Namma JanaNamma JanaNamma Jana
  • ಇಂದಿನ ಸುದ್ದಿ
  • ರಾಜಕೀಯ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಕ್ರೀಡೆ
  • ಆರೋಗ್ಯ
  • ದಿನ ಭವಿಷ್ಯ
Reading: ಪ್ರಥಮ್ ಶಿಕ್ಷಣ ಸಂಸ್ಥೆಯಿಂದ ಆಡುಮಲ್ಲೇಶ್ವರ ಅರಣ್ಯದಲ್ಲಿ ಬೀಜದ ಉಂಡೆ ಬಿತ್ತೋತ್ಸವ
Share
Notification Show More
Font ResizerAa
Font ResizerAa
Namma JanaNamma Jana
  • ಇಂದಿನ ಸುದ್ದಿ
  • ರಾಜಕೀಯ
  • ವಿಶೇಷ ಸುದ್ದಿ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಆರೋಗ್ಯ
  • ಕ್ರೀಡೆ
  • ದಿನ ಭವಿಷ್ಯ
  • ರಾಜಕೀಯ
Search
  • ಇಂದಿನ ಸುದ್ದಿ
  • ರಾಜಕೀಯ
  • ವಿಶೇಷ ಸುದ್ದಿ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಆರೋಗ್ಯ
  • ಕ್ರೀಡೆ
  • ದಿನ ಭವಿಷ್ಯ
  • ರಾಜಕೀಯ
Have an existing account? Sign In
Follow US
  • Advertise
© 2024 Namma Janna. Kannada News Portal. All Rights Reserved.
Namma Jana > Blog > ಇಂದಿನ ಸುದ್ದಿ > ಪ್ರಥಮ್ ಶಿಕ್ಷಣ ಸಂಸ್ಥೆಯಿಂದ ಆಡುಮಲ್ಲೇಶ್ವರ ಅರಣ್ಯದಲ್ಲಿ ಬೀಜದ ಉಂಡೆ ಬಿತ್ತೋತ್ಸವ
ಇಂದಿನ ಸುದ್ದಿ

ಪ್ರಥಮ್ ಶಿಕ್ಷಣ ಸಂಸ್ಥೆಯಿಂದ ಆಡುಮಲ್ಲೇಶ್ವರ ಅರಣ್ಯದಲ್ಲಿ ಬೀಜದ ಉಂಡೆ ಬಿತ್ತೋತ್ಸವ

Editor Nammajana
Last updated: 28 April 2024 07:52
By Editor Nammajana 1 Min Read
Share
SHARE

Chitradurga News |Nammajana. Com | 28-4-2024

ನಮ್ಮಜನ.ಕಾಂ.ಚಿತ್ರದುರ್ಗ:ಆಡುಮಲ್ಲೇಶ್ವರದಲ್ಲಿ ಇನ್ನು ಹೆಚ್ಚು ಗಿಡಮರಗಳನ್ನು ಬೆಳೆಸಿ ಪರಿಸರ ರಕ್ಷಣೆ ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಪರಿಸರವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಬೀಜದ ಉಂಡೆಗಳ ಬಿತ್ತೋತ್ಸವ ಕಾರ್ಯಕ್ರಮ ಮಹತ್ವದ ಕಾರ್ಯವಾಗಿದೆ ಪರಿಸರ ಹೋರಾಟಗಾರ ಡಾ ಎಚ್. ಕೆ.ಎಸ್. ಸ್ವಾಮಿ ಹೇಳಿದರು.

ನಗರದ ಜೋಗಿಮಟ್ಟಿಯ ಆಡುಮಲ್ಲೇಶ್ವರ  ಸಾಮಾಜಿಕ ಅರಣ್ಯ ಪ್ರದೇಶದಲ್ಲಿ  ಪ್ರಥಮ್ ಶಿಕ್ಷಣ ಸಂಸ್ಥೆ ವತಿಯಿಂದ  ಹಮ್ಮಿಕೊಂಡಿದ್ದ ಬೀಜದ ಉಂಡೆಗಳ ಬಿತ್ತೋತ್ಸವ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.

ವಿವಿಧ ಮರದ ಬೀಜಗಳಾದ ಬೇವು, ಹೊಂಗೆ, ಹುಣಸೆ, ಹಲಸು,ತೇಗು, ಸೇರಿದಂತೆ ಮುಂತಾದ ಮರದ ಬೀಜದ ಉಂಡೆಗಳನ್ನು ಬಿತ್ತನೆ ಮಾಡುವ ಮೂಲಕ ಪರಿಸರ ರಕ್ಷ ಣೆಯ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಪ್ರಥಮ್ ಸಂಸ್ಥೆಯ ಕಾರ್ಯ ಶ್ಲಾಘನೀಯವಾಗಿದೆ ಎಂದರು.

ಡಾ.ಮಹೇಶ್ ಮಾತನಾಡಿ ಬೀಜದ ಉಂಡೆಗಳು ಮುಂದೆ ಮಳೆಗಾಲ ಬಂದಾಗ ಮೊಳಕೆ ಹೊಡೆದು ಸಸಿಗಳಾಗಿ ಶುದ್ಧವಾದ ಗಾಳಿಯನ್ನು,ಆಹ್ಲಾದಕರವಾದ ಪರಿಸರವನ್ನು ಉಂಟುಮಾಡುತ್ತದೆ. ಬೀಜದ ಉಂಡೆಗಳನ್ನು ಹಾಕಿದ ನಂತರ ಅವುಗಳನ್ನು ಕಾಳಜಿ ವಹಿಸುವುದು ಅಷ್ಟೇ ಮಹತ್ವ ಕಾರ್ಯವಾಗಿದೆ. ಸಂಸ್ಥೆಯ ಪದಾಧಿಕಾರಿಗಳು ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕು ಎಂದರು.

ಸಂಸ್ಥೆಯ ಖಜಾಂಚಿ ಸುಮಾ ಮಾತನಾಡಿ ಗಿಡ ಮರಗಳು ಪರಿಸರದಲ್ಲಿ ಹೆಚ್ಚಾದಂತೆಲ್ಲ ಮಳೆಯು ಸಹ ಸಮೃದ್ಧವಾಗಿ ಸುರಿಯುತ್ತದೆ. ಉತ್ತಮ ಪರಿಸರಕ್ಕಾಗಿ ನಾವೆಲ್ಲರೂ ಒಂದುಗೂಡಬೇಕಾಗಿದೆ. ಇದು ಮೊದಲ ಹಂತದ ಬೀಜದ ಉಂಡೆಗಳ ಬಿತ್ತೋತ್ಸವ ಕಾರ್ಯಕ್ರಮವಾಗಿದ್ದು ಮುಂದಿನ ದಿನಗಳಲ್ಲಿ ಚಿತ್ರದುರ್ಗದ ಎಲ್ಲಾ ಪ್ರದೇಶಗಳಲ್ಲಿ ನಮ್ಮ ಸಂಸ್ಥೆ ವತಿಯಿಂದ ಬೀಜದ ಉಂಡೆಗಳ ಬಿತ್ತೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದರು.

ಇದನ್ನೂ ಓದಿ: ನಮ್ಮ ಗೃಹಲಕ್ಷ್ಮಿ ನಮ್ಮ ಕೈ ಹಿಡಿದಿದ್ದಾಳೆ:ಬಿ.ಎನ್.ಚಂದ್ರಪ್ಪ ವಿಶ್ವಾಸ

ಕಾರ್ಯಕ್ರಮದಲ್ಲಿ ಸುಮಾರು 500 ಬೀಜದ ಉಂಡೆಗಳನ್ನು ಅರಣ್ಯ ಪ್ರದೇಶದಲ್ಲಿ ಬಿತ್ತನೆ ಮಾಡಲಾಯಿತು.

ಈ ಕಾರ್ಯಕ್ರಮದಲ್ಲಿ ವಕೀಲ ಸುಧೀರ್, ಪರಿಸರ ಪ್ರೇಮಿ ಶ್ರೀಧರ್, ಸಂತೋಷ್, ಸಂಸ್ಥೆಯ ಪದಾಧಿಕಾರಿಗಳಾದ ತಿಮ್ಮರಾಜು, ಚೈತ್ರ, ಚಂದ್ರಕಲಾ, ಅನಿತಾ, ಧನುಷ್, ಈಶ್ವರಿ, ವೈಷ್ಣವಿ, ಪ್ರಥಮ್, ಪ್ರೀತಂ, ಗಣೇಶ್ ಇದ್ದರು.

You Might Also Like

Dina Bhavishya | ದಿನ ಭವಿಷ್ಯ, ಇವತ್ತು ಯಾವ ರಾಶಿಗೆ ಶುಭ?

Gold Rate | ಬಂಗಾರದ ಬೆಲೆಯಲ್ಲಿ ಇಳಿಕೆ

Transfer | ಜಿಲ್ಲಾ ಬಿಸಿಎಂ ಅಧಿಕಾರಿ ಆರ್.ಸುಬ್ರಾನಾಯಕ್ ವರ್ಗಾವಣೆ, ನೂತನ ಅಧಿಕಾರಿ ಅಧಿಕಾರ ಸ್ವೀಕಾರ

POWER CUT | ಇಂದು ಬೆಳಗ್ಗೆಯಿಂದ ಸಂಜೆವರೆಗೆ ಕರೆಂಟ್ ಇರಲ್ಲ

Dina Bhavishya | ದಿನ ಭವಿಷ್ಯ, ಇವತ್ತು ಯಾವ್ಯಾವ ರಾಶಿಗೆ ಶುಭ ಲಾಭ, ನಷ್ಟ ನೋಡಿ

TAGGED:AdumalleswarBeeja UndeBithotsavaChitradurga NewsForest AreaKannada Newskannada suddiNammajana.comPrimary Education Instituteಅರಣ್ಯ ಪ್ರದೇಶಆಡುಮಲ್ಲೇಶ್ವರಕನ್ನಡ ನ್ಯೂಸ್ಕನ್ನಡ ಸುದ್ದಿಚಿತ್ರದುರ್ಗ ನ್ಯೂಸ್ಚಿತ್ರದುರ್ಗ ಸುದ್ದಿನಮ್ಮಜನ.ಕಾಂಪ್ರಥಮ ಶಿಕ್ಷಣ ಸಂಸ್ಥೆಬಿತೋತ್ಸವಬೀಜ ಉಂಡೆ
Share This Article
Facebook Twitter Whatsapp Whatsapp Telegram Email Print
ಈ ಮೇಲಿನ ಸುದ್ದಿ, ಲೇಖನದ ಬಗ್ಗೆ ನಿಮ್ಮ ಅನಿಸಿಕೆ ಏನು?
Love0
Sad0
Happy0
Sleepy0
Angry0
Dead0
Wink0
Previous Article ನಮ್ಮ ಗೃಹಲಕ್ಷ್ಮಿ ನಮ್ಮ ಕೈ ಹಿಡಿದಿದ್ದಾಳೆ:ಬಿ.ಎನ್.ಚಂದ್ರಪ್ಪ ವಿಶ್ವಾಸ
Next Article ಬ್ರಿಡ್ಜ್ ಕಂ ಬ್ಯಾರೇಜ್‌ನಿಂದ ದಶಕಗಳ‌ ಕನಸು ನನಸು ಮಾಡಿದ ಮಾಜಿ ಸಚಿವ ಬಿ.ಶ್ರೀರಾಮುಲು
Leave a comment

Leave a Reply Cancel reply

Your email address will not be published. Required fields are marked *

Stay Connected

TelegramFollow

Latest News

Gold Rate | ಬಂಗಾರದ ಬೆಲೆಯಲ್ಲಿ ಏರಿಕೆ
ಇಂದಿನ ಸುದ್ದಿ
Dina Bhavishya | ದಿನ ಭವಿಷ್ಯ, ಇವತ್ತು ಯಾವ್ಯಾವ ರಾಶಿಗೆ ಶುಭ?
ದಿನ ಭವಿಷ್ಯ
POWER CUT | ಇಂದಿನಿಂದ ಎರಡು ದಿನ ಬೆಳಗ್ಗೆಯಿಂದ ಸಂಜೆವರೆಗೂ ಕರೆಂಟ್ ಇರಲ್ಲ
ಇಂದಿನ ಸುದ್ದಿ
Adike rate | ಅಡಿಕೆ ಬೆಲೆಯಲ್ಲಿ ಇಳಿಕೆ
ಅಡಿಕೆ ಧಾರಣೆ

Kannada News (ಕನ್ನಡ ಸುದ್ದಿ): Get the latest updates of karnataka news, world news, india news, political News and celebrity Kannada news and more on Nammajana (nammajana.com).

Sign Up for Our Newsletter

Subscribe to our newsletter to get our newest articles instantly!

Namma JanaNamma Jana
© 2025 NammaJanna. Kannada News Portal. All Rights Reserved.
adbanner
AdBlock Detected
Our site is an advertising supported site. Please whitelist to support our site.
Okay, I'll Whitelist
Welcome Back!

Sign in to your account

Lost your password?