
Chitradurga news|nammajana.com|18-12-2024
ನಮ್ಮಜನ.ಕಾಂ, ಹಿರಿಯೂರು: ನಗರದಲ್ಲಿರುವ ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿಗೆ ಬಂದ ವಿದ್ಯಾರ್ಥಿನಿಯರು (Bus problem) ಶಾಲಾ-ಕಾಲೇಜುಗಳಿಗೆ ಹೋಗಿ ಬರಲು ಸಮಯಕ್ಕೆ ಸರಿಯಾಗಿ ಬಸ್ ವ್ಯವಸ್ಥೆ ಕಲ್ಪಿಸುವಂತೆ ಒತ್ತಾಯಿಸಿದ ಘಟನೆ ಮಂಗಳವಾರ ನಡೆಯಿತು.
ತಾಲೂಕಿನ ಜೆಜಿಹಳ್ಳಿ ಹೋಬಳಿಯ ಓಬಳಾಪುರ ಹಾಗೂ ಗಾಯತ್ರಿಪುರ ಗ್ರಾಮದ ವಿದ್ಯಾರ್ಥಿನಿಯರು ಸಮಯಕ್ಕೆ (Bus problem) ಸರಿಯಾಗಿ ಬಸ್ ಬರುತ್ತಿಲ್ಲದ ಕಾರಣ ಕೆಎಸ್ಆರ್ಟಿಸಿ ನಿಲ್ದಾಣಕ್ಕೆ ಬಂದು ಅಧಿಕಾರಿಗಳನ್ನು ಪ್ರಶ್ನಿಸಿದರು. ಅದಕ್ಕೆ ಉತ್ತರಿಸಿದ ಅಧಿಕಾರಿಗಳು ನಿಲ್ದಾಣಕ್ಕೆ ಬಸ್ ಬಂದರೆ ತಕ್ಷಣವೇ ಕಳಿಸಿಕೊಡುತ್ತೇನೆ. ಆದರೆ ಬಸ್ ಬರುತ್ತಿಲ್ಲ ಎಂದರು.

ಇದರಿಂದ ಬೇಸರಗೊಂಡ ವಿದ್ಯಾರ್ಥಿನಿಯರು ನೇರವಾಗಿ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಕಚೇರಿ ಹತ್ತಿರ ಹೋಗಿ ಒತ್ತಾಯಿಸಿದರು. ಅಲ್ಲಿದ್ದ ಆಪ್ತಸಹಾಯಕರು ಸಚಿವರು ಬೆಳಗಾವಿ ಅಧಿ ವೇಶನದಲ್ಲಿದ್ದು, ಅಲ್ಲಿ ಮೊಬೈಲ್ (Bus problem) ಬಳಸುವುದಿಲ್ಲ. ಮಧ್ಯಾಹ್ನ ನಾವೇ ಕರೆ ಮಾಡಿ ಸಮಸ್ಯೆ ತಿಳಿಸುತ್ತೇವೆ ಎಂದು ಭರವಸೆ ನೀಡಿದರು. ಇದರಿಂದ ವಿದ್ಯಾರ್ಥಿನಿಯರು ವಾಪಸ್ಸಾದರು.
ಹಿರಿಯೂರು ನಗರದ ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿ ಬಳಿ ಮಂಗಳವಾರ ತೆರಳಿದ ವಿದ್ಯಾರ್ಥಿಗಳು ಶಾಲಾ- ಕಾಲೇಜುಗಳಿಗೆ ಹೋಗಿ ಬರಲು ಓಬಳಾಪುರ ಹಾಗೂ ಗಾಯತ್ರಿಪುರಕ್ಕೆ ಸಮಯಕ್ಕೆ ಸರಿಯಾಗಿ ಬಸ್ ವ್ಯವಸ್ಥೆ ಕಲ್ಪಿಸುವಂತೆ ಒತ್ತಾಯಿಸಿದರು.
ವಿದ್ಯಾರ್ಥಿನಿ ಸಿದ್ದಲಕ್ಷ್ಮೀ ಮಾತನಾಡಿ, ಓಬಳಾಪುರ ಮತ್ತು ಗಾಯತ್ರಿಪುರದಿಂದ ಸುಮಾರು 50ಕ್ಕೂ ಅಧಿಕ ವಿದ್ಯಾರ್ಥಿಗಳು ನಿತ್ಯವು ಶಿರಾ-ಹಿರಿಯೂರು ತಾಲೂಕಿಗೆ ಹೋಗುತ್ತಿದ್ದು, ಹಿರಿಯೂರಿನಿಂದ ಪ್ರತಿನಿತ್ಯ ಒಂದು ಬಸ್ ಬೆಳಗ್ಗೆ 8.30ರ ವೇಳೆಗೆ ಬರುತ್ತಿತ್ತು. ಆದರೆ ಇತ್ತೀಚೆಗೆ ನಾನಾ ಕಾರಣ ಹೇಳಿ ಬಸ್ ಕಳಿಸುತ್ತಿಲ್ಲ. ಇದರಿಂದ ನಾವು ನಿತ್ಯವೂ ಊರಿನಿಂದ ಜೆಜೆಹಳ್ಳಿಗೆ ಸುಮಾರು 8 ಕಿಮೀ ದೂರ ನಡೆದುಕೊಂಡು ಬಂದು, ಅಲ್ಲಿಂದ ಬಸ್ಗೆ ಹೋಗುವ ಸ್ಥಿತಿ ಉದ್ಭವಿಸಿದೆ.ಈಗ ಪರೀಕ್ಷೆ ಸಮಯವಿದ್ದು, ಬಸ್ ಇಲ್ಲದ ಕಾರಣ ಸಾಕಷ್ಟು ತೊಂದರೆಯಾಗುತ್ತಿದೆ. ಎಂದರು.
ಇದನ್ನೂ ಓದಿ: ನಿವೃತ್ತ ಶಿಕ್ಷಕಿ ಪೆನ್ಷನ್ ಗೆ ಹಣಕ್ಕೆ ಬೇಡಿಕೆ | ಇಬ್ಬರು ಲೋಕಾಯುಕ್ತ ಬಲೆಗೆ | Lokayukta
ಆದ್ದರಿಂದ ಶಾಲಾ ಕಾಲೇಜಿಗೆ ಹೋಗಿ ಬರುವ ಸಮಯಕ್ಕೆ ಎರಡು ಬಸ್ ವ್ಯವಸ್ಥೆ ಕಲ್ಪಿಸಿದರೆ ಮಕ್ಕಳಿಗೆ (Bus problem) ಅನುಕೂಲವಾಗುತ್ತದೆ. ಸಮಸ್ಯೆ ಬಗೆಹರಿಯುತ್ತದೆ. ಇದನ್ನು ಸರಿಪಡಿಸದಿದ್ದರೆ, ಮುಂದಿನ ದಿನಗಳಲ್ಲಿ ಕೆಎಸ್ಆರ್ಟಿಸಿ ನಿಲ್ದಾಣದ ಮುಂದೆ ಮಕ್ಕಳ ಜತೆಯಲ್ಲಿ ಪೋಷಕರು ಜತೆಗೂಡಿ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.