
Chitradurga news|nammajana.com|28-11-2024
ನಮ್ಮಜನ.ಕಾಂ, ಹಿರಿಯೂರು: ಭದ್ರಾ ಜಲಾಶಯದಿಂದ ವಾಣಿ ವಿಲಾಸ ಜಲಾ ಶಯಕ್ಕೆ 2025 ರ ಜನವರಿವರೆಗೂ ನೀರು ಹರಿ (Bhadre Reservoir) ಸುವುದನ್ನು ಮುಂದುವರಿಸುವಂತೆ ಸರ್ಕಾರ ಆದೇಶ ಹೊರಡಿಸಿದೆ.
ಭದ್ರಾ ಜಲಾಶಯದಿಂದ ಭದ್ರಾ ಮೇಲ್ದಂಡೆ 12.50 ಟಿಎಂಸಿ ನೀರಿನ ಪೈಕಿ ತರೀಕೆರೆ ನೀರಾವರಿ ಯೋಜನೆಗೆ 1.47 ಟಿಎಂಸಿ ಹಾಗೂ ವಾಣಿವಿಲಾಸ ಸಾಗರಕ್ಕೆ ಎರಡು ಟಿಎಂಸಿಯಂತೆ 3.4 ಟಿಎಂಸಿ ನೀರನ್ನೆತ್ತಲು ಅನುಮತಿ ನೀಡಲಾಗಿತ್ತು.

ಇದೀಗ ಮುಂದು ವರೆದು ತರೀಕೆರೆ ಏತ ನೀರಾವರಿಯೋಜನೆಗೆ ಸೌಲಭ್ಯ ಕಲ್ಪಿಸಲುಹಾಗೂ ವಾಣಿ ವಿಲಾಸ ಸಾಗರ (Bhadre Reservoir) ಜಲಾಶಯದಲ್ಲಿ ನೀರು ಸಂಗ್ರಹಿಸಲು ಇನ್ನುಳಿದ 9.03 ಟಿಎಂಸಿ ನೀರಿನ ಮಿತಿಯಲ್ಲಿ ಪ್ರತಿದಿನ 700 ಕ್ಯುಸೆಕ್ ನೀರನ್ನು ಜನವರಿ 2025 ರ ವರೆಗೆ ಮಾತ್ರ ಹರಿಸಲು ಅನುಮತಿ ನೀಡಲಾಗಿದೆ ಎಂದು ಜಲಸಂಪನ್ಮೂಲ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ವನಿತಾಮಣಿ ತಿಳಿಸಿದ್ದಾರೆ.
ಪ್ರತಿದಿನವೂ 700 ಕ್ಯುಸೆಕ್ನಂತೆ ನೀರು ನಿರಂತರವಾಗಿ ಹರಿದರೆ ಇನ್ನು 20-25 ದಿನಗಳಲ್ಲಿ ಜಲಾಶಯ ಕೋಡಿ ಬೀಳುವ ಸಂಭವವಿದೆ. ಬುಧವಾರದ ಮಾಹಿತಿಯಟತೆ ಜಲಾಶಯಕ್ಕೆ (Bhadre Reservoir) 577 ಕ್ಯುಸೆಕ್ನೀರಿನ ಒಳ ಹರಿವಿದ್ದು ಒಟ್ಟು ನೀರಿನ ಮಟ್ಟ 128. 60 ಅಡಿಯಷ್ಟಾಗಿದೆ. ಜಲಾಶಯ ಕೋಡಿ ಬೀಳಲು ಕೇವಲ ಇನ್ನು 1.40 ಅಡಿಯಷ್ಟೇ ಬಾಕಿ ವಿವಿ ಸಾಗರ ಜಲಾಶಯ ಇದ್ದು ಇದೀಗ ಜನವರಿವರೆಗೂ ಭದ್ರಾದ ನೀರು ಹರಿಸುವ ಆದೇಶ ಹೊರಬಿದ್ದಿರುವುದು ತಾಲೂಕಿನ ರೈತರ ಕೋಡಿ ಬೀಳುವ ಕನಸು ನನಸಾಗುವ ಕಾಲ ಹತ್ತಿರ ಬಂದಂತಾಗಿದೆ.
ಇದನ್ನೂ ಓದಿ: ಲವ್ ಶಾನೇ ಡೇಂಜರ್ | ಪ್ರೇಮ ವಿವಾಹವಾದ ಯುವಕನ ಭೀಕರ ಕೊಲೆ | Murder
ಜಿಲ್ಲೆಯ ಹಲವು ತಾಲೂಕುಗಳ ಕುಡಿಯುವ ನೀರಿನ ದಾಹ ನೀಗಿಸುವ ವಿವಿ ಸಾಗರ ಜಲಾಶಯ ಕೋಡಿ ಬೀಳಲು ಇನ್ನೂ ಒಂದು ಟಿಎಂಸಿ ನೀರಿನ ಅವಶ್ಯಕತೆ ಇದೆ ಎನ್ನಲಾಗಿದ್ದು ಮತ್ತೆ ನೀರು ಹರಿಸಲು ಆದೇಶ ಬಂದದ್ದು ಜಿಲ್ಲೆಯ ಜನರ ಮೊಗದಲ್ಲಿ ಆಶಾಭಾವನೆ ಮೂಡಿಸಿದೆ.
ಡಿಸಿಎಂ ಡಿಕೆಶಿ ಕರಸಿ ಬಾಗಿನ ಬಿಡಿಸಲು ಪಕ್ಕ ಪ್ಲಾನ್
ಆದೇಶ ಮುಂದುವರಿಸಿ ಸಚಿವರ ಕಾಳಜಿಗೆ ಸಂತಸ ಈಗಾಗಲೇ ಕೋಡಿ ಬಿದ್ದಾಗ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (Bhadre Reservoir) ಅವರನ್ನು ಕರೆಸಿ ಬಾಗಿನ ಬಿಡಿಸಿ ದಶಕಗಳ ಅಪಪ್ರಚಾರಕ್ಕೆ ಒಂದು ತೆರೆ ಎಳೆಯಲಾಗುವುದು ಎಂದು ಕಾಂಗ್ರೆಸ್ ವಲಯದಲ್ಲೇ ಗುಸುಗುಸು ಎನ್ನುತ್ತಿರುವುದು ಗುಟ್ಟಾಗಿ ಉಳಿದಿಲ್ಲ. ಯಾರ ಆಡಳಿತವಾದರೇನು ಕೋಡಿ ಬಿದ್ದು ವರ್ಷವೆಲ್ಲಾ ನೀರಿಗೆ ಬರ ಇರದಿದ್ದರೆ ಸಾಕು ಎಂಬುದು ರೈತರ, ಅಭಿಪ್ರಾಯವಾಗಿದೆ.
ಇದನ್ನೂ ಓದಿ: ವಾಣಿ ವಿಲಾಸ ಸಾಗರಕ್ಕೆ 577 ಕ್ಯೂಸೆಕ್ಸ್ ನೀರು | 28 ನವೆಂಬರ್ 2024 | Vani Vilasa Sagara Dam