Namma JanaNamma JanaNamma Jana
  • ಇಂದಿನ ಸುದ್ದಿ
  • ರಾಜಕೀಯ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಕ್ರೀಡೆ
  • ಆರೋಗ್ಯ
  • ದಿನ ಭವಿಷ್ಯ
Reading: “ವಾಣಿ ವಿಲಾಸ ಸಾಗರ ಜಲಾಶಯ ಭದ್ರಾ” ಡ್ಯಾಂ ಕುರಿತು ಅಧಿಕಾರಿಗಳು ಹೇಳಿದ್ದೇನು? | Vani Vilasa Sagar Dam
Share
Notification Show More
Font ResizerAa
Font ResizerAa
Namma JanaNamma Jana
  • ಇಂದಿನ ಸುದ್ದಿ
  • ರಾಜಕೀಯ
  • ವಿಶೇಷ ಸುದ್ದಿ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಆರೋಗ್ಯ
  • ಕ್ರೀಡೆ
  • ದಿನ ಭವಿಷ್ಯ
  • ರಾಜಕೀಯ
Search
  • ಇಂದಿನ ಸುದ್ದಿ
  • ರಾಜಕೀಯ
  • ವಿಶೇಷ ಸುದ್ದಿ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಆರೋಗ್ಯ
  • ಕ್ರೀಡೆ
  • ದಿನ ಭವಿಷ್ಯ
  • ರಾಜಕೀಯ
Have an existing account? Sign In
Follow US
  • Advertise
© 2024 Namma Janna. Kannada News Portal. All Rights Reserved.
Namma Jana > Blog > ಇಂದಿನ ಸುದ್ದಿ > “ವಾಣಿ ವಿಲಾಸ ಸಾಗರ ಜಲಾಶಯ ಭದ್ರಾ” ಡ್ಯಾಂ ಕುರಿತು ಅಧಿಕಾರಿಗಳು ಹೇಳಿದ್ದೇನು? | Vani Vilasa Sagar Dam
ಇಂದಿನ ಸುದ್ದಿ

“ವಾಣಿ ವಿಲಾಸ ಸಾಗರ ಜಲಾಶಯ ಭದ್ರಾ” ಡ್ಯಾಂ ಕುರಿತು ಅಧಿಕಾರಿಗಳು ಹೇಳಿದ್ದೇನು? | Vani Vilasa Sagar Dam

Editor Nammajana
Last updated: 14 August 2024 03:03
By Editor Nammajana 2 Min Read
Share
SHARE

Chitradurga news|nammajana.com|14-8-2024

ತುಂಗಭದ್ರಾ ಜಲಾಶಯ ಕ್ರಸ್ಟ್ ಗೇಟ್ ಅನಾಹುತ ಹಿನ್ನೆಲೆ ಭದ್ರಾ ಮೇಲ್ದಂಡೆ ಮುಖ್ಯ ಇಂಜಿನಿಯರ್ ಎಫ್. ಎಚ್. ಲಮಾಣಿ ನೇತೃತ್ವದ ತಂಡ ಪರಿಶೀಲನೆ

ನಮ್ಮಜನ.ಕಾಂ, ಹಿರಿಯೂರು: ಚಿತ್ರದುರ್ಗ ಜಿಲ್ಲೆಯ ಜನರ ಜೀವನಾಡಿ ಏಕೈಕ ಜಲಾಶಯ ವಿವಿ ಸಾಗರ ಜಲಾಶಯದ (Vani Vilasa Sagar Dam) ಸುರಕ್ಷಿತವಾಗಿದೆ. ಯಾವುದೇ ಸಮಸ್ಯೆ ಇಲ್ಲ, ಯಾವುದೇ ಗೇಟ್, ನೀರು ಸೋರಿಕೆಯಾಗಲೀ, ಭವಿಷ್ಯದಲ್ಲಿ ಕ್ರಸ್ಟ್ ಕಳಚಿ ಬೀಳುವ ಅಥವಾ ಡ್ಯಾಂ ನಿಂದ ನೀರು ಹೊರ ಹೋಗುವ ಅಪಾಯಗಳು ಏನಿಲ್ಲ.

ಇದು ತಜ್ಞ ಇಂಜಿನಿಯರ್‌ಗಳ ಉವಾಚ, ತುಂಗ ಭದ್ರಾ ಜಲಾಶಯ ಕ್ರಸ್ಟ್ ಗೇಟ್ ಕೊಚ್ಚಿ ಹೋಗು ಅಪಾಯದ ಸಂದರ್ಭ ಎದುರಾದ ಹಿನ್ನಲೆ ರಾಜ್ಯ ಸರ್ಕಾರ ಎಲ್ಲ ಜಲಾಶಯಗಳ (Vani Vilasa Sagar Dam) ವಾಸ್ತವಾಂಶ ಪರಿಶೀಲನೆಗೆ ಸೂಚಿಸಿ ಬುಧವಾರವೇ ವರದಿ ನೀಡುವಂತೆ ತಾಕೀತು ಮಾಡಿತ್ತು.

ಅದರಂತೆ ಭದ್ರಾ ಮೇಲ್ದಂಡೆ ಯೋಜನೆ ಮುಖ್ಯ ಇಂಜಿನಿಯರ್ ಎಫ್. ಎಚ್. ಲಮಾಣಿ ನೇತೃತ್ವದ ತಂಡ ಮಂಗಳವಾರ ವಿವಿ ಸಾಗರ ಜಲಾಶಯ ಭೇಟಿ ನೀಡಿ ಜಲಾಶಯವನ್ನು ಗೇಟ್ ಗಳ  ಇಂಚಿಂಚು ಪರಿಶೀಲಿಸಿ ಅಪಾಯದ ಲಕ್ಷಗಳೇನಾದರೂ‌ (Vani Vilasa Sagar Dam) ಇವೆಯೇ ಎಂಬುದನ್ನು  ಖಚಿತಪಡಿಸಿಕೊಂಡರು.

ಭದ್ರಾ ಮೇಲ್ದಂಡೆ ಮುಖ್ಯ ಇಂಜಿನಿಯರ್ ಎಫ್.ಎಚ್.ಲಮಾಣಿ ನೇತೃತ್ವದ ತಂಡ ವಿವಿಸಾಗರ ಜಲಾಶಯಕ್ಕೆ ಭೇಟಿ ನೀಡಿ ಪರಿಶೀಲಿಸಿತು. ಎಂಬುದರ ಬಗ್ಗೆ ಪರಿಶೀಳಿಸಿದರು. ಜಲಾಶಯದ ಗೋಡೆಗಳಿಂದ ಏನಾದರೂ ನೀರು ಬಸಿದು ಹೊರಹೋಗುತ್ತಿರಬಹುದೇ ಎಂಬ ಸಂದೇಹಗಳ ನಿವಾರಣೆ ಮಾಡಿಕೊಂಡರು.

ಇದನ್ನೂ ಓದಿ: ದಿನ ಭವಿಷ್ಯ | ಬುಧವಾರ | 14 ಆಗಸ್ಟ್ 2024 | Dina Bhavishya

ವಾಣಿ ವಿಲಾಸ ಸಾಗರ ಭರ್ತಿಯಾದಲ್ಲಿ * ನೀರನ್ನು ನದಿಗೆ ಬಿಡಲು ಕ್ರಸ್ಟ್‌ ಗೇಟ್ ಗಳಿಲ್ಲ, ನೋ‌ ಪ್ರಾಬ್ಲಂ. (Vani Vilasa Sagar Dam)

ವಿವಿಸಾಗರ ಜಲಾಶಯಕ್ಕೆ  ಕ್ರಸ್ಟ್‌ ಗೇಟ್ ವ್ಯವಸ್ಥೆಯಿಲ್ಲ. 30 ಟಿಎಂಸಿ ಸಾಮರ್ಥ್ಯದ ಜಲಾಶಯ ಭರ್ತಿಯಾದಾಗ ಸಹಜವಾಗಿಯೇ ಕೋಡಿಯಿಂದ ನೀರು ಹೊರ ಹೋಗುತ್ತದೆ. ಕೆರೆಗಳ ಮಾದರಿಯಲ್ಲಿ ಕೋಡಿ ಸೃಜಿಸಲಾಗಿದೆ. ಕ್ರಸ್ಟ್ ಗೇಟ್ ಉಸಾಬರಿ ಈ ಜಲಾಶಯಕ್ಕೆ ಇಲ್ಲ. ಆದರೆ ಅಚ್ಚು ಕಟ್ಟು ಪ್ರದೇಶಕ್ಕೆ ನೀರುಣಿಸುವಾಗ ಕಾಲುವೆಗೆ ನೀರು ಹಾಯಿಸುವ ಪುಟ್ಟ ಕ್ರಸ್ಟ ಗೇಟ್ ಇದ್ದು ಮಾನವ ಚಾಲಿತ ವ್ಯವಸ್ಥೆ ಇದಾಗಿದೆ. ಕೈಯಿಂದಲೇ ತಿರುಗಿಸಿ ಗೇಟ್ಗಳನ್ನು ಎತ್ತಲಾಗುತ್ತದೆ.

ಭದ್ರಾ ಮೇಲ್ದಂಡೆ ಮುಖ್ಯ ಇಂಜಿನಿಯರ್ ಎಫ್. ಎಚ್. ಲಮಾಣಿ ಹೇಳಿದಿಷ್ಟು (Vani Vilasa Sagar Dam)

ಪರಿಶೀಲನೆ ನಂತರ ಮಾಧ್ಯಮದವರ ಜೊತೆ ಮಾತನಾಡಿದ ಭದ್ರಾ ಮೇಲ್ದಂಡೆ ಮುಖ್ಯ ಇಂಜಿನಿಯರ್ ಎಫ್. ಎಚ್. ಲಮಾಣಿ, ಮುಖ್ಯಮಂತ್ರಿಗಳು ಹಾಗೂ ಜಲ ಸಂಪನ್ಮೂಲ (Vani Vilasa Sagar Dam) ಸಚಿವರ ಸೂಚನೆ ಮೇರೆಗೆ ಜಲಾಶಯ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲಿಸಲಾಗಿದೆ.

ಅಧಿಕಾರಿಗಳ ತಂಡ

ಜಲಾಶಯ ಗಟ್ಟಿ ಮುಟ್ಟಾಗಿದ್ದು ಆತಂಕ ಪಡುವ ಯಾವುದೇ ಲಕ್ಷಣಗಳಿಲ್ಲವೆಂದರು. ಭದ್ರಾ ಮೇಲ್ದಂಡೆ ಅಧೀಕ್ಷಕ ಇಂಜಿನಿಯರ್‌ಮಧುಕುಮಾರ್, ಕಾರ್ಯಪಾಲಕ ಇಂಜಿನಿಯರ್‌ಚಂದ್ರಪ್ಪ, ಸಹಾಯಕ ಕಾರ್ಯಪಾಲಕ ಇಂಜಿನಿಯರ್‌ವಿಜಯ್ ಕುಮಾರ್, ಸಹಾಯಕ ಇಂಜಿನಿಯರ್ ಮಾನಸ ಪರಿಶೀಲನಾ ತಂಡದಲ್ಲಿ ಇದ್ದರು.

You Might Also Like

Dina Bhavishya | ದಿನ ಭವಿಷ್ಯ, ಇವತ್ತು ಯಾವ ರಾಶಿಗೆ ಶುಭ?

Gold Rate | ಬಂಗಾರದ ಬೆಲೆಯಲ್ಲಿ ಇಳಿಕೆ

Transfer | ಜಿಲ್ಲಾ ಬಿಸಿಎಂ ಅಧಿಕಾರಿ ಆರ್.ಸುಬ್ರಾನಾಯಕ್ ವರ್ಗಾವಣೆ, ನೂತನ ಅಧಿಕಾರಿ ಅಧಿಕಾರ ಸ್ವೀಕಾರ

POWER CUT | ಇಂದು ಬೆಳಗ್ಗೆಯಿಂದ ಸಂಜೆವರೆಗೆ ಕರೆಂಟ್ ಇರಲ್ಲ

Dina Bhavishya | ದಿನ ಭವಿಷ್ಯ, ಇವತ್ತು ಯಾವ್ಯಾವ ರಾಶಿಗೆ ಶುಭ ಲಾಭ, ನಷ್ಟ ನೋಡಿ

TAGGED:Bhadra upper bankChief EngineerChitradurga NewsEngineer VisitF. H. The team led by LamaniHiriyurInflowKannada Newskannada suddiNammajana.comSafety CheckVV Sagar DamVV Sagar ReservoirWallsWater LevelWater Storageಇಂಜಿನಿಯರ್ ಭೇಟಿಎಫ್. ಎಚ್. ಲಮಾಣಿಒಳಹರಿವುಕನ್ನಡ ನ್ಯೂಸ್ಕನ್ನಡ ಸುದ್ದಿಗೋಡೆಗಳಚಿತ್ರದುರ್ಗ ನ್ಯೂಸ್ಚಿತ್ರದುರ್ಗ ಸುದ್ದಿನಮ್ಮಜನ.ಕಾಂನೀರಿನ ಮಟ್ಟನೀರಿನ ಸಂಗ್ರಹಣೆನೇತೃತ್ವದ ತಂಡಭದ್ರಾ ಮೇಲ್ದಂಡೆಮುಖ್ಯ ಇಂಜಿನಿಯರ್ವಿವಿ ಸಾಗರ ಅಣೆಕಟ್ಟುವಿವಿ ಸಾಗರ ಜಲಾಶಯಸುರಕ್ಷತೆ ಪರಿಶೀಲನೆಹಿರಿಯೂರು
Share This Article
Facebook Twitter Whatsapp Whatsapp Telegram Email Print
ಈ ಮೇಲಿನ ಸುದ್ದಿ, ಲೇಖನದ ಬಗ್ಗೆ ನಿಮ್ಮ ಅನಿಸಿಕೆ ಏನು?
Love1
Sad0
Happy0
Sleepy0
Angry0
Dead0
Wink1
Previous Article ದಿನ ಭವಿಷ್ಯ | ಬುಧವಾರ | 14 ಆಗಸ್ಟ್ 2024 | Dina Bhavishya
Next Article Chitradurga Rain: ಬುಧವಾರ ಬೆಳಗಿನ ಜಾವ ಚಿತ್ರದುರ್ಗ ಜಿಲ್ಲೆಯಲ್ಲಿ ಭರ್ಜರಿ ಮಳೆ | ಐದು ದಿನ ವರುಣಾರ್ಭಟ ಹೆಚ್ಚು
Leave a comment

Leave a Reply Cancel reply

Your email address will not be published. Required fields are marked *

Stay Connected

TelegramFollow

Latest News

Gold Rate | ಬಂಗಾರದ ಬೆಲೆಯಲ್ಲಿ ಏರಿಕೆ
ಇಂದಿನ ಸುದ್ದಿ
Dina Bhavishya | ದಿನ ಭವಿಷ್ಯ, ಇವತ್ತು ಯಾವ್ಯಾವ ರಾಶಿಗೆ ಶುಭ?
ದಿನ ಭವಿಷ್ಯ
POWER CUT | ಇಂದಿನಿಂದ ಎರಡು ದಿನ ಬೆಳಗ್ಗೆಯಿಂದ ಸಂಜೆವರೆಗೂ ಕರೆಂಟ್ ಇರಲ್ಲ
ಇಂದಿನ ಸುದ್ದಿ
Adike rate | ಅಡಿಕೆ ಬೆಲೆಯಲ್ಲಿ ಇಳಿಕೆ
ಅಡಿಕೆ ಧಾರಣೆ

Kannada News (ಕನ್ನಡ ಸುದ್ದಿ): Get the latest updates of karnataka news, world news, india news, political News and celebrity Kannada news and more on Nammajana (nammajana.com).

Sign Up for Our Newsletter

Subscribe to our newsletter to get our newest articles instantly!

Namma JanaNamma Jana
© 2025 NammaJanna. Kannada News Portal. All Rights Reserved.
adbanner
AdBlock Detected
Our site is an advertising supported site. Please whitelist to support our site.
Okay, I'll Whitelist
Welcome Back!

Sign in to your account

Lost your password?