
Chitradurga news|nammajana.com|18-12-2024
ನಮ್ಮಜನ.ಕಾಂ, ಚಿತ್ರದುರ್ಗ: ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ಕ್ಷೇತ್ರದ ಶಾಸಕ, ಸಣ್ಣಕೈಗಾರಿಕೆ ಅಭಿವೃದ್ದಿ ನಿಗಮದ ಅಧ್ಯಕ್ಷ ಟಿ.ರಘುಮೂರ್ತಿ ಕ್ಷೇತ್ರದ ಹಲವಾರು (Challakere) ವಿಚಾರಗಳ ಬಗ್ಗೆ ಅಧಿವೇಶನದಲ್ಲಿ ಪ್ರಶ್ನಿಸುವ ಮೂಲಕ ಕ್ಷೇತ್ರದ ಅಭಿವೃದ್ದಿಯ ಬಗ್ಗೆ ಅವರಿಗೆ ಇರುವ ವಿಶೇಷ ಕಾಳಜಿಯನ್ನು ತೋರಿದ್ದಾರೆ.
ಕಳೆದ ವಾರವಷ್ಟೇ ಬೆಳಗಾವಿ ಅಧಿವೇಶನದಲ್ಲಿ ನಗರದ ಯುಜಿಡಿ ಕಾಮಗಾರಿಗೆ 260 ಕೋಟಿ ಹಣ ಬಿಡುಗಡೆ ಮಾಡುವಂತೆ ಒತ್ತಾಯ ಪಡಿಸಿದ ಬೆನ್ನಹಿಂದೆಯೇ ಮತ್ತೊಮ್ಮೆ ಡಿಸೆಂಬರ್ 17ರ ಕಲಾಪದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಜವಾಬ್ದಾರಿ ಹೊತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ನಗರದ ಪಾವಗಡ ರಸ್ತೆಯಲ್ಲಿ (Challakere) ನಿರ್ಮಾಣವಾಗುತ್ತಿರುವ ತಾಲೂಕು ಕ್ರೀಡಾಂಗಣಕ್ಕೆ ಸುಮಾರು 7.60 ಕೋಟಿ ಹಣ ಬಿಡುಗಡೆ ಮಾಡುವಂತೆ ಅಧಿವೇಶನದಲ್ಲಿ ಮನವಿ ಮಾಡಿದ್ದಾರೆ.

ನಗರದ ಪಾವಗಡ ರಸ್ತೆಯ ರಿ, ಸರ್ವೆ ನಂ. 62ರಲ್ಲಿ 9.36 ಎಕರೆ ಜಮೀನಲ್ಲಿ 6 ಎಕರೆ ಪ್ರದೇಶದಲ್ಲಿ ಕ್ರೀಡಾಂಗಣವನ್ನು ನಿರ್ಮಿಸಲು ಸಿದ್ದತೆ ನಡೆದಿದ್ದು, 2016-17ನೇ ಸಾಲಿನಲ್ಲಿ 50 ಲಕ್ಷ ಬಿಡುಗಡೆಯಾಗಿತ್ತು.
ಕೆಆರ್ಡಿಎಎಲ್ ವತಿಯಿಂದ ಕಾಮಗಾರಿ ಕೈಗೊಂಡು ಸದ್ಯದ ಸ್ಥಿತಿಯಲ್ಲಿ ಕ್ರೀಡಾಂಗಣದ ಸುತ್ತ ಬೇಲಿ ಹಾಕಲಾಗಿದೆ. ಉಳಿದಂತೆ ಬಾಸ್ಕಟ್ಬಾಲ್ ಅಂಕಣ, ನೀರಿನ ಸೌಲಭ್ಯ, (Challakere) ಪ್ರೇಕ್ಷಕರ ಗ್ಯಾಲರಿ ಇನ್ನಿತರೆ ಸೌಲಭ್ಯಗಳನ್ನು ಒದಗಿಸಲು 7.60 ಕೋಟಿ ಹಣ ಬಿಡುಗಡೆಗೊಳಿಸಬೇಕೆಂದು ಮನವಿ ಮಾಡಿದ್ದಾರೆ.
ಶಾಸಕರ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಚಳ್ಳಕೆರೆ ನಗರದ ಪಾವಗಡ ರಸ್ತೆಯಲ್ಲಿ ಕ್ರೀಡಾಂಗಣ ಮಾಡುವ ಕುರಿತು ಈಗಾಗಲೇ 50 ಲಕ್ಷ ಹಣ ಬಿಡುಗಡೆ ಮಾಡಲಾಗಿದೆ. ಉಳಿದ ಹಣ ಬಿಡುಗಡೆಗೆ ಶಾಸಕರು ಒತ್ತಾಯಿಸಿದ್ಧಾರೆ.
ಸರ್ಕಾರದ ಆರ್ಥಿಕ ಸ್ಥಿತಿಗತಿ ನೋಡಿ ಹಣ ಬಿಡುಗಡೆಗೊಳಿಸುವ ಭರವಸೆಯನ್ನು ಮುಖ್ಯಮಂತ್ರಿ ಗಳು ನೀಡಿದರು. (Challakere) ಮುಖ್ಯಮಂತ್ರಿಗಳಿಂದ ಉತ್ತರ ಪಡೆದ ಶಾಸಕರು, ಚಳ್ಳಕೆರೆ ವಿಧಾನಸಭಾ ಕ್ಷೇತ್ರ ಪರಿಶಿಷ್ಟ ಪಂಗಡ ಕ್ಷೇತ್ರವಾಗಿದ್ದು, ಎಸ್ಸಿಎಸ್ಪಿ-ಟಿಎಸ್ಪಿ ಯೋಜನೆಯಡಿ ಹಣವನ್ನು ಕೂಡಲೇ ಬಿಡುಗಡೆಗೊಳಿಸಬೇಕಿದೆ.
ಇದನ್ನೂ ಓದಿ: ಎತ್ತಿನಗಾಡಿಗೆ ಡಿಕ್ಕಿ ಹೊಡೆದ ಲಾರಿ | ಪುಡಿ ಪುಡಿಯಾದ ಎತ್ತಿನಗಾಡಿ | ಸ್ಥಳದಲ್ಲೇ ಮೃತಪಟ್ಟ ಮಹಿಳೆ ಹಾಗೂ ಎತ್ತು | Accident
ಸುಮಾರು ಐದಾರು ವರ್ಷಗಳಿಂದ ಕಾಮಗಾರಿ ನಡೆಯದೆ ಕ್ರೀಡಾಪಟುಗಳಿಗೆ ತೊಂದರೆಯಾಗಿದೆ, ವಿಶೇಷವಾಗಿ ಚಳ್ಳಕೆರೆ ನಗರಕ್ಕೆ ಕ್ರೀಡಾಂಗಣದ ಅವಶ್ಯಕತೆ ಇದೆ. ಮುಖ್ಯಮಂತ್ರಿಗಳು ಕ್ರೀಡಾಂಗಣ ನಿರ್ಮಾಣಕ್ಕೆ ಹಣವನ್ನು ತಪ್ಪದೆ (Challakere) ಬಿಡುಗಡೆಗೊಳಿಸುವಂತೆ ಒತ್ತಾಯಿಸಿದರು.