
Chitradurga news|Nammajana.com|16-1-2025
ನಮ್ಮಜನ.ಕಾಂ, ಚಳ್ಳಕೆರೆ: ತಾಲ್ಲೂಕಿನ ಸಮಸ್ತ ರೈತರ ಭೂ ದಾಖಲಾತಿಗಳನ್ನು ಕಂಪ್ಯೂಟರೀಕರಣದ ಮೂಲಕ ಈಗಾಗಲೇ ಸಿದ್ದಪಡಿಸಿದ್ದು, ರೈತರು ಯಾವುದೇ ಗ್ರಾಮದ (Challakere) ಭೂದಾಖಲೆಗಳನ್ನು ಪಡೆಯಲು ಸರ್ಕಾರ ಅನುವು ಮಾಡಿಕೊಟ್ಟಿದೆ. ರೈತರಿಗೆ ಸಂಬಂಧಪಟ್ಟ ಭೂದಾಖಲಾತಿಗಳು ತಾಲ್ಲೂಕು ಕಚೇರಿಯೂ ಸೇರಿದಂತೆ ನಾಡಕಚೇರಿಯಲ್ಲಿಯೂ ಲಭ್ಯವಾಗಲಿದೆ. ಭೂದಾಖಲೆ ಪಡೆಯಲು ರೈತರು ಪರದಾಡುವ ಸ್ಥಿತಿ ಅವಲೋಕಿಸಿ ಸರ್ಕಾರ ಭೂಸುರಕ್ಷಾ ಯೋಜನೆಯನ್ನು ಜಾರಿಗೊಳಿಸಿದೆ ಎಂದು ಕ್ಷೇತ್ರದ ಶಾಸಕ, ಸಣ್ಣಕೈಗಾರಿಕೆ ಅಭಿವೃದ್ದಿಮಂಡಳಿ ಅಧ್ಯಕ್ಷ ಟಿ.ರಘುಮೂರ್ತಿ ತಿಳಿಸಿದರು.
ಅವರು, ಗುರುವಾರ ಸಂಜೆ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಸರ್ಕಾರದ ಕಂದಾಯ ಇಲಾಖೆಯ ಮಹತ್ತರ ಯೋಜನೆಯಾದ ಭೂಸುರಕ್ಷ ಯೋಜನೆಯನ್ನು ಕಂಪ್ಯೂಟರ್ ಮೂಲಕ ಚಾಲನೆ ನೀಡಿ ಮಾತನಾಡಿದರು. ಕಳೆದ ಹಲವಾರು ವರ್ಷಗಳಿಂದ (Challakere) ರೈತರು ತಮ್ಮ ದಾಖಲೆಗಳನ್ನು ಪಡೆಯಲು ತಾಲ್ಲೂಕು ಕಚೇರಿಗೆ ಅಲೆದಾಡಬೇಕಿತ್ತು. ತಂದ ನಂತರ ಬದಲಾವಣೆ ಮಾಡಿ ವಿವಿಧ ನಾಡಕಚೇರಿಗೆ ನೀಡಲಾಯಿತು, ಮುಂದುವರೆದ ಭಾಗವಾಗಿ ಕಂದಾಯ ಇಲಾಖೆಯ ಹಿರಿಯ ಅಧಿಕಾರಿಗಳ ಮಾರ್ಗದರ್ಶನ ಹಾಗೂ ಕಂದಾಯ ಸಚಿವ ಕೃಷ್ಣಬೈರೇಗೌಡರ ನಿರಂತರ ಶ್ರಮದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಭೂಸುರಕ್ಷಾ ದಾಖಲಾತಿಗಳನ್ನು ನೀಡಲು ಈ ವ್ಯವಸ್ಥೆ ಮಾಡಿದ್ದು, ಇದರ ಸದುಪಯೋಗವನ್ನು ರೈತರು ಪೂರ್ಣಪ್ರಮಾಣದಲ್ಲಿ ಪಡೆದುಕೊಳ್ಳುವಂತೆ ಮನವಿ ಮಾಡಿದರು.

ನಮ್ಮ ತಾಲ್ಲೂಕಿನ ಭೂಮಿಗೆ ಸಂಬಂಧಪಟ್ಟ ಯಾವುದೇ ದಾಖಲೆಯನ್ನು ಅತಿಸುಲಭವಾಗಿ ಪಡೆಯುವ ಅವಕಾಶವನ್ನು ಸರ್ಕಾರ ಮಾಡಿಕೊಟ್ಟಿದೆ. ಕೆಲವೊಮ್ಮೆ ಗ್ರಾಮೀಣ ಪ್ರದೇಶಗಳಲ್ಲಿ ಭೂ ದಾಖಲಾತಿಯನ್ನು ಪಡೆಯಲು ಅಡೆತಡೆಯಾಗುತ್ತಿದ್ದು, ಇದನ್ನು ತಪ್ಪಿಸಲು ಸರ್ಕಾರ ಈ ಯೋಜನೆ ಜಾರಿಗೊಳಿಸಿದೆ ಎಂದರು. ಖಾತೆಬದಲಾವಣೆ, ಪೌತಿಖಾತೆ, ವರ್ಗಾವಣೆ (Challakere) ಮುಂತಾದವುಗಳನ್ನು ಪಡೆಯಲು ನೇರವಾಗಿ ತಾಲ್ಲೂಕು ಕಚೇರಿಗೆ ಆಗಮಿಸಬೇಕಿತ್ತು. ಇನ್ನುಳಿದ ಯಾವುದೇ ಭೂದಾಖಲೆಗಳನ್ನು ಬೇಕಾದಲ್ಲಿ ಸಂಬಂಧಪಟ್ಟ ನಾಡಕಚೇರಿ, ತಾಲ್ಲೂಕು ಕಚೇರಿಯನ್ನು ಜನರು ಸಂಪರ್ಕಿಸಬಹುದು ಎಂದರು.
ಇದನ್ನೂ ಓದಿ: Chitradurga MLA ಕೆ.ಸಿ.ವೀರೇಂದ್ರ ಪಪ್ಪಿ ಕಾರು ಮಾಲಾಧಾರಿಗಳಿಗೆ ಡಿಕ್ಕಿ | ಕೇಸ್ ದಾಖಲು, ಕಾರು ಜಪ್ತಿ
ತಹಶೀಲ್ಧಾರ್ ರೇಹಾನ್ಪಾಷ, ಶಿರಸ್ಥೇದಾರ್, ಸದಾಶಿವಪ್ಪ, ಗಿರೀಶ್, ನಾಡಕಚೇರಿ ತಹಶೀಲ್ಧಾರ್ ಮಹಮ್ಮದ್ರಫೀ, ಕಂದಾಯಾಧಿಕಾರಿ ತಿಪ್ಪೇಸ್ವಾಮಿ, ಗ್ರಾಮ ಲೆಕ್ಕಿಗ ಪ್ರಕಾಶ್, ಡಿ.ಶ್ರೀನಿವಾಸ್, ನಗರಸಭಾ ಸದಸ್ಯ ಕೆ.ವೀರಭದ್ರಪ್ಪ ಮುಂತಾದವರು ಉಪಸ್ಥಿತರಿದ್ದರು.