Namma JanaNamma JanaNamma Jana
  • ಇಂದಿನ ಸುದ್ದಿ
  • ರಾಜಕೀಯ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಕ್ರೀಡೆ
  • ಆರೋಗ್ಯ
  • ದಿನ ಭವಿಷ್ಯ
Reading: ಚಿತ್ರದುರ್ಗ ನಗರದ ಮುಖ್ಯ ರಸ್ತೆ ಅಗಲೀಕರಣಕ್ಕೆ ನಿರ್ಧಾರ | ಸಚಿವ ಡಿ.ಸುಧಾಕರ್ | Chitradurga Road widening
Share
Notification Show More
Font ResizerAa
Font ResizerAa
Namma JanaNamma Jana
  • ಇಂದಿನ ಸುದ್ದಿ
  • ರಾಜಕೀಯ
  • ವಿಶೇಷ ಸುದ್ದಿ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಆರೋಗ್ಯ
  • ಕ್ರೀಡೆ
  • ದಿನ ಭವಿಷ್ಯ
  • ರಾಜಕೀಯ
Search
  • ಇಂದಿನ ಸುದ್ದಿ
  • ರಾಜಕೀಯ
  • ವಿಶೇಷ ಸುದ್ದಿ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಆರೋಗ್ಯ
  • ಕ್ರೀಡೆ
  • ದಿನ ಭವಿಷ್ಯ
  • ರಾಜಕೀಯ
Have an existing account? Sign In
Follow US
  • Advertise
© 2024 Namma Janna. Kannada News Portal. All Rights Reserved.
Namma Jana > Blog > ಇಂದಿನ ಸುದ್ದಿ > ಚಿತ್ರದುರ್ಗ ನಗರದ ಮುಖ್ಯ ರಸ್ತೆ ಅಗಲೀಕರಣಕ್ಕೆ ನಿರ್ಧಾರ | ಸಚಿವ ಡಿ.ಸುಧಾಕರ್ | Chitradurga Road widening
ಇಂದಿನ ಸುದ್ದಿ

ಚಿತ್ರದುರ್ಗ ನಗರದ ಮುಖ್ಯ ರಸ್ತೆ ಅಗಲೀಕರಣಕ್ಕೆ ನಿರ್ಧಾರ | ಸಚಿವ ಡಿ.ಸುಧಾಕರ್ | Chitradurga Road widening

Editor Nammajana
Last updated: 26 June 2024 10:13
By Editor Nammajana 2 Min Read
Share
SHARE

Chitradurga news|nammajana.com|26-6-2024

ನಮ್ಮಜನ.ಕಾಂ, ಚಿತ್ರದುರ್ಗ ಜೂ.26: ಜಿಲ್ಲಾ ಕೇಂದ್ರದ ರಸ್ತೆಗಳು ಜನರ ಬದುಕನ್ನು ಅಸ್ತವ್ಯಸ್ತಗೊಳಿಸಿದ್ದು, ಕಾನೂನು ಪ್ರಕಾರ ಪ್ರಮುಖ ರಸ್ತೆಗಳನ್ನು ಅಗಲೀಕರಣ ಮಾಡಬೇಕು ಇಲ್ಲವಾದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು (Chitradurga Road widening) ಎಂದು ಲೋಕೋಪಯೋಗಿ ಇಲಾಖೆ ಮುಖ್ಯ ಎಂಜಿನಿಯರ್ ಗೆ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಎಚ್ಚರಿಕೆ ನೀಡಿದ್ದಾರೆ.

ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಇಂದು ನಡೆದ ಜಿಲ್ಲಾ ಪಂಚಾಯತ್ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ‌ ಮಾತನಾಡಿದರು.

ನಗರಗಳನ್ನು ಅಭಿವೃದ್ದಿ ಮಾಡುವ ಜವಬ್ದಾರಿ ಅಧಿಕಾರಿಗಳ ಮೇಲಿದ್ದು ಯಾವುದೇ ರಸ್ತೆ ಮಾಡಬೇಕಾದರೆ ಮೊದಲು ರೂಪರೇಷೆ ತಯಾರಿಸಿಕೊಳ್ಳಬೇಕು. ಆದರೆ ಜಿಲ್ಲಾ ಕೇಂದ್ರದಲ್ಲಿ (Chitradurga Road widening) ಇದ್ಯಾವುದನ್ನು ಮಾಡದೆ, ಕಾನೂನಿನ ಸುತ್ತೋಲೆಯನ್ನು ಗಾಳಿಗೆ ತೂರಿ ಮನಬಂದಂತೆ ರಸ್ತೆ ನಿರ್ಮಾಣ ಮಾಡಲಾಗಿದೆ ಎಂದು ಕಿಡಿಕಾರಿದರು.

SBI ಸರ್ಕಲ್ ನಿಂದ ಬಸ್ ನಿಲ್ದಾಣಕ್ಕೆ ಅರ್ಧ ಗಂಟೆ ಬೇಕು: ಎಂ.ಚಂದ್ರಪ್ಪ

ಶಾಸಕ ಎಂ.ಚಂದ್ರಪ್ಪ ಮಾತನಾಡಿ SBI ಸರ್ಕಲ್ ನಿಂದ ಬಸ್ ನಿಲ್ದಾಣಕ್ಕೆ ಹೋಗಬೇಕಾದರೆ ಕನಿಷ್ಟ ಅರ್ಧ ಗಂಟೆ ಸಮಯ ಬೇಕಿದೆ. ಕಾರಣ ಅಷ್ಟೊಂದು ಚಿಕ್ಕದಾಗಿದೆ ರಸ್ತೆ. ಒಂದು ವಾಹನ ಹೋದರೆ, ಆ ವಾಹನ ಹೋಗುವವರೆಗೂ ಮತ್ತೊಂದು ವಾಹನ ಕಾಯುತ್ತಾ ನಿಲ್ಲಬೇಕಿದೆ. ಕಾನೂನು ಪ್ರಕಾರ ಪ್ರಮುಖ ರಸ್ತೆಗಳು ಇಂತಿಷ್ಟು ಅಗಲ ಇರಬೇಕು ಎಂದಿದೆ. ಆದರೆ ನಗರಸಭೆ ಅವರು ಯಾರದೋ ಮಾತನ್ನು ಕೇಳಿ ಆ ಕಾನೂನು ಸುತ್ತೋಲೆಯನ್ನೆ ಸುಟ್ಟು ಹಾಕಿದ್ದಾರೆ. ಇಂತಹವರಿಂದ ಜಿಲ್ಲೆಯ ಅಭಿವೃದ್ದಿ ಸಾಧ್ಯವೇ ಎಂದು‌ ಕಿಡಿಕಾರಿದರು.

ಸರ್ಕಾರಿ ವಿಜ್ಞಾನ ಕಾಲೇಜು ಮುಂಭಾಗದಂತೆ ಅಗಲೀಕರಣ ಮಾಡಿ

ಸರ್ಕಾರಿ ವಿಜ್ಞಾನ ಕಾಲೇಜು ಮುಂದಿರುವ ವಿಶಾಲವಾದ ರಸ್ತೆಯಷ್ಟೇ ಮುರುಘಾ ಮಠದ ವರೆಗೂ ರಸ್ತೆ ಇರಬೇಕು, ಆದರೆ ಆಧಿಕಾರಿಗಳು ಕೆಲವರ ಕಣ್ಣಿಗೆ ಬೆಣ್ಣೆ, ಕೆಲವರ ಕಣ್ಣಿಗೆ ಸುಣ್ಣ ಎಂಬಂತೆ ಕೆಲಸ ಮಾಡಿದ್ದಾರೆ. ಇದರಿಂದ ರಸ್ತೆಗಳು ಆಳಾಗಿವೆ ಎಂದರು.

ಡಿವೈಡರ್ ಹೊಡೆಯಲು ಹೇಳಿದರು ಹೊಡೆದಿಲ್ಲ: ವೀರೇಂದ್ರ ಪಪ್ಪಿ ಕಿಡಿ

ಶಾಸಕ ಕೆ.ಸಿ.ವಿರೇಂದ್ರ ಪಪ್ಪಿ ಮಾತನಾಡಿ ರಸ್ತೆ ವಿಭಜಕಗಳನ್ನು (Chitradurga Road widening) ತೆರವುಗೊಳಿಸಿ ಎಂದು ಹೇಳಿ ಸಾಕಷ್ಟು ಸಮಯ ಆಗಿದ್ದರು ಒಂದು ಕಡೆ ಮಾತ್ರ ಡಿವೈಡರ್ ಹೊಡೆದು ಇನ್ನು ಹಲವೆಡೆ ಆಗೇಯೇ ಬಿಟ್ಟಿದ್ದಿರಾ, ಕಾರಣ ಹೇಳಿ ಎಂದು ತೀವ್ರ ತರಾಟೆಗೆ ತೆಗೆದುಕೊಂಡರು.

ಇದನ್ನೂ ಓದಿ: ಮನೆಯಲ್ಲಿದ್ದ ಫ್ರಿಡ್ಜ್ ಬ್ಲಾಸ್ಟ್ | ಬ್ಲಾಸ್ಟ್ ಆಗಿದ್ದೇಕೆ? | Fridge Blast challakere

ಸಭೆಯಲ್ಲಿ ಶಾಸಕರಾದ ಟಿ.ರಘುಮೂರ್ತಿ, ಎನ್.ವೈ.ಗೋಪಾಲಕೃಷ್ಣ, ಡಿ.ಟಿ.ಶ್ರೀನಿವಾಸ್, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಆಮ್ಲಾನ್ ಆಧಿತ್ಯ ಬಿಶ್ವಾಸ್, ಜಿಲ್ಲಾಧಿಕಾರಿ ವೇಂಕಟೇಶ್, ಜಿ.ಪಂ.ಸಿಇಓ ಸೋಮಶೇಖರ್‌, ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದ್ರ ಕುಮಾರ್ ಮೀನಾ ಉಪಸ್ಥಿತರಿದ್ದರು.

You Might Also Like

Transfer | ಜಿಲ್ಲಾ ಬಿಸಿಎಂ ಅಧಿಕಾರಿ ಆರ್.ಸುಬ್ರಾನಾಯಕ್ ವರ್ಗಾವಣೆ, ನೂತನ ಅಧಿಕಾರಿ ಅಧಿಕಾರ ಸ್ವೀಕಾರ

POWER CUT | ಇಂದು ಬೆಳಗ್ಗೆಯಿಂದ ಸಂಜೆವರೆಗೆ ಕರೆಂಟ್ ಇರಲ್ಲ

Dina Bhavishya | ದಿನ ಭವಿಷ್ಯ, ಇವತ್ತು ಯಾವ್ಯಾವ ರಾಶಿಗೆ ಶುಭ ಲಾಭ, ನಷ್ಟ ನೋಡಿ

Gold Rate | ಬಂಗಾರದ ಬೆಲೆಯಲ್ಲಿ ಏರಿಕೆ

Dina Bhavishya | ದಿನ ಭವಿಷ್ಯ, ಇವತ್ತು ಯಾವ್ಯಾವ ರಾಶಿಗೆ ಶುಭ?

TAGGED:B. G. GovindappaCEO Zilla PanchayatChitradurgaChitradurga CityChitradurga NewsChitradurga Zilla PanchayatDistrict LevelengineerK.C. Virendra PappiKannada Newskannada suddiKDP Sabhalaw enforcementM. Chandrappamain roadminister D. Sudhakar noticeMLA supportMLAsN. Y. GopalakrishnaNammajana.comofficerOfficersroad wideningT RaghumurthyTri MonthlyZilla Panchayatಅಧಿಕಾರಿಅಧಿಕಾರಿಗಳುಇಂಜಿನಿಯರ್ಎಂ.ಚಂದ್ರಪ್ಪಎನ್.ವೈ.ಗೋಪಾಲಕೃಷ್ಣಕನ್ನಡ ನ್ಯೂಸ್ಕನ್ನಡ ಸುದ್ದಿಕಾನೂನು ಪಾಲನೆಕೆ.ಸಿ.ವೀರೇಂದ್ರ ಪಪ್ಪಿಕೆಡಿಪಿ ಸಭೆಚಿತ್ರದುರ್ಗಚಿತ್ರದುರ್ಗ ಜಿಲ್ಲಾ ಪಂಚಾಯತ್ಚಿತ್ರದುರ್ಗ ನಗರಚಿತ್ರದುರ್ಗ ನ್ಯೂಸ್ಚಿತ್ರದುರ್ಗ ಸುದ್ದಿಜಿಲ್ಲಾ ಪಂಚಾಯತ್ಜಿಲ್ಲಾ ಮಟ್ಟಟಿ ರಘುಮೂರ್ತಿತ್ರೈ ಮಾಸಿಕನಮ್ಮಜನ.ಕಾಂಬಿ.ಜಿ.ಗೋವಿಂದಪ್ಪಮುಖ್ಯ ರಸ್ತೆರಸ್ತೆ ವಿಸ್ತರಣೆಶಾಸಕಶಾಸಕರ ಬೆಂಬಲಸಚಿವ ಡಿ.ಸುಧಾಕರ್ ಸೂಚನೆಸಿಇಓ ಜಿಲ್ಲಾ ಪಂಚಾಯತ್
Share This Article
Facebook Twitter Whatsapp Whatsapp Telegram Email Print
ಈ ಮೇಲಿನ ಸುದ್ದಿ, ಲೇಖನದ ಬಗ್ಗೆ ನಿಮ್ಮ ಅನಿಸಿಕೆ ಏನು?
Love0
Sad0
Happy1
Sleepy0
Angry0
Dead0
Wink1
Previous Article ಮನೆಯಲ್ಲಿದ್ದ ಫ್ರಿಡ್ಜ್ ಬ್ಲಾಸ್ಟ್ | ಬ್ಲಾಸ್ಟ್ ಆಗಿದ್ದೇಕೆ? | Fridge Blast challakere
Next Article ಅಡಿಕೆ ರೇಟ್ | 26 ಜೂನ್ 2024 | ಚನ್ನಗಿರಿ ಮಾರುಕಟ್ಟೆ | ರಾಶಿ ಅಡಿಕೆ ಬೆಲೆ ಇಳಿಕೆ | ರೈತರಲ್ಲಿ ಆತಂಕ |Channagiri Adike Rate Today
Leave a comment

Leave a Reply Cancel reply

Your email address will not be published. Required fields are marked *

Stay Connected

TelegramFollow

Latest News

POWER CUT | ಇಂದಿನಿಂದ ಎರಡು ದಿನ ಬೆಳಗ್ಗೆಯಿಂದ ಸಂಜೆವರೆಗೂ ಕರೆಂಟ್ ಇರಲ್ಲ
ಇಂದಿನ ಸುದ್ದಿ
Adike rate | ಅಡಿಕೆ ಬೆಲೆಯಲ್ಲಿ ಇಳಿಕೆ
ಅಡಿಕೆ ಧಾರಣೆ
Gold Rate | ಬಂಗಾರದ ಬೆಲೆಯಲ್ಲಿ ಭರ್ಜರಿ ಏರಿಕೆ
ಇಂದಿನ ಸುದ್ದಿ
Dina Bhavishya | ದಿನ ಭವಿಷ್ಯ, ಇವತ್ತು ಯಾವ್ಯಾವ ರಾಶಿಗೆ ಶುಭ ಯೋಗ?
ದಿನ ಭವಿಷ್ಯ

Kannada News (ಕನ್ನಡ ಸುದ್ದಿ): Get the latest updates of karnataka news, world news, india news, political News and celebrity Kannada news and more on Nammajana (nammajana.com).

Sign Up for Our Newsletter

Subscribe to our newsletter to get our newest articles instantly!

Namma JanaNamma Jana
© 2025 NammaJanna. Kannada News Portal. All Rights Reserved.
adbanner
AdBlock Detected
Our site is an advertising supported site. Please whitelist to support our site.
Okay, I'll Whitelist
Welcome Back!

Sign in to your account

Lost your password?