Namma JanaNamma JanaNamma Jana
  • ಇಂದಿನ ಸುದ್ದಿ
  • ರಾಜಕೀಯ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಕ್ರೀಡೆ
  • ಆರೋಗ್ಯ
  • ದಿನ ಭವಿಷ್ಯ
Reading: Panditaradhya Shri: ಪಂಡಿತರಾಧ್ಯ ಶ್ರೀಗಳ ದಿವ್ಯ ಸಾನಿಧ್ಯದಲ್ಲಿ ಸ್ವಾಮೀಜಿಗಳಿಗೆ ಜುಲೈ 1 ರಿಂದ 5 ರವರೆಗೆ ವಚನ ಕಮ್ಮಟ
Share
Notification Show More
Font ResizerAa
Font ResizerAa
Namma JanaNamma Jana
  • ಇಂದಿನ ಸುದ್ದಿ
  • ರಾಜಕೀಯ
  • ವಿಶೇಷ ಸುದ್ದಿ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಆರೋಗ್ಯ
  • ಕ್ರೀಡೆ
  • ದಿನ ಭವಿಷ್ಯ
  • ರಾಜಕೀಯ
Search
  • ಇಂದಿನ ಸುದ್ದಿ
  • ರಾಜಕೀಯ
  • ವಿಶೇಷ ಸುದ್ದಿ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಆರೋಗ್ಯ
  • ಕ್ರೀಡೆ
  • ದಿನ ಭವಿಷ್ಯ
  • ರಾಜಕೀಯ
Have an existing account? Sign In
Follow US
  • Advertise
© 2024 Namma Janna. Kannada News Portal. All Rights Reserved.
Namma Jana > Blog > ಇಂದಿನ ಸುದ್ದಿ > Panditaradhya Shri: ಪಂಡಿತರಾಧ್ಯ ಶ್ರೀಗಳ ದಿವ್ಯ ಸಾನಿಧ್ಯದಲ್ಲಿ ಸ್ವಾಮೀಜಿಗಳಿಗೆ ಜುಲೈ 1 ರಿಂದ 5 ರವರೆಗೆ ವಚನ ಕಮ್ಮಟ
ಇಂದಿನ ಸುದ್ದಿ

Panditaradhya Shri: ಪಂಡಿತರಾಧ್ಯ ಶ್ರೀಗಳ ದಿವ್ಯ ಸಾನಿಧ್ಯದಲ್ಲಿ ಸ್ವಾಮೀಜಿಗಳಿಗೆ ಜುಲೈ 1 ರಿಂದ 5 ರವರೆಗೆ ವಚನ ಕಮ್ಮಟ

Editor Nammajana
Last updated: 20 June 2024 9:08 AM
By Editor Nammajana 5 Min Read
Share
SHARE
Telegram Group Join Now
WhatsApp Group Join Now

Chitradurga news|nammajana.com|20-6-2024

ನಮ್ಮಜನ.ಕಾಂ, ಹೊಸದುರ್ಗ: ತಾಲೂಕಿನ ಸಾಣೆಹಳ್ಳಿಯ ರಂಗ ಜಂಗಮ ರಂದು ಸಾಣೇಹಳ್ಳಿಯ ಶ್ರೀಮಠದ ಶ್ರೀ ಶಾಮನೂರು ಶಿವಶಂಕರಪ್ಪ ಹೊರಾಂಗಣ ರಂಗಮಂದಿರದಲ್ಲಿ ರಾಜ್ಯದ ಬಸವ ತತ್ವ ಪರಂಪರೆಯ ಸುಮಾರು 50 ಕ್ಕೂ ಹೆಚ್ಚು ಮಠಾಧೀಶರಿಗೆ ವಚನ ಕಮ್ಮಟ ತರಬೇತಿ ಕಾರ್ಯಗಾರವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಾಣೆಹಳ್ಳಿಯ ಪಂಡಿತರಾಧ್ಯ  ಶ್ರೀಗಳು (Panditaradhya Shri)ತಿಳಿಸಿದರು.

ಸಾಣೆಹಳ್ಳಿಯಲ್ಲಿ ಕಳೆದ 2024 ನೇ 01 ರಂದು 30 ವಿದ್ವಾಂಸರ ಲೇಖನಗಳ ಬಹುಮಹತ್ವದ `ವಚನ ಸಂವಿಧಾನ’ ಕೃತಿಯ ಲೋಕಾರ್ಪಣೆ ಮತ್ತು ಗುರು-ಜಗದ್ಗುರುಗಳ ಜೊತೆಗೆ ಅನುಸಂಧಾನ ನಡೆಯಿತು. ಆಗ ವಚನ ಸಂವಿಧಾನ’ದ ಪರಿಚಯ ನಮ್ಮ ಮಠಾಧೀಶರಿಗೆ ಆಗಬೇಕಾಗಿದೆ. ಅದಕ್ಕಾಗಿ ವಚನ ಕಮ್ಮಟದ ಅಗತ್ಯವಿದೆ ಎಂದು ಮೈಸೂರಿನ ಡಾ. ಶ್ರೀ ಶರಶ್ಚಂದ್ರ ಸ್ವಾಮೀಜಿಯವರು ಸಲಹೆ ನೀಡಿದ ಹಿನ್ನೆಲಯಲ್ಲಿ. ಕರ್ನಾಟಕದಲ್ಲಿ ಬಸವಪರಂಪರೆಯ ಮಠಗಳು ಸಾಕಷ್ಟಿವೆ. ಅಂಥ ಎಷ್ಟೋ ಮಠಗಳಲ್ಲಿ ಬಸವಪರಂಪರೆಗೆ ಪೂರಕವಲ್ಲದ ಹೋಮಾದಿ ಕ್ರಿಯೆಗಳು, ವೇದಾಧ್ಯಯನ, ಜಾತೀಯತೆ, ಲಿಂಗ ಅಸಮಾನತೆ, ಬಹುದೇವತಾರಾಧನೆ, ಮೂಢಾಚರಣೆ ಇತ್ಯಾದಿ ನಡೆಯುತ್ತಲಿವೆ. ಈ ನೆಲೆಯಲ್ಲಿ ಆಸಕ್ತ ಮಠಾಧೀಶರಿಗೆ (ಯುವ ಮಠಾಧೀಶರನ್ನೂ ಒಳಗೊಂಡಂತೆ) ಮತ್ತು ಸ್ವಾಮಿಗಳಾಗಿ ಬರುವವರಿಗೆ ಶರಣ ಪರಂಪರೆಯ ಅಲ್ಪ ಪರಿಚಯವನ್ನಾದರೂ ಮಾಡಿಕೊಡಬೇಕೆನ್ನುವುದು ಹಲವು ಹಿರಿಯ ಮಠಾಧೀಶರ ಅಭಿಪ್ರಾಯವಾಗಿತ್ತು.

 ಜುಲೈ 01 ರಿಂದ 05 ರವರೆಗೆ ಸಾಣೇಹಳ್ಳಿಯಲ್ಲಿ ವಚನ ಕಮ್ಮಟ ವನ್ನು ನಡೆಸಲು ಸಾಣೆಹಳ್ಳಿ ಶ್ರೀಮಠ ಸಿದ್ದ.

ಶಿಬಿರದಲ್ಲಿ ಮುಖ್ಯವಾಗಿ ಪ್ರತಿದಿನದ ಯೋಗಾಸನ: ಬೆಳಗ್ಗೆ 06 ರಿಂದ ಶ್ರೀ ಮ ನಿ ಪ್ರ ಮಹಾಂತಸ್ವಾಮಿಗಳವರು, ಸಂಸ್ಥಾನ ಮಠ, ಜಡೆ ಇವರು ನಡೆಸಿಕೊಡುವರು

ನಾಗರಾಜ್, ದಾಕ್ಷಾಯಣಿ, ಶರಣ್ ಬಳಗದವರಿಂದ ವಚನಗೀತೆ ನೆರವೇರುವುದು. ಪ್ರತಿದಿನ ಶಿಬಿರಾರ್ಥಿಗಳಿಂದ ಇಷ್ಟಲಿಂಗ ಪೂಜೆ ಇರುವುದು.

ಜುಲೈ 01 ಬೆಳಗ್ಗೆ 08 ಗಂಟಗೆ ಶಿವಧ್ವಜಾರೋಹಣವನ್ನು ಪಾಂಡೋಮಟ್ಟಿಯ ಶ್ರೀ ಗುರುಬಸವ ಮಹಾಸ್ವಾ”ಗಳವರು ನೆರವೇರಿಸುವರು. ನಂತರ ಶಿವಮಂತ್ರಲೇಖನ ಇರುವುದು.

01/07/2024 ಸೋಮವಾರ ಬೆಳಗ್ಗೆ 11 ಗಂಟೆಗೆ ವಚನ ಕಮ್ಮಟದ ಉದ್ಘಾಟನೆಯ ಸಾನಿಧ್ಯವನ್ನು ಬಾಲ್ಕಿಯ ಹಿರೇಮಠದ ನಾಡೋಜ, ಡಾ. ಶ್ರೀ ಬಸವಲಿಂಗ ಪಟ್ಟದ್ದೇವರು ಹಾಗೂ ಶಿವಮೊಗ್ಗದ ಬೆಕ್ಕಿನಕಲ್ಮಠ ಶ್ರೀ ಮ ನಿ ಜಗದ್ಗುರು ಡಾ. ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿಗಳು ವಹಿಸುವರು. ಶರಣ ತತ್ವ ಚಿಂತಕ ಡಾ. ಬಸವರಾಜ ಸಾದರ ಪ್ರಾಸ್ತಾವಿಕವಾಗಿ ಮಾತನಾಡುವರು ಮಧ್ಯಾಹ್ನ ನಡೆಯುವ ಗೋಷ್ಠಿ ವಿವರ.

ಗೋಷ್ಠಿ: 01– ವಚನಗಳು ಮತ್ತು ವಚನ ಧರ್ಮದ ಆಶಯಗಳು’ ವಿಷಯ ಕುರಿತಂತೆ ಚಿಂತಕ ಶ್ರೀ ಎಸ್ ಜಿ ಸಿದ್ಧರಾಮಯ್ಯ ಉಪನ್ಯಾಸ ನೀಡುವರು. ಅಪರಾಹ್ನ ೩ ರಿಂದ ೫ ರವರೆಗೆ ನಡೆಯುವ ಗೋಷ್ಠಿ: 02- `ವಿವಿಧ ಧರ್ಮಗಳ ಸಂಕ್ಷಿಪ್ತ ಪರಿಚಯ’ ಕುರಿತಂತೆ: ಜಾಗತಿಕ ಲಿಂಗಾಯತ ಮಹಾಸಭಾ ಪ್ರಧಾನ ಕಾರ್ಯದರ್ಶಿ. ಡಾ. ಎಸ್ ಎಂ ಜಾಮದಾರ ಮಾತನಾಡುವರು. ಸಂಜೆ 05 ರಿಂದ ೬ರವೆಗೆರೆ ನಡೆಯುವ ಗೋಷ್ಠಿ: 03 – `ಸ್ಥಾವರ-ಜಂಗಮ’ ವಿಷಯ ಕುರಿತಂತೆ `ಹೊಸತು’ ಪತ್ರಿಕೆಯ ಸಂಪಾದಕರಾದ, ಡಾ. ಸಿದ್ಧನಗೌಡ ಪಾಟೀಲರು ಉಪನ್ಯಾಸ ನೀಡುವರು. ಗೋಷ್ಠಿ: ೪ – ರಾತ್ರಿ ೭ ರಿಂದ ೮-೩೦ ರವರೆಗೆ `ಮೂಢಾಚರಣೆಗಳು’ ವಿಷಯ ಕುರಿತಂತೆ ಶಿವನಕೆರೆ ಬಸವಲಿಂಗಪ್ಪ ಮಾತನಾಡುವರು. ಸಾಣೇಹಳ್ಳಿಯ ಆರ್ ಅದಿತಿ, ವಚನ ನೃತ್ಯ ನಡೆಸಿಕೊಡುವರು.

02/07/2024 ಮಂಗಳವಾರ ಬೆಳಗ್ಗೆ 07 ಕ್ಕೆ ಶಿವಮೊಗ್ಗದ ಬಸವಕೇಂದ್ರ, ಡಾ. ಬಸವ ಮರುಳಸಿದ್ಧ ಸ್ವಾಮಿಗಳು ಇಷ್ಟಲಿಂಗ ಪೂಜಾ ಪ್ರಾತ್ಯಕ್ಷಿಕೆಯನ್ನು ನಡೆಸಿಕೊಡುವರು. ಗೋಷ್ಠಿ: 05- ಬೆಳಗ್ಗೆ 09-30 ರಿಂದ `ಪಂಚಾಚಾರ’ ವಿಷಯ ಕುರಿತಂತೆ ಧಾರವಾಡದ ಡಾ. ವೀರಣ್ಣ ರಾಜೂರ ಮಾತನಾಡುವರು.

ಗೋಷ್ಠಿ: 06 – ಬೆಳಗ್ಗೆ 11 ರಿಂದ `ಅಷ್ಟಾವರಣ’ ಕುರಿತಂತೆ ಡಾ. ಬಸವರಾಜ ಸಬರದ ಮಾತನಾಡುವರು. ಗೋಷ್ಠಿ: ೭ – ಮಧ್ಯಾಹ್ನ ೧ ರಿಂದ ೨ರವರೆಗೆ `ಅನುಭವ ಮಂಟಪ’ ಕುರಿತಂತೆ ಡಾ. ವೀರಣ್ಣ ರಾಜೂರ ಉಪನ್ಯಾಸ ನೀಡುವರು. ಗೋಷ್ಠಿ: ೮ – ಅಪರಾಹ್ನ ೩ ರಿಂದ ೫ರವರೆಗೆ `ಷಟ್‌ಸ್ಥಲ’ ಕುರಿತಂತೆ ಪಾಂಡೋಮಟ್ಟಿಯ ಡಾ. ಶ್ರೀ ಗುರುಬಸವ ಮಹಾಸ್ವಾಮಿಗಳು ಉಪನ್ಯಾಸ ನೀಡುವರು. ಗೋಷ್ಠಿ ೯ – ಸಂಜೆ ೫ ರಿಂದ ೬ರವರೆಗೆ ತಾತ್ವಿಕತೆ ಮತ್ತು ಸಂಘಟನೆ’ ಕುರಿತಂತೆ ಬೈಲೂರಿನ ಶ್ರೀ ನಿಜಗುಣಾನಂದ ಸ್ವಾಮಿಗಳು ಉಪನ್ಯಾಸ ನೀಡುವರು.
ನಂತರ ರಾತ್ರಿ 07 ರಿಂದ 08-30 ಮಹಾದೇವ ಬಣಕಾರ ರಚಿಸಿದ ವೈಡಿ ಬದಾಮಿ ನಿರ್ದೇಶನದ ‘ಉರಿಲಿಂಗ ಪೆದ್ದಿ’ ನಾಟಕವನ್ನು ಶಿವಕುಮಾರ ಕಲಾಸಂಘದ ಕಲಾವಿದರ ಅಭಿನಯಿಸುವರು.

03/07/2024 ಬುಧವಾರ ಬೆಳಗ್ಗೆ ೯
09-30 ರಿಂದ `ಕರಣ ಹಸಿಗೆ’ ವಿಷಯ ಕುರಿತಂತೆ ಮೈಸೂರಿನ ಡಾ. ಶ್ರೀ ಶರಶ್ಚಂದ್ರ ಸ್ವಾಮಿಗಳು ಮಾತನಾಡುವರು. ಗೋಷ್ಠಿ: ೧೧ – ಬೆಳಗ್ಗೆ ೧೧-೩೦ ರಿಂದ ಮಧ್ಯಾಹ್ನ ೧-೩೦ರವರೆಗೆ `ವಚನಕಾರರ ನೆಲೆಯಲ್ಲಿ ಪಾಪ-ಪುಣ್ಯ, ಸ್ವರ್ಗ-ನರಕ’ ವಿಷಯ ಕುರಿತಂತೆ ಚಿಂತಕಿ ಡಾ, ಎಂ ಎಸ್ ಆಶಾದೇವಿ ಉಪನ್ಯಾಸ ನೀಡುವರು.

ಗೋಷ್ಠಿ ೧೨ – ಅಪರಾಹ್ನ ೩ ರಿಂದ ೫ರವರೆಗೆ `ಆತ್ಮನಿವೇದನೆ’ ಕೃತಿಯ ಕುರಿತಂತೆ ಡಾ. ಲೋಕೆಶ್ ಅಗಸನಕಟ್ಟೆ ಅವಲೋಕನ ಮಾಡಿಕೊಳ್ಳುವರು. ಗೋಷ್ಠಿ: ೧೩ – ಇಳಿಹೊತ್ತು ೫ ರಿಂದ ೬ರವರೆಗೆ ವಿಷಯ: `ಲಿಂಗಾಯತ ಮಠಗಳು ಮತ್ತು ಬಸವತತ್ವ ಅನುಷ್ಠಾನ’ದ ಬಗ್ಗೆ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳವರು ಮಾತನಾಡುವರು.

ಇದನ್ನೂ ಓದಿ: POWER CUT TODAY: ಚಿತ್ರದುರ್ಗ ಜಿಲ್ಲೆಯಲ್ಲಿ ಇಂದು ಬೆಳಗ್ಗೆಯಿಂದ ಸಂಜೆವರೆಗೆ ಕರೆಂಟ್‌ ಇರಲ್ಲ, ಎಲ್ಲೆಲ್ಲಿ?

ನಂತರ ರಾತ್ರಿ 07 ರಿಂದ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರು ರಚಿಸಿದ, ವೈ ಡಿ ಬದಾಮಿ ನಿರ್ದೇಶನದ ಮರಣವೇ ಮಹಾನವಮಿ’ ನಾಟಕವನ್ನು ಶ್ರೀ ಶಿವಕುಮಾರ ಕಲಾಸಂಘದ ಕಲಾವಿದರು ಅಭಿನಯಿಸುವರು.

04/07/2024 ಗುರುವಾರ – ಬೆಳಗ್ಗೆ 09-30 ರಿಂದ `ಕರ್ಮ ಸಿದ್ಧಾಂತ’ ವಿಷಯ ಕುರಿತಂತೆ ಶಿವಮೊಗ್ಗದ ಬಸವಕೇಂದ್ರದ ಶ್ರೀ ಬಸವ ಮರುಳಸಿದ್ಧ ಸ್ವಾಮಿಗಳು ಉಪನ್ಯಾಸ ನೀಡುವರು. ಗೋಷ್ಠಿ: ೧೫ – ಬೆಳಗ್ಗೆ ೧೧ ರಿಂದ ೧೨-೩೦ರವರೆಗೆ ವಚನ ಕ್ರಾಂತಿ ಮಹಿಳೆಯರ ಸಹಭಾಗಿತ್ವ’ ವಿಷಯವನ್ನು ಕುರಿತು ಧಾರವಾಡದ ವಿನಯಾ ಒಕ್ಕುಂದ ಉಪನ್ಯಾಸ ನೀಡುವರು. ಗೋಷ್ಠಿ: ೧೬ – ಅಪರಾಹ್ನ ೧೨-೩೦ ರಿಂದ ೨ರವರೆಗೆ `ಲಿಂಗಾಯತ/ವೀರಶೈವ’ ವಿಷಯ ಕುರಿತು ಶಿಬಿರಾರ್ಥಿಗಳಿಂದ ಮುಕ್ತ ಅಭಿಪ್ರಾಯ ಹಂಚಿಕೊಳ್ಳಬಹುದು. ಇದರ ಸಾನ್ನಿಧ್ಯವನ್ನು ಗದುಗಿನ ತೋಂಟದಾರ್ಯ ಮಠದ ಜಗದ್ಗುರು ಡಾ. ಶ್ರೀ ಸಿದ್ಧರಾಮ ಮಹಾಸ್ವಾಮಿಗಳವರು ವಹಿಸುವರು.

ಇದನ್ನೂ ಓದಿ: GTTC CHITRADURGA: ಮೊದಲು ಬಂದವರಿಗೆ ಮೊದಲ ಆದ್ಯತೆ| ಜಿಟಿಟಿಸಿ | ಡಿಪ್ಲೊಮಾ ಕೋರ್ಸ್‍ಗಳಿಗೆ ಪ್ರವೇಶ

ಗೋಷ್ಠಿ: ೧೭ – ಅಪರಾಹ್ನ ೩ ರಿಂದ ೫ರವರೆಗೆ `ಶೂನ್ಯ ಸಂಪಾದನೆಯ ಪರಿಚಯ’ ಕುರಿತು ಮೈಸೂರಿನ ಡಾ. ಮರಬದ ಮಲ್ಲಿಕಾರ್ಜುನ ಉಪನ್ಯಾಸ ನೀಡುವರು. ಸಂಜೆ ೫ ರಿಂದ ಇಷ್ಟಲಿಂಗದ ವೈಜ್ಞಾನಿಕತೆ (ಪ್ರಾತ್ಯಕ್ಷಿಕೆ)ಯನ್ನು ಬೆಳಗಾವಿಯ ವೈದ್ಯ ಡಾ. ಅವಿನಾಶ ಕವಿ ತಿಳಿಸಿಕೊಡುವರು.

ನಂತರ ರಾತ್ರಿ ೭ರಿಂದ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ (Panditaradhya Shri) ಸ್ವಾಮಿಗಳವರು ರಚಿಸಿದ ವೈ ಡಿ ಬದಾಮಿ ನಿರ್ದೇಶನದ ಕ್ರಾಂತಿಗಂಗೋತ್ರಿ ಅಕ್ಕ ನಾಗಲಾಂಬಿಕೆ’ (ಏಕವ್ಯಕ್ತಿ ಪ್ರದರ್ಶನ) ನಾಟಕವನ್ನು ಶ್ರೀಮತಿ ಮಂಜುಳಾ ಬದಾಮಿ ಅಭಿನಯಿಸುವರು.

ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು

ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ನಮ್ಮ ವರದಿಗಾರರು. ನಿಮ್ಮೂರಿನ ಸಭೆ, ಸಮಾರಂಭ, ಶಾಲೆ ಕಾಲೇಜು ಕಾರ್ಯಕ್ರಮಗಳು, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಉತ್ತಮವಾದ ಫೋಟೋ ಜೊತೆಗೆ ಕಳುಹಿಸಬಹುದು. ಸುದ್ದಿ ಪ್ರಕಟವಾದ ಸುದ್ದಿಯ ಲಿಂಕ್‌ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ. ಮತ್ತು ಜಾಹಿರಾತುಗಳನ್ನು ಆಕರ್ಷಕ ದರದಲ್ಲಿ ಪ್ರಕಟಿಸಲಾಗುವುದು.

ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್‌ ಮೇಲ್‌ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.

» ನಮ್ಮಜನ.ಕಾಂ gmail:  nammajananews@gmail.com

» Whatsapp Number-9686622252

You Might Also Like

ಗಣಿಬಾಧಿತ ಹಳ್ಳಿಗಳಲ್ಲಿ ವಸತಿ, ನಿವೇಶನ ರಹಿತ ಫಲಾನುಭವಿಗಳ ಆಯ್ಕೆ : ಗ್ರಾಮ ಸಭೆ ನಡೆಸಲು ದಿನಾಂಕ ನಿಗದಿ | HOLALKERE

HIRIYUR | ಕುಡಿಯುವ ನೀರಿಗಾಗಿ ಶಾಲಾ ಮಕ್ಕಳು ಪ್ರತಿಭಟನೆ

Dina Bhavishya | ದಿನ ಭವಿಷ್ಯ | ಇಂದು ಯಾವ ರಾಶಿಗೆ ಶುಭಯೋಗ

internal reservation: ಒಳಮೀಸಲಾತಿ ಜಾರಿ ಖಚಿತ : ಮಾಜಿ ಸಚಿವ ಎಚ್.ಆಂಜನೇಯ

creative activities: ಪಠ್ಯದ ಜತೆಗೆ ಸೃಜನಶೀಲ ಚಟುವಟಿಕೆಗಳಲ್ಲಿಯೂ ಪಾಲ್ಗೊಳ್ಳಿ: ಬಿ.ವಿ.ತುಕಾರಾಂರಾವ್

TAGGED:AbbotBasava Tattva SwamijiChitradurga NewsHosadurgaKannada Newskannada suddiNammajana.comPanditaradhya Shivacharya SwamijiPanditaradhya SriSanehalliSanehalli MathVachana Kammataಕನ್ನಡ ನ್ಯೂಸ್ಕನ್ನಡ ಸುದ್ದಿಚಿತ್ರದುರ್ಗ ನ್ಯೂಸ್ಚಿತ್ರದುರ್ಗ ಸುದ್ದಿನಮ್ಮಜನ.ಕಾಂಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಪಂಡಿತಾರಾಧ್ಯ ಶ್ರೀಬಸವ ತತ್ವ ಸ್ವಾಮೀಜಿಮಠಾಧೀಶರುವಚನ ಕಮ್ಮಟಸಾಣೇಹಳ್ಳಿಸಾಣೇಹಳ್ಳಿ ಮಠಹೊಸದುರ್ಗ
Share This Article
Facebook Twitter Whatsapp Whatsapp Telegram Email Print
ಈ ಮೇಲಿನ ಸುದ್ದಿ, ಲೇಖನದ ಬಗ್ಗೆ ನಿಮ್ಮ ಅನಿಸಿಕೆ ಏನು?
Love0
Sad0
Happy0
Sleepy0
Angry0
Dead0
Wink0
Previous Article GTTC CHITRADURGA: ಮೊದಲು ಬಂದವರಿಗೆ ಮೊದಲ ಆದ್ಯತೆ| ಜಿಟಿಟಿಸಿ | ಡಿಪ್ಲೊಮಾ ಕೋರ್ಸ್‍ಗಳಿಗೆ ಪ್ರವೇಶ
Next Article Job News: ಶ್ರೀ ಅಹೋಬಲ ಟಿವಿಎಸ್ ನಲ್ಲಿ ಭರ್ಜರಿ ಉದ್ಯೋಗ | ಇಂದೇ ಸಂಪರ್ಕಿಸಿ
Leave a comment

Leave a Reply Cancel reply

Your email address will not be published. Required fields are marked *

Stay Connected

TelegramFollow

Latest News

Akka Cafe: ಜಿಲ್ಲಾ ಪಂಚಾಯತ್ ಆವರಣದಲ್ಲಿ ಅಕ್ಕ ಕೆಫೆ ಪ್ರಾರಂಭ
ಇಂದಿನ ಸುದ್ದಿ
mining: ಗಣಿ ಮಾಫಿಯ ನಿಲ್ಲಿಸಿ ಪರಿಸರ ರಕ್ಷಿಸಿ | ಆ.16ರಂದು ಬಳ್ಳಾರಿಯಲ್ಲಿ ರಾಜ್ಯ ಸಮಾವೇಶ
ಇಂದಿನ ಸುದ್ದಿ
ಆಗಸ್ಟ್ 1 ರಿಂದ ಹೊಸ UPI ನಿಯಮಗಳು ಜಾರಿ | ಏನೆಲ್ಲ ರೂಲ್ಸ್ ಇವೆ?
ವಿಶೇಷ ಸುದ್ದಿ
FIR ದಾಖಲು ಮಾಡಿದರು ತೆಂಗಿನ ಸಸಿ ನಾಟಿ
ಇಂದಿನ ಸುದ್ದಿ

Kannada News (ಕನ್ನಡ ಸುದ್ದಿ): Get the latest updates of karnataka news, world news, india news, political News and celebrity Kannada news and more on Nammajana (nammajana.com).

Sign Up for Our Newsletter

Subscribe to our newsletter to get our newest articles instantly!

Namma JanaNamma Jana
© 2025 NammaJanna. Kannada News Portal. All Rights Reserved.
adbanner
AdBlock Detected
Our site is an advertising supported site. Please whitelist to support our site.
Okay, I'll Whitelist
Welcome Back!

Sign in to your account

Lost your password?