
Chitradurga news|nammajana.com|12-7-2024
ನಮ್ಮಜನ.ಕಾಂ, ಚಿತ್ರದುರ್ಗ: CSR ಅನುದಾನದಲ್ಲಿ ತಾಲೂಕಿನಲ್ಲಿ ಆರಂಭಿಸುವ ಯಾವುದೇ ಕಾಮಗಾರಿಗಳ ಗುಣಮಟ್ಟದ ಮೇಲೆ ಎಚ್ಚರ ವಹಿಸಬೇಕು. ಅನುದಾನ (K. C. Veerendra Puppy) ತರ್ತಾರೆ ಏನೋ ಮಾಡೋಣ ಎಂಬ ನಿರ್ಲಕ್ಷ್ಯ ಬೇಡ ಶಾಸಕ K.C. ವೀರೇಂದ್ರ ಪಪ್ಪಿ ಅಧಿಕಾರಿಗಳಿಗೆ ಖಡಕ್ ವಾರ್ನಿಂಗ್ ಮಾಡಿದ್ದಾರೆ.
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ತಾಲೂಕು ಮಟ್ಟದ ಕೆಡಿಪಿ ತ್ರೈಮಾಸಿಕ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕರು ಸಿಎಸ್ ಆರ್ ಅನುದಾನದಲ್ಲಿ ಯಾವುದೇ ಕಾಮಗಾರಿ ನಡೆಸಿದರೂ ಥರ್ಡ್ ಪಾರ್ಟಿ ಪರಿಶೀಲಿಸಿ ವರದಿ ಪಡೆಯಬೇಕು. ಪ್ರತಿಯೊಂದನ್ನು ಜನಪ್ರತಿನಿಧಿಗಳ ಗಮನಕ್ಕೆ ತರಬೇಕೆಂದು ತಾಕೀತು ಮಾಡಿದರು.

ಶುದ್ಧ ಕುಡಿಯುವ ನೀರಿನ ಘಟಕ ದುರಸ್ತಿಗೆ ಕ್ರಮ ವಹಿಸಿ
ತಾಲೂಕಿನ ಹಲವಾರು ಗ್ರಾಮಗಳಲ್ಲಿ ಶುದ್ಧ ಕುಡಿವ ನೀರಿನ ಘಟಕಗಳು ದುರಸ್ತಿಗೆ ಬಂದಿವೆ ಎಂದು ಜನರು ದೂರುತ್ತಿದ್ದಾರೆ. ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ. ಕೆಲವು ಕಡೆ (K. C. Veerendra Puppy) ಕೆಟ್ಟಿದ್ದರೂ ದುರಸ್ತಿ ಮಾಡಲಾಗಿದೆ ಎಂದು ಹೇಳಿ ಬಿಲ್ ಪಡೆಯಲಾಗಿದೆ. ಕುಡಿವ ನೀರಿನ ವಿಚಾರದಲ್ಲಿ ಉದಾಸೀನ ಸಲ್ಲದು. ಅಧಿಕಾರಿಗಳು ಜವಾಬ್ದಾರಿಯಿಂದ ನಡೆದುಕೊಳ್ಳಬೇಕು. ಈ ಬಗ್ಗೆ ನಿರ್ಲಕ್ಷ್ಯ ಬೇಡ ಎಂದರು.
ಈ ಸಂದರ್ಭದಲ್ಲಿ ಮಾತನಾಡಿದ ಗ್ರಾಮೀಣಕುಡಿವನೀರು ಮತ್ತು ನೈರ್ಮಲ್ಯ ಇಲಾಖೆ ಕಾರ್ಯನಿರ್ವಾಹಕ ಇಂಜಿನಿಯರ್ ಶಿವಮೂರ್ತಿ ತಾಲೂಕಿನಲ್ಲಿ 105 ಶುದ್ಧ ಕುಡಿವ ನೀರಿನ (K. C. Veerendra Puppy) ಘಟಕಗಳಿದ್ದು, ಅದರಲ್ಲಿ 24 ಸ್ಥಗಿತಗೊಂಡಿವೆ ಎಂದರು.
ಅಂಕಿ ಅಂಶ ಉಲ್ಟಾ ಆಗಿರಬೇಕು ಚಕ್ ಮಾಡಿಕೊಳ್ಳಿ
ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ ವೀರೇಂದ್ರ ಪಪ್ಪಿ ಅಂಕಿ ಅಂಶ ನೀಡುವಲ್ಲಿ ಯಡವಟ್ಟಾಗಿರುಬೇಕು. ನೀವೆಲ್ಲೋ ಉಲ್ಟಾ ಹೇಳುತ್ತಿದ್ದೀರಿ. ಕೆಟ್ಟ ಘಟಕಗಳ ಸಂಖ್ಯೆ ಜಾಸ್ತಿ ಇವೆ ನೋಡಿ ಎಂದು ಅಧಿಕಾರಿಯ ಮಾತಿನಲ್ಲಿ ತಿವಿದರು. ಗ್ರಾಮಾಂತರ ಪ್ರದೇಶದಲ್ಲಿ ಕುಡಿವ ನೀರಿನ ಪೈಪ್ಲೈನ್ ಕಾಮಗಾರಿ ಮಾಡುವಾಗ ಎಚ್ಚರವಿರಲಿ.
ಕಾಮಗಾರಿ ಪೂರ್ಣಗೊಂಡ ನಂತರ ಸುರಕ್ಷಿತವಾಗಿ ಮುಚ್ಚುವ ಕೆಲಸವಾಗಲಿ. ಕಲುಷಿತ ನೀರು ಕೊಳವೆ ಮಾರ್ಗಕ್ಕೆ ಸೇರಿದರೆ ಕವಾಡಿಗರಹಟ್ಟಿಯಂತಹ ದುರಂತಗಳು ಪ್ರಕರಣಗಳು ಮರುಕಳಿಸುತ್ತವೆ. ಆ ರೀತಿ ಆಗದಂತೆ ನೋಡಿಕೊಳ್ಳಬೇಕು.(K. C. Veerendra Puppy) ಕವಾಡಿಗರಹಟ್ಟಿ ದುರಂತವ ಅಧಿಕಾರಿಗಳು, ಜನ ಪ್ರತಿನಿಧಿಗಳು ನಿರ್ವಹಣೆ ಮಾಡಿದ ಸಂಕಷ್ಟಗಳು ಅರಿವಿರಬೇಕೆಂದರು. ಕೆಲವು ಕಾರಣಗಳಿಂದ ಕಾಮಗಾರಿಗಳು ಅರ್ಧಕ್ಕೆ ನಿಲ್ಲಬಹುದು. ಗುತ್ತಿಗೆದಾರನಿಗೆ ಸೂಕ್ತ ಸೂಚನೆ ನೀಡಿ ಪೂರ್ಣಗೊಳಿಸಲು ಹೇಳಬೇಕು.
ಹಳ್ಳಿಗಳ ರಸ್ತೆ ಹಲವು ಕಡೆ ಕಿತ್ತು ಹೋಗಿವೆ. ವಾಹನ ಸವಾರರು, ಮಕ್ಕಳು ಬಿದ್ದಿರುವ ಘಟನೆಗಳು ನಡೆದಿವೆ. ಇಂತಹ ರಸ್ತೆಗಳ ದುರಸ್ತಿ ಕೆಲಸ ಚುರುಕಾಗಬೇಕು. ಗುತ್ತಿಗೆದಾರರಿಂದ ಕೆಲಸ ತೆಗೆದುಕೊಳ್ಳುವ ವಿಚಾರದಲ್ಲಿ ಜಾಣೆ ಇರಲಿ ಎಂದು ತಾಪಂ ಇಓ ಹನುಮಂತಪ್ಪ ಸೂಚಿಸಿದರು.
ಇದನ್ನೂ ಓದಿ: ಅಕ್ರಮ ಸಂಬಂಧಕ್ಕೆ ಅಡ್ಡಿ | ಲವರ್ ಜೊತೆ ಸೇರಿ ಗಂಡನ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ | Husband killed along with lover
35 ಸಾವಿರ ಮಕ್ಕಳಿಗೆ ಉಚಿತ ಪುಸ್ತಕ ವಿತರಣೆ
ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ತಾಲೂಕಿನಲ್ಲಿ 65 ಸಾವಿರ (K. C. Veerendra Puppy) ಮಕ್ಕಳುಶಾಲೆಗೆ ದಾಖಲಾಗಿದ್ದಾರೆ 35 ಸಾವಿರ ಮಕ್ಕಳಿಗೆ ಉಚಿತ ಪುಸ್ತಕ ವಿತರಿಸಲಾಗಿದೆ. ಶಾಲೆ ಆರಂಭವಾದಾಗಲೇ ಎರಡು ಜೊತೆ ಸಮವಸ್ತ್ರ ವಿತರಿಸಿದ್ದೇವೆ. ತಾಲೂಕಿನಲ್ಲಿ 20 ಸರ್ಕಾರಿ ಆಂಗ್ಲ ಮಾಧ್ಯಮ ಶಾಲೆಗಳು ಆರಂಭವಾಗಿವೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ನಾಗಭೂಷಣ್ ಸಭೆಗೆ ಮಾಹಿತಿ ನೀಡಿದರು. ತಹಸೀಲ್ದಾರ್ಡಾ. ನಾಗವೇಣಿ, ಆಡಳಿತಾಧಿಕಾರಿ ಆನಂದ್ ಇದ್ದರು.