Namma JanaNamma JanaNamma Jana
  • ಇಂದಿನ ಸುದ್ದಿ
  • ರಾಜಕೀಯ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಕ್ರೀಡೆ
  • ಆರೋಗ್ಯ
  • ದಿನ ಭವಿಷ್ಯ
Reading: Arun jolada kudligi: ಬದಲಾವಣೆಯನ್ನು ಮುಕ್ತವಾಗಿ ಒಪ್ಪಿಕೊಳ್ಳಬೇಕಷ್ಟೆ
Share
Notification Show More
Font ResizerAa
Font ResizerAa
Namma JanaNamma Jana
  • ಇಂದಿನ ಸುದ್ದಿ
  • ರಾಜಕೀಯ
  • ವಿಶೇಷ ಸುದ್ದಿ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಆರೋಗ್ಯ
  • ಕ್ರೀಡೆ
  • ದಿನ ಭವಿಷ್ಯ
  • ರಾಜಕೀಯ
Search
  • ಇಂದಿನ ಸುದ್ದಿ
  • ರಾಜಕೀಯ
  • ವಿಶೇಷ ಸುದ್ದಿ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಆರೋಗ್ಯ
  • ಕ್ರೀಡೆ
  • ದಿನ ಭವಿಷ್ಯ
  • ರಾಜಕೀಯ
Have an existing account? Sign In
Follow US
  • Advertise
© 2024 Namma Janna. Kannada News Portal. All Rights Reserved.
Namma Jana > Blog > ವಿಶೇಷ ಸುದ್ದಿ > Arun jolada kudligi: ಬದಲಾವಣೆಯನ್ನು ಮುಕ್ತವಾಗಿ ಒಪ್ಪಿಕೊಳ್ಳಬೇಕಷ್ಟೆ
ವಿಶೇಷ ಸುದ್ದಿ

Arun jolada kudligi: ಬದಲಾವಣೆಯನ್ನು ಮುಕ್ತವಾಗಿ ಒಪ್ಪಿಕೊಳ್ಳಬೇಕಷ್ಟೆ

Editor Nammajana
Last updated: 16 June 2024 11:34
By Editor Nammajana 2 Min Read
Share
SHARE

Chitradurga news|nammajana.com|16-6-2024

ನಮ್ಮಜನ.ಕಾಂ, ವಿಶೇಷ ಲೇಖನ: ಅರುಣ್ ಜೋಳದ ಕೂಡ್ಲಿಗಿ

*ಒಂದು ಗಂಡಿಗೆ ಒಂದೇ ಹೆಣ್ಣು, ಒಂದು ಹೆಣ್ಣಿಗೆ ಒಬ್ಬನೇ ಗಂಡು ಎನ್ನುವ ಭಾರತೀಯ ಸೂತ್ರ ಛಿದ್ರಗೊಳ್ಳುತ್ತಿದೆಯೇ…*

‘ಗಂಡಿ’ನ ಅಹಮಿಕೆ, ಯಾಜಮಾನಿಕೆಯ ನಿಯಂತ್ರಣದಿಂದ ‘ಹೆಣ್ಣು’ ಸ್ವತಂತ್ರವಾಗಿ ಬದುಕುವ ದಾರಿಯ ಒಂದು ಮಾರ್ಗವಾಗಿ ‘ಡೈವೋರ್ಸ್’ ನ್ನು ವ್ಯಾಖ್ಯಾನಿಸಲಾಗುತ್ತಿದೆ. ಇದು ಪ್ರಭಾವಿ ಕಾರಣಗಳಲ್ಲಿ ಒಂದಾದರೂ ಇದರ ಜತೆ ಹೆಣ್ಣಿಗೆ (Arun jolada kudligi) ಸಿಗುವ ಎಜುಕೇಷನ್, ಆಧುನಿಕ ಮನೋಭಾವ, ಬದಲಾದ ಜೀವನ ಶೈಲಿ, ಸ್ವಾತಂತ್ರ್ಯದ ನಡಾವಳಿಕೆ ಹೆಚ್ಚಾದಂತೆ ಹೆಣ್ಣಿನ ಆಯ್ಕೆ ಮತ್ತು ನಿರಾಕರಣೆಗಳು ಮುಕ್ತವಾಗುತ್ತವೆ. ಇದು ಆರೋಗ್ಯಕರ ಸಮಾಜದ ಲಕ್ಷಣ.

ಜೀವನಪೂರ್ತಿ ಒಂದು ಗಂಡಿಗೆ ಒಂದೇ ಹೆಣ್ಣು, ಒಂದು ಹೆಣ್ಣಿಗೆ ಒಬ್ಬನೇ ಗಂಡು ಎನ್ನುವ ಭಾರತೀಯ ಸೂತ್ರ ಛಿದ್ರಗೊಳ್ಳುತ್ತಿದೆ. ಇದು ಜೈವಿಕವಾಗಿಯೂ ಅಸಹಜ ಅಥವಾ ಪ್ರಜ್ಞಾಪೂರ್ವಕ/ ಒತ್ತಾಯಪೂರ್ವಕವಾದ ನಡಾವಳಿಕೆ. ಹೀಗಾಗಿ ಗಂಡು ಅಥವಾ ಹೆಣ್ಣಿನಲ್ಲಿ ಒಂದು ಹೆಣ್ಣು ಅಥವಾ ಒಬ್ಬ ಗಂಡಿಗಿಂತ ಹಲವು ಹೆಣ್ಣು ಗಂಡುಗಳ ಜತೆ ಬೆರೆಯುವುದು ಆಧುನಿಕ ಜೀವನ ಶೈಲಿಯಾಗಿ ಬದಲಾಗುತ್ತಿದೆ. ಈ ಬದಲಾವಣೆ ಬಯಸುವ (Arun jolada kudligi) ಆಧುನಿಕ ಬದುಕಲ್ಲಿ ಎಲ್ಲಾ ಉಪಭೋಗಿ ವಸ್ತು ಸಂಗತಿಗಳನ್ನು ಅಲ್ಪಕಾಲ ಮಾತ್ರ ಬಳಸುತ್ತಾ ಸದಾ Update Version ಬಳಕೆಯೇ ಹೊಸ ಬಗೆಯ ಜೀವನ ಪದ್ದತಿ ಎನ್ನುವಂತಾದಾಗಿದೆ. ಅಂದರೆ ದಿನ ದಿನವೂ ಹಳೆಯದರ ಸಂಬಂಧ ಕಡಿದುಕೊಂಡು ಹೊಸತಾಗುವುದು.

ಪ್ರೀತಿ ಸ್ನೇಹ ನಂಬಿಕೆ ವಿಶ್ವಾಸದ ನೆಲೆಯಲ್ಲಿ ಒಂದಷ್ಟು ಸಂಬಂಧಗಳು ಉಳಿಯಬಹುದಾದರೂ..ಇನ್ನುಮುಂದೆ ದೀರ್ಘಕಾಲೀನ ಬಾಳಿಕೆ ಬರುವ ವಸ್ತು ಸಂಗತಿಗಳಾಗಲಿ, ಮನುಷ್ಯ ಸಂಬಂಧಗಳಾಗಲಿ ಬಹುಕಾಲ ಉಳಿಯಲು ಸಾಧ್ಯವಿಲ್ಲ. ಎಲ್ಲವೂ ಅಲ್ಪಕಾಲೀನ ಸುಖಗಳಾಗಿ ಮಾರ್ಪಡುತ್ತವೆ. ಈ ಹೊತ್ತು ಹಳತು-ಹೊಸತಿನ ಪರಿಕಲ್ಪನೆಗಳನ್ನು ಮಾರುಕಟ್ಟೆಯ ಜಗತ್ತು ಪೂರ್ಣ ಬದಲಿಸಿದೆ.

ಅಲ್ಪಕಾಲೀನ ಬಳಕೆಯ ಜತೆ ಇದೀಗ ಮಾರುಕಟ್ಟೆ ‘Use and Through’ ಬಳಸು ಬಿಸಾಡು ಎನ್ನುವ ಹಂತಕ್ಕೆ ಬಂದಿದೆ. ಅಂದರೆ ಬಳಸಿ ಬಿಸಾಡಿದರೆ ಮಾರುಕಟ್ಟೆಯ ಉತ್ಪಾದಿತ ವಸ್ತುಗಳಿಗೆ ಬೇಡಿಕೆ ಹೆಚ್ಚಾಗುತ್ತದೆ. ಬದುಕಿನಲ್ಲಿ ಅಗತ್ಯಕ್ಕೆ ಬೇಕಾಗುವ ಊಟ ಉಡುಪು ವಸತಿಯನ್ನು ಮೊದಲುಗೊಂಡು ದಿನ ಬಳಕೆಯ ಎಲ್ಲ ಬಗೆಯ ವಸ್ತುಗಳಲ್ಲಿಯೂ ಬಹು ಆಯ್ಕೆಯ ಮುಕ್ತ ಸ್ವಾತಂತ್ರ್ಯ ನೀಡಿ ಹೆಣ್ಣು-ಗಂಡಿನ ವಿಷಯದಲ್ಲಿ ಮಾತ್ರ ಏಕೈಕ ಆಯ್ಕೆಗೆ ಸೀಮಿತಗೊಳಿಸಿದರೆ ಇದು ಹೇಗೆ ಬಹುಕಾಲ ಬಾಳಲು ಸಾಧ್ಯ?

ಇದನ್ನೂ ಓದಿ: Renukaswamy murder case accused Anukumar: ಅಮ್ಮನ ಕಣ್ಣಿರು ಒರೆಸಿದ ಆರೋಪಿ ಅನು | ತಂದೆ ಅಂತ್ಯ ಸಂಸ್ಕಾರ ಮುಗಿಸಿದ ಆರೋಪಿ ಅನುಕುಮಾರ್

ಹೀಗಿರುವಾಗ ದೀರ್ಘಕಾಲೀನ ಬಾಳಿಕೆಗೆಂದು ಮಾಡಿದ ಮದುವೆಗಳು ಅಲ್ಪಕಾಲೀನ ಆಯುಷ್ಯ ಪಡೆಯುತ್ತಿವೆ. ಈ ಎಲ್ಲಾ ಕಾರಣಗಳಿಂದಾಗಿ
ಸಹಜವಾಗಿ ಡೈವೋರ್ಸ್ ಗಳು ಏರಿಕೆ ಕ್ರಮದಲ್ಲಿ ಹೆಚ್ಚುತ್ತವೆ. ಇದು ಅಪರಾಧವೂ ಅಲ್ಲ ಅನೈತಿಕವೂ ಅಲ್ಲ. ಕಾಲದ ಪಲ್ಲಟವಷ್ಟೆ. ಅಚ್ಚರಿಯಾಗಲಿ ವಿಶೇಷವಾಗಲಿ ಏನೂ ಇಲ್ಲ. ನಮ್ಮಗಳ ಹಿಪಾಕ್ರಸಿಯನ್ನು ಬದಿಗೆ ಸರಿಸಿ
ಈ ಬದಲಾವಣೆಯನ್ನು ಮುಕ್ತವಾಗಿ ಸ್ವಾಗತಿಸಬೇಕಷ್ಟೆ.

*ಅಜೋ*

You Might Also Like

Grihalakshmi | ಬದುಕಿಗೆ ಆಧಾರವಾದ ಗೃಹಲಕ್ಷ್ಮಿ | ಕೋಟೆ ನಾಡಿನಲ್ಲಿ 1246 ಕೋಟಿ ಹಣ ಪಾವತಿ

Ugadi Festival | ಯುಗಾದಿ ಹಬ್ಬ ಆರಂಭ, ಬೆಲೆ ಏರಿಕೆಯಲ್ಲೂ ಕುಗ್ಗದ ಹಬ್ಬದ ಸಂಭ್ರಮ

Challakere | ಶಾಸಕ ಟಿ.ರಘುಮೂರ್ತಿ ಪರಿಶ್ರಮಕ್ಕೆ 261 ಹಳ್ಳಿಗಳು ಸೇರಿ ಎಲ್ಲೂ ನೀರಿನ ಹಾಹಾಕಾರವಿಲ್ಲ

Sri Gaviranganatha | ಹೊಸದುರ್ಗಕ್ಕೆ ‘ ಶ್ರೀ ಗವಿರಂಗನಾಥನೇ’ ಸಿರಿವಂತ

Hosadurga | ಯಮಧೂತರಂತೆ ಬಲಿಗಾಗಿ ಕಾಯುತ್ತಿರುವ ಅವೈಜ್ಙಾನಿಕ ಡಿವೈಡರ್ ಗಳು

TAGGED:Arun jolada kudligiಅರುಣ್ ಜೋಳದ ಕೂಡ್ಲಿಗಿ
Share This Article
Facebook Twitter Whatsapp Whatsapp Telegram Email Print
ಈ ಮೇಲಿನ ಸುದ್ದಿ, ಲೇಖನದ ಬಗ್ಗೆ ನಿಮ್ಮ ಅನಿಸಿಕೆ ಏನು?
Love0
Sad0
Happy0
Sleepy0
Angry0
Dead0
Wink0
Previous Article Renukaswamy murder case accused Anukumar: ಅಮ್ಮನ ಕಣ್ಣಿರು ಒರೆಸಿದ ಆರೋಪಿ ಅನು | ತಂದೆ ಅಂತ್ಯ ಸಂಸ್ಕಾರ ಮುಗಿಸಿದ ಆರೋಪಿ ಅನುಕುಮಾರ್
Next Article Renukaswamy: ರೇಣುಕಾಸ್ವಾಮಿ ಕುಟುಂಬ ಭೇಟಿ ಮಾಡಿ ಧೈರ್ಯ ತುಂಬಿದ ಉಮೇಶ್ ಕಾರಜೋಳ
Leave a comment

Leave a Reply Cancel reply

Your email address will not be published. Required fields are marked *

Stay Connected

TelegramFollow

Latest News

Dina Bhavishya | ದಿನ ಭವಿಷ್ಯ, ಇವತ್ತು ಯಾವ ರಾಶಿಗೆ ಶುಭ?
ದಿನ ಭವಿಷ್ಯ
Gold Rate | ಬಂಗಾರದ ಬೆಲೆಯಲ್ಲಿ ಇಳಿಕೆ
ಇಂದಿನ ಸುದ್ದಿ
Transfer | ಜಿಲ್ಲಾ ಬಿಸಿಎಂ ಅಧಿಕಾರಿ ಆರ್.ಸುಬ್ರಾನಾಯಕ್ ವರ್ಗಾವಣೆ, ನೂತನ ಅಧಿಕಾರಿ ಅಧಿಕಾರ ಸ್ವೀಕಾರ
ಇಂದಿನ ಸುದ್ದಿ
POWER CUT | ಇಂದು ಬೆಳಗ್ಗೆಯಿಂದ ಸಂಜೆವರೆಗೆ ಕರೆಂಟ್ ಇರಲ್ಲ
ಇಂದಿನ ಸುದ್ದಿ

Kannada News (ಕನ್ನಡ ಸುದ್ದಿ): Get the latest updates of karnataka news, world news, india news, political News and celebrity Kannada news and more on Nammajana (nammajana.com).

Sign Up for Our Newsletter

Subscribe to our newsletter to get our newest articles instantly!

Namma JanaNamma Jana
© 2025 NammaJanna. Kannada News Portal. All Rights Reserved.
adbanner
AdBlock Detected
Our site is an advertising supported site. Please whitelist to support our site.
Okay, I'll Whitelist
Welcome Back!

Sign in to your account

Lost your password?