
Chitradurga news|nammajana.com|28-1-2025
ವಿಶೇಷ ವರದಿ
ನಮ್ಮಜನ.ಕಾಂ, ಚಿತ್ರದುರ್ಗ: ರಾಜ್ಯ ಬಿಜೆಪಿಯಲ್ಲಿ ಬಣ ಬಡಿದಾಟ ನಡೆಯುತ್ತಿದ್ದು ರಾಜ್ಯಧ್ಯಕ್ಷ ಸ್ಥಾನಕ್ಕೆ ಚುನಾವಣೆ ಎಂಬ ಮಾತುಗಳಾಡಿದ ಬಿಜೆಪಿ ನಾಯಕರ ಮಧ್ಯೆ ರಾಜ್ಯದಾದ್ಯಂತ ಜಿಲ್ಲೆ ಮತ್ತು ತಾಲೂಕು, ಗ್ರಾಮೀಣ ಭಾಗದಲ್ಲಿ ಸಂಘಟನಾ ಕಡೆ (Chitradurga) ಹೆಚ್ಚು ಒತ್ತು ಕೊಡುವ ಕೆಸಲ ನಡೆಯುತ್ತಿರುವ ಮಧ್ಯೆ ಬಿಜೆಪಿ ವಿರುದ್ದ ಬಿಜೆಪಿ ಪಕ್ಷದ ನಾಯಕ ಸಮಾಜದ ಮುಖಂಡ ಸ್ವಪಕ್ಷದ ವಿರುದ್ದ ಮುಖಂಡರಾದ ಕುಂಚಿಗನಾಳ್ ನಾಗಭೂಷಣ್, ಪ್ರಶಾಂತ್, ಹಿರೇಕಂದವಾಡಿ ರಾಜಣ್ಣ ಸಿಡಿದೆದಿದ್ದಾರೆ.

ಚಿತ್ರದುರ್ಗ ಜಿಲ್ಲೆಯ ಹಿರಿಯೂರು, ಮೊಳಕಾಲ್ಮೂರು, ನಾಯಕನಹಟ್ಟಿ, ಚಳ್ಳಕೆರೆ, ಹೊಳಲ್ಕೆರೆ, ಚಿತ್ರದುರ್ಗ ನಗರ ಮತ್ತು ಗ್ರಾಮಂತರ ಮಂಡಲಗಳಿಗೆ ನೂತನ ಅಧ್ಯಕ್ಷರನ್ನು ಆಯ್ಕೆ ಮಾಡಿದ್ದು ಹೊಸದುರ್ಗ ಮಂಡಲ,ಭರಮಸಾಗರ ಮಂಡಲ ಮಾತ್ರ ಅಧ್ಯಕ್ಷರನ್ನು ಆಯ್ಕೆ ಮಾಡಿದ್ದು ಇದರಲ್ಲಿ ಒಂದು ಮಂಡಲ ಅಧ್ಯಕ್ಷ ಸ್ಥಾನವನ್ನು ನಾಯಕ ಸಮಾಜದ (Chitradurga) ಬಿಜೆಪಿಗರನ್ನು ಆಯ್ಕೆ ಮಾಡದಿರುವುದು ಬಿಜೆಪಿ ವಲಯದಲ್ಲ. ಭಿನ್ನಮತ ಸ್ಫೋಟವಾಗಿದ್ದು ಬಿಜೆಪಿ ಪಕ್ಷದ ಮುಖಂಡರು ಖಾಸಗಿಯಾಗಿ ಸಭೆ ನಡೆಸುವ ಮೂಲಕ ಬಿಜೆಪಿ ವಿರುದ್ದ ಸಿಡಿದು ನಿಲ್ಲಲು ಸಿದ್ದವಾಗಿದ್ದಾರೆ.
ಬಿಜೆಪಿ ಪಕ್ಷದಲ್ಲಿ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಪರಿಗಣನೆ ಇಲ್ಲ ಮತ್ತು ಮಂಡಲ ಅಧ್ಯಕ್ಷ ಸ್ಥಾನಕ್ಕೂ ಪರಿಗಣನೆ ಏಕೆಇಲ್ಲ
ಬಿಜೆಪಿ ನಾಯಕರ ಸಭೆಯಲ್ಲಿ ಬಿಜೆಪಿ ಪಕ್ಷದಲ್ಲಿ ನಾಯಕ ಸಮಾಜಕ್ಕೆ ಒಮ್ಮೆಯೂ ಜಿಲ್ಲಾ ಬಿಜೆಪಿ ಅಧ್ಯಕ್ಷ ಸ್ಥಾನ ಮತ್ತು ಆಯಕಟ್ಟಿನ ಸ್ಥಾನ ನೀಡಿಲ್ಲ. ಇದುವರೆಗೂ ಕೆಲವೇ (Chitradurga) ಸಮುದಯಗಳಿಗೆ ಮಾತ್ರ ಎಲ್ಲಾ ಅಧಿಕಾರ ನೀಡಿದರೆ ಪಕ್ಷಕ್ಕೆ ನಾವು ಏಕೆ ದುಡಿಯಬೇಕು.
ಪಕ್ಷದಲ್ಲಿ ಅನ್ಯಾಯವನ್ನು ಸರಿಪಡಿಸಲು ಏಕೆ ಜಿಲ್ಲಾಧ್ಯಕ್ಷರು ಸೇರಿ ಮಾಜಿ ಶಾಸಕರು, ಶಾಸಕರು ಹಿಂದೇಟು ಏಕೆ, ನಮ್ಮ ಸಮುದಾಯಕ್ಕೆ ಅವಕಾಶ ಕಲ್ಪಿಸಲು ಪಕ್ಷದ ವಿರುದ್ದ ಹೋರಟಕ್ಕೆ ಮುಂದಾಗಲು ಸಿದ್ದವಾಗೋಣ, ಒಟ್ಟು ಜಿಲ್ಲೆ ಒಂಬತ್ತು ಮಂಡಲ ಅಧ್ಯಕ್ಷ ಸ್ಥಾನಗಳಿದ್ದು ಏಳು ಸ್ಥಾನಗಳಿಗೆ ಅಧ್ಯಕ್ಷರ ನೇಮಿಸಿದ್ದು ಒಂದು ಸ್ಥಾನ ಸಹ ನಾಯಕ ಸಮಾಜವನ್ನು ಪರಿಗಣನೆ (Chitradurga) ಮಾಡದಿರುವುದು ನಾಯಕ ಸಮಾಜದ ಸಿಟ್ಟಿಗೆ ಕಾರಣವಾಗಿದೆ.
ನಾಯಕ ಸಮುದಾಯದ ಪ್ರಬಲವಾಗಿರುವ ಚಳ್ಳಕೆರೆ, ಮೊಳಕಾಲ್ಮೂರು ಅಧ್ಯಕ್ಷ ಸ್ಥಾನ ಮಿಸ್
ನಾಯಕ ಸಮುದಾಯದ ಶಾಸಕರು ಪ್ರತಿನಿಧಿಸುತ್ತಿರುವ ಮೀಸಲು ಕ್ಷೇತ್ರದಲ್ಲಿ ಮೂರು ಮಂಡಲ ಅಧ್ಯಕ್ಷರಲ್ಲಿ ಒಂದು ಸ್ಥಾನವನ್ನು ನಾಯಕ ಸಮಾಜವನ್ನು ಪರಿಗಣನೆ ಮಾಡದಿರುವುದು ಮತ್ತಷ್ಟು ಬಿಜೆಪಿ ಪಕ್ಷದ ನಾಯಕ ಸಮಾಜದ ಮುಖಂಡರನ್ನು ಕೆರಳಿಸಿದ್ದು ಜಿಲ್ಲಾಧ್ಯಕ್ಷ ಮತ್ತು ಬಿಜೆಪಿ ನಾಯಕರ ವಿರುದ್ದ ನಿಗಿನಿಗಿ ಕೆಂಡವಾಗಿದ್ದಾರೆ.
ಎರಡು ಮಂಡಲ ಅಧ್ಯಕ್ಷ ಸ್ಥಾನ ಮಾತ್ರ ಘೋಷಣೆ ಬಾಕಿ
ಜಿಲ್ಲೆಯಲ್ಲಿನ ಎಲ್ಲಾ ಮಂಡಲ ಅಧ್ಯಕ್ಷರ ಘೋಷಣೆ ಆಗಿದ್ದು ಹೊಸದುರ್ಗ ಮತ್ತು ಭರಮಸಾಗರ ಮಂಡಲ ಅಧ್ಯಕ್ಷರನ್ನು ಮಾತ್ರ ನೇಮಿಸಿಲ್ಲ. ಅಲ್ಲಿಯಾದರೂ ನಾಯಕ ಸಮಾಜದ ಅಧ್ಯಕ್ಷರನ್ನು ನೇಮಿಸಲಿ ಎಂಬ ವಾದ ಜಿಲ್ಲಾಧ್ಯಕ್ಷರಿಗೆ ನಾಯಕ ಸಮಾಜದ ಮುಖಂಡರು ಮನವರಿಕೆ ಮಾಡೋಣ ಎಂಬ ಚರ್ಚೆ ನಡೆದಿದೆ ಎಂದು ಸಭೆಯ ಮಾಹಿತಿ ಬಲ್ಲ ಮೂಲಗಳಿಂದ ಲಭ್ಯವಾಗಿದೆ. ಮಂದೆ ಉಳಿದಿರುವ ಎರಡು ಸ್ಥಾನದಲ್ಲಿ ನಾಯಕ ಸಮುದಾಯಕ್ಕೆ ಪ್ರಾತಿನಿಧ್ಯ ಕಲ್ಪಿಸುತ್ತದೆಯೋ ಅಥವಾ ಸ್ಥಾನದಿಂದ ಹೊರಗಿಟ್ಟು ನಾಯಕ ಸಮಾಜದ ಕೆಂಗಣ್ಣಿಗೆ (Chitradurga) ಗುರಿಯಾಗಿತ್ತದೆ ಎಂಬುದನ್ನು ಕಾದು ನೋಡಬೇಕಿದೆ.
ಇದನ್ನೂ ಓದಿ: Lokayukta | ಚಿತ್ರದುರ್ಗ ಸಮಾಜ ಕಲ್ಯಾಣ ಇಲಾಖೆ ಹಾಸ್ಟೆಲ್ ನಿರ್ವಹಣೆ ಇತರೆ ಜಿಲ್ಲೆಗಳಿಗಿಂತ ಸೂಪರ್: ಕೆ.ಎನ್.ಫಣೀಂದ್ರ ಮೆಚ್ಚುಗೆ
ಯಾವ್ಯಾವ ಸಮಾಜಕ್ಕೆ ಮಂಡಲ ಅಧ್ಯಕ್ಷ ಸ್ಥಾನದ ಅವಕಾಶ
ಜಿಲ್ಲಾ ಚುನಾವಣಾಧಿಕಾರಿ ಅಣಬೇರು ಜೀವನ್ಮೂರ್ತಿ ಅವರ ಲಿಖಿತ ಆದೇಶದಂತೆ
ಮೊಳಕಾಲ್ಮೂರು ಮಂಡಲ ಅಧ್ಯಕ್ಷರಾಗಿ ಕೆ.ಟಿ.ರಾಮರೆಡ್ಡಿ (ರೆಡ್ಡಿ ಸಮುದಾಯ)
ನಾಯಕನಹಟ್ಟಿ ಮಂಡಲ: ಎಂ.ಮಲ್ಲೇಶ್ (ಪರಿಶಿಷ್ಟ ಜಾತಿ)
ಚಳ್ಳಕೆರೆ ಮಂಡಲಾಧ್ಯಕ್ಷರಾಗಿ ಬಿ.ಎಂ.ಸುರೇಶ್ ( ಲಿಂಗಾಯತ)
ಚಿತ್ರದುರ್ಗ ಗ್ರಾಮಂತರ ಮಂಡಲ: ನಾಗರಾಜಪ್ಪ (ಗೊಲ್ಲ ಸಮುದಾಯ)
ಚಿತ್ರದುರ್ಗ ನಗರ ಮಂಡಲ: ಲೋಕೇಶ್ ಕುಮಾರ್ ಹೆಚ್.ಎನ್ (ಕುರುಬ ಸಮುದಾಯ)
ಹೊಳಲ್ಕೆರೆ ಮಂಡಲ: ಎ.ಇ.ವಸಂತ ಕುಮಾರ್ (ಲಿಂಗಾಯತ ಸಮುದಾಯ)
ಹಿರಿಯೂರು ಮಂಡಲ: ಅಭಿನಂದನ್.ಕೆ (ಗೊಲ್ಲ ಸಮುದಾಯ) (Chitradurga)