
Chitradurga news|nammajana.com|20-9-2024
ನಮ್ಮಜನ.ಕಾಂ, ಚಿತ್ರದುರ್ಗ: ನನ್ನ ಮೇಲೆ ಆರೋಪ ಮಾಡುವವರ ವಿರುದ್ಧ ಮಾನನಷ್ಟ ಕೇಸ್ ದಾಖಲಿಸುವುದಾಗಿ ಹಿಂದೂ ಮಹಾಗಣಪತಿ ಉತ್ಸವ ಸಮಿತಿಯ ಮಾರ್ಗದರ್ಶಕರು (Chitradurga news) ಹಾಗೂ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ ಬದರಿನಾಥ್ ಅವರು ಪ್ರತಿಕ್ರಿಯೆ ನೀಡಿದ್ದಾರೆ.
ಚಿತ್ರದುರ್ಗದ ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಹಿಂದೂ ಮಹಾ ಗಣಪತಿ ಉತ್ಸವ ಸಮಿತಿಯ ಮಾರ್ಗದರ್ಶಕರಾದ ಭದ್ರೀನಾಥ್ ಅವರು ಕಳೆದ ನಾಲ್ಕೈದು ದಿನಗಳಿಂದ ನನ್ನ ಮೇಲೆ ವೈಯಕ್ತಿಕವಾಗಿ ಸುರೇಶ್ ಬಾಬು (Chitradurga news) ಹಾಲಿಯಸ್ ಸೈಟ್ ಬಾಬಣ್ಣ ಹಾಗೂ ಇತರೆ ಕೆಲವೊಂದಿಷ್ಟು ಜನ ವೈಯಕ್ತಿಕವಾಗಿ ನನ್ನ ಮೇಲೆ ಆರೋಪಗಳನ್ನು ಮಾಡುತ್ತಿದ್ದಾರೆ.

ನಿನ್ನೆ ಸಹ ವೈಯಕ್ತಿಕ ವಿಚಾರಗಳನ್ನು ತೆಗೆದುಕೊಂಡು ಯಾವುದೋ ಆಡಿಯೋ ವೈರಲ್ ಆಗಿದೆ ಎಂದು ಹೇಳಿ ಡಿ.ಸಿ ಕಛೇರಿಗೆ ಹಾಗೂ ಡಿ.ವೈ.ಎಸ್.ಪಿ ಅರ್ಜಿಯನ್ನು ಸಲ್ಲಿಸಿದ್ದಾರೆ.
ನಾನು ಯಾವುದೇ ಮುಸ್ಲಿಂ ಸಂಘಟನೆಗಳ ಜೊತೆ ಸೇರಿ ಸಂಘ ಪರಿವಾರದ ಉದ್ದೇಶಗಳು ಹಾಗೂ ಕಾರ್ಯಕರ್ತರಿಗೆ ಬೆದರಿಕೆವೊಡ್ಡಿ ಮೂರು ಕೋಟಿ ರೂಪಾಯಿಗಳ ಡೀಲ್ ಕೊಟ್ಟಿದ್ದಾರೆ ಎಂದು ಆರೋಪ ಇದೆ.
ಅದರಲ್ಲಿ ಸ್ಪಷ್ಟವಾಗಿ ಇದೆ ನನ್ನ ಜೊತೆ ಮಾತನಾಡಿರುವುದು ಯಾವುದೇ ಮುಸ್ಲಿಂ ಸಂಘಟನೆಯವರಲ್ಲ. ನನ್ನ ಜೊತೆ ಮಾತನಾಡಿರುವುದು ಮುಸ್ಲಿಂ ಸಂಘಟನೆ ಜೊತೆ ಸೇರಿ ಡೀಲ್ ಮಾಡುತ್ತಿದ್ದಾರೆ ಎಂದು ಆರೋಪ ಮಾಡುತ್ತಿರುವ ಯರ್ರಿಸ್ವಾಮಿ ರವರ ಜೊತೆ ಮಾತನಾಡಿರುವುದು.ಅದು ನಮ್ಮ ಕುಟುಂಬ ವ್ಯವಹಾರಕ್ಕೆ ಸಂಬಂಧಪಟ್ಟ ವಿಷಯದ ಬಗ್ಗೆ ಎಂದು ಸ್ಪಷ್ಟಪಡಿಸಿದರು.
ಅನಿಲ್ ಮೆಟಲ್ ಸ್ಟೋರ್ ಮಾಲೀಕರಾದ ಚಂದ್ರಕಾಂತ್ ಜೈನ್ ಹಾಗೂ ನಮ್ಮ ಮಧ್ಯೆ ಸುಮಾರು 50 ವರ್ಷಗಳಿಂದ ಸ್ನೇಹವಿದ್ದು ಸ್ನೇಹದ ಜೊತೆಗೆ ವ್ಯವಹಾರ ಇದೆ. ನಮ್ಮಣ್ಣ ಚಂದ್ರಕಾಂತ್ ಜೈನ್ ರವರಿಗೆ ಹಣವನ್ನು ಸಾಲ ಸಹ ಕೊಡಿಸಿದ್ದರು. ಕೊಡಿಸಿದ ಸಾಲವನ್ನು ಅದನ್ನು ಹಿಂದುರುಗಿ ಕೊಡದೇ ಇದ್ದಾಗ.. ವಾಪಾಸ್ ಕೇಳಿದಾಗ ಯರ್ರಿಸ್ವಾಮಿ ಎಂಬ ವ್ಯಕ್ತಿ ಅಡ್ಡಿಪಡಿಸುವ ಕೆಲಸ ಮಾಡಿದ್ದಾನೆ.
ಅದನ್ನು ಯರಿಸ್ವಾಮಿಗೆ ಪರಿಚಯದ ಕಾರಣಕ್ಕೆ ತೊಂದರೆ ಏಕೆ ಮಾಡುತ್ತಿದ್ದೀಯ ನಮ್ಮ ಅಣ್ಣಂಗೆ ಎಂದು ಕೇಳಿದ್ದು ಇದು ಪೊಲೀಸ್ ಠಾಣೆಯಲ್ಲಿನೊ ನಡೆಯುತ್ತದೆ ವಿಚಾರ.ಅದು ನಮಗೆ ಸಂಬಂಧಪಟ್ಟ ವಿಚಾರನೇ.. ಸುಮಾರು ಮೂರು ಕೋಟಿ ರೂ ಹಣ ನಮ್ಮ ಅಣ್ಣನಿಗೆ ಕೊಡಬೇಕು.ವೈಯಕ್ತಿಕ ವಿಚಾರವನ್ನು (Chitradurga news) ಹಿಂದೂ ಮಹಾಗಣಪತಿಗೆ ತಳುಕು ಹಾಕುವಂತಹ ಕೆಟ್ಟ ಕೆಲಸವನ್ನು ಸೈಟ್ ಬಾಬುರವರು ಮಾಡುತ್ತಿದ್ದಾರೆ.
ತಮ್ಮ ಮೇಲಿನ ಹಣದ ವ್ಯವಹಾರದ ಕುರಿತು ಸ್ಪಷ್ಟನೆ ನೀಡಿ ಮಾತನಾಡಿದ್ದು ನನ್ನ ಮೇಲೆ ವೈಯಕ್ತಿಕವಾಗಿ ಶಿಫಾರಸ್ಸು ಸುರೇಶ್ ಬಾಬು ಹಾಗೂ ಕೆಲ ಮಿತ್ರರು ನನ್ನ ಮೇಲೆ ಆರೋಪ ಮಾಡಿದ್ದಾರೆ. ಹಣದ ವಿಚಾರದ ಬಗ್ಗೆ ಆಡಿಯೋ ಬಿಡುಗಡೆ ಮಾಡಿದ್ದಾರೆ. ನಾನು ಮುಸ್ಲಿಂ ಸಂಘಟನೆ ಜೊತೆ ಸೇರಿ ಸಂಘ ಪರಿವಾರದವ ಮೇಲೆ 3 ಕೋಟಿ ಡೀಲ್ ಕೊಟ್ಟಿದ್ದಾಗಿ ಆರೋಪ ಮಾಡಿದ್ದು ನನ್ನ ಜೊತೆ ಮಾತನಾಡಿದ್ದು ಯರ್ರಿಸ್ವಾಮಿ ಅವರ ಜೊತೆ ನಮ್ಮ ಕುಟುಂಬದ ವ್ಯವಹಾರದ ಬಗ್ಗೆ ಮಾತನಾಡದ್ದೇನೆ ಎಂದರು.
ನಮ್ಮ ಕುಟುಂಬದ 3 ಕೋಟಿ ವ್ಯವಹಾರದ ಬಗ್ಗೆ ಮಾತನಾಡಿದ್ದು ಡೀಲ್ ಎಂಬ ಪದ ಬಳಸಿದ್ದೇನೆ. 3 ಕೋಟಿ ಸುಪಾರಿ ಕೊಡುವಂತವರು ಚಿತ್ರದುರ್ಗದಲ್ಲಿ ಯಾರು ಇಲ್ಲ. ನನ್ನ ಖಾಸಗಿ ವ್ಯವಹಾರವನ್ನ ಹಿಂದೂ ಮಹಾ ಗಣಪತಿ ಜೊತೆ ತಳಕು ಹಾಕುವ ಕೆಲಸ ಸೈಟ್ ಬಾಬು ಮಾಡುತ್ತಿದ್ದಾರೆ.
ನನ್ನ ಆಡಿಯೋ ತಿರುಚಿ ಪೊಲೀಸ್ ಇಲಾಖೆಗೆ ಕೊಟ್ಟು ನನ್ನನ್ನ ಹಿಂದೂ ಮಹಾ ಗಣಪತಿ ಕಡೆ ಬರಬಾರದು ಎಂದು (Chitradurga news) ಹೇಳುತ್ತಿದ್ದು ಈ ಸಮಿತಿ ಮಾಡುವುದು ಸಂಘಟನೆಯಾಗಿದ್ದು ಅದರಲ್ಲಿ ನಾನು ಇದ್ದೇನೆ.
ಇದನ್ನ ತಳಕು ಹಾಕಿ ಮಾತನಾಡಿ ನನ್ನ ಮೇಲೆ ಆರೋಪ ಮಾಡುತ್ತಿದ್ದು ಮತ್ತು ವೈಯಕ್ತಿಕ ನಿಂದನೆ ಮಾಡಿದ್ದು ಮಾನನಷ್ಟ ಮೊಕದ್ದಮೆ ಕೇಸ್ ದಾಖಲು ಮಾಡಲು ನಿರ್ಧಾರ ಮಾಡಿದ್ದಾಗಿ ಭಧ್ರೀನಾಥ್ ಅವರು ಸ್ಪಷ್ಟನೆ ಕೊಟ್ಟಿದ್ದಾರೆ.
ಇದನ್ನೂ ಓದಿ: ಪಿಎಂ ವಿಶ್ವಕರ್ಮ ಯೋಜನೆ: 20 ಲಕ್ಷಕ್ಕಿಂತ ಹೆಚ್ಚು ನೊಂದಣಿ | MP Govinda M Karajola
ಈ ಸಂದರ್ಭದಲ್ಲಿ ನ್ಯಾಯವಾದಿಗಳಾದ ಕೆ.ಎನ್.ವಿಶ್ವನಾಥಯ್ಯ, ನಗರಾಭೀವೃದ್ದಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಜಿ.ಎಂ.ಸುರೇಶ್ ಉಪಸ್ಥಿತರಿದ್ದರು.