆ. ತುರ್ತಾಗಿ ಒಂದು ವಿಶಾಲ ಅಡುಗೆ ಕೋಣೆ ನಿರ್ಮಾಣವಾಗಬೇಕಿದೆ. ಮೇಲಾಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳಬೇಕು.

– ಚಮನ್ ಷರೀಫ್, ಗ್ರಾಮದ ಸಾಮಾಜಿಕ ಕಾರ್ಯಕರ್ತ

ಸ್ಟೋರ್ ರೂಮ್ ಇಲ್ಲದ್ದಕ್ಕೆ ಮುಖ್ಯ ಶಿಕ್ಷಕರ ಕೊಠಡಿಯಲ್ಲೇ ರೇಷನ್ ಸಂಗ್ರಹಿಸಲಾಗಿದೆ. ಶಾಲೆಯ ಮೈದಾನವಂತೂ ಮಳೆ ಬಂದರೆ ಅಕ್ಷರಶಃ ಕಂಬಳದ ಗದ್ದೆಯಾಗುತ್ತದೆ. ಸಾಲದು ಎಂಬಂತೆ ಅಡುಗೆ ಕೋಣೆಯ ನೀರು, ಶೌಚಾಲಯದ ನೀರು, ಟ್ಯಾoಕ್ ನ ನೀರು ಹರಿದು ಹೊರ ಹೋಗಲು ವ್ಯವಸ್ಥೆ ಮಾಡಿಲ್ಲವಾದ್ದರಿಂದ ಆ ಎಲ್ಲಾ ವೇಸ್ಟ್ ನೀರು ನೇರವಾಗಿ ಮೈದಾನದೊಳಗೆ ಹರಿದು ಹೋಗುತ್ತದೆ. ಧ್ವಜದ ಕಟ್ಟೆಯ ಪಕ್ಕವೇ ಕೊಳಕು ನೀರು ಹರಿದು ಹೋಗುತ್ತವೆ.

ಇದನ್ನೂ ಓದಿ: ಈ ಊರಲ್ಲಿ ಮಳೆಗೆ ಸೋರುತ್ತಿದೆ ಸರ್ಕಾರಿ ಶಾಲೆ, ಸೌಲಭ್ಯ ವಂಚಿತ ಮಕ್ಕಳ ಗೋಳು ಕೇಳೋರ್ಯಾರು?

ಆ ವೇಸ್ಟ್ ನೀರನ್ನು ಒಂದು ಪೈಪ್(Government School) ಲೈನ್ ಮೂಲಕ ಮೈದಾನದಿಂದ ಹೊರಗಿನ ಒಂದು ಚರಂಡಿಗೆ ಸೇರಿಸುವ ಕೆಲಸವೂ ಇದುವರೆಗೂ ಆಗಿಲ್ಲ.ಇನ್ನು ಅಡುಗೆ ಕೋಣೆಯಂತೂ ಕಿಸ್ಕಿಂದೆ ಯಾಗಿದೆ. 270 ಮಕ್ಕಳಿಗೆ ಅಡುಗೆ ತಯಾರಿಸುವ ಕೋಣೆ ಕೇವಲ 10 × 10 ಅಡಿ ಅಳತೆಯಲ್ಲಿದೆ. ಇಕ್ಕಟ್ಟಾದ ಸ್ಥಳದಲ್ಲಿಯೇ ಅಡುಗೆ ತಯಾರಾಗುವ ಜೊತೆಗೆ ಮಳೆ ಬಂದರೆ ಸೀದಾ ಮಳೆ ನೀರು ಅಡುಗೆ ಕೋಣೆ ಸೇರುತ್ತವೆ.

ಆಗೆಲ್ಲಾ ಹೊರಗೇ ಅಡುಗೆ ತಯಾರಿಸುವ ಪರಿಸ್ಥಿತಿ ಇರುತ್ತದೆ ಎಂದು ಅಡುಗೆ ಸಹಾಯಕರು ಗೋಳಾಡುತ್ತಾರೆ. ಶಾಲೆಗೆ ಹೊಸದಾಗಿ ಕಾಂಪೌoಡ್ ನಿರ್ಮಿಸಲಾಗಿದೆ. ಆದರೆ ಅದಕ್ಕೆ ಗೇಟ್ ಹಾಕಿಯೇ ಇಲ್ಲ. ರಾತ್ರಿ ಕಳೆದು ಬೆಳಗಾದರೆ ಪೋಲಿ ಹುಡುಗರು ಮಾಡಿಟ್ಟು ಹೋದ ಕಸವನ್ನು ದಿನವೂ ಸ್ವಚ್ಛ ಮಾಡಬೇಕಾಗಿದೆ. ಗುಟ್ಕಾ ಪಾಕೆಟ್, ಬೀಡಿ, ಸಿಗರೇಟ್ ತುಂಡುಗಳನ್ನು ಗುಡಿಸಿ ಹಾಕುವುದು ನಿತ್ಯದ ಕರ್ಮವಾಗಿದೆ.ಕಾಂಪೌoಡ್ ನಿರ್ಮಿಸಿದ ನಂತರ ಅದಕ್ಕೊಂದು ಗೇಟ್ ಅಳವಡಿಸಲು ಆಗಿಲ್ಲದಿರುವುದು ದುರಂತದ ಸಂಗತಿ.

ಇದನ್ನೂ ಓದಿ: Nagamohan Das Report ವರದಿ ಅನ್ವಯ ಕೂಡಲೇ ಒಳ ಮೀಸಲಾತಿ ಜಾರಿಗೊಳಿಸಿ | ಸಿಎಂ, ಡಿಸಿಎಂ ಬಳಿ ಮಾದಾರ ಚನ್ನಯ್ಯ ಶ್ರೀ ನಿಯೋಗ ಮನವಿ

11 ಶಿಕ್ಷಕರು ಮತ್ತು ಇಬ್ಬರು(government school) ಅತಿಥಿ ಶಿಕ್ಷಕರು ಇರುವ ಶತಮಾನದ ಶಾಲೆಯಲ್ಲಿ ಕೊಠಡಿಗಳದೇ ದೊಡ್ಡ ಸಮಸ್ಯೆ. ಶತಮಾನದ ಸಂಭ್ರಮದ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಆರು ಕೊಠಡಿಗಳ ನಿರ್ಮಾಣದ ಭರವಸೆ ನೀಡಿದ್ದು ಆ ಭರವಸೆ ಆದಷ್ಟು ಬೇಗ ಕಾರ್ಯರೂಪಕ್ಕೆ ಬರಬೇಕಾಗಿದೆ. ನೂರು ವರ್ಷ ಕಂಡ ಸರ್ಕಾರಿ ಶಾಲೆಗೆ ಕಾಯಕಲ್ಪ ತುಂಬುವ ತುರ್ತು ಅವಶ್ಯಕತೆ ಇದೆ.

You Might Also Like

Adike Rate : ಅಡಿಕೆ ಧಾರಣೆ | 21 ಆಗಸ್ಟ್ 2025 | ರಾಶಿ ಅಡಿಕೆ ಬೆಲೆ ಎಷ್ಟಿದೆ?

HOSDURGA | ಜಿಲ್ಲಾ ಮಟ್ಟದ ಕವಿಗೋಷ್ಠಿ ಕವನಗಳಿಗೆ ಆಹ್ವಾನ

ಸಚಿವ ಡಿ.ಸುಧಾಕರ್ ಗೆ ಸಹಕಾರ ರತ್ನ ಪ್ರಶಸ್ತಿ ಪ್ರದಾನ | Cooperative Ratna Award

NAYAKANAHATTI ಯಲ್ಲಿ ಕೆರೆ ಗಂಗಮ್ಮ ಸಂಭ್ರಮಾಚರಣೆ | ಸಮೃದ್ಧ ಮಳೆ, ಬೆಳೆಗೆ ಪ್ರಾರ್ಥನೆ

ವಾಣಿವಿಲಾಸ ಸಾಗರ ನೀರಿನ‌ ಮಟ್ಟ ಭರ್ಜರಿ ಏರಿಕೆ | Vani Vilasa Sagara Dam

TAGGED:Basic FacilitiesChitradurgaChitradurga NewsGovernment SchoolHiriyurKannada NewsNammajana.comಕನ್ನಡ ನ್ಯೂಸ್ಕನ್ನಡ ಸುದ್ದಿಕೊರತೆಚಿತ್ರದುರ್ಗಚಿತ್ರದುರ್ಗ ನ್ಯೂಸ್ನಮ್ಮಜನ.ಕಾಂಮೂಲಭೂತ ಸೌಲಭ್ಯಸರ್ಕಾರಿ ಶಾಲೆಹಿರಿಯೂರು
Share This Article
Facebook Twitter Whatsapp Whatsapp Telegram Email Print
ಈ ಮೇಲಿನ ಸುದ್ದಿ, ಲೇಖನದ ಬಗ್ಗೆ ನಿಮ್ಮ ಅನಿಸಿಕೆ ಏನು?
Love0
Sad0
Happy0
Sleepy0
Angry0
Dead0
Wink0
Previous Article ಜಿಲ್ಲಾ ಪಂಚಾಯಿತಿ ಆವರಣದಲ್ಲಿ ಸ್ವಚ್ಛತಾ ಶ್ರಮದಾನ : Zilla Panchayat
Next Article ಅಧಿವೇಶನ | ಬೆಳೆ ನಷ್ಟ ಪರಿಹಾರದಲ್ಲಿ 49 ಕೋಟಿ ಹಣ ದುರುಪಯೋಗ: ಟಿ.ರಘುಮೂರ್ತಿ
Leave a comment

Leave a Reply Cancel reply

Your email address will not be published. Required fields are marked *

Stay Connected

TelegramFollow

Latest News

ವಿಧಾನ ಪರಿಷತ್ ನಲ್ಲಿ ಹಾಸ್ಟೆಲ್ ವಿದ್ಯಾರ್ಥಿ ವರ್ಷಿತಾ ಹತ್ಯೆ ಕುರಿತು ಪ್ರತಿಧ್ವನಿ
ಕ್ರೈಂ ಸುದ್ದಿ
EX MLA ಹಿರಿಯೂರು | ಮಾಜಿ ಶಾಸಕ ಆರ್.ರಾಮಯ್ಯ ಇನ್ನಿಲ್ಲ
Blog
ವರ್ಷಿತಾ ಕೊಲೆ | ಹತ್ಯೆಗೂ ಮೊದಲು ಪ್ರಿಯಕರ ಚೇತನ್ ಜೊತೆ ವರ್ಷಿತಾ ಜೊತೆಯಾಗಿದ್ದೇಲಿ, ಚೇತನ್ ಪ್ಲಾನ್ ಹೇಗಿತ್ತು!
ಕ್ರೈಂ ಸುದ್ದಿ
Today Gold Rate | ಚಿನ್ನದ ಬೆಲೆಯಲ್ಲಿ ಏರಿಕೆ
ಇಂದಿನ ಸುದ್ದಿ

Kannada News (ಕನ್ನಡ ಸುದ್ದಿ): Get the latest updates of karnataka news, world news, india news, political News and celebrity Kannada news and more on Nammajana (nammajana.com).

Sign Up for Our Newsletter

Subscribe to our newsletter to get our newest articles instantly!

Namma JanaNamma Jana
© 2025 NammaJanna. Kannada News Portal. All Rights Reserved.
adbanner
AdBlock Detected
Our site is an advertising supported site. Please whitelist to support our site.
Okay, I'll Whitelist
Welcome Back!

Sign in to your account

Lost your password?