Namma JanaNamma JanaNamma Jana
  • ಇಂದಿನ ಸುದ್ದಿ
  • ರಾಜಕೀಯ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಕ್ರೀಡೆ
  • ಆರೋಗ್ಯ
  • ದಿನ ಭವಿಷ್ಯ
Reading: V V Sagar Dam | ಮಾರಿಕಣಿವೆ ಡ್ಯಾಂ ಕೋಡಿ ಬೀಳಲು ಕ್ಷಣಗಣನೆ
Share
Notification Show More
Font ResizerAa
Font ResizerAa
Namma JanaNamma Jana
  • ಇಂದಿನ ಸುದ್ದಿ
  • ರಾಜಕೀಯ
  • ವಿಶೇಷ ಸುದ್ದಿ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಆರೋಗ್ಯ
  • ಕ್ರೀಡೆ
  • ದಿನ ಭವಿಷ್ಯ
  • ರಾಜಕೀಯ
Search
  • ಇಂದಿನ ಸುದ್ದಿ
  • ರಾಜಕೀಯ
  • ವಿಶೇಷ ಸುದ್ದಿ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಆರೋಗ್ಯ
  • ಕ್ರೀಡೆ
  • ದಿನ ಭವಿಷ್ಯ
  • ರಾಜಕೀಯ
Have an existing account? Sign In
Follow US
  • Advertise
© 2024 Namma Janna. Kannada News Portal. All Rights Reserved.
Namma Jana > Blog > ವಿಶೇಷ ಸುದ್ದಿ > V V Sagar Dam | ಮಾರಿಕಣಿವೆ ಡ್ಯಾಂ ಕೋಡಿ ಬೀಳಲು ಕ್ಷಣಗಣನೆ
ವಿಶೇಷ ಸುದ್ದಿ

V V Sagar Dam | ಮಾರಿಕಣಿವೆ ಡ್ಯಾಂ ಕೋಡಿ ಬೀಳಲು ಕ್ಷಣಗಣನೆ

Editor Nammajana
Last updated: 2 January 2025 02:51
By Editor Nammajana 2 Min Read
Share
SHARE
Chitradurga news|nammajana.com|2-1-2025 
  • ಜಲಾಶಯಕ್ಕೆ 693 ಕ್ಯೂಸೆಕ್ ಒಳಹರಿವು
  • ನೀರು ಸಂಗ್ರಹ
  • ಪ್ರಸ್ತುತ 129.60 ಅಡಿಗೆ ತಲುಪಿದ ಜಲಾಶಯದ ನೀರಿನ ಮಟ್ಟ.

ವಿಶೇಷ ವರದಿ: ಪಿ.ಟಿ.ಸಿದ್ಧೇಶ್ ಲಕ್ಕಿಹಳ್ಳಿ

ನಮ್ಮಜನ.ಕಾಂ, ಹೊಸದುರ್ಗ: ತಾಲೂಕಿನ ವಿವಿ ಸಾಗರ ಜಲಾಶಯ ಮತ್ತೊಮ್ಮೆ ಭರ್ತಿಯಾಗಿದ್ದು, ಕೋಡಿಬೀಳಲು (V V Sagar Dam) ದಿನಗಣನೆ ಶುರುವಾಗಿದೆ. ಪ್ರಥಮ ಬಾರಿಗೆ 1934 ರಲ್ಲಿ 2ನೇ ಬಾರಿಗೆ 2022 ರಲ್ಲಿ ಭರ್ತಿಯಾಗಿತ್ತು.
ಮತ್ತೆ ಇದೀಗ, ಜಲಾಶಯಕ್ಕೆ ದಾಖಲೆ ಮಟ್ಟದ ನೀರು ಹರಿದು ಬಂದಿದ್ದು, ಪ್ರಸ್ತುತ ಜಲಾಶಯದ ನೀರಿನ ಮಟ್ಟ 129.65 ಅಡಿಗೆ ಬಂದು ನಿಂತಿದೆ. ಇನ್ನೂ ಜಲಾಶಯಕ್ಕೆ ಅರ್ಧ ಅಡಿ ನೀರು ಬಂದರೆ, ಇನ್ನೊಂದು ವಾರದೊಳಗಾಗಿ 3ನೇ ಬಾರಿಗೆ (V V Sagar Dam) ಕೋಡಿ ಬಿದ್ದು, ಐತಿಹಾಸಿಕ ದಾಖಲೆ ನಿರ್ಮಾಣವಾಗಲಿದೆ.
ಜಲಾಶಯ ಕೋಡಿ ಬಿದ್ದಲ್ಲಿ ಒಂದೆಡೆ ರೈತರ ಮುಖದಲ್ಲಿ ಸಂತಸ ಮೂಡಿದರೆ, ಜಲಾಶಯದ ಹಿನ್ನೀರಿನ ಹೊಸದುರ್ಗ ತಾಲೂಕಿನ ರೈತರಿಗೆ ಸಂಕಷ್ಟದ ಪರಿಸ್ಥಿತಿ ಎದುರಾಗಿದೆ.
ಎರಡು ವರ್ಷದ ಹಿಂದೆ (2022) ಡ್ಯಾಂ ಕೋಡಿ ಬಿದ್ದಾಗ ಹಿನ್ನೀರಿನ ಕೆಲ ಗ್ರಾಮಗಳಲ್ಲಿ ತೇವಾಂಶ ಹೆಚ್ಚಾಗಿ ಮನೆಗಳು ಬಿರುಕು ಬಿಟ್ಟಿದ್ದವು. ಇನ್ನೂ ಮಾಡದಕೆರೆ ಹೋಬಳಿಯ ಲಕ್ಕಿಹಳ್ಳಿ, ಮಾದಿಹಳ್ಳಿ, ಅಯ್ಯನಹಳ್ಳಿ, ಬೇವಿನಹಳ್ಳಿ, ಅಂಚೀಬಾರಿಹಟ್ಟಿ, ನಾಗಯ್ಯನಹಟ್ಟಿ, ತಿಮ್ಮಯ್ಯನಹಟ್ಟಿ, (V V Sagar Dam) ಕೆರೆಕೋಡಿಹಟ್ಟಿ, ಶೀರನಕಟ್ಟೆ, ಕೋಡಿಹಳ್ಳಿಹಟ್ಟಿ, ಪೂಜಾರಹಟ್ಟಿ, ಮಾಳಿಗೆಹಟ್ಟಿ, ಎಂ.ಮಲ್ಲಾಪುರ, ಮತ್ತೊಡು ಹೋಬಳಿಯ ನಾಗತಿಹಳ್ಳಿ, ತಿಪ್ಪೇನಹಳ್ಳಿ, ಅರೇಹಳ್ಳಿ, ಹೊಸೂರು ಭೋವಿಹಟ್ಟಿ, ಹುಣಸೇಕಟ್ಟೆ ಮತ್ತು ಇಂಡೇ ದೇವರಹಟ್ಟಿ ಸೇರಿದಂತೆ ಇನ್ನಿತರ ಗ್ರಾಮಗಳ ಜನರ ರೈತರ ಜಮೀನುಗಳು ಮುಳುಗಿದ್ದವು. ಜಲಾಶಯದಲ್ಲಿ ನೀರು ಮತ್ತಷ್ಟು ಹೆಚ್ಚಾದರೆ, ಈ ಬಾರಿಯೂ ಜಮೀನುಗಳು ಮುಳುಗಬಹುದೆಂಬ ಆತಂಕದಲ್ಲಿದ್ದಾರೆ.
ಜಲಾಶಯದಲ್ಲಿ 130 ಅಡಿ ನೀರು ಸಂಗ್ರಹವಾದರೆ, ಜಲಾಶಯದ ಹಿನ್ನೀರಿನ (ಹೊಸದುರ್ಗ ತಾಲೂಕಿನ) ಅಷ್ಟರ ಮಟ್ಟಿಗೆ ಸಮಸ್ಯೆ ಏನು ಆಗುವುದಿಲ್ಲ. ಆದರೆ, 130 ಅಡಿಗಿಂತ ಹೆಚ್ಚು ದಾಟಿದರೆ, ಜಮೀನುಗಳು ಮುಳುಗಡೆಯಾಗುವುದಲ್ಲದೆ, ಗ್ರಾಮಗಳು ಕೂಡ ಮುಳುಗುವ ಭೀತಿ ಎದುರಾಗುತ್ತದೆ. ಸರ್ಕಾರ ಗಡಿ ಗುರುತು ಮಾಡಿರುವ ಹಿನ್ನೀರು ಪ್ರದೇಶವನ್ನು ದಾಟಿ, ಖಾಸಗಿ ಜಮೀನುಗಳಿಗೆ ನೀರು ಬಂದಿತ್ತು. ಇಂತಹ (V V Sagar Dam) ಪರಿಸ್ಥಿತಿಯನ್ನು 2022 ರಲ್ಲಿ ಅನುಭವಿಸಿದ್ದೇವೆ.
ಜಲಾಶಯದಲ್ಲಿ ನೀರು ಹೆಚ್ಚಾಗುವ ಸಾಧ್ಯತೆಯಿದ್ದು, ತಾಲೂಕು ಆಡಳಿತ ಮತ್ತು ಜಿಲ್ಲಾಡಳಿತ ಮುಂಜಾಗ್ರತಾ ಕ್ರಮವಹಿಸಬೇಕೆಂದು ಲಕ್ಕಿಹಳ್ಳಿ ಗ್ರಾಮದ ಯುವಕ ಚಿಕ್ಕ ಕರಿಯಪ್ಪ ಒತ್ತಾಯಿಸಿದ್ದಾರೆ.
ಇದನ್ನೂ ಓದಿ: Dina Bhavishya | ದಿನ ಭವಿಷ್ಯ | ಇವತ್ತು ಯಾವ ರಾಶಿಗೆ ಹೇಗಿದೆ ದಿನ?
ಬಾಕ್ಸ್
ವಾಣಿವಿಲಾಸ ಸಾಗರ ಜಲಾಶಯದ ನೀರಿನ ಮಟ್ಟ 129 ಅಡಿಗೆ ತಲುಪಿದ್ದು, ಮತ್ತೊಮ್ಮೆ ಕೋಡಿ ಬೀಳುವ ಸಂದರ್ಭ ಸಮೀಪಿಸಿದೆ. ಈಗಾಗಲೇ, ಜಲಾಶಯದ ಹಿನ್ನೀರಿನ ಗ್ರಾಮಗಳಿಗೆ ಭೇಟಿ ನೀಡಿ, ಜನರ ಸಮಸ್ಯೆಗಳನ್ನು (V V Sagar Dam) ಕೇಳಲಾಗಿದೆ. ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ಮುಂಜಾಗ್ರತಾ ಕ್ರಮವಹಿಸಿಕೊಂಡಿದ್ದೇವೆ. ಡ್ಯಾಂ ನಲ್ಲಿ ದಾಖಲೆ ಪ್ರಮಾಣದಲ್ಲಿ ನೀರು ಸಂಗ್ರಹವಾಗಿದ್ದು, ಪೋಷಕರು ತಮ್ಮ ಮಕ್ಕಳನ್ನು ನೀರಿನತ್ತ ಹೋಗದಂತೆ ಎಚ್ಚರವಹಿಸಬೇಕು. 
  ತಿರುಪತಿ ಪಾಟೀಲ್. 
ತಹಶೀಲ್ದಾರರು, ಹೊಸದುರ್ಗ

You Might Also Like

Dina Bhavishya | ದಿನ ಭವಿಷ್ಯ , ಇವತ್ತು ಯಾವ್ಯಾವ ರಾಶಿಗೆ ಶುಭ ಯೋಗ?

Dina Bhavishya | ದಿನ ಭವಿಷ್ಯ, ಇವತ್ತು ಯಾವ್ಯಾವ ರಾಶಿಗೆ ಶುಭ ಯೋಗ?

Dina Bhavishya | ದಿನ ಭವಿಷ್ಯ | 06-06-2025

Dina Bhavishya | ದಿನ ಭವಿಷ್ಯ, ಇವತ್ತು ಯವ್ಯಾವ ರಾಶಿಗೆ ಶುಭ ಯೋಗ?

Dina Bhavishya | ದಿನ ಭವಿಷ್ಯ | 04-06-2025 | ಇವತ್ತು ಯಾವ್ಯಾವ ರಾಶಿಗೆ ಶುಭ, ಅಶುಭ?

TAGGED:Chitradurga NewsHiriyurInflowKannada Newskannada suddiNammajana.comVV Sagar DamVV Sagar ReservoirWater LevelWater Storageಒಳಹರಿವುಕನ್ನಡ ನ್ಯೂಸ್ಕನ್ನಡ ಸುದ್ದಿಚಿತ್ರದುರ್ಗ ನ್ಯೂಸ್ಚಿತ್ರದುರ್ಗ ಸುದ್ದಿನಮ್ಮಜನ.ಕಾಂನೀರಿನ ಮಟ್ಟನೀರಿನ ಸಂಗ್ರಹಣೆವಿವಿ ಸಾಗರ ಅಣೆಕಟ್ಟುವಿವಿ ಸಾಗರ ಜಲಾಶಯಹಿರಿಯೂರು
Share This Article
Facebook Twitter Whatsapp Whatsapp Telegram Email Print
ಈ ಮೇಲಿನ ಸುದ್ದಿ, ಲೇಖನದ ಬಗ್ಗೆ ನಿಮ್ಮ ಅನಿಸಿಕೆ ಏನು?
Love0
Sad0
Happy1
Sleepy0
Angry0
Dead0
Wink0
Previous Article Dina Bhavishya | ದಿನ ಭವಿಷ್ಯ | ಇವತ್ತು ಯಾವ ರಾಶಿಗೆ ಹೇಗಿದೆ ದಿನ?
Next Article Chitradurga Fort | ಐತಿಹಾಸಿಕ ಕೋಟೆಗೆ 20 ಸಾವಿರಕ್ಕೂ ಹೆಚ್ಚು ಪ್ರವಾಸಿಗರು ದಂಡು
Leave a comment

Leave a Reply Cancel reply

Your email address will not be published. Required fields are marked *

Stay Connected

TelegramFollow

Latest News

Gold Rate | ಬಂಗಾರದ ಬೆಲೆಯಲ್ಲಿ ಇಂದು ಭರ್ಜರಿ ಇಳಿಕೆ
ಇಂದಿನ ಸುದ್ದಿ
Adike rate | ಚನ್ನಗಿರಿ ಅಡಿಕೆ ರೇಟ್ | 06-06-2025
ಅಡಿಕೆ ಧಾರಣೆ
Gold Rate | ಇಂದಿ‌ನ ಬಂಗಾರದ ಬೆಲೆ ಎಷ್ಟಿದೆ?
ಇಂದಿನ ಸುದ್ದಿ
ಇಂದಿನ ಅಡಕೆ ರೇಟ್ | Adike rate
ಅಡಿಕೆ ಧಾರಣೆ

Kannada News (ಕನ್ನಡ ಸುದ್ದಿ): Get the latest updates of karnataka news, world news, india news, political News and celebrity Kannada news and more on Nammajana (nammajana.com).

Sign Up for Our Newsletter

Subscribe to our newsletter to get our newest articles instantly!

Namma JanaNamma Jana
© 2025 NammaJanna. Kannada News Portal. All Rights Reserved.
adbanner
AdBlock Detected
Our site is an advertising supported site. Please whitelist to support our site.
Okay, I'll Whitelist
Welcome Back!

Sign in to your account

Lost your password?