Namma JanaNamma JanaNamma Jana
  • ಇಂದಿನ ಸುದ್ದಿ
  • ರಾಜಕೀಯ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಕ್ರೀಡೆ
  • ಆರೋಗ್ಯ
  • ದಿನ ಭವಿಷ್ಯ
Reading: Sanehalli: ಮಠಾಧೀಶರಿಗಾಗಿ ಜುಲೈ 1 ರಿಂದ ವಚನ ಕಮ್ಮಟ:
Share
Notification Show More
Font ResizerAa
Font ResizerAa
Namma JanaNamma Jana
  • ಇಂದಿನ ಸುದ್ದಿ
  • ರಾಜಕೀಯ
  • ವಿಶೇಷ ಸುದ್ದಿ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಆರೋಗ್ಯ
  • ಕ್ರೀಡೆ
  • ದಿನ ಭವಿಷ್ಯ
  • ರಾಜಕೀಯ
Search
  • ಇಂದಿನ ಸುದ್ದಿ
  • ರಾಜಕೀಯ
  • ವಿಶೇಷ ಸುದ್ದಿ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಆರೋಗ್ಯ
  • ಕ್ರೀಡೆ
  • ದಿನ ಭವಿಷ್ಯ
  • ರಾಜಕೀಯ
Have an existing account? Sign In
Follow US
  • Advertise
© 2024 Namma Janna. Kannada News Portal. All Rights Reserved.
Namma Jana > Blog > ಇಂದಿನ ಸುದ್ದಿ > Sanehalli: ಮಠಾಧೀಶರಿಗಾಗಿ ಜುಲೈ 1 ರಿಂದ ವಚನ ಕಮ್ಮಟ:
ಇಂದಿನ ಸುದ್ದಿ

Sanehalli: ಮಠಾಧೀಶರಿಗಾಗಿ ಜುಲೈ 1 ರಿಂದ ವಚನ ಕಮ್ಮಟ:

Editor Nammajana
Last updated: 19 June 2024 03:37
By Editor Nammajana 2 Min Read
Share
SHARE
Chitradurga news|nammajana.com|19-6-2024
ನಮ್ಮ ಜನ.ಕಾಂ, ಹೊಸದುರ್ಗ: ಧರ್ಮ, ಸಮಾಜ, ಮಠ, ಸಂಸ್ಕ್ರತಿ ಕುರಿತಂತೆ ಉಪನ್ಯಾಸ ಹಾಗೂ ಸಂವಾದ ಕಾರ್ಯಕ್ರಮವನ್ನು ಮಠಾಧೀಶರು ಹಾಗೂ ಅವರ ಉತ್ತರಾಧಿಕಾರಿಗಳಿಗೆ ಜುಲೈ 1 ರಿಂದ 5 ವರೆಗೆ ಸಾಣೇಹಳ್ಳಿಯ ಎಸ್.ಎಸ್. ರಂಗಮಂದಿರದಲ್ಲಿ ‘ವಚನ ಕಮ್ಮಟ’ ನಡೆಯಲಿದೆ ಎಂದು ಸಾಣೇಹಳ್ಳಿ (Sanehalli) ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಮಠಗಳು ಮಾರ್ಗದರ್ಶನ ಮಾಡುವ ಕೇಂದ್ರಗಳಾಗಬೇಕು. ಆದರೆ ಪ್ರಸ್ತುತ ಹಲವು ಮಠಗಳು ಅಜ್ಞಾನ, ಮೌಡ್ಯ, ಕಂದಾಚಾರಗಳಿಂದ ತುಂಬಿ ತುಳುಕುತ್ತಿರುವುದನ್ನು ಕೆಲವರು ಕಂಡಿದ್ದಾರೆ. ಕೆಲ ಬಸವ ಪರಂಪರೆ ಮಠಗಳು ಬಸವ ತತ್ವ ಹೇಳುತ್ತವೆ, ಆದರೆ ಅದಕ್ಕೆ ವಿರುದ್ಧದ ಆಚರಣೆ ನಡೆಯುತ್ತಿದೆ. ಹೀಗಾಗಿ ಸ್ವಾಮೀಜಿಗಳಿಗೆ ಬಸವ ತತ್ವ ಪ್ರಜ್ಞೆ ಮೂಡಿಸಿದರೆ, ಅದರ ಮೂಲಕ ಸಮಾಜದ ಪರಿವರ್ತನೆಯಾಗಬಹುದು ಎಂಬ ಉದ್ದೇಶದಿಂದ ಐದು ದಿನಗಳ ಕಾಲ ವಚನ ಕಮ್ಮಟ ಕಾರ್ಯಕ್ರಮ ಆಯೋಜಿಸಲಾಗಿದೆ.
ಇದನ್ನೂ ಓದಿ: chitradurga Today latest news: ರೇಣುಕಾಸ್ವಾಮಿ ಕುಟುಂಬಕ್ಕೆ ಬಿಜೆಪಿ ಪಕ್ಷದಿಂದ 2 ಲಕ್ಷ ಪರಿಹಾರ | ಬಿ.ವೈ.ವಿಜಯೇಂದ್ರ
ವಚನ ಕಮ್ಮಟ (Sanehalli) ಸಂವಾದದ ರೂಪದಲ್ಲಿರುತ್ತದೆ. ಉಪನ್ಯಾಸಕ ವಿಷಯದ ಬಗ್ಗೆ ಮಾಹಿತಿ ನೀಡುವರು. ಚರ್ಚೆ ಮತ್ತು ಸಂವಾದಕ್ಕೆ ಹೆಚ್ಚಿನ ಪ್ರಾಮುಖ್ಯತೆಯಿದೆ. ಮಠಾಧೀಪತಿಗಳ ಆತ್ಮಾವಲೋಕನಕ್ಕೆ ಇದೊಂದು ಅವಕಾಶ. ಸುಮಾರು 50 ಕ್ಕೂ ಅಧಿಕ ಮಠಾಧೀಶರು ಭಾಗವಹಿಸುವ ನಿರೀಕ್ಷೆಯಿದೆ. ಈ ವಿನೂತನ ಪ್ರಯತ್ನ ಯಶಸ್ವಿಯಾದರೆ, ಯುವ ಪೀಳಿಗೆಗೂ ಈ ಕಮ್ಮಟ ಆಯೋಜಿಸುವ ಉದ್ದೇಶವಿದೆ. ನಿತ್ಯ ಸಂಜೆ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸಾರ್ವಜನಿಕರಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ಅವರು ತಿಳಿಸಿದರು.
ಯೋಗಾಸನ, ಶಿವಧ್ವಜಾರೋಹಣ, ಶಿವಮಂತ್ರ ಲೇಖನ, ವಚನಗೀತೆ, ಇಷ್ಟಲಿಂಗ ಪೂಜೆ, ವಿವಿಧ ವಿಷಯಗಳ ಮೇಲೆ ಗೋಷ್ಠಿ ಮತ್ತು ಸಂವಾದಗಳು, ಪೂಜ್ಯರ ಆರ್ಶೀವಚನ, ವಚನ ನೃತ್ಯ ರೂಪಕ ಹಾಗೂ ಶಿವಕುಮಾರ ಕಲಾಸಂಘದ ಹಿರಿಯ ಕಲಾವಿದರಿಂದ ಉರಿಲಿಂಗ ಪೆದ್ದಿ, ಮರಣವೇ ಮಹಾನವಮಿ, ಕ್ರಾಂತಿಗಂಗೋತ್ರಿ ಅಕ್ಕ ನಾಗಲಾಂಬಿಕೆ ನಾಟಕಗಳು ಪ್ರದರ್ಶನಗೊಳ್ಳಲಿವೆ ಎಂದರು.
ಇದನ್ನೂ ಓದಿ: Kavadigara Hatti News: 3.07 ಕೋಟಿ ರೂ ವೆಚ್ಚದಲ್ಲಿ ಕವಾಡಿಗರ ಹಟ್ಟಿ ಅಭಿವೃದ್ದಿ: ರೇಣುಕಾ ಸ್ಪಷ್ಟನೆ

ಚಲನಚಿತ್ರದ ನಟ ನಟಿಯರನ್ನು ಅಭಿಮಾನಿಗಳು (Sanehalli) ದೇವರ ರೀತಿಯಲ್ಲಿ ಭಾವಿಸುತ್ತಾರೆ. ಹಿಂದಿನ ನಟ ನಟಿಯರು ಈ ಭಾವನೆಯನ್ನು ಗಳಿಸಿ, ಉಳಿಸಿಕೊಂಡಿದ್ದರು. ಆದರೆ ಪ್ರಸ್ತುತ ಕೆಲ ನಟ ನಟಿಯರು ದೆವ್ವದ ರೀತಿಯಲ್ಲಿ ವರ್ತಿಸುತ್ತಿದ್ದಾರೆ ಕಾರಣ ಅವರಿಗೆ ಸಾಕಷ್ಟು ಸಂಪನ್ಮೂಲ ದೊರೆಯುತ್ತಿದೆ. ಗುಂಪುಗಾರಿಕೆ ಅಧಿಕವಾಗಿದೆ. ತುಂಬಾ ಜವಾಬ್ದಾರಿ ಇರೋ ಅಭಿಮಾನಿಗಳಿಗಿಂತ ಹುಚ್ಚೆದ್ದು ಕುಣಿಯೋ ಅಭಿಮಾನಿಗಳು ಹೆಚ್ಚಾಗಿದ್ದಾರೆ.

You Might Also Like

Dina Bhavishya | ದಿನ ಭವಿಷ್ಯ, ಇವತ್ತು ಯಾವ ರಾಶಿಗೆ ಶುಭ?

Gold Rate | ಬಂಗಾರದ ಬೆಲೆಯಲ್ಲಿ ಇಳಿಕೆ

Transfer | ಜಿಲ್ಲಾ ಬಿಸಿಎಂ ಅಧಿಕಾರಿ ಆರ್.ಸುಬ್ರಾನಾಯಕ್ ವರ್ಗಾವಣೆ, ನೂತನ ಅಧಿಕಾರಿ ಅಧಿಕಾರ ಸ್ವೀಕಾರ

POWER CUT | ಇಂದು ಬೆಳಗ್ಗೆಯಿಂದ ಸಂಜೆವರೆಗೆ ಕರೆಂಟ್ ಇರಲ್ಲ

Dina Bhavishya | ದಿನ ಭವಿಷ್ಯ, ಇವತ್ತು ಯಾವ್ಯಾವ ರಾಶಿಗೆ ಶುಭ ಲಾಭ, ನಷ್ಟ ನೋಡಿ

TAGGED:Chitradurga Newsfrom 1st July.ಸಾಣೇಹಳ್ಳಿHosadurgaKannada Newskannada suddiNammajana.comSanehallito the AbbotVachana Kammattaಕನ್ನಡ ನ್ಯೂಸ್ಕನ್ನಡ ಸುದ್ದಿಚಿತ್ರದುರ್ಗ ನ್ಯೂಸ್ಚಿತ್ರದುರ್ಗ ಸುದ್ದಿಜುಲೈ 1 ರಿಂದ ವಚನ ಕಮ್ಮಟನಮ್ಮಜನ.ಕಾಂಮಠಾಧೀಶರಿಗೆಹೊಸದುರ್ಗ
Share This Article
Facebook Twitter Whatsapp Whatsapp Telegram Email Print
ಈ ಮೇಲಿನ ಸುದ್ದಿ, ಲೇಖನದ ಬಗ್ಗೆ ನಿಮ್ಮ ಅನಿಸಿಕೆ ಏನು?
Love0
Sad0
Happy0
Sleepy0
Angry0
Dead0
Wink0
Previous Article Dina Bhavishya: ಇಂದಿನ‌ ದಿನ ಭವಿಷ್ಯ 19-6-2024
Next Article Halurameshwar: ಹಾಲುರಾಮೇಶ್ವರ ಕ್ಷೇತ್ರದಲ್ಲಿ ಹುಂಡಿ ಹಣ ಕಳವು, ಅರ್ಚಕರ ಏನೇಳ್ತರೇ?
Leave a comment

Leave a Reply Cancel reply

Your email address will not be published. Required fields are marked *

Stay Connected

TelegramFollow

Latest News

Gold Rate | ಬಂಗಾರದ ಬೆಲೆಯಲ್ಲಿ ಏರಿಕೆ
ಇಂದಿನ ಸುದ್ದಿ
Dina Bhavishya | ದಿನ ಭವಿಷ್ಯ, ಇವತ್ತು ಯಾವ್ಯಾವ ರಾಶಿಗೆ ಶುಭ?
ದಿನ ಭವಿಷ್ಯ
POWER CUT | ಇಂದಿನಿಂದ ಎರಡು ದಿನ ಬೆಳಗ್ಗೆಯಿಂದ ಸಂಜೆವರೆಗೂ ಕರೆಂಟ್ ಇರಲ್ಲ
ಇಂದಿನ ಸುದ್ದಿ
Adike rate | ಅಡಿಕೆ ಬೆಲೆಯಲ್ಲಿ ಇಳಿಕೆ
ಅಡಿಕೆ ಧಾರಣೆ

Kannada News (ಕನ್ನಡ ಸುದ್ದಿ): Get the latest updates of karnataka news, world news, india news, political News and celebrity Kannada news and more on Nammajana (nammajana.com).

Sign Up for Our Newsletter

Subscribe to our newsletter to get our newest articles instantly!

Namma JanaNamma Jana
© 2025 NammaJanna. Kannada News Portal. All Rights Reserved.
adbanner
AdBlock Detected
Our site is an advertising supported site. Please whitelist to support our site.
Okay, I'll Whitelist
Welcome Back!

Sign in to your account

Lost your password?