
Chitradurga news |nammajana.com |23-12-2024
ನಮ್ಮಜನ.ಕಾಂ, ಚಿತ್ರದುರ್ಗ: ಚಿತ್ರದುರ್ಗ ನಗರದ (Car Accident) ದೊಡ್ಡಪೇಟೆಯ ಜಿ.ಸಿ. ಹೊಯ್ಸಳ (28) ಭಾನುವಾರ ರಾತ್ರಿ ಕಾರು ಅಪಘಾತದಲ್ಲಿ ಮೃತಪಟ್ಟಿದ್ದಾರೆ.
ಭಾನುವಾರ ರಾತ್ರಿ ಒಂಬತ್ತು ಗಂಟೆ ಸುಮಾರಿನಲ್ಲಿ ಮನೆಯಿಂದ ಬೆಂಗಳೂರಿಗೆ ಉದ್ಯೋಗ ಸಂದರ್ಶನ ಇದೆ ಎಂದು ತೆರಳುತ್ತಿದ್ದ ವೇಳೆ ಐಮಂಗಳ ಬಳಿಯಲ್ಲಿ ಕೆಟ್ಟು ನಿಂತಿದ್ದ ಲಾರಿಗೆ ಡಿಕ್ಕಿ (Car Accident) ಒಡೆದು ಪರಿಣಾಮವಾಗಿ ಕಾರು ಪುಡಿ ಪುಡಿಯಾಗಿದ್ದು ಹೊಯ್ಸಳ ಸ್ಥಳದಲ್ಲಿ ಮೃತಪಟ್ಟಿದ್ದಾನೆ. ಇವರು ಕೂಡ್ಲಿಗಿ ಶಾಸಕ ಎನ್.ಬಿ.ಡಾ. ಶ್ರೀನಿವಾಸ್ ಅಕ್ಕನ ಮಗ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ದಿನ ಭವಿಷ್ಯ | 23 ಡಿಸೆಂಬರ್ 2024 | Dina Bhavishya
ಹೊಯ್ಸಳ ಅವರ ಪಾರ್ಥಿವ ಶರೀರವನ್ನು ಇಂದು ಮಧ್ಯಾಹ್ನ 1 ಗಂಟೆ ಸುಮಾರಿಗೆ ದೊಡ್ಡಪೇಟೆ ಸ್ವಗೃಹಕ್ಕೆ ತರಲಾಗುತ್ತದೆ ಎಂದು ಕುಟುಂಬದ ಮೂಲಗಳು ತಿಳಿಸಿದೆ.