Chitradurga news | nammajana.com | 05-08-2025
ನಮ್ಮಜನ.ಕಾಂ,ಚಳ್ಳಕೆರೆ: ನಗರದ(Accident) ರಾಷ್ಟ್ರೀಯ ಹೆದ್ದಾರಿ ಬಳ್ಳಾರಿ ರಸ್ತೆಯಲ್ಲಿ ಎರಡು ಬೈಕ್ಗಳ ನಡುವೆ ಡಿಕ್ಕಿ ಸಂಭವಿಸಿ ಬೈಕ್ ಸವಾರ ಮಲಬೋರನಹಟ್ಟಿಯ ಅಭಿಷೇಕ್ (28) ಸ್ಥಳದಲ್ಲೇ ಮೃತಪಟ್ಟರೆ, ಅದೇ ಗ್ರಾಮದ ಬೋರೇಶ್ (26) ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಇದನ್ನೂ ಓದಿ: KSRTC ಮುಷ್ಕರ | ಚಿತ್ರದುರ್ಗದಲ್ಲಿ ಬೆಳಗ್ಗೆ 7 ಗಂಟೆವರೆಗೆ ಹೇಗಿದೆ ಸ್ಥಿತಿ? ಇಲ್ಲಿದೆ ರಿಪೋರ್ಟ್
ಸೋಮವಾರ ಮಧ್ಯಾಹ್ನ 4ರ ಸಮಯದಲ್ಲಿ ಟಿವಿಎಸ್ ವಾಹನದಲ್ಲಿ ಬಂದ ಅಭಿಷೇಕ್ ಮತ್ತು ಬೋರೇಶ್ ಪರಸ್ಪರ ಡಿಕ್ಕಿ ಹೊಡೆದಿದ್ದಾರೆ.
ಪರಿಣಾಮ ತೀವ್ರ ರಕ್ತಸ್ರಾವದಿಂದ(Accident) ಅಭಿಷೇಕ್ ಆಸ್ಪತ್ರೆಗೆ ತರುವ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ. ಬೋರೇಶ್ ಚಿಕಿತ್ಸೆ ಪಡೆಯುತ್ತಿದ್ದಾರೆ. ಚಳ್ಳಕೆರೆಯಲ್ಲಿ ಪ್ರಕರಣ ದಾಖಲಾಗಿದೆ.
