Chitradurga news | nammajana.com | 14-5-2024
ನಮ್ಮಜನ.ಕಾಂ, ಚಿತ್ರದುರ್ಗ: ಚಿತ್ರದುರ್ಗದ ಖ್ಯಾತ ಸಾಹಿತಿ ಬರಗಾರರಾದ ಬಿ.ಎಲ್.ವೇಣು (BL Venu) ಅವರಿಗೆ ಆರೋಗ್ಯದಲ್ಲಿ ವ್ಯತ್ಯಸ ಕಂಡು ಬಂದಿದ್ದು ಹೆಚ್ಚಿನ ಚಿಕಿತ್ಸೆಯನ್ನು ಬೆಂಗಳೂರಿನಲ್ಲಿ ಪಡೆಯುತ್ತಿದ್ದಾರೆ.
ಆರೋಗ್ಯದಲ್ಲಿ ಏನೆಲ್ಲ ವ್ಯತ್ಯಾಸವಾಯಿತು, ಮೊದಲು ಚಿಕಿತ್ಸೆಯನ್ನು ನಾನು ಎಲ್ಲಿ ಪಡೆದೇ ಎಂದು ಎಲ್ಲಾವನ್ನೂ ಸ್ಪಷ್ಟವಾಗಿ ತನ್ನ ಫೇಸ್ ಬುಕ್ ಖಾತೆಯಲ್ಲಿ ಸ್ವತಃ ಬಿ.ಎಲ್. ವೇಣು (BL Venu) ಅವರು ಹಂಚಿಕೊಂಡಿದ್ದು ಅವರು ಆರೋಗ್ಯದಲ್ಲಿ ಬೆಳವಣಿಗೆ, ಆಸ್ಪತ್ರೆ, ಬಿಲ್ ಸೇರಿ ಅನೇಕ ವಿಷಯಗಳನ್ನು ಬರೆದುಕೊಂಡಿದ್ದು ನೀವು ಸಹ ಸಂಪೂರ್ಣ ಓದಿ.

ಆತ್ಮೀಯರೆ, (BL Venu Facebook Post)
ನಾನೀಗ ಮೊದಲ ಬಾರಿಗೆ ಇದ್ದಕ್ಕಿದ್ದಂತೆ ಅನಾರೋಗ್ಯ ಪೀಡಿತನಾಗಿ ಶುಕ್ರವಾರ ನಮ್ಮ ಡಾ.ಮುಕುಂದರಾವ್ ಅವರ”ಪತಂಜಲಿ” ಆಸ್ಪತ್ರೆ ಚಿತ್ರದುರ್ಗ ಸೇರಿದೆ.
ಕಾರಣ ಉಸಿರಾಟದ ತೀವ್ರ ತೊಂದರೆ. ತುಂಬಾ ಮುತುವರ್ಜಿಯಿಂದ ಡಾಕ್ಟರ್ ಅವರು ನೋಡಿಕೊಂಡರೂ ಉಸಿರಾಟದ ತೀವ್ರ ಸಮಸ್ಯೆಯಿಂದಾಗಿ ಬೆಂಗಳೂರಿನ “ಫೋರ್ಟೀಸ್” ಆಸ್ಪತ್ರೆಗೆ ರಾತ್ರೋರಾತ್ರಿ ಆಂಬುಲೆನ್ಸ್ ಅರೇಂಜ್ ಮಾಡಿ ಶುಭಹಾರೈಸಿ ಕಳುಹಿಸಿದರು.
ಹೋಗಿದ್ದು ಉಸಿರಾಟದ ತೊಂದರೆಗೆ. ಆದರೆ ಜೊತೆಗೆ ನೂರಾರು ಟೆಸ್ಟ್ ಗಳನ್ನು ಮಾಡಿಸಿ ಲಿವರ್ ತೊಂದರೆ, ಕಿಡ್ನಿ ಕ್ರಿಯಾಟಿನೈನ್ ಸಮಸ್ಯೆಯನ್ನೂ ಸೇರಿಸಿ ‘ಐಸಿಯು’ ಗೆ ನಾಲ್ಕುದಿನ ಇಟ್ಟುಕೊಂಡು ವಿವಿಧ ಟೆಸ್ಟ್ ಗಳಾದ ಎಕ್ಸ್ ರೆ, ಸಿ ಟಿ. ಸ್ಕ್ಯಾನ್ , ಲಿವರ್ ಮತ್ತು ಕಿಡ್ನಿ ಸ್ಕ್ಯಾನ್ ನಾನಾ ನಮೂನೆಯ ಟೆಸ್ಟ್ ಗಳಾಗಿ ಅರೆ ಜೀವವಾದೆ.
ನಾಲ್ಕು ದಿನ “ಐಸಿಯು” ನಲ್ಲಿಟ್ಟುಕೊಂಡ ವೈದ್ಯರುಗಳು ಕಿವಿ ಮೂಗು ಬಿಟ್ಟು ಸಾಧ್ಯವಾದ ಕಡೆಯೆಲ್ಲಾ ಸೂಜಿ ಹಾಕಿ ವೆಯಿನ್ ನರ್ವ್ ಗಳನ್ನೂ ಬಿಡದೆ ಡ್ರಿಪ್ ಬಾಟಲ್ ನೇತುಹಾಕಿದರು.ಮೂಗಿನಿಂದ ಆಕ್ಸಿಜನ್ ಕೊಡುವ ಏರ್ಪಾಡು ಮಾಡಿ ಗಂಭೀರ ಪರಿಸ್ಥಿತಿಯನ್ನು ಮನವರಿಕೆ ಮಾಡಿಕೊಟ್ಟರು.
ನಾಲ್ಕು ದಿನಗಳ ಕಾಲ ಹಗಲು ಯಾವುದೋ ರಾತ್ರಿ ಯಾವುದೋ ತಿಳಿಯದಂತೆ ಮಾಡಿ “ಐಸಿಯು” ನಲ್ಲಿಟ್ಟು ರಕ್ಷಿಸಿ ನಿನ್ನೆ ರಾತ್ರಿ ದಿ.13 ರಂದು ಸ್ಪೆಷಲ್ ವಾರ್ಡ್ ಗೆ ತಂದು ಹಾಕಿದ್ದಾರೆ. ಸಮಸ್ಯೆಗಳು ಸುಧಾರಿಸಿವೆ.
ಇದನ್ನೂ ಓದಿ: ಮನೆ ಬೀಗ ಒಡೆದು ಗಾಡ್ರೇಜ್ ನಲ್ಲಿದ್ದ 4.43 ಲಕ್ಷ ಬಂಗಾರ ಕಳ್ಳತನ
ಇನ್ನೆರಡು ದಿನಗಳಲ್ಲಿ ಡಿಸ್ ಚಾರ್ಜ್ ಮಾಡಬಹುದು. ಬಿಲ್ ವಿಷವೇರಿದಂತೆ ಏರುತ್ತಿದೆ.ಈ ಕ್ಷಣಕ್ಕೆ ಮೂರು ಲಕ್ಷ ಮುಟ್ಟಿದೆ .ಮುಂದೇನಾಗುತ್ತದೋ ನೋಡೋಣ. ದುರ್ಗಕ್ಕೆ ಬಂದಾಗ ಭೇಟಿಯಾಗೋಣ.ಆರೋಗ್ಯದ ಕಡೆ ಗಮನವಿಡಿ ಎಂದು ಬಿ.ಎಲ್.ವೇಣು (BL Venu) ಅವರ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ನಮ್ಮ ವರದಿಗಾರರು. ನಿಮ್ಮೂರಿನ ಸಭೆ, ಸಮಾರಂಭ, ಶಾಲೆ ಕಾಲೇಜು ಕಾರ್ಯಕ್ರಮಗಳು, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಉತ್ತಮವಾದ ಫೋಟೋ ಜೊತೆಗೆ ಕಳುಹಿಸಬಹುದು. ಸುದ್ದಿ ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ. ಮತ್ತು ಜಾಹಿರಾತುಗಳನ್ನು ಆಕರ್ಷಕ ದರದಲ್ಲಿ ಪ್ರಕಟಿಸಲಾಗುವುದು.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ನಮ್ಮಜನ.ಕಾಂ gmail: nammajananews@gmail.com
» Whatsapp Number-9686622252