Namma JanaNamma JanaNamma Jana
  • ಇಂದಿನ ಸುದ್ದಿ
  • ರಾಜಕೀಯ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಕ್ರೀಡೆ
  • ಆರೋಗ್ಯ
  • ದಿನ ಭವಿಷ್ಯ
Reading: Chitradurga Municipality | ರಾಜ್ಯದಲ್ಲಿ ಮೊದಲ ಬಾರಿಗೆ ಕಸ ವಿಂಗಡಣೆಗೆ ಹಸಿ ಕಸ ಮತ್ತು ಒಣ ಕಸ ಮನೆಯಲ್ಲಿ ವಿಂಗಡಿಸಿ ನೀಡುವ ಕಾರ್ಡ್ ವಿತರಿಸಿದ ಚಿತ್ರದುರ್ಗ ನಗರಸಭೆ
Share
Notification Show More
Font ResizerAa
Font ResizerAa
Namma JanaNamma Jana
  • ಇಂದಿನ ಸುದ್ದಿ
  • ರಾಜಕೀಯ
  • ವಿಶೇಷ ಸುದ್ದಿ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಆರೋಗ್ಯ
  • ಕ್ರೀಡೆ
  • ದಿನ ಭವಿಷ್ಯ
  • ರಾಜಕೀಯ
Search
  • ಇಂದಿನ ಸುದ್ದಿ
  • ರಾಜಕೀಯ
  • ವಿಶೇಷ ಸುದ್ದಿ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಆರೋಗ್ಯ
  • ಕ್ರೀಡೆ
  • ದಿನ ಭವಿಷ್ಯ
  • ರಾಜಕೀಯ
Have an existing account? Sign In
Follow US
  • Advertise
© 2024 Namma Janna. Kannada News Portal. All Rights Reserved.
Namma Jana > Blog > ವಿಶೇಷ ಸುದ್ದಿ > Chitradurga Municipality | ರಾಜ್ಯದಲ್ಲಿ ಮೊದಲ ಬಾರಿಗೆ ಕಸ ವಿಂಗಡಣೆಗೆ ಹಸಿ ಕಸ ಮತ್ತು ಒಣ ಕಸ ಮನೆಯಲ್ಲಿ ವಿಂಗಡಿಸಿ ನೀಡುವ ಕಾರ್ಡ್ ವಿತರಿಸಿದ ಚಿತ್ರದುರ್ಗ ನಗರಸಭೆ
ವಿಶೇಷ ಸುದ್ದಿ

Chitradurga Municipality | ರಾಜ್ಯದಲ್ಲಿ ಮೊದಲ ಬಾರಿಗೆ ಕಸ ವಿಂಗಡಣೆಗೆ ಹಸಿ ಕಸ ಮತ್ತು ಒಣ ಕಸ ಮನೆಯಲ್ಲಿ ವಿಂಗಡಿಸಿ ನೀಡುವ ಕಾರ್ಡ್ ವಿತರಿಸಿದ ಚಿತ್ರದುರ್ಗ ನಗರಸಭೆ

Editor Nammajana
Last updated: 4 July 2024 14:28
By Editor Nammajana 3 Min Read
Share
SHARE
Chitradurga news|nammajana.com|4-7-2024
ನಮ್ಮಜನ.ಕಾಂ, ಚಿತ್ರದುರ್ಗ: ಮನೆ, ಅಂಗಡಿಗಳಲ್ಲಿ ಹಸಿ ಕಸ ಮತ್ತು ಒಣ ಕಸ ವಿಂಗಡಿಸಿ ನೀಡುವ ಕಾರ್ಡ್‍ಗಳನ್ನು (Chitradurga Municipality) ರಾಜ್ಯದಲ್ಲಿಯೇ ಮೊದಲ ಬಾರಿಗೆ ಚಿತ್ರದುರ್ಗ ನಗರಸಭೆಯು ವಿತರಿಸಿದೆ.
ಚಿತ್ರದುರ್ಗ ನಗರಸಭೆ ವ್ಯಾಪ್ತಿಯ ಪ್ರತಿ ಮನೆಗಳಿಗೂ ಹಸಿ ಕಸ ಮತ್ತು ಒಣ ಕಸ ವಿಂಗಡಣೆ ಮಾಡಿ, ನಗರಸಭೆಯ (Chitradurga Municipality) ವಾಹನಗಳಿಗೆ ನೀಡುವ ಬಗ್ಗೆ “ಸ್ವಚ್ಛ ಸರ್ವೇಕ್ಷಣೆ-2024ರ ಅಂಗವಾಗಿ ಮನೆ, ಅಂಗಡಿಗಳಲ್ಲಿ ಹಸಿ ಕಸ ಮತ್ತು ಒಣ ಕಸ ವಿಂಗಡಿಸಿ ನೀಡುವ ಕಾರ್ಡ್‍ಗಳನ್ನು ರಾಜ್ಯದಲ್ಲಿಯೇ ಮೊದಲ ಬಾರಿಗೆ ವಿತರಿಸಲಾಗಿದ್ದು, ಮೂಲದಲ್ಲಿಯೇ ಕಸ ವಿಂಗಡಿಸಿ, ಸಂಗ್ರಹಿಸುವ ವಿನೂತನ ಪ್ರಯೋಗಕ್ಕೆ ನಗರಸಭೆ ಮುಂದಾಗಿದೆ.

ಪ್ರಾಯೋಗಿಕ ನಾಲ್ಕು ತಿಂಗಳ ಅವಧಿಗೆ ಕಾರ್ಡ್ ವಿತರಣೆ (Chitradurga Municipality)

 

ಪ್ರಾಯೋಗಿಕವಾಗಿ ನಾಲ್ಕು ತಿಂಗಳ ಅವಧಿಗೆ ಮುದ್ರಿಸಿ, ಏಪ್ರಿಲ್ ಮಾಹೆಯಲ್ಲಿ ವಾರ್ಡ್ ನಂ. 9 ರಿಂದ 17 ಒಟ್ಟು 9 ವಾರ್ಡ್‍ಗಳಲ್ಲಿ ಬರುವ ಎಲ್ಲಾ ಮನೆಗಳಿಗೂ ಹಂಚಲಾಗಿರುತ್ತದೆ. ಹಾಗೂ ಈ ಕುರಿತು (Chitradurga Municipality) ಪ್ರತಿನಿತ್ಯ ಪರಿಶೀಲನೆ ನಡೆಸಿದ್ದು, ಇದನ್ನು ಇತರೆ ವಾರ್ಡ್‍ಗಳಿಗೆ ಅನ್ವಯಿಸಿಲು ಯೋಚಿಸಿ, ಮೇ ಮಾಹೆಯಲ್ಲಿ ವಾರ್ಡ್ ನಂ.5, 6, 7, 24, 25, 26, 27 ಒಟ್ಟು 7 ವಾರ್ಡ್ ಮನೆಗಳಿಗೂ ಹಂಚಿ ಒಟ್ಟು 16 ವಾರ್ಡ್‍ಗಳಿಗೆ ನಾಲ್ಕು ತಿಂಗಳ ಕಾರ್ಡ್‍ನ್ನು ಹಂಚಲಾಗಿರುತ್ತದೆ.

35 ವಾರ್ಡಗೆ ಕಾರ್ಡ್ ಸೌಲಭ್ಯ (Chitradurga Municipality)

 

ಮುಂದುವರೆದು ಚಿತ್ರದುರ್ಗ ನಗರಸಭೆ ವ್ಯಾಪ್ತಿಯ 35 ವಾರ್ಡ್‍ಗಳಿಗೂ (Chitradurga Municipality) ಈ ಸೌಲಭ್ಯ ನೀಡಲು ಜುಲೈ ಮಾಹೆಯಲ್ಲಿ ಆರು ತಿಂಗಳ ಅವಧಿಗೆ ಅಂದರೆ 2024ರ ಡಿಸೆಂಬರ್ ಅಂತ್ಯದವರೆಗೆ ಕಾರ್ಡ್‍ಗಳನ್ನು ಉಳಿದ 19 ವಾರ್ಡ್‍ಗಳಿಗೆ ಅಂದರೆ ವಾರ್ಡ್ ನಂ.1, 2, 3, 4, 8, 18, 19, 20, 21, 22, 23, 28, 29, 30, 31, 32, 33, 34, 35 ವಾರ್ಡ್‍ಗಳ ಪ್ರತಿ ಮನೆಗೂ ಕಾರ್ಡ್‍ನ್ನು ವಿತರಣೆ ಮಾಡಲಾಗಿರುತ್ತದೆ.
ಸಾರ್ವಜನಿಕರು ಈ ಕಾರ್ಯಕ್ಕೆ ಸಹಕರಿಸಿ, ಪ್ರತಿನಿತ್ಯವೂ ಹಸಿ ಕಸ, ಒಣ ಕಸ ವಿಂಗಡಣೆ ಮಾಡಿ ನಗರಸಭೆಯ ವಾಹನಗಳಿಗೆ ನೀಡಿ, ತಮಗೆ ವಿತರಿಸಿರುವ ಕಾರ್ಡ್‍ಗಳಲ್ಲಿ (Chitradurga Municipality) ದಾಖಲಿಸಲು ಮನವಿ ಮಾಡಿದೆ. ಒಂದು ವೇಳೆ ನಗರಸಭೆಯ ವಾಹನ ಪ್ರತಿ ದಿನ ಅಥವಾ 2 ದಿನಕ್ಕೊಮ್ಮೆ ನಿರಂತರವಾಗಿ ಬರುತ್ತಿರುವ ಬಗ್ಗೆ ಸಹ ಈ ಕಾರ್ಡ್‍ನಲ್ಲಿ ಮನೆಯ ಮಾಲೀಕರ ಸಹಿ ಹಾಕುವುದರಿಂದ ತಿಳಿದುಬರುತ್ತದೆ.
ಇದನ್ನೂ ಓದಿ:    ವಿದ್ಯಾರ್ಥಿ ನಿಲಯ ಮತ್ತು ಆಶ್ರಮ ಶಾಲೆ ಪ್ರವೇಶಕ್ಕೆ ಅರ್ಜಿ | Ashram School
ಎರಡು-ಮೂರು ತಿಂಗಳ ಅವಧಿಯಲ್ಲಿ ಸಾರ್ವಜನಿಕರಿಗೆ ನಗರಸಭೆಯ ಸಿಬ್ಬಂದಿಗಳು ಹಾಗೂ ಆರೋಗ್ಯ ನಿರೀಕ್ಷಕರು ಅರಿವು ಮೂಡಿಸಲು ಸೂಚಿಸಲಾಗಿರುತ್ತದೆ. ಆ ನಂತರವೂ ಸಹ ಸಾರ್ವಜನಿಕರು ಕಸವನ್ನು ವಿಂಗಡಿಸಿ ನಗರಸಭೆಯ (Chitradurga Municipality) ವಾಹನಗಳಿಗೆ ನೀಡದೇ ಇದ್ದರೆ, ದಂಡ ವಿಧಿಸಲು ಚಿಂತಿಸಲಾಗಿರುತ್ತದೆ.
ಚಿತ್ರದುರ್ಗ ನಗರವು ಐತಿಹಾಸಿಕ ನಗರವಾಗಿದ್ದು, ನಗರ ವ್ಯಾಪ್ತಿಯಲ್ಲಿ ಸ್ವಚ್ಛತೆ ಕಾಪಾಡುವುದು ಎಲ್ಲರ ಹೊಣೆ. ಇದಕ್ಕೆ ಸಾರ್ವಜನಿಕರ ಸಹಕಾರ ಅಗತ್ಯ. ಪ್ರತಿ ದಿನ ಮನೆ, ಅಂಗಡಿಗಳಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವನ್ನು ರಸ್ತೆಗೆ, ಚರಂಡಿಗೆ ಹಾಕದೇ ಹಸಿ ಕಸ, ಒಣ ಕಸವನ್ನಾಗಿ ಬೇರ್ಪಡಿಸಿ ನಗರಸಭೆಯ ವಾಹನ ಮನೆ ಬಾಗಿಲಿಗೆ ಬಂದಾಗ ನೀಡಲು ಪ್ರತಿ ನಿತ್ಯ ಕಸದ ವಾಹನಗಳಲ್ಲಿ ಪ್ರಚಾರ ಮಾಡಲಾಗುತ್ತಿದೆ. ಆದರೂ ಸಹ ಇನ್ನೂ ಪೂರ್ಣ ಪ್ರಮಾಣದಲ್ಲಿ ಹಸಿ ಕಸ, ಒಣ ಕಸ ವಿಂಗಡಿಸಿ, ನಗರಸಭೆಯ ವಾಹನಗಳಿಗೆ ನೀಡದೇ ರಸ್ತೆ, ಚರಂಡಿ ಮತ್ತು ಖಾಲಿ ನಿವೇಶನಗಳಲ್ಲಿ ಸಾರ್ವಜನಿಕರು ಎಸೆಯುತ್ತಿರುವುದು ಕಂಡುಬಂದಿರುತ್ತದೆ.

ಇದನ್ನೂ ಓದಿ: ವಿವಿಧ ಸೌಲಭ್ಯಕ್ಕೆ ವಿಕಲಚೇತನರಿಂದ ಅರ್ಜಿ ಆಹ್ವಾನ | Application for Disability Facility

 

ಹಸಿ ಕಸ, ಒಣ ಕಸವನ್ನಾಗಿ ವಿಂಗಡಿಸಿ, ನಗರಸಭೆಯ ವಾಹನಗಳಿಗೆ (Chitradurga Municipality) ನೀಡಿದರೆ, ಚಿತ್ರದುರ್ಗ ನಗರವನ್ನು ಸ್ವಚ್ಛ, ಸುಂದರ ನಗರವನ್ನಾಗಿ ಮಾಡಲು ನಗರಸಭೆಯೊಂದಿಗೆ ಸಹಕರಿಸಬೇಕು ಎಂದು ಚಿತ್ರದುರ್ಗ ನಗರಸಭೆ ಪೌರಾಯುಕ್ತರಾದ ಎಂ.ರೇಣುಕಾ ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.

You Might Also Like

Transfer | ಜಿಲ್ಲಾ ಬಿಸಿಎಂ ಅಧಿಕಾರಿ ಆರ್.ಸುಬ್ರಾನಾಯಕ್ ವರ್ಗಾವಣೆ, ನೂತನ ಅಧಿಕಾರಿ ಅಧಿಕಾರ ಸ್ವೀಕಾರ

POWER CUT | ಇಂದು ಬೆಳಗ್ಗೆಯಿಂದ ಸಂಜೆವರೆಗೆ ಕರೆಂಟ್ ಇರಲ್ಲ

Dina Bhavishya | ದಿನ ಭವಿಷ್ಯ, ಇವತ್ತು ಯಾವ್ಯಾವ ರಾಶಿಗೆ ಶುಭ ಲಾಭ, ನಷ್ಟ ನೋಡಿ

Gold Rate | ಬಂಗಾರದ ಬೆಲೆಯಲ್ಲಿ ಏರಿಕೆ

Dina Bhavishya | ದಿನ ಭವಿಷ್ಯ, ಇವತ್ತು ಯಾವ್ಯಾವ ರಾಶಿಗೆ ಶುಭ?

TAGGED:“Clean Survey-2024“ಸ್ವಚ್ಛ ಸರ್ವೇಕ್ಷಣೆ-2024CardChitradurgaChitradurga City CouncilChitradurga NewsCity Council CommissionerDistributionDry GarbageGreen GarbageKannada Newskannada suddiKote Naduಚಿತ್ರದುರ್ಗ ನಗರಸಭೆMunicipal Administration DepartmentNammajana.comSortingಒಣ ಕಸಕನ್ನಡ ನ್ಯೂಸ್ಕನ್ನಡ ಸುದ್ದಿಕಾರ್ಡ್ಕೋಟೆ ನಾಡುಚಿತ್ರದುರ್ಗಚಿತ್ರದುರ್ಗ ನ್ಯೂಸ್ಚಿತ್ರದುರ್ಗ ಸುದ್ದಿನಗರಸಭೆ ಆಯುಕ್ತೆನಮ್ಮಜನ.ಕಾಂಪೌರಡಳಿತ ಇಲಾಖೆವಿಂಗಡಿಣೆವಿತರಣೆಹಸಿ ಕಸ
Share This Article
Facebook Twitter Whatsapp Whatsapp Telegram Email Print
ಈ ಮೇಲಿನ ಸುದ್ದಿ, ಲೇಖನದ ಬಗ್ಗೆ ನಿಮ್ಮ ಅನಿಸಿಕೆ ಏನು?
Love0
Sad0
Happy0
Sleepy0
Angry0
Dead0
Wink0
Previous Article ವಿದ್ಯಾರ್ಥಿ ನಿಲಯ ಮತ್ತು ಆಶ್ರಮ ಶಾಲೆ ಪ್ರವೇಶಕ್ಕೆ ಅರ್ಜಿ | Ashram School
Next Article ಡಾ.ಡಿ.ಎಂ.ಅಭಿನವ್‍ಗೆ ರಾಜ್ಯಮಟ್ಟದ ಶ್ರೇಷ್ಠ ಆರ್‍ಸಿಹೆಚ್ ಅಧಿಕಾರಿ ಪ್ರಶಸ್ತಿ | State level excellence RCH award
Leave a comment

Leave a Reply Cancel reply

Your email address will not be published. Required fields are marked *

Stay Connected

TelegramFollow

Latest News

POWER CUT | ಇಂದಿನಿಂದ ಎರಡು ದಿನ ಬೆಳಗ್ಗೆಯಿಂದ ಸಂಜೆವರೆಗೂ ಕರೆಂಟ್ ಇರಲ್ಲ
ಇಂದಿನ ಸುದ್ದಿ
Adike rate | ಅಡಿಕೆ ಬೆಲೆಯಲ್ಲಿ ಇಳಿಕೆ
ಅಡಿಕೆ ಧಾರಣೆ
Gold Rate | ಬಂಗಾರದ ಬೆಲೆಯಲ್ಲಿ ಭರ್ಜರಿ ಏರಿಕೆ
ಇಂದಿನ ಸುದ್ದಿ
Dina Bhavishya | ದಿನ ಭವಿಷ್ಯ, ಇವತ್ತು ಯಾವ್ಯಾವ ರಾಶಿಗೆ ಶುಭ ಯೋಗ?
ದಿನ ಭವಿಷ್ಯ

Kannada News (ಕನ್ನಡ ಸುದ್ದಿ): Get the latest updates of karnataka news, world news, india news, political News and celebrity Kannada news and more on Nammajana (nammajana.com).

Sign Up for Our Newsletter

Subscribe to our newsletter to get our newest articles instantly!

Namma JanaNamma Jana
© 2025 NammaJanna. Kannada News Portal. All Rights Reserved.
adbanner
AdBlock Detected
Our site is an advertising supported site. Please whitelist to support our site.
Okay, I'll Whitelist
Welcome Back!

Sign in to your account

Lost your password?