Namma JanaNamma JanaNamma Jana
  • ಇಂದಿನ ಸುದ್ದಿ
  • ರಾಜಕೀಯ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಕ್ರೀಡೆ
  • ಆರೋಗ್ಯ
  • ದಿನ ಭವಿಷ್ಯ
Reading: ಮೀರಸಾಬಿಹಳ್ಳಿಯಲ್ಲಿ ಅನ್ನಭಾಗ್ಯಕ್ಕೆ ಎರಡೇ ದಿನ ವಿತರಣೆ ನಾಟಕ, ಜನರ ಪರದಾಟ | Annabhagya
Share
Notification Show More
Font ResizerAa
Font ResizerAa
Namma JanaNamma Jana
  • ಇಂದಿನ ಸುದ್ದಿ
  • ರಾಜಕೀಯ
  • ವಿಶೇಷ ಸುದ್ದಿ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಆರೋಗ್ಯ
  • ಕ್ರೀಡೆ
  • ದಿನ ಭವಿಷ್ಯ
  • ರಾಜಕೀಯ
Search
  • ಇಂದಿನ ಸುದ್ದಿ
  • ರಾಜಕೀಯ
  • ವಿಶೇಷ ಸುದ್ದಿ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಆರೋಗ್ಯ
  • ಕ್ರೀಡೆ
  • ದಿನ ಭವಿಷ್ಯ
  • ರಾಜಕೀಯ
Have an existing account? Sign In
Follow US
  • Advertise
© 2024 Namma Janna. Kannada News Portal. All Rights Reserved.
Namma Jana > Blog > ಇಂದಿನ ಸುದ್ದಿ > ಮೀರಸಾಬಿಹಳ್ಳಿಯಲ್ಲಿ ಅನ್ನಭಾಗ್ಯಕ್ಕೆ ಎರಡೇ ದಿನ ವಿತರಣೆ ನಾಟಕ, ಜನರ ಪರದಾಟ | Annabhagya
ಇಂದಿನ ಸುದ್ದಿ

ಮೀರಸಾಬಿಹಳ್ಳಿಯಲ್ಲಿ ಅನ್ನಭಾಗ್ಯಕ್ಕೆ ಎರಡೇ ದಿನ ವಿತರಣೆ ನಾಟಕ, ಜನರ ಪರದಾಟ | Annabhagya

Editor Nammajana
Last updated: 21 September 2024 4:49 AM
By Editor Nammajana 2 Min Read
Share
SHARE
Telegram Group Join Now
WhatsApp Group Join Now

Chitradurga news |nammajana.com|21-9-2024

ನಮ್ಮಜನ. ಚಳ್ಳಕೆರೆ: ಕಳೆದ ಕೆಲವು ತಿಂಗಳುಗಳಿಂದ ತಾಲ್ಲೂಕಿನ ಮೀರಸಾಬಿಹಳ್ಳಿ ಗ್ರಾಮದ ನ್ಯಾಯಬೆಲೆ (Annabhagya) ಅಂಗಡಿಯಲ್ಲಿ ಪಡಿತರವನ್ನು ಪಡೆಯಲು ಜನರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ದಿನಗಟ್ಟಲೇ ಕಾದರೂ ನ್ಯಾಯಬೆಲೆ ಅಂಗಡಿ ತೆರೆಯದೆ ಪಡಿತರ ನೀಡುವುದಿಲ್ಲ. ತಡವಾಗಿ ಬಂದವರಿಗೆ ಹೆಬ್ಬೆಟ್ಟುಹಾಕಿಸಿಕೊಂಡು ಮುಂದಿನ ತಿಂಗಳು ನೀಡುವುದಾಗಿ ಹೇಳುತ್ತಾರೆ.

ಕೇವಲ ತಿಂಗಳಲ್ಲಿ ಎರಡು ದಿನ ಮಾತ್ರ ಪಡಿತರ ನೀಡುತ್ತಾರೆಂದು ಅಲ್ಲಿನ ಪಡಿತರದಾರರು ತಮ್ಮ ಅಳಲು ತೋಡಿಕೊಂಡಿದ್ದಾರೆ.

ಗ್ರಾಮದ ಕರಿಯಣ್ಣ, ತಿಪ್ಫೇಸ್ವಾಮಿ, ಚಂದ್ರಪ್ಪ ಈ ಬಗ್ಗೆ ಮಾಹಿತಿ ನೀಡಿ, ಪ್ರತಿತಿಂಗಳು ಪಡಿತರವನ್ನು ಪಡೆಯಲು ನಾವು (Annabhagya) ಬೆಳಗ್ಗೆಯಿಂದ ಸಂಜೆವರೆಗೂ ಕೆಲಸಕಾರ್ಯ ಬಿಟ್ಟು ಕಾದರೂ ಅಕ್ಕಿ ದೊರೆಯುತ್ತಿಲ್ಲ.

ಕಾರಣ, ನ್ಯಾಯಬೆಲೆ ಅಂಗಡಿ ಮಾಲೀಕ ಬರುವುದಿಲ್ಲ, ಈ ಬಗ್ಗೆ ಯಾವುದೇ ಮಾಹಿತಿ ನೀಡುವುದಿಲ್ಲ, ಸಂಜೆವರೆಗೂ ಕಾದರೂ (Annabhagya) ವಾಪಾಸ್ ಹೋಗಿ ಮಾರನೆ ದಿನ ಬಂದರೆ ಪಡಿತರವಿಲ್ಲ ಹೆಬ್ಬೆಟ್ಟು ಹಾಕಿಹೋಗಿ ಮುಂದಿನ ಬಾರಿ ನೀಡಲಾಗುತ್ತದೆ ಎಂದು ಭರವಸೆ ನೀಡುತ್ತಾರೆ.

ಇದರಿಂದ ಜನರು ರೋಸಿದ್ದಾರೆ. ಕೇವಲ ಎರಡು ದಿನ ಪಡಿತರ ವಿರತರಿಸಿ ನಂತರ ಯಾರಿಗೂ ಪಡಿತರ ನೀಡುತ್ತಿಲ್ಲ. ಸರ್ಕಾರ ಕೊಡುವ ಉಚಿತ ಅಕ್ಕಿ, ರಾಗಿ ಸಿಗುವುದಿಲ್ಲ ನ್ಯಾಯಬೆಲೆ ಅಂಗಡಿ ತೆರೆದ ಕೂಡಲೇ ಹೆಬ್ಬೆಟ್ಟುಹಾಕಿದವರು ಪಡಿತರ ಪಡೆಯಲು ಬಂದವರು ನಾಮುಂದೆ, ತಾಮುಂದು ಎಂದು ಅಂಗಡಿ ಮುಂದೆ ಜಗಳಕ್ಕೆ ನಿಲ್ಲುತ್ತಾರೆ. ಪ್ರತಿತಿಂಗಳು ಇದೇ ರೀತಿ (Annabhagya) ಆಗುತ್ತಿದ್ದು, ಸಂಬಂಧಪಟ್ಟ ಅಧಿಕಾರಿ ಭೇಟಿ ನೀಡುವಂತೆ ಮನವಿ ಮಾಡಿದ್ದಾರೆ.

ಗ್ರಾಮದಲ್ಲಿ ಬಿಪಿಎಲ್ ಕಾರ್ಡ್ದಾರರೇ ಹೆಚ್ಚಿದ್ದು, ಪ್ರತಿನಿತ್ಯ ಕೂಲಿ ಕೆಲಸದಿಂದಲೇ ಜೀವನ ನಡೆಸಬೇಕಿದೆ. ಸುಮಾರು ೧೫೦೦ಕ್ಕೂ ಹೆಚ್ಚು ಬಿಪಿಎಲ್ ಪಡಿತರದಾರರು ಇದ್ದಾರೆ.

ಆದರೆ, ಕೇವಲ ಕೆಲವೇ ಜನರಿಗೆ ಮಾತ್ರ ಪಡಿತರ ಭಾಗ್ಯ ದೊರೆಯುತ್ತಿದೆ. ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ತುರ್ತು ಗಮನಹರಿಸಿ ಪ್ರತಿ ತಿಂಗಳು ಎಲ್ಲರಿಗೂ ಪಡಿತರ  ವಿತರಣೆಯಾಗುವಂತೆ ಕ್ರಮವಹಿಸಬೇಕೆಂದು ಮನವಿ (Annabhagya) ಮಾಡಿದ್ಧಾರೆ.

ವಿಪರ್ಯಾಸವೆಂದರೆ ಪ್ರತಿತಿಂಗಳು ಸಾರ್ವಜನಿಕರು ನ್ಯಾಯಬೆಲೆ ಅಂಗಡಿ ಮುಂದೆ ಸೇರಿ ವಾಗ್ವಾದ ನಡೆಸಿ ಪಡಿತರ ಸಿಗುತ್ತಿಲ್ಲವೆಂದು ಆರೋಪಿಸಿದರೂ ಸಹ ನ್ಯಾಯಾಬೆಲೆ ಅಂಗಡಿ ಮಾಲೀಕರು ಮಾತ್ರ ಈ ಬಗ್ಗೆ ಯಾವುದೇ ಸಮಜಾಯಿಸಿ ಪಡಿತರದಾರರಿಗೆ ನೀಡುತ್ತಿಲ್ಲ.

ನಾವು ಪಡಿತರವನ್ನು ವಿತರಿಸಿದಾಗ ಮಾತ್ರ ತೆಗೆದುಕೊಳ್ಳಬೇಕು ಎಂಬ ಭಾವನೆ ಅವರಲಿ ಎನ್ನಿಸುತ್ತಿದೆ. ನ್ಯಾಯಬೆಲೆ ಅಂಗಡಿ ಮಾಲೀಕರಿಂದ ಇದುವರೆಗೂ ಪಡಿತರರಾಗಿ ಅವ್ಯವಸ್ಥೆಯ (Annabhagya) ಯಾವುದೇ ಮಾಹಿತಿ ನೀಡಿಲ್ಲ. ಸಂಬಂಧಪಟ್ಟ ಅಧಿಕಾರಿಗಳು ತುರ್ತು ಗಮನಹರಿಸುವಂತೆ ಮನವಿ ಮಾಡಿದ್ಧಾರೆ.

ಇದನ್ನೂ ಓದಿ: Kannada Dina Bhavishya: ಇಂದಿನ ದಿನ ಭವಿಷ್ಯದಲ್ಲಿ ಯಾವ ರಾಶಿಗೆ ಶುಭ ಶನಿವಾರ?

ಪೋಟೋ೨೦ಸಿಎಲ್‌ಕೆ೧ ಚಳ್ಳಕೆರೆ ತಾಲ್ಲೂಕಿನ ಮೀರಸಾಬಿಹಳ್ಳಿ ಗ್ರಾಮದ ನ್ಯಾಯಬೆಲೆ ಅಂಗಡಿ ಮುಂದೆ ಚೀಲವಿಟ್ಟು ಪಡಿತರಕ್ಕಾಗಿ ಕಾಯುತ್ತಿರುವುದು.

ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು

ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ನಮ್ಮ ವರದಿಗಾರರು. ನಿಮ್ಮೂರಿನ ಸಭೆ, ಸಮಾರಂಭ, ಶಾಲೆ ಕಾಲೇಜು ಕಾರ್ಯಕ್ರಮಗಳು, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಉತ್ತಮವಾದ ಫೋಟೋ ಜೊತೆಗೆ ಕಳುಹಿಸಬಹುದು. ಸುದ್ದಿ ಪ್ರಕಟವಾದ ಸುದ್ದಿಯ ಲಿಂಕ್‌ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ. ಮತ್ತು ಜಾಹಿರಾತುಗಳನ್ನು ಆಕರ್ಷಕ ದರದಲ್ಲಿ ಪ್ರಕಟಿಸಲಾಗುವುದು.

ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್‌ ಮೇಲ್‌ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.

» ನಮ್ಮಜನ.ಕಾಂ gmail:  nammajananews@gmail.com

» Whatsapp Number-9686622252

You Might Also Like

Bhadra: ಭದ್ರಾ ಜಲಾಶಯಕ್ಕೆ ಹೊಳಲ್ಕೆರೆ ಶಾಸಕ ಡಾ.ಎಂ.ಚಂದ್ರಪ್ಪ ಬಾಗಿನ ಸಮರ್ಪಣೆ

Nikhil Kumaswamy: ಮಾಜಿ ಸಂಸದ ಪ್ರಜ್ವಲ್ ಜೀವಾವಧಿ ಶಿಕ್ಷೆ ಬಗ್ಗೆ ನಿಖಿಲ್ ಕುಮಾರಸ್ವಾಮಿ ಹೇಳಿದ್ದೇನು?

ಗಣಿಬಾಧಿತ ಹಳ್ಳಿಗಳಲ್ಲಿ ವಸತಿ, ನಿವೇಶನ ರಹಿತ ಫಲಾನುಭವಿಗಳ ಆಯ್ಕೆ : ಗ್ರಾಮ ಸಭೆ ನಡೆಸಲು ದಿನಾಂಕ ನಿಗದಿ | HOLALKERE

HIRIYUR | ಕುಡಿಯುವ ನೀರಿಗಾಗಿ ಶಾಲಾ ಮಕ್ಕಳು ಪ್ರತಿಭಟನೆ

Dina Bhavishya | ದಿನ ಭವಿಷ್ಯ | ಇಂದು ಯಾವ ರಾಶಿಗೆ ಶುಭಯೋಗ

TAGGED:AnnabhagyaChallakereChitradurga NewsdeliveryKannada Newskannada suddiMeersabihalliNammajana.comSaletwo day deliveryಅನ್ನಭಾಗ್ಯಎರಡು ದಿನ ವಿತರಣೆಕನ್ನಡ ನ್ಯೂಸ್ಕನ್ನಡ ಸುದ್ದಿಕಳ್ಳಾಟಚಳ್ಳಕೆರೆಚಿತ್ರದುರ್ಗ ನ್ಯೂಸ್ಚಿತ್ರದುರ್ಗ ಸುದ್ದಿನಮ್ಮಜನ.ಕಾಂಮೀರಸಾಬಿಹಳ್ಳಿವಿತರಣೆ
Share This Article
Facebook Twitter Whatsapp Whatsapp Telegram Email Print
ಈ ಮೇಲಿನ ಸುದ್ದಿ, ಲೇಖನದ ಬಗ್ಗೆ ನಿಮ್ಮ ಅನಿಸಿಕೆ ಏನು?
Love0
Sad0
Happy1
Sleepy0
Angry0
Dead0
Wink0
Previous Article Kannada Dina Bhavishya: ಇಂದಿನ ದಿನ ಭವಿಷ್ಯದಲ್ಲಿ ಯಾವ ರಾಶಿಗೆ ಶುಭ ಶನಿವಾರ?
Next Article ಜಿಲ್ಲಾ ಆಸ್ಪತ್ರೆ DS ರವೀಂದ್ರ ಅವರಿಗೆ ತನ್ನ ಖಾಸಗಿ ನರ್ಸಿಂಗ್ ಹೋಂ ಮೇಲೆ ಲವ್ ಹೆಚ್ಚಂತೆ | ಸಂಸದರ ಎದುರು ಹಲವರು ಕಿಡಿ | District Hospital
Leave a comment

Leave a Reply Cancel reply

Your email address will not be published. Required fields are marked *

Stay Connected

TelegramFollow

Latest News

internal reservation: ಒಳಮೀಸಲಾತಿ ಜಾರಿ ಖಚಿತ : ಮಾಜಿ ಸಚಿವ ಎಚ್.ಆಂಜನೇಯ
ಇಂದಿನ ಸುದ್ದಿ
creative activities: ಪಠ್ಯದ ಜತೆಗೆ ಸೃಜನಶೀಲ ಚಟುವಟಿಕೆಗಳಲ್ಲಿಯೂ ಪಾಲ್ಗೊಳ್ಳಿ: ಬಿ.ವಿ.ತುಕಾರಾಂರಾವ್
ಇಂದಿನ ಸುದ್ದಿ
Akka Cafe: ಜಿಲ್ಲಾ ಪಂಚಾಯತ್ ಆವರಣದಲ್ಲಿ ಅಕ್ಕ ಕೆಫೆ ಪ್ರಾರಂಭ
ಇಂದಿನ ಸುದ್ದಿ
mining: ಗಣಿ ಮಾಫಿಯ ನಿಲ್ಲಿಸಿ ಪರಿಸರ ರಕ್ಷಿಸಿ | ಆ.16ರಂದು ಬಳ್ಳಾರಿಯಲ್ಲಿ ರಾಜ್ಯ ಸಮಾವೇಶ
ಇಂದಿನ ಸುದ್ದಿ

Kannada News (ಕನ್ನಡ ಸುದ್ದಿ): Get the latest updates of karnataka news, world news, india news, political News and celebrity Kannada news and more on Nammajana (nammajana.com).

Sign Up for Our Newsletter

Subscribe to our newsletter to get our newest articles instantly!

Namma JanaNamma Jana
© 2025 NammaJanna. Kannada News Portal. All Rights Reserved.
adbanner
AdBlock Detected
Our site is an advertising supported site. Please whitelist to support our site.
Okay, I'll Whitelist
Welcome Back!

Sign in to your account

Lost your password?