
Chitradurga news|nammajana.com|9-05-2025
ನಮ್ಮಜನ.ಕಾಂ, ಚಳ್ಳಕೆರೆ: ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಮತ್ತು ಹಸಿರುಕ್ರಾಂತಿಹರಿಕಾರ ಬಾಬು ಜಗಜೀವನರಾಮ್ ರಾಷ್ಟದ ಶೋಷಿತ ಸಮುದಾಯದ ಸರ್ವತೋಮುಖ ಅಭಿವೃದ್ದಿಗಾಗಿ ಹೋರಾಟ ನಡೆಸಿದವರು. ದಲಿತರೂ ಸೇರಿದಂತೆ ಅಲಕ್ಷಿತಗೊಂಡ ಎಲ್ಲಾ (Ambedkar) ಸಮುದಾಯಗಳಿಗೂ ಸರ್ಕಾರದ ಸೌಲಭ್ಯಗಳನ್ನು ಪಡೆಯುವ ಅವಕಾಶವನ್ನು ಇಬ್ಬರು ನಾಯಕರುಮಾಡಿದ್ಧಾರೆ. ಡಾ.ಬಿ.ಆರ್.ಅಂಬೇಡ್ಕರ್ ಮತ್ತು ಬಾಬುಜಗಜೀವನರಾಮ್ರವರ ಕೊಡುಗೆಗಳನ್ನು ಎಂದಿಗೂ ಯಾರೂ ಮರೆಯಬಾರದು ಎಂದು ಕ್ಷೇತ್ರದ ಶಾಸಕ, ಸಣ್ಣಕೈಗಾರಿಕೆ ಅಭಿವೃದ್ದಿಮಂಡಳಿ ಅಧ್ಯಕ್ಷ ಟಿ.ರಘು ಮೂರ್ತಿ ತಿಳಿಸಿದರು.
ಅವರು, ಬುಧವಾರ ಸಂಜೆ ನಗರಂಗೆರೆ ಗ್ರಾಮದ ಖಾಸಗಿ ಬಸ್ನಿಲ್ದಾಣದ ರಂಗ ಮಂದಿರದಲ್ಲಿ ದಲಿತ ಸಂಘಟನೆಗಳು ಹಮ್ಮಿಕೊಂಡಿದ್ದ ಡಾ.ಬಿ.ಆರ್.ಅಂಬೇಡ್ಕರ್ರವರ ೧೩೪ನೇ ಮತ್ತು ಬಾಬು ಜಗಜೀವನರಾಮ್ ೧೧೮ನೇ ಜನ್ಮದಿನೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ದಲಿತ ಸಂಘಟನೆಗಳ ಹಿರಿಯ ನೇತಾರ, ಮಾಜಿ ಜಿಲ್ಲಾಪಂಚಾಯಿತಿ ಸದಸ್ಯ ಬಿ.ಪಿ.ಪ್ರಕಾಶ್ಮೂರ್ತಿ ಮಾತನಾಡಿ, ದಲಿತರಿಗೆ ಒಳಮೀಸಲಾತಿ ನೀಡುವಕುರಿತು ಸುಮಾರು ನಾಲ್ಕು ದಶಕಗಳ ಹೋರಾಟ ಸಫಲವಾಗುತ್ತಿದೆ. ಈಗಾಗಲೇ ಸರ್ಕಾರ ಜಾತಿಸಮೀಕ್ಷೆ ಆರಂಬಿಸಿದ್ದು ಸಮೀಕ್ಷೆ ಸಂದರ್ಭದಲ್ಲಿ (Ambedkar) ಪ್ರತಿಯೊಬ್ಬರೂ ಮಾದಿಗ ಎಂದು ಪ್ರಧಾನವಾಗಿ ಬರೆಸಬೇಕೆಂದರು.
ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಸಮರ್ಥರಾಯ ಮಾತನಾಡಿ, ಇಂದು ದಲಿತ ಸಮುದಾಯ ರಾಜಕೀಯ ಕ್ಷೇತ್ರದಲ್ಲಿ ಪ್ರಾತಿನಿತ್ಯ ಪಡೆದಿದೆಯಾದರೆ ಅದಕ್ಕೆ ಡಾ.ಬಿ.ಆರ್.ಅಂಬೇಡ್ಕರ್ ಮತ್ತು ಬಾಬು ಜಗಜೀವನರಾಮ್ ಮೂಲಕಾರಣರು.
ಇಬ್ಬರೂ ಮಹಾನ್ನಾಯಕರು ಹತ್ತಾರು ವರ್ಷಗಳ ಕಾಲ (Ambedkar) ನ್ಯಾಯವನ್ನು ಒದಗಿಸಲು ಧೀಮಂತ ಹೋರಾಟ ನಡೆಸಿದ್ಧಾರೆ. ಅವರ ಆದರ್ಶಗಳನ್ನು ಮೈಗೂಡಿಸಿಕೊಂಡು ನಾವೆಲ್ಲರೂ ನಡೆಯಬೇಕೆಂದರು.
ಇದನ್ನೂ ಓದಿ: Handicapped | ಪ್ರಸಕ್ತ ವರ್ಷದಲ್ಲಿಯೇ ಅಂಗವಿಕಲರ ಜನಗಣತಿ: ರಾಜ್ಯ ಆಯುಕ್ತ ದಾಸ್ ಸೂರ್ಯವಂಶಿ
ಕಾರ್ಯಕ್ರಮದಲ್ಲಿ ತಾಲ್ಲೂಕು ಗ್ಯಾರಂಟಿ ಸಮಿತಿ ಅದ್ಯಕ್ಷ ಗದ್ದಿಗೆತಿಪ್ಫೇಸ್ವಾಮಿ, ಕೆಡಿಪಿ ನಾಮನಿರ್ದೇಶಕ ಸದಸ್ಯ ಅಂಗಡಿರಮೇಶ್, ಮುಖಂಡರಾದ ರಂಗನಾಥ, ನಿಂಗಪ್ಪ, ಅಜ್ಮತ್ವುಲ್ಲಾ, ಲಿಂಗಣ್ಣ, ಮೈನಾಕುಮಾರ್, ರಾಜು ಮುಂತಾದವರು ಭಾಗವಹಿಸಿದ್ದರು.
New DC Office | ಜಿಲ್ಲಾಡಳಿತ ಭವನ ಕಟ್ಟಡ ಆರು ತಿಂಗಳಲ್ಲಿ ಪೂರ್ಣ: ಸಚಿವ ಡಿ.ಸುಧಾಕರ್