Namma JanaNamma JanaNamma Jana
  • ಇಂದಿನ ಸುದ್ದಿ
  • ರಾಜಕೀಯ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಕ್ರೀಡೆ
  • ಆರೋಗ್ಯ
  • ದಿನ ಭವಿಷ್ಯ
Reading: ಸಚಿವ ಸುಧಾಕರ್ ಗೆ ಸೆಡ್ಡು ಹೊಡೆದು ಡಿಸಿಸಿ ಬ್ಯಾಂಕ್ ನಾಮ ನಿರ್ದೇಶನ ಸದಸ್ಯರಾದ ಶಾಸಕ ಟಿ.ರಘುಮೂರ್ತಿ | Chitradurga DCC Bank
Share
Notification Show More
Font ResizerAa
Font ResizerAa
Namma JanaNamma Jana
  • ಇಂದಿನ ಸುದ್ದಿ
  • ರಾಜಕೀಯ
  • ವಿಶೇಷ ಸುದ್ದಿ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಆರೋಗ್ಯ
  • ಕ್ರೀಡೆ
  • ದಿನ ಭವಿಷ್ಯ
  • ರಾಜಕೀಯ
Search
  • ಇಂದಿನ ಸುದ್ದಿ
  • ರಾಜಕೀಯ
  • ವಿಶೇಷ ಸುದ್ದಿ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಆರೋಗ್ಯ
  • ಕ್ರೀಡೆ
  • ದಿನ ಭವಿಷ್ಯ
  • ರಾಜಕೀಯ
Have an existing account? Sign In
Follow US
  • Advertise
© 2024 Namma Janna. Kannada News Portal. All Rights Reserved.
Namma Jana > Blog > ರಾಜಕೀಯ > ಸಚಿವ ಸುಧಾಕರ್ ಗೆ ಸೆಡ್ಡು ಹೊಡೆದು ಡಿಸಿಸಿ ಬ್ಯಾಂಕ್ ನಾಮ ನಿರ್ದೇಶನ ಸದಸ್ಯರಾದ ಶಾಸಕ ಟಿ.ರಘುಮೂರ್ತಿ | Chitradurga DCC Bank
ರಾಜಕೀಯ

ಸಚಿವ ಸುಧಾಕರ್ ಗೆ ಸೆಡ್ಡು ಹೊಡೆದು ಡಿಸಿಸಿ ಬ್ಯಾಂಕ್ ನಾಮ ನಿರ್ದೇಶನ ಸದಸ್ಯರಾದ ಶಾಸಕ ಟಿ.ರಘುಮೂರ್ತಿ | Chitradurga DCC Bank

Editor Nammajana
Last updated: 26 November 2024 07:29
By Editor Nammajana 3 Min Read
Share
SHARE

Chitradurga news|nammajana.com|26-11-2024

ನಮ್ಮಜನ.ಕಾಂ, ಚಿತ್ರದುರ್ಗ: ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ (ಡಿಸಿಸಿಬಿ)  ಗೆ ಕರ್ನಾಟಕ ಸಣ್ಣ ಕೈಗಾರಿಕೆ ಅಭಿವೃದ್ಧಿ ನಿಗಮದ  ಅಧ್ಯಕ್ಷ ಹಾಗೂ ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ಅವರನ್ನು ಡಿಸಿಸಿ ಬ್ಯಾಂಕ್ ಗೆ ಸರ್ಕಾರ ನಾಮ ನಿರ್ದೇಶನ ಸದಸ್ಯರಾಗಿ (Chitradurga DCC Bank) ಆಯ್ಕೆ ಮಾಡಿ ಆದೇಶ ಹೊರಡಿಸಿದೆ.

ಜಿಲ್ಲೆಯಾದ್ಯಂತ ಚರ್ಚೆಗೆ ಗ್ರಾಸವಾಗಿದ್ದು ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್‌ ಅವರು ರಾಜಕೀಯ ಕಾರಣಕ್ಕೆ ಸ್ವಪಕ್ಷೀಯ ಶಾಸಕನನ್ನೇ ಬ್ಯಾಂಕ್‌ ಆಡಳಿತದಿಂದ ದೂರವಿಟ್ಟಿದ್ದಾರೆ ಮತ್ತು ನಾಮ ನಿರ್ದೇಶನ ಸ್ಥಾನಕ್ಕೂ ಸಹ ಅವಕಾಶ ಇರಬಾರದು ಎಂಬ ಕಾರಣಕ್ಕೆ ಸಚಿವ ಸುಧಾಕರ್ ಅಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಚಳ್ಳಕೆರೆ ಸಿ‌. ವೀರಭದ್ರಬಾಬು ಅವರನ್ನು ಸರ್ಕಾರದಿಂದ ನೇಮಕ‌ ಮಾಡಿಸಿಕೊಂಡು ಬಂದಿದ್ದರು. ಆದರೆ ಈಗ ಸುಧಾಕರ್ ಶಿಷ್ಯನ ನಾಮ ನಿರ್ದೇಶನ ರದ್ದು ಮಾಡಿ ಆ ಸ್ಥಾನಕ್ಕೆ ಚಳ್ಳಕೆರೆ ಶಾಸಕ ಟಿ‌.ರಘುಮೂರ್ತಿ ಅವರನ್ನು (Chitradurga DCC Bank) ನಾಮನಿರ್ದೇಶನ ಸದಸ್ಯರಾಗಿ ಆದೇಶ ಮಾಡುವ ಮೂಲಕ ಸಚಿವ ಸುಧಾಕರ್ ಸೆಡ್ಡು ಒಡೆದು ಶಾಸಕ ರಘುಮೂರ್ತಿ ಡಿಸಿಸಿ ಬ್ಯಾಂಕ್ ಪ್ರವೇಶ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಸ್ವ ಪಕ್ಷದಿಂದ ಆರೋಪ ಕೇಳಿ ಬಂದಿತ್ತು

ಡಿಸಿಸಿ ಬ್ಯಾಂಕ್‌ ಅಧ್ಯಕ್ಷರಾಗಿರುವ ಸುಧಾಕರ್‌ ಮತ್ತೆ ಬ್ಯಾಂಕ್‌ ಆಡಳಿತವನ್ನು ತೆಕ್ಕೆಗೆ ತೆಗೆದುಕೊಳ್ಳಲು ಪ್ರಯತ್ನಿಸುತ್ತಿದ್ದು ಅದಕ್ಕಾಗಿ ಪ್ರತಿಸ್ಪರ್ಧಿಗಳನ್ನು ಹಣಿಯುವ ಉದ್ದೇಶದಿಂದ ಅಧಿಕಾರಿಗಳ ಮೇಲೆ ಒತ್ತಡ ತಂದು ಅನರ್ಹತೆ ಅಸ್ತ್ರ ಪ್ರಯೋಗಿಸುವ ಜೊತೆಗೆ ತನ್ನದೇ ಪಕ್ಷದ  ಶಾಸಕ ಟಿ‌.ರಘುಮೂರ್ತಿ ಅವರನ್ನು ದೂರವಿಡುವಲ್ಲಿ ಈ ಅನರ್ಹತೆ ಕೆಲಸ ಮಾಡಿತ್ತು. ಈ ಬೆಳವಣಿಗೆಯಿಂದ ಸ್ವಪಕ್ಷೀಯರು ಮತ್ತು ಹಿಂದುಳಿದ ವರ್ಗದ ನಾಯಕ ಟಿ‌‌.ರಘುಮೂರ್ತಿ ತುಳಿಯಲು ಯತ್ನಿಸುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿದ್ದವು.

ಕಳೆದ ಬಾರಿಯೂ ಸಹ ರಘುಮೂರ್ತಿ ಅವರನ್ನು ಡಿಸಿಸಿ ಬ್ಯಾಂಕ್ ನಿಂದ ದೂರವಿಡಲು ಇಂಥದ್ದೇ ಪ್ರಯತ್ನ ಮಾಡಿದ್ದರು. ಆದರೂ ರಘುಮೂರ್ತಿ ಬ್ಯಾಂಕ್‌ ನಿರ್ದೇಶಕರಾಗುವಲ್ಲಿ ಯಶಸ್ವಿಯಾಗಿದ್ದರು’ ಎಂಬ ಮಾತು ಸಹ ರಾಜಕೀಯ ವಲಯದಲ್ಲಿ  ಕೇಳಿ ಬಂದಿತ್ತು.

ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿ ಒಡ್ಡುವ ಆತಂಕಕ್ಕೆ ಅನರ್ಹತೆ ಅಸ್ತ್ರ ಆರೋಪ

ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ಎರಡನೇ ಬಾರಿ ಡಿಸಿಸಿ ಬ್ಯಾಂಕ್ ಪ್ರವೇಶಿಸಿ ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿ ನೀಡಬಹುದು ಎಂಬ ಕಾರಣಕ್ಕೆ ಸಚಿವ ಸುಧಾಕರ್ ಅನರ್ಹತೆ ಅಸ್ತ್ರದ (Chitradurga DCC Bank) ಮೂಲಕ ರಘುಮೂರ್ತಿ ಅವರನ್ನು ನಿರ್ದೇಶಕ ಸ್ಥಾನದಿಂದ ದೂರವಿಡಲು ಷಡ್ಯಂತ್ರ ರೂಪಸಿದ್ದರು ಎಂಬ ಮಾತು ಕೋಟೆ ನಾಡಿನ ರಾಜಕೀಯ ವಲಯದಲ್ಲಿ ಮರ್ದನಿಸಿದ್ದವು.

ಸರ್ಕಾರದಿಂದ ಡಿಸಿಸಿ ಬ್ಯಾಂಕ್ ನಾಮ ನಿರ್ದೇಶನ ಆದೇಶ ಪ್ರತಿ
ಸರ್ಕಾರದಿಂದ ಡಿಸಿಸಿ ಬ್ಯಾಂಕ್ ಗೆ ಶಾಸಕ ಟಿ.ರಘುಮೂರ್ತಿ ಅವರನ್ನು ನಾಮ ನಿರ್ದೇಶನದ ಆದೇಶ ಪ್ರತಿ

ಸಿಎಂ ಮತ್ತು ಡಿಸಿಎಂ ಅಂಗಳಕ್ಕೆ ಡಿಸಿಸಿ ಬ್ಯಾಂಕ್ ಚುನಾವಣಾ ಮಾಹಿತಿ

ರಾಜಕೀಯ ವಲಯದಲ್ಲಿ ಸ್ವ ಪಕ್ಷದ ನಾಯಕರಲ್ಲಿ ಇಂತಹ ಬೆಳವಣಿಗೆಯಿಂದ ರಾಜ್ಯ ನಾಯಕರು ಸಹ ಎಂಟ್ರಿಯಾಗಿ ಸ್ವಲ್ಪ ತಿಳಿ ಮಾಡಿದ್ದರು. ಸಿಎಂ ಮತ್ತು ಡಿಸಿಎಂ ಅವರು ಸಹ ಸಚಿವ ಸುಧಾಕರ್ ಅವರಿಗೆ ಕಿವಿ ಮಾತು ಹೇಳಿದ್ದರು. ಮುಡಾ ಹಗರಣದ ನಡುವೆ ಸ್ವಲ್ಪ ತಣ್ಣಗಿದ್ದ ಡಿಸಿಸಿ ಬ್ಯಾಂಕ್ ಈಗ ಮರಳಿ ಪಡೆದುಕೊಂಡಿದ್ದು ಸಿಎಂ ಮತ್ತು ಡಿಸಿಎಂ ಸಚಿವ ಡಿ.ಸುಧಾಕರ್ ಶಿಷ್ಯನ ಡಿಸಿಸಿ ಬ್ಯಾಂಕ್  ನಾಮ ನಿರ್ದೇಶನ ಸ್ಥಾನ ರದ್ದುಗೊಳಿಸಿ ಪಕ್ಷ ನಿಷ್ಠೆ, ಸ್ವಾಮಿ ನಿಷ್ಠೆ, ಸಂಘಟನೆ ಚತುರ, ಪಕ್ಷದ ಶಿಸ್ತಿನ (Chitradurga DCC Bank) ಸಿಪಾಯಿಯಂತೆ ಕೆಲಸ ಮಾಡುವ ಶಾಸಕ ಟಿ.ರಘುಮೂರ್ತಿ ಅವರನ್ನು ಸರ್ಕಾರದಿಂದ ಡಿಸಿಸಿ ಬ್ಯಾಂಕ್ ಗೆ ನಾಮನಿರ್ದೇಶನ ಮಾಡಿ ಸಹಕಾರ ಇಲಾಖೆ ಅಧೀನ ಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ. ಈ ಮೂಲಕ ಕೋಟೆ ನಾಡಿನಲ್ಲಿ ಹೊಸ ರಾಜಕೀಯಕ್ಕೆ ನಾಂದಿಯಾಡಿದೆ.

ಇದನ್ನೂ ಓದಿ: ವಾಣಿ ವಿಲಾಸ ಸಾಗರಕ್ಕೆ 462 ಕ್ಯೂಸೆಕ್ಸ್ ನೀರು | 26 ,ನವೆಂಬರ್ 2024 | ಎಷ್ಟಿದೆ ನೀರಿನ ಮಟ್ಟ | |Vani Vilasa Sagara Dam

You Might Also Like

Gold Rate | ಬಂಗಾರದ ಬೆಲೆಯಲ್ಲಿ ಇಳಿಕೆ

POWER CUT | ಇಂದು ಬೆಳಗ್ಗೆಯಿಂದ ಸಂಜೆವರೆಗೆ ಕರೆಂಟ್ ಇರಲ್ಲ

Dina Bhavishya | ದಿನ ಭವಿಷ್ಯ, ಇವತ್ತು ಯಾವ್ಯಾವ ರಾಶಿಗೆ ಶುಭ ಲಾಭ, ನಷ್ಟ ನೋಡಿ

Gold Rate | ಬಂಗಾರದ ಬೆಲೆಯಲ್ಲಿ ಏರಿಕೆ

Dina Bhavishya | ದಿನ ಭವಿಷ್ಯ, ಇವತ್ತು ಯಾವ್ಯಾವ ರಾಶಿಗೆ ಶುಭ?

TAGGED:Appointed as Nominee MemberC. VeerbhadrababuCanceled OrderChallakereChitradurga DCC BankChitradurga DistrictChitradurga NewsDCC BankDCCBDistrict Co-operative Central BankElected as Nominee MemberKannada Newskannada suddiMinister D. SudhakarMLAMLA T. RaghumurthyNammajana.comPoliticsಆದೇಶ ರದ್ದುಕನ್ನಡ ನ್ಯೂಸ್ಕನ್ನಡ ಸುದ್ದಿಚಳ್ಳಕೆರೆಚಿತ್ರದುರ್ಗ ಜಿಲ್ಲೆಚಿತ್ರದುರ್ಗ ಡಿಸಿಸಿ ಬ್ಯಾಂಕ್ಚಿತ್ರದುರ್ಗ ನ್ಯೂಸ್ಚಿತ್ರದುರ್ಗ ಸುದ್ದಿಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ಡಿಸಿಸಿ ಬ್ಯಾಂಕ್ಡಿಸಿಸಿಬಿನಮ್ಮಜನ.ಕಾಂನಾಮ ನಿರ್ದೇಶನ ಸದಸ್ಯರಾಗಿ ಆಯ್ಕೆನಾಮ ನಿರ್ದೇಶನ ಸದಸ್ಯರಾಗಿ ನೇಮಕರಾಜಕೀಯಶಾಸಕಶಾಸಕ ಟಿ.ರಘುಮೂರ್ತಿಸಚಿವ ಡಿ.ಸುಧಾಕರ್ಸಿ.ವೀರಭದ್ರಬಾಬು
Share This Article
Facebook Twitter Whatsapp Whatsapp Telegram Email Print
ಈ ಮೇಲಿನ ಸುದ್ದಿ, ಲೇಖನದ ಬಗ್ಗೆ ನಿಮ್ಮ ಅನಿಸಿಕೆ ಏನು?
Love2
Sad0
Happy2
Sleepy0
Angry0
Dead0
Wink0
Previous Article ವಾಣಿ ವಿಲಾಸ ಸಾಗರಕ್ಕೆ 462 ಕ್ಯೂಸೆಕ್ಸ್ ನೀರು | 26 ,ನವೆಂಬರ್ 2024 | ಎಷ್ಟಿದೆ ನೀರಿನ ಮಟ್ಟ | |Vani Vilasa Sagara Dam
Next Article ಆಂಧ್ರದಿಂದ ತಂದು ಅಕ್ರಮ ಸೇಂದಿ ಮಾರಟ | ಗ್ರಾ.ಪಂ ಅಧ್ಯಕ್ಷೆ ಮಗ ವಶ | Illegal Sendi
Leave a comment

Leave a Reply Cancel reply

Your email address will not be published. Required fields are marked *

Stay Connected

TelegramFollow

Latest News

Transfer | ಜಿಲ್ಲಾ ಬಿಸಿಎಂ ಅಧಿಕಾರಿ ಆರ್.ಸುಬ್ರಾನಾಯಕ್ ವರ್ಗಾವಣೆ, ನೂತನ ಅಧಿಕಾರಿ ಅಧಿಕಾರ ಸ್ವೀಕಾರ
ಇಂದಿನ ಸುದ್ದಿ
POWER CUT | ಇಂದಿನಿಂದ ಎರಡು ದಿನ ಬೆಳಗ್ಗೆಯಿಂದ ಸಂಜೆವರೆಗೂ ಕರೆಂಟ್ ಇರಲ್ಲ
ಇಂದಿನ ಸುದ್ದಿ
Adike rate | ಅಡಿಕೆ ಬೆಲೆಯಲ್ಲಿ ಇಳಿಕೆ
ಅಡಿಕೆ ಧಾರಣೆ
Gold Rate | ಬಂಗಾರದ ಬೆಲೆಯಲ್ಲಿ ಭರ್ಜರಿ ಏರಿಕೆ
ಇಂದಿನ ಸುದ್ದಿ

Kannada News (ಕನ್ನಡ ಸುದ್ದಿ): Get the latest updates of karnataka news, world news, india news, political News and celebrity Kannada news and more on Nammajana (nammajana.com).

Sign Up for Our Newsletter

Subscribe to our newsletter to get our newest articles instantly!

Namma JanaNamma Jana
© 2025 NammaJanna. Kannada News Portal. All Rights Reserved.
adbanner
AdBlock Detected
Our site is an advertising supported site. Please whitelist to support our site.
Okay, I'll Whitelist
Welcome Back!

Sign in to your account

Lost your password?