
Chitradurga news|nammajana.com|16-03-2025
ನಮ್ಮಜನ.ಕಾಂ, ಚಳ್ಳಕೆರೆ: ಚಳ್ಳಕೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮಪಂಚಾಯಿತಿ ಮಟ್ಟದಲ್ಲೂ ಅಭಿವೃದ್ದಿ ಕಾಮಗಾರಿ ಕೈಗೊಳ್ಳಲಾಗುತ್ತಿದೆ. ಸಾರ್ವಜನಿಕ ಹಿತದೃಷ್ಠಿಯಿಂದ ಸರ್ಕಾರ ಗ್ರಾಮ ಪಂಚಾಯಿತಿ ಕಟ್ಟಡವೂ ಸೇರಿದಂತೆ (Challakere) ಹಲವಾರು ಕಾಮಗಾರಿಗಳಿಗೆ ಹಣ ನೀಡಿದೆ. ಸಾರ್ವಜನಿಕರ ಹಿತವನ್ನು ಕಾಪಾಡುವಲ್ಲಿ ಸರ್ಕಾರ ಯಶಸ್ವಿ ಹೆಜ್ಜೆ ಇಟ್ಟಿದೆ ಎಂದು ಕ್ಷೇತ್ರದ ಶಾಸಕ, ಸಣ್ಣಕೈಗಾರಿಕೆ ಅಭಿವೃದ್ದಿಮಂಡಳಿ ಅಧ್ಯಕ್ಷ ಟಿ.ರಘುಮೂರ್ತಿ ತಿಳಿಸಿದರು.
ಭಾನುವಾರ ತಾಲ್ಲೂಕಿನ ಬುಡ್ನಹಟ್ಟಿ ಗ್ರಾಮದಲ್ಲಿ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ದಿ ಯೋಜನೆ, ವಿಧಾನಪರಿಷತ್ ಸದಸ್ಯರ ಅನುದಾನ, ಗ್ರಾಮ ಪಂಚಾಯಿತಿ (Challakere) ಒಗ್ಗೂಡಿಸುವಿಕೆಯಡಿ ಸುಮಾರು ೮೪ ಲಕ್ಷ ವೆಚ್ಚದಲ್ಲಿ ಗ್ರಾಮ ಪಂಚಾಯಿತಿ ನೂತನ ಕಟ್ಟಡದ ಭೂಮಿಯನ್ನು ನೆರವೇರಿಸಿ ಮಾತನಾಡಿದರು.

ಈ ಭಾಗದ ವಿಧಾನಪರಿಷತ್ ಸದಸ್ಯರಾದ ಕೆ.ಎಸ್.ನವೀನ್ ಸಹ ಪಂಚಾಯಿತಿ ಮಟ್ಟದ ನಿರ್ಮಾಣಕ್ಕೆ ಅನುದಾನ ನೀಡಿದ್ಧಾರೆ. ಅವರೂ ಸಹ ಅಭಿವೃದ್ದಿ ಕಾಮಗಾರಿಗಳಿಗೆ ಸಹಕರಿಸಿದ್ಧಾರೆ. 10 ಲಕ್ಷ ವೆಚ್ಚದಲ್ಲಿ ಪೀರಲದೇವರ ಗುಡಿನಿರ್ಮಾಣ ಭೂಮಿಪೂಜೆ, 10 ಲಕ್ಷವೆಚ್ಚದಲ್ಲಿ ಮಾರಮ್ಮದೇವಿ ದೇವಸ್ಥಾನ ನಿರ್ಮಾಣಕ್ಕೂ ಭೂಮಿಪೂಜೆ ನೆರವೇರಿಸಲಾಯಿತು.
ಗ್ರಾಮದ ಜನರು ಸರ್ಕಾರದ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳುವಲ್ಲಿ ಮುಂದೆ ಬರಬೇಕೆಂದರು.
ವಿಧಾನಪರಿಷತ್ ಸದಸ್ಯ ಕೆ.ಎಸ್.ನವೀನ್ಮಾತನಾಡಿ, ಶಾಸಕ ಟಿ.ರಘುಮೂರ್ತಿ ತಮ್ಮ ಅಭಿವೃದ್ದಿ ಕಾಮಗಾರಿಗಳಿಂದಲೇ ಜನಮನ್ನಣೆ ಗಳಿಸಿದವರು.
ನಾನು ಸಹ ಈ ಭಾಗದ ವಿಧಾನಪರಿಷತ್ ಸದಸ್ಯನಾಗಿ ಅಗತ್ಯವಿರುಕಡೆ ಅನುದಾನವನ್ನು ನೀಡುತ್ತಿದ್ದೇನೆ. ಗ್ರಾಮ ಪಂಚಾಯಿತಿ ಕಟ್ಟಡಕ್ಕೆ ಅನುದಾನ ನೀಡಿದ್ದೇನೆ. ರಾಜಕೀಯ ಕ್ಷೇತ್ರದಲ್ಲಿ ವಿಭಿನ್ನತೆ ಇದ್ದರೂ ಅಭಿವೃದ್ದಿ ಕಾಮಗಾರಿ ಜಾರಿಗೊಳಿಸುವಲ್ಲಿ ಯಾವುದೇ ಭಿನ್ನಮತವಿಲ್ಲ. (Challakere) ರಘುಮೂರ್ತಿಯವರ ನಿರಂತರ ಅಭಿವೃದ್ದಿಯನ್ನು ನಾನು ಶ್ಲಾಘೀಸುತ್ತಲೇ ಬಂದಿದ್ದೇನೆಂದರು.
ಇದನ್ನೂ ಓದಿ: Chitradurga | BJP ಜಿಲ್ಲಾಧ್ಯಕ್ಷ ಮತ್ತು PSI ನಡುವೆ ಡಿಶುಂ ಡಿಶುಂ
ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಎಚ್.ಶಶಿಧರ, ಗ್ಯಾರಂಟಿ ಸಮಿತಿ ಅಧ್ಯಕ್ಷ ಗದ್ದಿಗೆತಿಪ್ಪೇಸ್ವಾಮಿ, ನಿರ್ಮಿತಿಕೇಂದ್ರ ಇಂಜಿನಿಯರ್ ಸಿದ್ದೇಶ್, ಗ್ರಾಮ ಪಂಚಾಯಿತಿ ಲಕ್ಷö್ಮಕ್ಕ, ಉಪಾಧ್ಯಕ್ಷ ರಾಮಣ್ಣ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ವೀರಭದ್ರಯ್ಯ, ನಗರಸಭಾಸದಸ್ಯ ಬಿ.ಟಿ.ರಮೇಶ್ಗೌಡ, ಬಾಳೆಮಂಡಿರಾಮದಾಸ್, ತಾಪಂ ಮಾಜಿ ಸದಸ್ಯ ಕಳ್ಳಿನಿಂಗಯ್ಯ, ದೊಡ್ಡರಂಗಪ್ಪ, ಸೂರಯ್ಯ, ಶಶಿಧರ, ಬೋರಯ್ಯ, ಶ್ರೀನಿವಾಸ್, ತಿಪ್ಪೇಸ್ವಾಮಿ, ಸುಮಲತಾ, ಜಗದೀಶ್ನಾಯ್ಕ, ಕೃಷ್ಣನಾಯ್ಕ, ರಂಗಸ್ವಾಮಿ, ಪಿಡಿಒ ಮಲ್ಲೇಶಪ್ಪ ಮುಂತಾದವರು ಉಪಸ್ಥಿತರಿದ್ದರು.