Namma JanaNamma JanaNamma Jana
  • ಇಂದಿನ ಸುದ್ದಿ
  • ರಾಜಕೀಯ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಕ್ರೀಡೆ
  • ಆರೋಗ್ಯ
  • ದಿನ ಭವಿಷ್ಯ
Reading: ಶಾಸಕ ವೀರೇಂದ್ರ ಪಪ್ಪಿ ಮತ ಓಟಕ್ಕೆ ಬ್ರೇಕ್ ಹಾಕತ್ತಾರಾ ಮಾಜಿ ಶಾಸಕ‌ ಜಿ.ಹೆಚ್.ತಿಪ್ಪಾರೆಡ್ಡಿ?
Share
Notification Show More
Font ResizerAa
Font ResizerAa
Namma JanaNamma Jana
  • ಇಂದಿನ ಸುದ್ದಿ
  • ರಾಜಕೀಯ
  • ವಿಶೇಷ ಸುದ್ದಿ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಆರೋಗ್ಯ
  • ಕ್ರೀಡೆ
  • ದಿನ ಭವಿಷ್ಯ
  • ರಾಜಕೀಯ
Search
  • ಇಂದಿನ ಸುದ್ದಿ
  • ರಾಜಕೀಯ
  • ವಿಶೇಷ ಸುದ್ದಿ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಆರೋಗ್ಯ
  • ಕ್ರೀಡೆ
  • ದಿನ ಭವಿಷ್ಯ
  • ರಾಜಕೀಯ
Have an existing account? Sign In
Follow US
  • Advertise
© 2024 Namma Janna. Kannada News Portal. All Rights Reserved.
Namma Jana > Blog > ರಾಜಕೀಯ > ಶಾಸಕ ವೀರೇಂದ್ರ ಪಪ್ಪಿ ಮತ ಓಟಕ್ಕೆ ಬ್ರೇಕ್ ಹಾಕತ್ತಾರಾ ಮಾಜಿ ಶಾಸಕ‌ ಜಿ.ಹೆಚ್.ತಿಪ್ಪಾರೆಡ್ಡಿ?
ರಾಜಕೀಯ

ಶಾಸಕ ವೀರೇಂದ್ರ ಪಪ್ಪಿ ಮತ ಓಟಕ್ಕೆ ಬ್ರೇಕ್ ಹಾಕತ್ತಾರಾ ಮಾಜಿ ಶಾಸಕ‌ ಜಿ.ಹೆಚ್.ತಿಪ್ಪಾರೆಡ್ಡಿ?

Editor Nammajana
Last updated: 19 April 2024 3:49 PM
By Editor Nammajana 6 Min Read
Share
SHARE
Telegram Group Join Now
WhatsApp Group Join Now

Chitradurga News| Nammajana.com|April-19-4-2024

ನಮ್ಮ ಜನ.ಕಾಂ. ಚಿತ್ರದುರ್ಗ: ಕೋಟೆ ನಾಡು ಚಿತ್ರದುರ್ಗ ಜಿಲ್ಲೆಯಲ್ಲಿ ಜಿಲ್ಲಾ ಕೇಂದ್ರ ವ್ಯಾಪ್ತಿಯಲ್ಲಿರುವ ಚಿತ್ರದುರ್ಗ ವಿಧಾನ ಸಭಾ ಕ್ಷೇತ್ರದಲ್ಲಿ  ಶಾಸಕ ಕೆ.ಸಿ.ವೀರೇಂದ್ರ ಮತ್ತು ಮಾಜಿ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಅವರ ಲೋಕಸಭೆ ಫೈಟ್ ಜೋರಾಗಿ ಕಾಣುತ್ತಿದೆ. ಚಿತ್ರದುರ್ಗ ಲೋಕಸಭಾ ಕ್ಷೇತ್ರ ಕಾಂಗ್ರೆಸ್ ಭದ್ರಕೋಟೆ ಎಂಬ ಖ್ಯಾತಿ ಪಡೆದಿತ್ತು.ಆದರೆ 2009 ರಲ್ಲಿ ಬಿಜೆಪಿ 2013 ರಲ್ಲಿ ಕಾಂಗ್ರೆಸ್ ಮತ್ತೆ 2019 ರ ಚುನಾವಣೆಯಲ್ಲಿ ಬಿಜೆಪಿ ಬಾವುಟ ಹಾರಿಸುವ ಮೂಲಕ ಹಾವು ಏಣಿ ಆಟ ಮುಂದುವರೆದಿದ್ದು ಚಿತ್ರದುರ್ಗ ವಿಧಾನ ಸಭಾ ಕ್ಷೇತ್ರದ ಮತದಾರರ ಈ ಬಾರಿ ಯಾರ ಪರ ಒಲವು ತೋರಲಿದ್ದಾರೆ ಎಂಬುದು ಈ ಬಾರಿ ಚುನಾವಣೆ ನಂತರ ಕ್ಲಿಯರ್ ಪಿಚ್ಚರ್ ತಿಳಿಯಲಿದೆ.

ಚಿತ್ರದುರ್ಗ ವಿಧಾನ ಸಭಾ ಕ್ಷೇತ್ರ ಒಂದು ರೀತಿಯಲ್ಲಿ ವಿಶೇಷ ಮತ್ತು ಹಲವು ಜಾತಿ ಲೆಕ್ಕಚಾರಗಳನ್ನು ತಲೆಕೆಳಗಾಗಿ ಮಾಡುವ ಮೂಲಕ ಅಚ್ಚರಿ ಫಲಿತಾಂಶ ನೀಡಿದ ಕ್ಷೇತ್ರ ಎಂಬ ಹೆಗ್ಗಳಿಕೆ ಚಿತ್ರದುರ್ಗ ವಿಧಾನ ಸಭಾ ಕ್ಷೇತ್ರಕ್ಕೆ ಸಲ್ಲುತ್ತದೆ‌. ಇಲ್ಲಿ ಪಕ್ಷಕ್ಕಿಂತ ವ್ಯಕ್ತಿಗತ ರಾಜಕಾರಣಕ್ಕೆ ಮತದಾರರು ಮಣೆ ಹಾಕಿದ್ದಾರೆ. ಜಿಲ್ಲಾ ಕೇಂದ್ರದ ಸುತ್ತಲೂ ಹಳ್ಳಿಗಳನ್ನು ಒಳಗೊಂಡಿರುವ ಚಿತ್ರದುರ್ಗ ವಿಧಾನ ಸಭಾ ಕ್ಷೇತ್ರದಲ್ಲಿ ಅಹಿಂದ ಮತಗಳೇ ಗೆಲುವಿನಲ್ಲಿ ಪ್ರಮುಖ‌ ಪಾತ್ರ ವಹಿಸಿದ್ದವು.

ಚಿತ್ರದುರ್ಗ ವಿಧಾನ ಸಭಾ ಕ್ಷೇತ್ರದ ಇತಿಹಾಸ

ಚಿತ್ರದುರ್ಗ ವಿಧಾನ‌ ಸಭಾ ಕ್ಷೇತ್ರದಲ್ಲಿ ಜಿ ಎಚ್ ತಿಪ್ಪಾರೆಡ್ಡಿ ಸತತ 30 ವರ್ಷಗಳಿಂದ ಒಂದಿಲ್ಲೊಂದು ರೀತಿ ಅಧಿಕಾರದಲ್ಲಿ ಇದ್ದಾರೆ. 1994ರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಜನತಾ ದಳದ ಏಕಾಂತಯ್ಯನವರನ್ನು ಸೋಲಿಸುವ ಮೂಲಕ ತಿಪ್ಪಾರೆಡ್ಡಿ ಶಾಸಕರಾಗಿ ನಂತರ 2008ರಲ್ಲಿ ಮಾತ್ರ ಸೋಲು ಕಂಡ ತಿಪ್ಪಾರೆಡ್ಡಿ ಅವರು 2೦23 ಚುನಾವಣೆವರೆಗೆ ಶಾಸಕರಾಗಿದ್ದರು‌ ಆದರೆ 2023 ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ಪಡೆದು ಕೆ.ಸಿ.ವೀರೇಂದ್ರ ಪಪ್ಪಿ ದೈತ್ಯ ರಾಜಕಾರಣಿ ತಿಪ್ಪಾರೆಡ್ಡಿ ಅವರನ್ನು 53 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ತಿಪ್ಪಾರೆಡ್ಡಿ ಅವರನ್ನು ಸೋಲಿಸಿದರು.

ವ್ಯಕ್ತಿಗತ ರಾಜಕಾರಣಕ್ಕೆ ಮಣೆ ಹಾಕುತ್ತಿರುವ ಮತದಾರ

ಜಿಲ್ಲಾ ಕೇಂದ್ರವಾಗಿರುವ ಚಿತ್ರದುರ್ಗ ವಿಧಾನ ಸಭಾ ಕ್ಷೇತ್ರದಲ್ಲಿ ಕ್ಷೇತ್ರದಲ್ಲಿ ಜಾತಿ ಲೆಕ್ಕಚಾತ ವರ್ಕೌಟ್ ಆಗಿದ್ದು ತುಂಬಾ ವಿರಳ ಎಂದರೆ ತಪ್ಪಾಗಲಾರದು. ಅಹಿಂದ ಮತದಾರರು,ಲಿಂಗಾಯತ ಮತಗಳು ಇಬ್ಬರೂ ನಿರ್ಣಾಯಕ ಸಂಖ್ಯೆಯಲ್ಲಿರುವ ಕ್ಷೇತ್ರವಾಗಿದೆ. ಜೆಡಿಎಸ್ ಮತ್ತು ಕಾಂಗ್ರೆಸ್ ಎರಡು ಪಕ್ಷಗಳ ನಡುವೆ ಸದಾ ಫೈಟ್ ಇತ್ತಾದರೂ ಸಹ ಅದು ವ್ಯಕ್ತಿ ರಾಜಕಾರಣದ ಮೇಲೆ ಎನ್ನಬಹುದು. 2003 ರ ಚುನಾವಣೆಯಿಂದ ತಿಪ್ಪಾರೆಡ್ಡಿ ಫ್ಯಾಮಿಲಿ ಮತ್ತು ಎಸ್.ಕೆ.ಬಸವರಾಜನ್ ಫ್ಯಾಮಿಲಿ ಫೈಟ್ ಆರಂಭವಾಗಿ ಪ್ರತಿ ಚುನಾವಣೆಯಲ್ಲಿ ಎರಡು ಕುಟುಂಬಗಳನ್ನು ಜಿದ್ದಾಜಿದ್ದು ಚುನಾವಣೆ ನಡೆಯುತ್ತಿತ್ತು ಆದರೆ 2008 ರಲ್ಲಿ ಬಸವರಾಜನ್ ತಿಪ್ಪಾರೆಡ್ಡಿ ವಿರುದ್ದ ಗೆದ್ದು ಜೆಡಿಎಸ್ ಗೆ ಶಕ್ತಿ ತುಂಬಿದ್ದರು. ಆದರೆ ನಂತರ ಚುನಾವಣೆಯಲ್ಲಿ ಬಸವರಾಜನ್ ಸೋಲು ಅನುಭವಿಸಿದ್ದು ಇತಿಹಾಸವಾಗಿದೆ.

ಇದನ್ನೂ ಓದಿ: ವಿಶ್ವ ಪರಿಸರ ದಿನಾಚರಣೆ: ವಿದ್ಯಾರ್ಥಿಗಳಿಗೆ ರಸಪ್ರಶ್ನೆ ಮತ್ತು ಪ್ರಬಂಧ ಸ್ಪರ್ಧೆ

 

ರಾಜಕೀಯ ಸಂಪ್ರದಾಯಿಕ ಎದುರಾಳಿಗಳ ಸಮಾಗಮಕ್ಕೆ ಸಾಕ್ಷಿಯಾದ ಲೋಕಸಭೆ ಮೈತ್ರಿ

ಚಿತ್ರದುರ್ಗ ವಿಧಾನ ಸಭಾ ಕ್ಷೇತ್ರದಲ್ಲಿ ಬಿಜೆಪಿ- ಜೆಡಿಎಸ್ಮೂಲಕ ಯಿಂದ ರಾಜಕೀಯ ಲೆಕ್ಕಚಾರ ಉಲ್ಟಾ ಆಗಿದೆ. ಸದಾ ಒಬ್ಬರಿಗೊಬ್ಬರು ಆರೋಪ ಪ್ರತ್ಯಾರೋಪದಲ್ಲಿ ರಾಜಕೀಯ ಎದುರಾಳಿಗಾಳಾಗಿದ್ದ ಮಾಜಿ ಶಾಸಕರಾದ ಜಿ.ಎಚ್.ತಿಪ್ಪಾರೆಡ್ಡಿ, ಎಸ್.ಕೆ.ಬಸವರಾಜನ್, ಸೌಭಾಗ್ಯ ಬಸವರಾಜನ್, ಮಾಜಿ ನಗರಸಭೆ ಅಧ್ಯಕ್ಷ ಬಿ.ಕಾಂತರಾಜ್ ಒಂದೇ ವೇದಿಕೆಯಲ್ಲಿ ನಿಂತು ಮೈತ್ರಿ ಅಭ್ಯರ್ಥಿ ಪರ ನಿಂತು ಕೆಲಸ ಮಾಡುತ್ತಿದ್ದು ಬಿಜೆಪಿ ಬಲವನ್ನು ಹೆಚ್ಚಿಸಿದ್ದು ಮತಗಳಾಗಿ ಪರಿವರ್ತನೆಯಾಗುತ್ತದೆ ಎಂಬುದು ಕಾದು ನೋಡಬೇಕಿದೆ.ಇವೆಲ್ಲದರ ಜೊತೆಗೆ ಹಾಲಿ ಎಂಎಲ್ಸಿ ಕೆ.ಎಸ್.ನವೀನ್ ಸಹ ಇದ್ದು ಒಂದಿಷ್ಟು ಸಮುದಾಯದ ಮತಗಳು ತರಬಹುದು ಎಂಬ ನಿರೀಕ್ಷೆಯಲಿ ಬಿಜೆಪಿ‌ ಇದ್ದು ಮೈತ್ರಿ‌ನಾಯಕರು ಯಾವ ರೀತಿ ಮತಗಳನ್ನು ವರ್ಕೌಟ್ ಮಾಡುತ್ತಾರೆ ಎಂಬುದು ಚುನಾವಣೆ ನಂತರ ತಿಳಿಯಲಿದೆ.

ಕಾಲಿಗೆ ಚಕ್ರ ಕಟ್ಟಿ ಪ್ರಚಾರ ನಡೆಸುತ್ತಿರವ ಜಿ.ಹೆಚ್.ತಿಪ್ಪಾರೆಡ್ಡಿ ಲೀಡ್ ತಂತ್ರಗಾರಿಕೆ ವರ್ಕೌಟ್ ಆಗುತ್ತಾ.

ಮಾಜಿ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ರಾಜಕೀಯ ಲೆಕ್ಕಚಾರದಲ್ಲಿ ತಪ್ಪಿದ್ದು ತುಂಬಾ ವಿರಳ, ಚಿತ್ರದುರ್ಗ ವಿಧಾನ ಸಭಾ ಕ್ಷೇತ್ರದಲ್ಲಿ ತನ್ನ ವೈಯಕ್ತಿಕ ಹಿಡಿತವನ್ನು ಮುಂದುವರೆಸಿದ್ದಾರೆ.ವಿಧಾನ ಸಭಾ ಚುನಾವಣೆಯಲ್ಲಿ ಸೋಲು ಅನುಭವಿಸಿದರು ಜನರ ಒಡನಾಟವನ್ನು ಬಿಟ್ಟಿಲ್ಲ. ಹಳ್ಳಿ ಕೆರೆಗಳ ಮನೆ ಮನೆ ತಲುಪಿರುವ ತಿಪ್ಪಾರೆಡ್ಡಿ ಅವರು ಕಳೆದ ಲೋಕಸಭೆ ಚುನಾವಣೆಯಲ್ಲಿ ಶಾಸಕರಾಗಿದ್ದ ಸಂದರ್ಭದಲ್ಲಿ 37 ಸಾವಿರಕ್ಕೂ ಹೆಚ್ಚು ಲೀಡ್ ಬಿಜೆಪಿಗೆ ದೊರಕಿತ್ತು.ಆದರೆ ಈ‌ಬಾರಿ ಕಾಂಗ್ರೆಸ್ ಶಾಸಕರಿದ್ದು ತಿಪ್ಪಾರೆಡ್ಡಿ ಅವರ ಅನುಭವ ಮತ್ತು ರಾಜಕೀಯ ಲೆಕ್ಕಚಾರ ಯಾವ ರೀತಿ ಮತಗಳಾಗಿ ಪರಿಣಾಮ ಬೀರುತ್ತದೆ. ಮೈತ್ರಿ ‌ನಾಯಕರನ್ನು ಜೊತೆಗಿಟ್ಟುಕೊಂಡು ಯಾವ ರೀತಿ ಮತ್ತಷ್ಟು ಬಲ‌ ಹೆಚ್ವಿಸಿಕೊಳ್ಳುತ್ತಾರೆಯೇ. ಗೋವಿಂದಪ್ಪ ಕಾರಜೋಳ ಅವರನ್ನು ಕರೆ ತಂದಿದ್ದು ತಿಪ್ಪಾರೆಡ್ಡಿ ಎಂಬ ಮಾತು ರಾಜಕೀಯ ವಲಯದಲ್ಲಿ‌ ಕೇಳಿ ಬರುತ್ತಿದ್ದು ತಿಪ್ಪಾರೆಡ್ಡಿ ತಂತ್ರಗಳು ವರ್ಕೌಟ್ ಆದರೆ ಬಿಜೆಪಿ ಲೀಡ್ ಕಾಯಂ ಎಂಬ ಮಾತು ಕೇಳಿ‌ ಬರುತ್ತಿದೆ.

ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಅವರಿಗೆ ಅಗ್ನಿ ಪರೀಕ್ಷೆಯಾದ ಲೋಕಸಭಾ ಚುನಾವಣೆ

ಜಿಲ್ಲಾ ಕೇಂದ್ರ ಚಿತ್ರದುರ್ಗ ಕ್ಷೇತ್ರದಲ್ಲಿ ದಶಕಗಳ‌ ನಂತರ ಅಧಿಕಾರದಿಂದ ವಂಚಿತವಾಗಿದ್ದ ಅಧಿಕಾರ ದೊರಕಿದೆ. 2023 ವಿಧಾನ ಸಭಾ ಕ್ಷೇತ್ರದಲ್ಲಿ ವೀರೇಂದ್ರ ಪಪ್ಪಿ ಗೆಲುವು ಸಾಧಿಸುವ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ಶಕ್ತಿ ತುಂಬಿದ್ದಾರೆ. ವೀರೇಂದ್ರ ಪಪ್ಪಿ ಶಾಸಕರಾದ ನಂತರ ನಡೆಯುತ್ತಿರುವ ಮೊದಲ ಚುನಾವಣೆ ಲೋಕಸಭೆ ಚುನಾವಣೆ ಆಗಿದ್ದು ಈ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಲೀಡ್ ತಂದು ಕೊಡುವ ಮೂಲಕ ನನ್ನ ಶಕ್ತಿ ಇನ್ನು ಕಡಿಮೆ ಆಗಿಲ್ಲ ಎಂದು ಮತ್ತೆ ಸಾಬೀತುಪಡಿಸುತ್ತಾರಾ? ಏಕೆಂದರೆ ಇಲ್ಲಿಯವರೆಗೆ ತನ್ನ ಕ್ಷೇತ್ರದಲ್ಲಿ ಸಿಎಂ ಸಭೆ ನಂತರ ಒಂದೆರಡು ಸಭೆ ನಡೆಸುತ್ತಿರುವುದು ಬಿಟ್ಟರೆ ಯಾವ ಹಳ್ಳಿಗೆ ತೆರಳಿ ಪ್ರಚಾರ ನಡೆಸುತ್ತಿಲ್ಲ. ಆದರೆ ಎರಡ್ಮೂರು ದಿನದಲ್ಲಿ ಪ್ರತಿ ಹಳ್ಳಿಗೆ ತೆರಳಿ ಪ್ರಚಾರ ಆರಂಭಿಸುವ ನಿರೀಕ್ಷೆ ಕಾಂಗ್ರೆಸ್ ಪಕ್ಷಕ್ಕೆ ಇದ್ದು ಗ್ಯಾರೆಂಟಿ ಯೋಜನೆಯ ಮತಗಳು ಮತ್ತು ಲಿಂಗಾಯತ ಮತಗಳನ್ನು ಕಾಂಗ್ರೆಸ್ ಪಕ್ಷಕ್ಕೆ ತಂದುಕೊಟ್ಟರೆ ಶಾಸಕ ವೀರೇಂದ್ರ ಪಪ್ಪಿ ಲೋಕ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಶಕ್ತಿ ತುಂಬಿದಂತೆ ಆಗುತ್ತದೆ ಚಂದ್ರಪ್ಪ‌ ಗೆಲುವಿನಲ್ಲಿ ಪ್ರಮುಖ‌ ಪಾತ್ರ ವಹಸಿದಂತೆ ಆಗುತ್ತದೆ.

 ಇದನ್ನೂ ಓದಿ: ಚಂದ್ರಪ್ಪನ ಗೆಲುವಿಗಾಗಿ ಹೊಳಲ್ಕೆರೆ ಗಣಪತಿಗೆ 101 ತೆಂಗಿನಕಾಯಿ ಅರ್ಪಣೆ

 

ಅಗ್ನಿ ಪರೀಕ್ಷೆಯಲ್ಲಿ ಗೆದ್ದು ಬೀಗುತ್ತಾರಾ ಪಪ್ಪಿ?

ಕಾಂಗ್ರೆಸ್ ಮತ್ತು ಎನ್ ಡಿಎ ಎರಡು ಪಕ್ಷಗಳ‌ ಮುಖಂಡರು , ಕಾರ್ಯಕರ್ತರು ರಣತಂತ್ರಗಳನ್ನು ಹೆಣೆಯುವ ಮೂಲಕ‌ ನಮ್ಮದೇ ಗೆಲುವು ಎಂದು ಅಖಾಡ ಪ್ರವೇಶಿದ್ದಾರೆ. ವಿಧಾನ ಸಭಾ ಚುನಾವಣೆ ಮತ್ತು ಲೋಕಸಭೆ ಚುನಾವಣೆಯಲ್ಲಿ ಸಾಕಷ್ಟು ವ್ಯತ್ಯಾಸ ಮತ್ತು ಜಾತಿ‌ ಲೆಕ್ಕಚಾರ ಬದಲಾಗುತ್ತದೆ.ಯಾವ ರೀತಿ ಚುನಾವಣೆಯಲ್ಲಿ ಎರಡು ಪಕ್ಷಗಳ‌ ನಾಯಕರು ಹೆಣೆಯುತ್ತಾರೆ ಎಂಬುದನ್ನು ಫಲಿತಾಂಶವರೆಗೂ ಕಾಯಬೇಕಿದ್ದು ಚಿತ್ರದುರ್ಗದ ಲೀಡ್ ಎರಡು ಪಕ್ಷದ ಅಭ್ಯರ್ಥಿಗಳ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ..

 

ಕಾಂಗ್ರೆಸ್ -ಬಿಜೆಪಿಗೆ ಪ್ಲಸ್ ಮತ್ತು ಮೈನಸ್

* ಸ್ಥಳೀಯ ನಾಯಕರ ಒಗ್ಗಟ್ಟು, , ಮೇಲ್ಜಾತಿ ಮತಗಳು ಮತ್ತು ಜೆಡಿಎಸ್ ಮತಗಳು ಬಿಜೆಪಿಗೆ ಪ್ಲಸ್
* ಮೊದಲ‌ ಬಾರಿ ಕಾಂಗ್ರೆಸ್ ಸ್ಥಳೀಯ ಶಾಸಕರು ,ಗ್ಯಾರಂಟಿಗಳು ಯೋಜನೆಗಳು, ಅಹಿಂದ- ಅಲ್ಪ ಸಂಖ್ಯಾತ ಮತಗಳು ಕಾಂಗ್ರೆಸ್‌ಗೆ ಪ್ಲಸ್.
*ಕಾಂಗ್ರೆಸ್ ಶಾಸಕ ಕೆ.ಸಿ.ವೀರೇಂದ್ರ ಅವರು ಇನ್ನು ಚುನಾವಣೆ ಕೆಲಸ ಪೂರ್ಣ ಆರಂಭಿಸದಿರುವುದು ಮೈನಸ್
*ಸ್ಥಳೀಯ ಬಿಜೆಪಿ ಶಾಸಕ ಇಲ್ಲದಿರುವುದು ಮೈನಸ್
*ಬಿಜೆಪಿ ಮೈತ್ರಿಯಲ್ಲಿ ಒಗ್ಗಟ್ಟಿನ ಕೊರತೆ, ಎಲ್ಲೂ ಫೀಲ್ಡ್ ಗೆ ಇಳಿಯದಿರುವುದು ಮೈನಸ್

 

**
2018 ರ ವಿಧಾನ ಸಭಾ ಚುನಾವಣೆಯಲ್ಲಿ ಮತಗಳ ಅಂತರ
ಬಿಜೆಪಿ 82,896
ಕಾಂಗ್ರೆಸ್ -49,014
ಜೆಡಿಎಸ್ -49911
ಅಂತರ – 32985
******

2023 ರ ವಿಧಾನ ಸಭಾ ಚುನಾವಣೆಯಲ್ಲಿ ಮತಗಳ ಅಂತರ
ಬಿಜೆಪಿ- 67437
ಕಾಂಗ್ರೆಸ್ – 120849
ಗೆಲುವಿನ ಅಂತರ 53412

*******
ಚಿತ್ರದುರ್ಗ ವಿಧಾನ ಸಭಾ ಕ್ಷೇತ್ರದ ಮತದಾರರ ವಿವರ
1,29,809 ಪುರುಷರು
1,34,398 ಮಹಿಳೆಯರು
41 ಲಿಂಗತ್ವ ಅಲ್ಪ ಸಂಖ್ಯಾತರು
2,64,248 ಒಟ್ಟು ಮತದಾರರು
**

ಇದನ್ನೂ ಓದಿ: ಆಶ್ರಮದಲ್ಲಿ ತಾಯಿ-ಮಗಳ ಆತ್ಮಹತ್ಯೆ| ನೀರಿ‌ನ ತೊಟ್ಟಿಯಲ್ಲಿ ಮೃತದೇಹ ಪತ್ತೆ

 

ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು

ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ನಮ್ಮ ವರದಿಗಾರರು. ನಿಮ್ಮೂರಿನ ಸಭೆ, ಸಮಾರಂಭ, ಶಾಲೆ ಕಾಲೇಜು ಕಾರ್ಯಕ್ರಮಗಳು, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಉತ್ತಮವಾದ ಫೋಟೋ ಜೊತೆಗೆ ಕಳುಹಿಸಬಹುದು. ಸುದ್ದಿ ಪ್ರಕಟವಾದ ಸುದ್ದಿಯ ಲಿಂಕ್‌ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ. ಮತ್ತು ಜಾಹಿರಾತುಗಳನ್ನು ಆಕರ್ಷಕ ದರದಲ್ಲಿ ಪ್ರಕಟಿಸಲಾಗುವುದು.

ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್‌ ಮೇಲ್‌ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.

» ನಮ್ಮಜನ.ಕಾಂ gmail:  nammajananews@gmail.com

» Whatsapp Number-9686622252

You Might Also Like

ಗಣಿಬಾಧಿತ ಹಳ್ಳಿಗಳಲ್ಲಿ ವಸತಿ, ನಿವೇಶನ ರಹಿತ ಫಲಾನುಭವಿಗಳ ಆಯ್ಕೆ : ಗ್ರಾಮ ಸಭೆ ನಡೆಸಲು ದಿನಾಂಕ ನಿಗದಿ | HOLALKERE

HIRIYUR | ಕುಡಿಯುವ ನೀರಿಗಾಗಿ ಶಾಲಾ ಮಕ್ಕಳು ಪ್ರತಿಭಟನೆ

Dina Bhavishya | ದಿನ ಭವಿಷ್ಯ | ಇಂದು ಯಾವ ರಾಶಿಗೆ ಶುಭಯೋಗ

internal reservation: ಒಳಮೀಸಲಾತಿ ಜಾರಿ ಖಚಿತ : ಮಾಜಿ ಸಚಿವ ಎಚ್.ಆಂಜನೇಯ

creative activities: ಪಠ್ಯದ ಜತೆಗೆ ಸೃಜನಶೀಲ ಚಟುವಟಿಕೆಗಳಲ್ಲಿಯೂ ಪಾಲ್ಗೊಳ್ಳಿ: ಬಿ.ವಿ.ತುಕಾರಾಂರಾವ್

TAGGED:BN ChandrappaChitradurga Constituency ground reportchitradurga ground reportChitradurga Lok Sabha Election 2024Chitradurga NewsChitradurga Political NewsCongressG. H. ThippareddyGovinda KarjolaK. C. Veerendra PuppyNammajana.comಕೆ.ಸಿ.ವೀರೇಂದ್ರ ಪಪ್ಪಿಗೋವಿಂದ ಕಾರಜೋಳಚಿತ್ರದುರ್ಗ ರಾಜಕೀಯ ಸುದ್ದಿಚಿತ್ರದುರ್ಗ ಲೋಕಸಭಾ ಚುನಾವಣೆ 2024ಚಿತ್ರದುರ್ಗ ವಿಧಾನಸಭಾ ಕ್ಷೇತ್ರಚಿತ್ರದುರ್ಗ ಸುದ್ದಿಜಿ.ಹೆಚ್.ತಿಪ್ಪಾರೆಡ್ಡಿಬಿ.ಎನ್.ಚಂದ್ರಪ್ಪ
Share This Article
Facebook Twitter Whatsapp Whatsapp Telegram Email Print
ಈ ಮೇಲಿನ ಸುದ್ದಿ, ಲೇಖನದ ಬಗ್ಗೆ ನಿಮ್ಮ ಅನಿಸಿಕೆ ಏನು?
Love0
Sad0
Happy0
Sleepy0
Angry0
Dead0
Wink0
Previous Article ವಿಶ್ವ ಪರಿಸರ ದಿನಾಚರಣೆ: ವಿದ್ಯಾರ್ಥಿಗಳಿಗೆ ರಸಪ್ರಶ್ನೆ ಮತ್ತು ಪ್ರಬಂಧ ಸ್ಪರ್ಧೆ
Next Article ನೇಹಾ ಕೊಲೆ| ಕಾಂಗ್ರೆಸ್ ನಾಯಕರು ಒಲೈಕೆ ನಿಲ್ಲಿಸಲಿ:ಆರ್.ಪಾಲಯ್ಯ ಅಕ್ರೋಶ
Leave a comment

Leave a Reply Cancel reply

Your email address will not be published. Required fields are marked *

Stay Connected

TelegramFollow

Latest News

Akka Cafe: ಜಿಲ್ಲಾ ಪಂಚಾಯತ್ ಆವರಣದಲ್ಲಿ ಅಕ್ಕ ಕೆಫೆ ಪ್ರಾರಂಭ
ಇಂದಿನ ಸುದ್ದಿ
mining: ಗಣಿ ಮಾಫಿಯ ನಿಲ್ಲಿಸಿ ಪರಿಸರ ರಕ್ಷಿಸಿ | ಆ.16ರಂದು ಬಳ್ಳಾರಿಯಲ್ಲಿ ರಾಜ್ಯ ಸಮಾವೇಶ
ಇಂದಿನ ಸುದ್ದಿ
ಆಗಸ್ಟ್ 1 ರಿಂದ ಹೊಸ UPI ನಿಯಮಗಳು ಜಾರಿ | ಏನೆಲ್ಲ ರೂಲ್ಸ್ ಇವೆ?
ವಿಶೇಷ ಸುದ್ದಿ
FIR ದಾಖಲು ಮಾಡಿದರು ತೆಂಗಿನ ಸಸಿ ನಾಟಿ
ಇಂದಿನ ಸುದ್ದಿ

Kannada News (ಕನ್ನಡ ಸುದ್ದಿ): Get the latest updates of karnataka news, world news, india news, political News and celebrity Kannada news and more on Nammajana (nammajana.com).

Sign Up for Our Newsletter

Subscribe to our newsletter to get our newest articles instantly!

Namma JanaNamma Jana
© 2025 NammaJanna. Kannada News Portal. All Rights Reserved.
adbanner
AdBlock Detected
Our site is an advertising supported site. Please whitelist to support our site.
Okay, I'll Whitelist
Welcome Back!

Sign in to your account

Lost your password?