Namma JanaNamma JanaNamma Jana
  • ಇಂದಿನ ಸುದ್ದಿ
  • ರಾಜಕೀಯ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಕ್ರೀಡೆ
  • ಆರೋಗ್ಯ
  • ದಿನ ಭವಿಷ್ಯ
Reading: ಏನೋ‌ ಅನುದಾನ‌ ಕೊಡ್ತಾರೆ, ಏನೋ‌ ಮಾಡೋಣ ಎಂಬ‌‌‌ ಮನಸ್ಥಿತಿ ಬಿಡಿ: ಕೆ.ಸಿ.ವೀರೇಂದ್ರ ಪಪ್ಪಿ | K. C. Veerendra Puppy
Share
Notification Show More
Font ResizerAa
Font ResizerAa
Namma JanaNamma Jana
  • ಇಂದಿನ ಸುದ್ದಿ
  • ರಾಜಕೀಯ
  • ವಿಶೇಷ ಸುದ್ದಿ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಆರೋಗ್ಯ
  • ಕ್ರೀಡೆ
  • ದಿನ ಭವಿಷ್ಯ
  • ರಾಜಕೀಯ
Search
  • ಇಂದಿನ ಸುದ್ದಿ
  • ರಾಜಕೀಯ
  • ವಿಶೇಷ ಸುದ್ದಿ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಆರೋಗ್ಯ
  • ಕ್ರೀಡೆ
  • ದಿನ ಭವಿಷ್ಯ
  • ರಾಜಕೀಯ
Have an existing account? Sign In
Follow US
  • Advertise
© 2024 Namma Janna. Kannada News Portal. All Rights Reserved.
Namma Jana > Blog > ಇಂದಿನ ಸುದ್ದಿ > ಏನೋ‌ ಅನುದಾನ‌ ಕೊಡ್ತಾರೆ, ಏನೋ‌ ಮಾಡೋಣ ಎಂಬ‌‌‌ ಮನಸ್ಥಿತಿ ಬಿಡಿ: ಕೆ.ಸಿ.ವೀರೇಂದ್ರ ಪಪ್ಪಿ | K. C. Veerendra Puppy
ಇಂದಿನ ಸುದ್ದಿ

ಏನೋ‌ ಅನುದಾನ‌ ಕೊಡ್ತಾರೆ, ಏನೋ‌ ಮಾಡೋಣ ಎಂಬ‌‌‌ ಮನಸ್ಥಿತಿ ಬಿಡಿ: ಕೆ.ಸಿ.ವೀರೇಂದ್ರ ಪಪ್ಪಿ | K. C. Veerendra Puppy

Editor Nammajana
Last updated: 12 July 2024 06:54
By Editor Nammajana 2 Min Read
Share
SHARE

Chitradurga news|nammajana.com|12-7-2024

ನಮ್ಮಜನ.ಕಾಂ, ಚಿತ್ರದುರ್ಗ: CSR ಅನುದಾನದಲ್ಲಿ  ತಾಲೂಕಿನಲ್ಲಿ  ಆರಂಭಿಸುವ ಯಾವುದೇ ಕಾಮಗಾರಿಗಳ ಗುಣಮಟ್ಟದ ಮೇಲೆ ಎಚ್ಚರ ವಹಿಸಬೇಕು. ಅನುದಾನ (K. C. Veerendra Puppy) ತರ್ತಾರೆ ಏನೋ ಮಾಡೋಣ ಎಂಬ ನಿರ್ಲಕ್ಷ್ಯ ಬೇಡ ಶಾಸಕ K.C. ವೀರೇಂದ್ರ ಪಪ್ಪಿ ಅಧಿಕಾರಿಗಳಿಗೆ ಖಡಕ್ ವಾರ್ನಿಂಗ್ ಮಾಡಿದ್ದಾರೆ.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ತಾಲೂಕು ಮಟ್ಟದ ಕೆಡಿಪಿ ತ್ರೈಮಾಸಿಕ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕರು ಸಿಎಸ್ ಆರ್ ಅನುದಾನದಲ್ಲಿ ಯಾವುದೇ ಕಾಮಗಾರಿ ನಡೆಸಿದರೂ ಥರ್ಡ್ ಪಾರ್ಟಿ ಪರಿಶೀಲಿಸಿ ವರದಿ ಪಡೆಯಬೇಕು. ಪ್ರತಿಯೊಂದನ್ನು ಜನಪ್ರತಿನಿಧಿಗಳ ಗಮನಕ್ಕೆ ತರಬೇಕೆಂದು ತಾಕೀತು ಮಾಡಿದರು.

 ಶುದ್ಧ ಕುಡಿಯುವ ನೀರಿನ ಘಟಕ ದುರಸ್ತಿಗೆ ಕ್ರಮ ವಹಿಸಿ

ತಾಲೂಕಿನ ಹಲವಾರು ಗ್ರಾಮಗಳಲ್ಲಿ ಶುದ್ಧ ಕುಡಿವ ನೀರಿನ ಘಟಕಗಳು ದುರಸ್ತಿಗೆ ಬಂದಿವೆ ಎಂದು ಜನರು ದೂರುತ್ತಿದ್ದಾರೆ. ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ. ಕೆಲವು ಕಡೆ (K. C. Veerendra Puppy) ಕೆಟ್ಟಿದ್ದರೂ ದುರಸ್ತಿ ಮಾಡಲಾಗಿದೆ ಎಂದು ಹೇಳಿ ಬಿಲ್ ಪಡೆಯಲಾಗಿದೆ. ಕುಡಿವ ನೀರಿನ ವಿಚಾರದಲ್ಲಿ ಉದಾಸೀನ ಸಲ್ಲದು. ಅಧಿಕಾರಿಗಳು ಜವಾಬ್ದಾರಿಯಿಂದ ನಡೆದುಕೊಳ್ಳಬೇಕು. ಈ ಬಗ್ಗೆ ನಿರ್ಲಕ್ಷ್ಯ ಬೇಡ ಎಂದರು.

ಈ ಸಂದರ್ಭದಲ್ಲಿ ಮಾತನಾಡಿದ ಗ್ರಾಮೀಣಕುಡಿವನೀರು ಮತ್ತು ನೈರ್ಮಲ್ಯ ಇಲಾಖೆ ಕಾರ್ಯನಿರ್ವಾಹಕ ಇಂಜಿನಿಯರ್‌ ಶಿವಮೂರ್ತಿ ತಾಲೂಕಿನಲ್ಲಿ 105 ಶುದ್ಧ ಕುಡಿವ ನೀರಿನ (K. C. Veerendra Puppy) ಘಟಕಗಳಿದ್ದು, ಅದರಲ್ಲಿ 24 ಸ್ಥಗಿತಗೊಂಡಿವೆ ಎಂದರು.

ಅಂಕಿ ಅಂಶ ಉಲ್ಟಾ ಆಗಿರಬೇಕು ಚಕ್ ಮಾಡಿಕೊಳ್ಳಿ

ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ ವೀರೇಂದ್ರ ಪಪ್ಪಿ ಅಂಕಿ ಅಂಶ ನೀಡುವಲ್ಲಿ ಯಡವಟ್ಟಾಗಿರುಬೇಕು. ನೀವೆಲ್ಲೋ ಉಲ್ಟಾ ಹೇಳುತ್ತಿದ್ದೀರಿ. ಕೆಟ್ಟ ಘಟಕಗಳ ಸಂಖ್ಯೆ ಜಾಸ್ತಿ ಇವೆ ನೋಡಿ ಎಂದು ಅಧಿಕಾರಿಯ ಮಾತಿನಲ್ಲಿ  ತಿವಿದರು. ಗ್ರಾಮಾಂತರ ಪ್ರದೇಶದಲ್ಲಿ ಕುಡಿವ ನೀರಿನ ಪೈಪ್ಲೈನ್ ಕಾಮಗಾರಿ ಮಾಡುವಾಗ ಎಚ್ಚರವಿರಲಿ.

ಕಾಮಗಾರಿ ಪೂರ್ಣಗೊಂಡ ನಂತರ ಸುರಕ್ಷಿತವಾಗಿ ಮುಚ್ಚುವ ಕೆಲಸವಾಗಲಿ. ಕಲುಷಿತ ನೀರು ಕೊಳವೆ ಮಾರ್ಗಕ್ಕೆ ಸೇರಿದರೆ ಕವಾಡಿಗರಹಟ್ಟಿಯಂತಹ ದುರಂತಗಳು ಪ್ರಕರಣಗಳು ಮರುಕಳಿಸುತ್ತವೆ. ಆ ರೀತಿ ಆಗದಂತೆ ನೋಡಿಕೊಳ್ಳಬೇಕು.(K. C. Veerendra Puppy) ಕವಾಡಿಗರಹಟ್ಟಿ ದುರಂತವ ಅಧಿಕಾರಿಗಳು, ಜನ ಪ್ರತಿನಿಧಿಗಳು ನಿರ್ವಹಣೆ ಮಾಡಿದ ಸಂಕಷ್ಟಗಳು ಅರಿವಿರಬೇಕೆಂದರು. ಕೆಲವು ಕಾರಣಗಳಿಂದ ಕಾಮಗಾರಿಗಳು ಅರ್ಧಕ್ಕೆ ನಿಲ್ಲಬಹುದು. ಗುತ್ತಿಗೆದಾರನಿಗೆ ಸೂಕ್ತ ಸೂಚನೆ ನೀಡಿ ಪೂರ್ಣಗೊಳಿಸಲು ಹೇಳಬೇಕು.

ಹಳ್ಳಿಗಳ ರಸ್ತೆ ಹಲವು ಕಡೆ ಕಿತ್ತು ಹೋಗಿವೆ. ವಾಹನ ಸವಾರರು, ಮಕ್ಕಳು ಬಿದ್ದಿರುವ ಘಟನೆಗಳು ನಡೆದಿವೆ. ಇಂತಹ ರಸ್ತೆಗಳ ದುರಸ್ತಿ ಕೆಲಸ ಚುರುಕಾಗಬೇಕು. ಗುತ್ತಿಗೆದಾರರಿಂದ ಕೆಲಸ ತೆಗೆದುಕೊಳ್ಳುವ ವಿಚಾರದಲ್ಲಿ ಜಾಣೆ ಇರಲಿ ಎಂದು ತಾಪಂ ಇಓ ಹನುಮಂತಪ್ಪ ಸೂಚಿಸಿದರು.

ಇದನ್ನೂ ಓದಿ: ಅಕ್ರಮ ಸಂಬಂಧಕ್ಕೆ ಅಡ್ಡಿ | ಲವರ್ ಜೊತೆ ಸೇರಿ ಗಂಡನ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ | Husband killed along with lover

35 ಸಾವಿರ ಮಕ್ಕಳಿಗೆ ಉಚಿತ ಪುಸ್ತಕ ವಿತರಣೆ

ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ತಾಲೂಕಿನಲ್ಲಿ 65 ಸಾವಿರ (K. C. Veerendra Puppy) ಮಕ್ಕಳುಶಾಲೆಗೆ ದಾಖಲಾಗಿದ್ದಾರೆ 35 ಸಾವಿರ ಮಕ್ಕಳಿಗೆ ಉಚಿತ ಪುಸ್ತಕ ವಿತರಿಸಲಾಗಿದೆ. ಶಾಲೆ ಆರಂಭವಾದಾಗಲೇ ಎರಡು ಜೊತೆ ಸಮವಸ್ತ್ರ ವಿತರಿಸಿದ್ದೇವೆ. ತಾಲೂಕಿನಲ್ಲಿ 20 ಸರ್ಕಾರಿ ಆಂಗ್ಲ ಮಾಧ್ಯಮ ಶಾಲೆಗಳು ಆರಂಭವಾಗಿವೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ನಾಗಭೂಷಣ್ ಸಭೆಗೆ ಮಾಹಿತಿ ನೀಡಿದರು. ತಹಸೀಲ್ದಾರ್‌ಡಾ. ನಾಗವೇಣಿ, ಆಡಳಿತಾಧಿಕಾರಿ ಆನಂದ್ ಇದ್ದರು.

You Might Also Like

Transfer | ಜಿಲ್ಲಾ ಬಿಸಿಎಂ ಅಧಿಕಾರಿ ಆರ್.ಸುಬ್ರಾನಾಯಕ್ ವರ್ಗಾವಣೆ, ನೂತನ ಅಧಿಕಾರಿ ಅಧಿಕಾರ ಸ್ವೀಕಾರ

POWER CUT | ಇಂದು ಬೆಳಗ್ಗೆಯಿಂದ ಸಂಜೆವರೆಗೆ ಕರೆಂಟ್ ಇರಲ್ಲ

Dina Bhavishya | ದಿನ ಭವಿಷ್ಯ, ಇವತ್ತು ಯಾವ್ಯಾವ ರಾಶಿಗೆ ಶುಭ ಲಾಭ, ನಷ್ಟ ನೋಡಿ

Gold Rate | ಬಂಗಾರದ ಬೆಲೆಯಲ್ಲಿ ಏರಿಕೆ

Dina Bhavishya | ದಿನ ಭವಿಷ್ಯ, ಇವತ್ತು ಯಾವ್ಯಾವ ರಾಶಿಗೆ ಶುಭ?

TAGGED:ChitradurgaChitradurga NewsCSR GrantEO HanumanthappaKannada Newskannada suddiKC Virendra PappiKDP SabhaMLANammajana.comTaluk PanchayatThird Party Verification Mandatoryಇಓ ಹನುಮಂತಪ್ಪಕನ್ನಡ ನ್ಯೂಸ್ಕನ್ನಡ ಸುದ್ದಿಕೆ.ಸಿ.ವೀರೇಂದ್ರ ಪಪ್ಪಿಕೆಡಿಪಿ ಸಭೆಚಿತ್ರದುರ್ಗಚಿತ್ರದುರ್ಗ ನ್ಯೂಸ್ ಜ್ಯೋತಿಷ್ಯಚಿತ್ರದುರ್ಗ ಸುದ್ದಿತಾಲೂಕು ಪಂಚಾಯತ್ನಮ್ಮಜನ.ಕಾಂಮೂರನೇ ವ್ಯಕ್ತಿ ಪರಿಶೀಲನೆ ಕಡ್ಡಾಯಶಾಸಕಸಿಎಸ್ ಆರ್ ಅನುದಾನ
Share This Article
Facebook Twitter Whatsapp Whatsapp Telegram Email Print
ಈ ಮೇಲಿನ ಸುದ್ದಿ, ಲೇಖನದ ಬಗ್ಗೆ ನಿಮ್ಮ ಅನಿಸಿಕೆ ಏನು?
Love0
Sad0
Happy0
Sleepy0
Angry0
Dead0
Wink0
Previous Article Marughamatha silver idol | ಮುರುಘಾಮಠದಲ್ಲಿ 22 ಕೆಜಿ ಬೆಳ್ಳಿ ವಿಗ್ರಹ ಕಳ್ಳತನ
Next Article ಹೊಸದುರ್ಗ ತಾಲ್ಲೂಕಿನ 6 ಕೆರೆಗಳ ಪುನಃಚ್ಚೇತನಕ್ಕೆ ಧರ್ಮಸ್ಥಳ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಮೆಚ್ಚುಗೆ’
Leave a comment

Leave a Reply Cancel reply

Your email address will not be published. Required fields are marked *

Stay Connected

TelegramFollow

Latest News

POWER CUT | ಇಂದಿನಿಂದ ಎರಡು ದಿನ ಬೆಳಗ್ಗೆಯಿಂದ ಸಂಜೆವರೆಗೂ ಕರೆಂಟ್ ಇರಲ್ಲ
ಇಂದಿನ ಸುದ್ದಿ
Adike rate | ಅಡಿಕೆ ಬೆಲೆಯಲ್ಲಿ ಇಳಿಕೆ
ಅಡಿಕೆ ಧಾರಣೆ
Gold Rate | ಬಂಗಾರದ ಬೆಲೆಯಲ್ಲಿ ಭರ್ಜರಿ ಏರಿಕೆ
ಇಂದಿನ ಸುದ್ದಿ
Dina Bhavishya | ದಿನ ಭವಿಷ್ಯ, ಇವತ್ತು ಯಾವ್ಯಾವ ರಾಶಿಗೆ ಶುಭ ಯೋಗ?
ದಿನ ಭವಿಷ್ಯ

Kannada News (ಕನ್ನಡ ಸುದ್ದಿ): Get the latest updates of karnataka news, world news, india news, political News and celebrity Kannada news and more on Nammajana (nammajana.com).

Sign Up for Our Newsletter

Subscribe to our newsletter to get our newest articles instantly!

Namma JanaNamma Jana
© 2025 NammaJanna. Kannada News Portal. All Rights Reserved.
adbanner
AdBlock Detected
Our site is an advertising supported site. Please whitelist to support our site.
Okay, I'll Whitelist
Welcome Back!

Sign in to your account

Lost your password?