Namma JanaNamma JanaNamma Jana
  • ಇಂದಿನ ಸುದ್ದಿ
  • ರಾಜಕೀಯ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಕ್ರೀಡೆ
  • ಆರೋಗ್ಯ
  • ದಿನ ಭವಿಷ್ಯ
Reading: Minister B Nagendra: ಸಚಿವ ನಾಗೇಂದ್ರ ರಾಜೀನಾಮೆ ಕೊಡಲ್ಲ, ಇದು ಬಿಜೆಪಿ ಷಡ್ಯಂತ್ರ: ಡಾ.ಬಿ.ಯೋಗೇಶ್ ಬಾಬು
Share
Notification Show More
Font ResizerAa
Font ResizerAa
Namma JanaNamma Jana
  • ಇಂದಿನ ಸುದ್ದಿ
  • ರಾಜಕೀಯ
  • ವಿಶೇಷ ಸುದ್ದಿ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಆರೋಗ್ಯ
  • ಕ್ರೀಡೆ
  • ದಿನ ಭವಿಷ್ಯ
  • ರಾಜಕೀಯ
Search
  • ಇಂದಿನ ಸುದ್ದಿ
  • ರಾಜಕೀಯ
  • ವಿಶೇಷ ಸುದ್ದಿ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಆರೋಗ್ಯ
  • ಕ್ರೀಡೆ
  • ದಿನ ಭವಿಷ್ಯ
  • ರಾಜಕೀಯ
Have an existing account? Sign In
Follow US
  • Advertise
© 2024 Namma Janna. Kannada News Portal. All Rights Reserved.
Namma Jana > Blog > ರಾಜಕೀಯ > Minister B Nagendra: ಸಚಿವ ನಾಗೇಂದ್ರ ರಾಜೀನಾಮೆ ಕೊಡಲ್ಲ, ಇದು ಬಿಜೆಪಿ ಷಡ್ಯಂತ್ರ: ಡಾ.ಬಿ.ಯೋಗೇಶ್ ಬಾಬು
ರಾಜಕೀಯ

Minister B Nagendra: ಸಚಿವ ನಾಗೇಂದ್ರ ರಾಜೀನಾಮೆ ಕೊಡಲ್ಲ, ಇದು ಬಿಜೆಪಿ ಷಡ್ಯಂತ್ರ: ಡಾ.ಬಿ.ಯೋಗೇಶ್ ಬಾಬು

Editor Nammajana
Last updated: 30 May 2024 13:29
By Editor Nammajana 2 Min Read
Share
SHARE
Chitradurga news |nammajana.com |30-5-2024

ನಮ್ಮಜನ.ಕಾಂ, ಚಿತ್ರದುರ್ಗ: ವಾಲ್ಮೀಕಿ ನಿಗಮ ಅಧಿಕಾರಿ ಚಂದ್ರಶೇಖರ್‌ ಆತ್ಮಹತ್ಯೆಗೆ ಸಚಿವ ನಾಗೇಂದ್ರ (Minister B Nagendra) ಅವರು ಕಾರಣರಲ್ಲ, ಬಿಜೆಪಿ ಕುತಂತ್ರದಿಂದ ರಾಜಕೀಯ ಷಡ್ಯಂತ್ರ ಮಾಡಿ ಇವರ ರಾಜೀನಾಮೆ ಕೇಳುತ್ತಿದ್ದಾರೆ, ಯಾವುದೇ ಕಾರಣಕ್ಕೂ ಸಚಿವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬಾರದೆಂದು ಕರ್ನಾಟಕ ದ್ರಾಕ್ಷರಸ ಮಂಡಳಿಯ ಅಧ್ಯಕ್ಷ ಡಾ.ಬಿ.ಯೋಗಿಶ್ ಬಾಬು ಒತ್ತಾಯಿಸಿ ಬಿಜೆಪಿ ವಿರುದ್ದ ಕಿಡಿಕಾರಿದ್ದಾರೆ.

ನಗರದ  ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿ  ವಾಲ್ಮೀಕಿ ಅಭಿವೃದ್ಧಿ ನಿಗಮದ ಆಧಿಕಾರಿ ಚಂದ್ರಶೇಖರ್ ತಮ್ಮ ಡೆತ್‌ನೋಟ್ ನಲ್ಲಿ ಸ್ಪಷ್ಟವಾಗಿ ಬರೆದಿದ್ದಾರೆ.

ನನ್ನ ಸಾವಿಗೆ ನನ್ನ ಮೇಲಿನ ಅಧಿಕಾರಿಗಳು ಕಾರಣರಾಗಿದ್ದಾರೆ. ಇದರಲ್ಲಿ ಸಚಿವ ನಾಗೇಂದ್ರ (Minister B Nagendra) ಅವರ ಪಾತ್ರ ಇಲ್ಲ ಎಂದು ತಿಳಿಸಿದ್ದರು ಸಹಾ ಬಿಜೆಪಿಗರು ಸಚಿವರು ಇದರಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿ  ರಾಜೀನಾಮೆ ನೀಡುವಂತೆ ಆಗ್ರಹಿಸುತ್ತಿರುವುದು ಸರಿಯಲ್ಲ ಎಂದರು.

ಬಿಜೆಪ ರಾಜ್ಯಾಧ್ಯಕ್ಷ ಬಿ.ವೈ.ವಿಜೇಯೇಂದ್ರ ಸಹ ರಾಜೀನಾಮೆಗೆ  ಆಗ್ರಹಿಸಿದ್ದು  ಈ ಪ್ರಕರಣರಲ್ಲಿ ಸಚಿವರ ಪಾತ್ರ ಏನು ಇಲ್ಲ ಎಂದು ಸ್ಪಷ್ಟವಾಗಿರುವಾಗ ಬಿಜೆಪಿ ರಾಜಕೀಯ ಷಡ್ಯಂತ್ರದಿಂದ ಸಚಿವರ ರಾಜೀನಾಮೆ ಕೇಳುತ್ತಿರುವುದು ದುರಾದೃಷ್ಟಕರವಾಗಿದೆ.

ಈ ಪ್ರಕರಣದಲ್ಲಿ ಸಂಬಂಧಿಸಿದವರ ವಿರುದ್ಧ ಮತ್ತು ಮಂಡಳಿಯ ಅಧಿಕಾರಿಗಳನ್ನು ಸರ್ಕಾರ ಈಗಾಗಲೇ ಅಮಾನತ್ತು ಮಾಡಿದೆ. ಅಲ್ಲದೆ ನಿಗಮದಿಂದ ಹೋದ ಹಣವನ್ನು ಸಹಾ ವಾಪಾಸ್ಸು ಮಾಡಲು ಸೂಚನೆಯನ್ನು ಸಹ ನೀಡಲಾಗಿದ್ದು ಇಷ್ಠಾದರೂ ಸಹಾ ಬಿಜೆಪಿ ಸಚಿವ ನಾಗೇಂದ್ರ (Minister B Nagendra) ರಾಜೀನಾಮೆಯನ್ನು ಕೇಳುತ್ತಿರುವುದು ರಾಜಕೀಯ ದೃಷ್ಟಿಯಿಂದ ಮಾತ್ರವಾಗಿದೆ.

ನಾಗೇಂದ್ರ (Minister B Nagendra)  ಅವರು ನಮ್ಮ ನಾಯಕ ಜನಾಂಗದಲ್ಲಿ  ಯುವ ನಾಯಕರಾಗಿದ್ದರೆ. ಇವರು ತಮ್ಮ ಇಲಾಖೆಯಲ್ಲಿ ಯಾವುದೇ ರೀತಿಯ ಕಳಂಕ ಇಲ್ಲದೆ ನಡೆಸುತ್ತಿದ್ದಾರೆ. ಇದು ಅಧಿಕಾರಿಗಳು ಮಾಡಿದ ಎಡವಟ್ಟಿನಿಂದ ಆದ ಪ್ರಕರಣವಾಗಿದೆ.

ಈ ಹಿನ್ನಲೆಯಲ್ಲಿ ಸರ್ಕಾರವೂ ಸಹಾ ಇದರ ಬಗ್ಗೆ ತನಿಖೆಯನ್ನು ನಡೆಸಲು ಸೂಚನೆಯನ್ನು ನೀಡಿದೆ ತನಿಖಾ ವರದಿ ಬರುವವರೆಗೂ ಸಹಾ ಬಿಜೆಪಿಗೆ ತಾಳ್ಮೆ ಇಲ್ಲವಾಗಿದೆ ಎಂದು ದೂರಿದರು.

ಮೃತ ಚಂದ್ರಶೇಖರ್ ರವರ ಪತ್ನಿಯೂ ಸಹಾ ಈ ಪ್ರಕರಣದಲ್ಲಿ ಸಚಿವರ ಪಾತ್ರ ಯಾವುದು ಇಲ್ಲ, ನಿಗಮದ ಮೇಲಿನ ಆಧಿಕಾರಿಗಳು ಒತ್ತಡದಿಂದ ಈ ರೀತಿ ಮಾಡಲಾಗಿದೆ ಎಂದಿದ್ದಾರೆ.

ಇದನ್ನೂ ಓದಿ: Hiriyur Ispeet attack: ಇಸ್ಪೀಟ್ ಅಡ್ಡೆ ಮೇಲೆ ದಾಳಿ 6 ಜನರ ಬಂಧನ

ಈ ಹಿನ್ನಲೆಯಲ್ಲಿ ಅಧಿಕಾರಿಗಳಿಗೆ ಶಿಕ್ಷೆಯನ್ನು ಕೊಡಿ ಎಂದಿದ್ದಾರೆ ಹೊರತು ಸಚಿವರ ರಾಜೀನಾಮೆಯನ್ನು ಕೇಳಿಲ್ಲ. ಚಂದ್ರಶೇಖರ್ ಆತ್ಮಹತ್ಯೆಗೆ ಸರ್ಕಾರ ಮತ್ತು ಸಚಿವರು ಸಾಂತ್ವಾನ ಹೇಳಿದ್ದಾರೆ. ಬಿಜೆಪಿ ಸಚಿವ ನಾಗೇಂದ್ರ (Minister B Nagendra)  ಅವರ ರಾಜೀನಾಮೆಗೆ ಮುಂದುವರೆದರೆ ನಮ್ಮ ಜನಾಂಗ ಮತ್ತು ಪಕ್ಷದ ವತಿಯಿಂದ ರಾಜೀನಾಮೆ ನೀಡಬೇಡಿ ಎಂದು ನಾವು ಸಹಾ ಹೋರಾಟವನ್ನು ಮಾಡಲಾಗುವುದು ಎಂದು ಯೋಗೀಶ್ ಬಾಬು ಬಿಜೆಪಿಗೆ ಎಚ್ಚರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಕೆಪಿಸಿಸಿ  ವಕ್ತಾರ ಬಾಲಕೃಷ್ಣ ಯಾದವ್, ಮಧುಪಾಲೇ ಗೌಡ, ಜಯ್ಯಣ್ಣ,  ಮಂಜುನಾಥ್, ಪ್ರಶಾಂತ್,ಬಚ್ಚಪ್ಪರನಹಟ್ಟಿ ಬಸವರಾಜ್, ಸುನೀಲ್, ಸಂದೀಪ್ ಇದ್ದರು

You Might Also Like

Dina Bhavishya | ದಿನ ಭವಿಷ್ಯ, ಇವತ್ತು ಯಾವ ರಾಶಿಗೆ ಶುಭ?

Gold Rate | ಬಂಗಾರದ ಬೆಲೆಯಲ್ಲಿ ಇಳಿಕೆ

Transfer | ಜಿಲ್ಲಾ ಬಿಸಿಎಂ ಅಧಿಕಾರಿ ಆರ್.ಸುಬ್ರಾನಾಯಕ್ ವರ್ಗಾವಣೆ, ನೂತನ ಅಧಿಕಾರಿ ಅಧಿಕಾರ ಸ್ವೀಕಾರ

POWER CUT | ಇಂದು ಬೆಳಗ್ಗೆಯಿಂದ ಸಂಜೆವರೆಗೆ ಕರೆಂಟ್ ಇರಲ್ಲ

Dina Bhavishya | ದಿನ ಭವಿಷ್ಯ, ಇವತ್ತು ಯಾವ್ಯಾವ ರಾಶಿಗೆ ಶುಭ ಲಾಭ, ನಷ್ಟ ನೋಡಿ

TAGGED:ChitradurgaChitradurga NewsDr. Yogesh BabuKannada Newskannada suddiMinister B NagendraNammajana.comsuicide caseValmiki Development Corporationಆತ್ಮಹತ್ಯೆ ಪ್ರಕರಣಕನ್ನಡ ನ್ಯೂಸ್ಕನ್ನಡ ಸುದ್ದಿಚಿತ್ರದುರ್ಗಚಿತ್ರದುರ್ಗ ನ್ಯೂಸ್ಚಿತ್ರದುರ್ಗ ಸುದ್ದಿಡಾ.ಯೋಗೇಶ್ ಬಾಬುನಮ್ಮಜನ.ಕಾಂವಾಲ್ಮೀಕಿ ಅಭಿವೃದ್ದಿ ನಿಗಮಸಚಿವ ಬಿ ನಾಗೇಂದ್ರ
Share This Article
Facebook Twitter Whatsapp Whatsapp Telegram Email Print
ಈ ಮೇಲಿನ ಸುದ್ದಿ, ಲೇಖನದ ಬಗ್ಗೆ ನಿಮ್ಮ ಅನಿಸಿಕೆ ಏನು?
Love0
Sad0
Happy0
Sleepy0
Angry0
Dead1
Wink0
Previous Article Hiriyur Ispeet attack: ಇಸ್ಪೀಟ್ ಅಡ್ಡೆ ಮೇಲೆ ದಾಳಿ 6 ಜನರ ಬಂಧನ
Next Article Bhimasamudra Festival: ಭೀಮಸಮುದ್ರದಲ್ಲಿ ಸಂಭ್ರಮದಿ ಜರುಗಿದ ಹುಚ್ಚಯ್ಯನ ಉತ್ಸವ
Leave a comment

Leave a Reply Cancel reply

Your email address will not be published. Required fields are marked *

Stay Connected

TelegramFollow

Latest News

Gold Rate | ಬಂಗಾರದ ಬೆಲೆಯಲ್ಲಿ ಏರಿಕೆ
ಇಂದಿನ ಸುದ್ದಿ
Dina Bhavishya | ದಿನ ಭವಿಷ್ಯ, ಇವತ್ತು ಯಾವ್ಯಾವ ರಾಶಿಗೆ ಶುಭ?
ದಿನ ಭವಿಷ್ಯ
POWER CUT | ಇಂದಿನಿಂದ ಎರಡು ದಿನ ಬೆಳಗ್ಗೆಯಿಂದ ಸಂಜೆವರೆಗೂ ಕರೆಂಟ್ ಇರಲ್ಲ
ಇಂದಿನ ಸುದ್ದಿ
Adike rate | ಅಡಿಕೆ ಬೆಲೆಯಲ್ಲಿ ಇಳಿಕೆ
ಅಡಿಕೆ ಧಾರಣೆ

Kannada News (ಕನ್ನಡ ಸುದ್ದಿ): Get the latest updates of karnataka news, world news, india news, political News and celebrity Kannada news and more on Nammajana (nammajana.com).

Sign Up for Our Newsletter

Subscribe to our newsletter to get our newest articles instantly!

Namma JanaNamma Jana
© 2025 NammaJanna. Kannada News Portal. All Rights Reserved.
adbanner
AdBlock Detected
Our site is an advertising supported site. Please whitelist to support our site.
Okay, I'll Whitelist
Welcome Back!

Sign in to your account

Lost your password?