
Chitradurga news|nammajana.com|23-12-2024
ನಮ್ಮಜನ.ಕಾಂ, ಚಳ್ಳಕೆರೆ: ಪರಶುರಾಮಪುರ ಪೊಲೀಸ್ ಠಾಣಾ ವ್ಯಾಪ್ತಿಯ ನಾಗಪ್ಪನಹಳ್ಳಿ ಗೇಟ್ನ ಪಿ.ಮಹದೇವಪುರದ (Arrested) ಗೌರಮ್ಮ ಎಂಬುವವರ ಜಮೀನಿನಲ್ಲಿ ಕಳೆದ ಶುಕ್ರವಾರ ನಡೆದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಬಂಧಿಸುವಲ್ಲಿ ಪರಶುರಾಮಪುರ ಪೊಲೀಸ್ ಯಶಸ್ವಿಯಾಗಿದ್ಧಾರೆ.
ಆಂಧ್ರ ಮೂಲಕ ವಡ್ಡೆಪಾಳ್ಯಂ ಗ್ರಾಮದ ಎನ್.ಗಿತ್ತರಾಜ(28) ಎಂಬ ವ್ಯಕ್ತಿಯನ್ನು ರಾಮಣ್ಣ(30), ಕೊಟ್ರೇಶ್(25), ಬಸವರಾಜ(24), ಸುಧಮ್ಮ(43) ಎಂಬುವವರು ಕೊಲೆ ಮಾಡಿದ್ದರು. ಪ್ರಕರಣವನ್ನು ಬೆನ್ನತ್ತಿದ ಪೊಲೀಸರು (Arrested) ೪೮ಗಂಟೆಯಲ್ಲೇ ಕೊಲೆ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಇದನ್ನೂ ಓದಿ: ಚಿತ್ರದುರ್ಗ | ಜಿಲ್ಲಾ ಆಸ್ಪತ್ರೆಯಲ್ಲಿ ಇನ್ನಷ್ಟು ಸುಧಾರಣೆಗೆ ಅವಶ್ಯಕತೆ ಇದೆ: ನ್ಯಾಯಾಧೀಶ ಎಂ.ವಿಜಯ್ | Civil Judge
ಆಂಧ್ರದ ಮಲ್ಲಯ್ಯನೂರು ಗ್ರಾಮದ ರಾಮಣ್ಣನ ಸಂಬAಧಿ ಸುಶೀಲಮ್ಮಳ ಮತ್ತು ಎನ್.ಗಿತ್ತರಾಜನ ನಡುವೆ ಸಲುಗೆ ಇದ್ದನ್ನು ಕಂಡ ರಾಮಣ್ಣ ಗಿತ್ತರಾಜನ ಮೇಲೆ ಕೋಪಗೊಂಡಿದ್ದ ಹಲವಾರು ಬಾರಿ ಬುದ್ದಿ ಹೇಳಿದ್ದರೂ ಆತನಿಗೆ ಕೇಳಿರಲಿಲ್ಲ. (Arrested) ಬೆಂಗಳೂರಿನಲ್ಲಿ ಹೌಸ್ ಶಿಪ್ಟಿಂಗ್ ಕೆಲಸ ಮಾಡುತ್ತಿದ್ದ ಗಿತ್ತರಾಜ ಗ್ರಾಮ ಬಂದಿದ್ದನ್ನು ತಿಳಿದ ರಾಮಣ್ಣ ತನ್ನ ಸಹಚರರೊಂದಿಗೆ ಸೇರಿ 18 ರ ರಾತ್ರಿ ಗಿತ್ತರಾಜನಿಗೆ ಕಂಠಪೂರ್ತಿ ಮದ್ಯಸೇವನೆ ಮಾಡಿಸಿ ಕೊಲೆ ಮಾಡಿದ್ದಾನೆ ಎನ್ನಲಾಗಿದೆ.
ಇದನ್ನೂ ಓದಿ: ಭೀಕರ ಕಾರು ಅಪಘಾತ | MLA ಅಳಿಯ ಜಿ.ಸಿ.ಹೊಯ್ಸಳ ಸಾವು | Car Accident