Namma JanaNamma JanaNamma Jana
  • ಇಂದಿನ ಸುದ್ದಿ
  • ರಾಜಕೀಯ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಕ್ರೀಡೆ
  • ಆರೋಗ್ಯ
  • ದಿನ ಭವಿಷ್ಯ
Reading: Challakere | ಅಂತರ್ಜಾತಿ ವಿವಾಹಕ್ಕೆ ಹೆಣ್ಣಿನ ಪೋಷಕರ ವಿರೋಧ, ಮದುವೆ ಫೋಟೋ ವೈರಲ್
Share
Notification Show More
Font ResizerAa
Font ResizerAa
Namma JanaNamma Jana
  • ಇಂದಿನ ಸುದ್ದಿ
  • ರಾಜಕೀಯ
  • ವಿಶೇಷ ಸುದ್ದಿ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಆರೋಗ್ಯ
  • ಕ್ರೀಡೆ
  • ದಿನ ಭವಿಷ್ಯ
  • ರಾಜಕೀಯ
Search
  • ಇಂದಿನ ಸುದ್ದಿ
  • ರಾಜಕೀಯ
  • ವಿಶೇಷ ಸುದ್ದಿ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಆರೋಗ್ಯ
  • ಕ್ರೀಡೆ
  • ದಿನ ಭವಿಷ್ಯ
  • ರಾಜಕೀಯ
Have an existing account? Sign In
Follow US
  • Advertise
© 2024 Namma Janna. Kannada News Portal. All Rights Reserved.
Namma Jana > Blog > ಕ್ರೈಂ ಸುದ್ದಿ > Challakere | ಅಂತರ್ಜಾತಿ ವಿವಾಹಕ್ಕೆ ಹೆಣ್ಣಿನ ಪೋಷಕರ ವಿರೋಧ, ಮದುವೆ ಫೋಟೋ ವೈರಲ್
ಕ್ರೈಂ ಸುದ್ದಿ

Challakere | ಅಂತರ್ಜಾತಿ ವಿವಾಹಕ್ಕೆ ಹೆಣ್ಣಿನ ಪೋಷಕರ ವಿರೋಧ, ಮದುವೆ ಫೋಟೋ ವೈರಲ್

Editor Nammajana
Last updated: 8 March 2025 14:46
By Editor Nammajana 2 Min Read
Share
SHARE

Chitradurga news| nammajana.com|08-03-2025

ನಮ್ಮಜನ.ಕಾಂ, ಚಳ್ಳಕೆರೆ: ತಾಲ್ಲೂಕಿನ ನನ್ನಿವಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸುಮಾರು 30 ಕ್ಕೂ ಹೆಚ್ಚು (Challakere) ಹಟ್ಟಿಗಳಿದ್ದು, ಬುಡಕಟ್ಟು ಸಂಸ್ಕೃತಿಯ ನಾಯಕ ಸಮುದಾಯ ಈ ಭಾಗದಲ್ಲಿ ಅತಿಹೆಚ್ಚಿನ ಸಂಖ್ಯೆಯಲ್ಲಿದೆ. ಕೆಲವು ಸಂದರ್ಭಗಳಲ್ಲಿ ತಮ್ಮ ಸಮುದಾಯಕ್ಕೆ ಯಾವುದೇ ರೀತಿಯ ವ್ಯತಿರಿಕ್ತ ಪರಿಣಾಮವಾದರೆ ಅದನ್ನು ವಿರೋಧಿಸುವ ಶಕ್ತಿಗಳೇ ಹೆಚ್ಚು.

ನನ್ನಿವಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಂಡೆಹಟ್ಟಿ ಗ್ರಾಮದ ಚಂದ್ರಪ್ಪ ಎಂಬುವವರ ಪುತ್ರಿ ಶ್ರಾವಣಿ(21), ನನ್ನಿವಾಳ ಗ್ರಾಮದ ತಿಪ್ಪೇಸ್ವಾಮಿ ಎಂಬುವವರ ಪುತ್ರ ಪೃಥ್ವಿರಾಜ್(22) ಇಬ್ಬರು ಸಹಪಾಠಿಗಳಾಗಿದ್ದು, ಕಳೆದ ಕೆಲವು ವರ್ಷಗಳಿಂದ ಇಬ್ಬರಲ್ಲೂ ಪ್ರೀತಿ ಉಂಟಾಗಿ ಮದುವೆಯಾಗುವ ನಿರ್ಧಾರಕ್ಕೆ ಬಂದಿದ್ದರು.

ಶ್ರಾವಣಿ ಪರಿಶಿಷ್ಟ ಪಂಗಡಕ್ಕೆ ಸೇರಿದ್ದು, ಪೃಥ್ವಿರಾಜ್ ಪರಿಶಿಷ್ಟ ಜಾತಿಯನಾಗಿದ್ದು ಇವರ ಅಂತರ್ಜಾತಿ ವಿವಾಹಕ್ಕೆ ಮನೆಯವರ ವಿರೋಧವಿದ್ದು, ಎರಡ್ಮೂರು ಬಾರಿ ಗ್ರಾಮ ಹಾಗೂ ಪೊಲೀಸ್ ಠಾಣೆಯಲ್ಲಿ ಸಂದಾನ ಸಭೆ ನಡೆದಿತ್ತು. ಇವರಿಬ್ಬರ ವಿವಾಹಕ್ಕೆ (Challakere) ಯಾವುದೇ ಸಕರಾತ್ಮಕ ನಿಲುವು ತಾಳಲು ಸಾಧ್ಯವಾಗಲಿಲ್ಲ. ಈ ಮಧ್ಯೆ ಶ್ರಾವಣಿ ಮತ್ತು ಪೃಥ್ವಿರಾಜ್ ವಿವಾಹವಾಗಿ ವಿವಾಹದ ಪೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿತ್ತು.

ಈ ಬಗ್ಗೆ ಮಾಹಿತಿ ಪಡೆದ ಚಂದ್ರಪ್ಪನ ಬಂಧುಗಳು ಮಾ.7 ರ ಶುಕ್ರವಾರ ರಾತ್ರಿ ಗುಂಪುಗಟ್ಟಿಕೊಂಡು ನನ್ನಿವಾಳ ಗ್ರಾಮಕ್ಕೆ ಆಗಮಿಸಿ ತಿಪ್ಪೇಸ್ವಾಮಿಯನ್ನು ಅವಾಚ್ಯ ಶಬ್ದಗಳಿಂದ ಬೈದು ನಿನ್ನ ಕುಮ್ಮಕ್ಕಿನಿಂದಲೇ ಈ ರೀತಿಯಾಗಿದೆ ಎಂದು ಗಲಾಟೆ ಮಾಡಿ (Challakere) ಮನೆಯ ಬಾಗಿಲನ್ನು ಒಡೆದು, ತಿಪ್ಪೇಸ್ವಾಮಿಯ ಬೈಕ್ ಮೇಲೆ ಕಲ್ಲು ಎತ್ತಿಹಾಕಿದ್ದಾರೆ. ಚಂದ್ರಪ್ಪ ಮನೆ ಪಕ್ಕದಲ್ಲಿದ್ದ ಶಿವರಾಜ್ ಎಂಬುವವರ ಬೈಕ್, ಸೋಮಶೇಖರ್‌ರವರ ಟಾಟಾಮ್ಯಾಜೀಕ್ ಮೇಲೆ ಕಲ್ಲು ಎತ್ತಿಹಾಕಿ ಗಲಭೆ ಎಬ್ಬಿಸಿದ್ಧಾರೆ.

ಇದನ್ನೂ ಓದಿ: Doctor Jairam | ಹಣವಿಲ್ಲದೇ ಬಂದ ಬಡವರ ಸಂಜೀವಿನಿ ಡಾಕ್ಟರ್ ಜೈರಾಮ್ ಇನ್ನಿಲ್ಲ

ಸುದ್ದಿ ತಿಳಿದ ಡಿವೈಎಸ್ಪಿ ರಾಜಣ್ಣ, ಪಿಎಸ್‌ಐ ಜೆ.ಶಿವರಾಜ್ ಮತ್ತು ತಂಡ ಗ್ರಾಮಕ್ಕೆ ತೆರಳಿ ಹಲ್ಲೆ ನಡೆಸಿದವರನ್ನು ವಶಕ್ಕೆ ಪಡೆದಿದ್ಧಾರೆ. ತಿಪ್ಫೇಸ್ವಾಮಿ ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಬಂಡೆಹಟ್ಟಿಯ ಬೋರಯ್ಯ, ಸುನೀಲ್, ಸುರೇಶ್, ಪಾಪಯ್ಯ, ಕಾಟಯ್ಯ, ಜಯಣ್ಣ ಎಂಬುವವರ ಮೇಲೆ ಪ್ರಕರಣ ದಾಖಲಿಸಿದ್ಧಾರೆ. ಗ್ರಾಮದಲ್ಲಿ ಬಿಗುವಿನ ವಾತಾವಣವಿದ್ದು, ಪೊಲೀಸರ ಬಂದೋಬಸ್ತ್ ಮುಂದುವರೆದಿದೆ.

You Might Also Like

Murder | ಅನೈತಿಕ ಸಂಬಂಧಕ್ಕೆ ಕೊಲೆ, ಮಹಿಳೆ ಸೇರಿ ಮೂರು ಜನ ಬಂಧನ

Challakere crime | ನವವಿವಾಹಿತೆ ಆತ್ಮಹತ್ಯೆ, ಇಬ್ಬರ ಮೇಲೆ FIR ದಾಖಲು

Accident | ಕಾರು ಟ್ರಾಕ್ಟರ್ ನಡುವೆ ಅಪಘಾತ, ನಾಲ್ವರು ಸ್ಥಳದಲೇ ಸಾವು

Chitradurga accident | ಕಾರು-ಲಾರಿ ಅಪಘಾತ | ಮೂವರು ಸಾವು

Illegal marijuana | ಗಾಂಜಾ ಮಾರಾಟ ವ್ಯಕ್ತಿಯಿಂದ ಪೋಲಿಸ್ ಮೇಲೆ ಹಲ್ಲೆಗೆ ಯತ್ನ, ಪೋಲಿಸರಿಂದ ವ್ಯಕ್ತಿ ಕಾಲಿಗೆ ಗುಂಡು

TAGGED:Challakere Talukinter-caste marriageNanniwala villageParental oppositionuproarwedding photo goes viralಅಂತರ್ಜಾತಿ ವಿವಾಹಗಲಾಟೆಚಳ್ಳಕೆರೆ ತಾಲೂಕುನನ್ನಿವಾಳ ಗ್ರಾಮಪೋಷಕರ ವಿರೋಧವಿವಾಹ ಫೋಟೋ ವೈರಲ್
Share This Article
Facebook Twitter Whatsapp Whatsapp Telegram Email Print
ಈ ಮೇಲಿನ ಸುದ್ದಿ, ಲೇಖನದ ಬಗ್ಗೆ ನಿಮ್ಮ ಅನಿಸಿಕೆ ಏನು?
Love1
Sad0
Happy1
Sleepy0
Angry0
Dead0
Wink1
Previous Article ಗ್ರಾಮೀಣ ಪ್ರದೇಶಗಳಿಂದ ಸಾಂಸ್ಕೃತಿಕ ನೆಲಗಟ್ಟಿಗೆ ಹೊಸ ಸ್ಪರ್ಶ ಎನ್.ರಘುಮೂರ್ತಿ | Challakere
Next Article Dina Bhavishya | ದಿನ ಭವಿಷ್ಯ, ಉದ್ಯೋಗ ಲಾಭ, ವ್ಯವಹಾರದಲ್ಲಿ ಎಚ್ಚರ
Leave a comment

Leave a Reply Cancel reply

Your email address will not be published. Required fields are marked *

Stay Connected

TelegramFollow

Latest News

Transfer | ಜಿಲ್ಲಾ ಬಿಸಿಎಂ ಅಧಿಕಾರಿ ಆರ್.ಸುಬ್ರಾನಾಯಕ್ ವರ್ಗಾವಣೆ, ನೂತನ ಅಧಿಕಾರಿ ಅಧಿಕಾರ ಸ್ವೀಕಾರ
ಇಂದಿನ ಸುದ್ದಿ
POWER CUT | ಇಂದು ಬೆಳಗ್ಗೆಯಿಂದ ಸಂಜೆವರೆಗೆ ಕರೆಂಟ್ ಇರಲ್ಲ
ಇಂದಿನ ಸುದ್ದಿ
Dina Bhavishya | ದಿನ ಭವಿಷ್ಯ, ಇವತ್ತು ಯಾವ್ಯಾವ ರಾಶಿಗೆ ಶುಭ ಲಾಭ, ನಷ್ಟ ನೋಡಿ
ದಿನ ಭವಿಷ್ಯ
Gold Rate | ಬಂಗಾರದ ಬೆಲೆಯಲ್ಲಿ ಏರಿಕೆ
ಇಂದಿನ ಸುದ್ದಿ

Kannada News (ಕನ್ನಡ ಸುದ್ದಿ): Get the latest updates of karnataka news, world news, india news, political News and celebrity Kannada news and more on Nammajana (nammajana.com).

Sign Up for Our Newsletter

Subscribe to our newsletter to get our newest articles instantly!

Namma JanaNamma Jana
© 2025 NammaJanna. Kannada News Portal. All Rights Reserved.
adbanner
AdBlock Detected
Our site is an advertising supported site. Please whitelist to support our site.
Okay, I'll Whitelist
Welcome Back!

Sign in to your account

Lost your password?