Namma JanaNamma JanaNamma Jana
  • ಇಂದಿನ ಸುದ್ದಿ
  • ರಾಜಕೀಯ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಕ್ರೀಡೆ
  • ಆರೋಗ್ಯ
  • ದಿನ ಭವಿಷ್ಯ
Reading: ಹೊಸದುರ್ಗ | ಕ್ಲೋರಿನ್‌ ಗ್ಯಾಸ್ ಸೋರಿಕೆ | 50 ಜನ ಅಸ್ವಸ್ಥ, ಸೋರಿಕೆಗೆ ಕಾರಣ ಏನು? | chlorine gas leak
Share
Notification Show More
Font ResizerAa
Font ResizerAa
Namma JanaNamma Jana
  • ಇಂದಿನ ಸುದ್ದಿ
  • ರಾಜಕೀಯ
  • ವಿಶೇಷ ಸುದ್ದಿ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಆರೋಗ್ಯ
  • ಕ್ರೀಡೆ
  • ದಿನ ಭವಿಷ್ಯ
  • ರಾಜಕೀಯ
Search
  • ಇಂದಿನ ಸುದ್ದಿ
  • ರಾಜಕೀಯ
  • ವಿಶೇಷ ಸುದ್ದಿ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಆರೋಗ್ಯ
  • ಕ್ರೀಡೆ
  • ದಿನ ಭವಿಷ್ಯ
  • ರಾಜಕೀಯ
Have an existing account? Sign In
Follow US
  • Advertise
© 2024 Namma Janna. Kannada News Portal. All Rights Reserved.
Namma Jana > Blog > ಕ್ರೈಂ ಸುದ್ದಿ > ಹೊಸದುರ್ಗ | ಕ್ಲೋರಿನ್‌ ಗ್ಯಾಸ್ ಸೋರಿಕೆ | 50 ಜನ ಅಸ್ವಸ್ಥ, ಸೋರಿಕೆಗೆ ಕಾರಣ ಏನು? | chlorine gas leak
ಕ್ರೈಂ ಸುದ್ದಿ

ಹೊಸದುರ್ಗ | ಕ್ಲೋರಿನ್‌ ಗ್ಯಾಸ್ ಸೋರಿಕೆ | 50 ಜನ ಅಸ್ವಸ್ಥ, ಸೋರಿಕೆಗೆ ಕಾರಣ ಏನು? | chlorine gas leak

Editor Nammajana
Last updated: 10 September 2024 07:06
By Editor Nammajana 2 Min Read
Share
SHARE

Chitradurga news |nammajana.com|10-9-2024

ನಮ್ಮಜನ.ಕಾಂ, ಹೊಸದುರ್ಗ: ನೀರು ಶುದ್ದೀಕರಣ ಮಾಡಲು ಬಳಸುವ ಕ್ಲೋರಿನ್ ಸಿಲಿಂಡ‌ರ್ ಸೋರಿಕೆಯಾಗಿ ಉಂಟಾದ (chlorine gas leak) ವಾಸನೆಯಿಂದ ಸುಮಾರು 50 ಕ್ಕೂ ಹೆಚ್ಚು ಜನರು ಅಸ್ವಸ್ಥರಾದ ಘಟನೆ ಪಟ್ಟಣದಲ್ಲಿ ಸೋಮವಾರ ಸಂಜೆ ನಡೆದಿದೆ.

ಹೊಸದುರ್ಗ ಪಟ್ಟಣಕ್ಕೆ ಕೆಲ್ಲೋಡು ಬಳಿ ವೇದಾವತಿ ನದಿಗೆ ನಿರ್ಮಿಸಲಾಗಿರುವ ಬ್ಯಾರೇಜ್‌ನಿಂದ ನೀರನ್ನು ಶುದ್ದೀಕರಿಸಿ ಸರಬರಾಜು ಮಾಡಲಾಗುತ್ತದೆ.

ಪಟ್ಟಣದ ಎಪಿಎಂಸಿ ಮಾರುಕಟ್ಟೆ ಮುಂಭಾಗದಲ್ಲಿರುವ ಶುದ್ದೀಕರಣ ಘಟಕದಲ್ಲಿ ನೀರು ಶುದ್ದೀಕರಣಕ್ಕಾಗಿ ದೊಡ್ಡ (chlorine gas leak) ಪ್ರಮಾಣದ ಕ್ಲೋರಿನ್ ಸಿಲಿಂಡರ್‌ ಇಡಲಾಗಿದೆ.

ಸೋಮವಾರ ಸಂಜೆ ಇದ್ದಕ್ಕಿದ್ದಂತೆ ಈ ಸಿಲಿಂಡರ್‌ನಿಂದ ಕ್ಲೋರಿನ್ ಸೋರಿಕೆಯಾಗಿ ಆ ಭಾಗದಲ್ಲಿ ಇಡೀ ವಾತಾವರಣವೇ ಕಲುಷಿತ ಗೊಂಡಿದೆ.

ಉಸಿರಾಟದಲ್ಲಿ ಹೆಚ್ಚು ಕ್ಲೋರಿನ್ ಸೇವನೆಯಿಂದ ಆರೋಗ್ಯಕ್ಕೆ ಹಾನಿಯಾಗುತ್ತದೆ. ಉಸಿರಾಟದ ತೊಂದರೆಯಾಗಿ ಇರಿಸುಮುರಿಸು ಉಂಟಾ ಗುತ್ತದೆ. ಕೆಮ್ಮು, ಎದೆ ನೋವು, (chlorine gas leak) ಉಸಿರಾಟದ ತೊಂದರೆ ಉಂಟಾಗುತ್ತದೆ.

ಹೆಚ್ಚಿನ ಪ್ರಮಾಣದಲ್ಲಿ ಕ್ಲೋರಿನ್ ಸೇವಿಸಿದರೆ ಸಾವೂ ಸಂಭವಿಸಬಹುದಾಗಿದ್ದು, ಮಾರುಕಟ್ಟೆ ಮುಂಭಾಗ ಸೇರಿದಂತೆ ಘಟಕದ ಸುತ್ತಮುತ್ತ ಇದ್ದ ಜನರು ಕ್ಲೋರಿನ್ ವಾಸನೆಯಿಂದ ತೀವ್ರ ಇರಿಸು ಮುರಿಸಿಗೆ ಉಂಟಾಗಿದ್ದಾರೆ.

ಕೆಲವರು ವಾಂತಿ ಮಾಡಲು ಶುರು ಮಾಡಿದ್ದಾರೆ. ಸುದ್ದಿ ಹರಡುತ್ತಿದ್ದಂತೆ ಜನರು ಗಾಬರಿ ಗೊಂಡಿದ್ದಾರೆ. ದಿಗಿಲು ಬಿದ್ದಿದ್ದಾರೆ. ಕೂಡಲೇ ಎಲ್ಲರೂ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಹೋಗಿ ದಾಖಲಾಗಿದ್ದಾರೆ.

ಈ ಕುರಿತು ನಮ್ಮಜನ.ಕಾಂ ಮಾಹಿತಿ ನೀಡಿದ ಪುರಸಭೆ ಮುಖ್ಯಾಧಿಕಾರಿ ತಿಮ್ಮರಾಜು, ಶುದ್ದೀಕರಣ ಘಟಕದ ಕ್ಲೋರಿನ್ ಸಿಲಿಂಡ‌ರ್ ಅತ್ಯಂತ ಹಳೆಯ ದಾಗಿದ್ದು ಸುಸ್ಥಿಯಲ್ಲಿತ್ತು. ಆದರೆ (chlorine gas leak) ಸೋಮವಾರ ಏಕಾಏಕಿನೀರು ಶುದ್ದೀಕರಿಸಲು ಬಳಕೆ ಮಾಡುತ್ತಿದ್ದ ಕ್ಲೋರಿನ್ ಸೋರಿಕೆಯಾಗಿದೆ.

ಇದನ್ನೂ ಓದಿ: Dina Bhavishya kannada: ದಿನ ಭವಿಷ್ಯ ಯಾರಿಗೆಲ್ಲ ಮನೆ ಖರೀದಿ ಯೋಗ?

ಇದರಿಂದ ಘಟಕದ ಬಳಿ ಯಿದ್ದ ಹತ್ತಾರು ಮಂದಿಗೆ ವಾಂತಿಯಾಗಿದೆ. ಹಾಗಾಗಿ ಜನರು ಗಾಬರಿಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಸದ್ಯ ಸೋರಿಕೆಯನ್ನು ನಿಲ್ಲಿಸಲಾಗಿದೆ. ಹೆಚ್ಚಿನ ಆನಾಹುತವೇನು ಆಗಿಲ್ಲ. ಅಲ್ಲದೆ ಆಸ್ಪತ್ರೆಗೆ (chlorine gas leak) ದಾಖಲಾಗಿರುವವರು ಕೂಡ ಆರೋಗ್ಯವಾಗಿದ್ದಾರೆ ಎಂದು ತಿಳಿಸಿದ್ದಾರೆ.

ಸೋರಿಕೆಗೆ ಸಿಬ್ಬಂದಿ ಬೇಜವಬ್ದಾರಿ ಕಾರಣ:

ಅಪಾಯದ ವಸ್ತುಗಳನ್ನು ಕಟ್ಟಡದ ಒಳಗೆ ಇಡಬೇಕಿದ್ದ ಸಿಬ್ಬಂದಿ ಬಯಲಿನಲ್ಲಿ ಇರಿಸಿದ್ದಾರೆ ಎನ್ನುವ ಸಂಗತಿ ಪ್ರತ್ಯಕ್ಷದರ್ಶಿಗಳಿಂದ ತಿಳಿದು ಬಂದಿದೆ. ಹಲವು ದಿನಗಳಿಂದ ಇದನ್ನು ಅದರ ಪಿನ್ ಘಟಕದ ಹೊರಭಾಗದಲ್ಲಿ ಇಡಲಾಗಿದೆ.

ಯಾರೋ ಹುಡುಗರು ಅದರ ಅನ್ನು ಕಲ್ಲಿನಲ್ಲಿ ಹೊಡೆದಿದ್ದಾರೆ. ಇದರಿಂದ ಸೋರಿಕೆಯಾಗಿದೆ ಎನ್ನಲಾಗುತ್ತಿದೆ. ರಾತ್ರಿಯವರೆಗೂ ವಾತಾವರಣದಲ್ಲಿ ಕ್ಲೋರಿನ ವಾಸನೆ ಇದ್ದುದರಿಂದ ಇನ್ನೂ (chlorine gas leak) ಪಟ್ಟಣದ ಜನತೆ ಆತಂಕದಲ್ಲಿದ್ದರು.

ಆಸ್ಪತ್ರೆಯಲ್ಲಿ ಸಿಬ್ಬಂದಿಯಿಲ್ಲದೆ ಪರದಾಟ:

ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಇಡಲಾಗಿದ್ದ ಗಣಪತಿಯನ್ನು ವಿಸರ್ಜಿಸಲು ಆಸ್ಪತ್ರೆಯ ಸಿಬ್ಬಂದಿ ತೆರಳಿದ್ದರು. ಆಸ್ಪತ್ರೆಯಲ್ಲಿ ಬೆರಳೆಣಕಿಯಷ್ಟು ಸಿಬ್ಬಂದಿ ಮಾತ್ರ ಇದ್ದರು. ಏಕಾ ಏಕಿ ಆಸ್ಪತ್ರೆಗೆ ಜನರು ದಾಖಲಾಗುತ್ತಿದ್ದಂತೆ ಸಿಬ್ಬಂದಿ ಅವರನ್ನು ಚಿಕಿತ್ಸೆ ಮಾಡಲು ಪರದಾಡಿದರು. ಅಲ್ಲದೆ ಜನರೂ ಕೂಡ (chlorine gas leak) ಗಾಬರಿಯಿಂದ ಚಿಕಿತ್ಸೆಗಾಗಿ ಪರದಾಡಿದ್ದಾರೆ .

ಇದನ್ನೂ ಓದಿ: ಗಂಡ ಹೆಂಡತಿ ಜಗಳ ಕೊಲೆಯಲ್ಲಿ ಅಂತ್ಯ | Murder

ಇಲ್ಲಿ ಚಿಕಿತ್ಸೆ ಸಿಗುತ್ತೋ ಇಲ್ಲವೋ ಎಂದು ಖಾಸಗಿ (chlorine gas leak) ಆಸ್ಪತ್ರೆಗಳತ್ತವೂ ಮುಖಮಾಡಿದ್ದಾರೆ. ಇನ್ನೂ ಉಸಿರಾಟದ ಸಮಸ್ಯೆ ಕಂಡು ಬಂದವರಿಗೆ ಸಾರ್ವ ಜನಿಕ ಆಸ್ಪತ್ರೆಯಲ್ಲಿ ಆಕ್ಸಿಜನ್‌ ಇದ್ದರೂ ಅದನ್ನು ಅಳವಡಿಸಲು ವಿಳಂಬವಾಗಿದೆ. ಸಾರ್ವಜನಿಕರು ಆಸ್ಪತ್ರೆ ಸಿಬ್ಬಂದಿ ವರ್ತನೆಯ ಬಗ್ಗೆ ಬೇಸರ ವ್ಯಕ್ತ ಪಡಿಸಿದರು.

You Might Also Like

POWER CUT | ಇಂದು ಬೆಳಗ್ಗೆಯಿಂದ ಸಂಜೆವರೆಗೆ ಕರೆಂಟ್ ಇರಲ್ಲ

Dina Bhavishya | ದಿನ ಭವಿಷ್ಯ, ಇವತ್ತು ಯಾವ್ಯಾವ ರಾಶಿಗೆ ಶುಭ ಲಾಭ, ನಷ್ಟ ನೋಡಿ

Dina Bhavishya | ದಿನ ಭವಿಷ್ಯ, ಇವತ್ತು ಯಾವ್ಯಾವ ರಾಶಿಗೆ ಶುಭ?

Dina Bhavishya | ದಿನ ಭವಿಷ್ಯ, ಇವತ್ತು ಯಾವ್ಯಾವ ರಾಶಿಗೆ ಶುಭ ಯೋಗ?

Dina Bhavishya | ದಿನ ಭವಿಷ್ಯ, ಯಾವ್ಯಾವ ರಾಶಿಗೆ ಶುಭ ಯೋಗ?

TAGGED:50 people sick50 ಜನ ಅಸ್ವಸ್ಥChitradurga Newschlorine gasgas leakHosdurgaKannada Newskannada suddileakNammajana.comಅನಿಲ ಸೋರಿಕೆಕನ್ನಡ ನ್ಯೂಸ್ಕನ್ನಡ ಸುದ್ದಿಕ್ಲೋರಿನ್ ಅನಿಲಚಿತ್ರದುರ್ಗ ನ್ಯೂಸ್ಚಿತ್ರದುರ್ಗ ಸುದ್ದಿನಮ್ಮಜನ.ಕಾಂಸೋರಿಕೆಹೊಸದುರ್ಗ
Share This Article
Facebook Twitter Whatsapp Whatsapp Telegram Email Print
ಈ ಮೇಲಿನ ಸುದ್ದಿ, ಲೇಖನದ ಬಗ್ಗೆ ನಿಮ್ಮ ಅನಿಸಿಕೆ ಏನು?
Love0
Sad0
Happy1
Sleepy0
Angry0
Dead0
Wink0
Previous Article ಗಂಡ ಹೆಂಡತಿ ಜಗಳ ಕೊಲೆಯಲ್ಲಿ ಅಂತ್ಯ | Murder
Next Article ಅಡಕೆ ಧಾರಣೆ |10 ಸೆಪ್ಟಂಬರ್ 2024 | ಭೀಮಸಮುದ್ರ, ಶಿವಮೊಗ್ಗ ಮಾರುಕಟ್ಟೆಯಲ್ಲಿ ಎಷ್ಟಿದೆ ಅಡಿಕೆ ರೇಟ್ ? | Adike Rate
Leave a comment

Leave a Reply Cancel reply

Your email address will not be published. Required fields are marked *

Stay Connected

TelegramFollow

Latest News

Transfer | ಜಿಲ್ಲಾ ಬಿಸಿಎಂ ಅಧಿಕಾರಿ ಆರ್.ಸುಬ್ರಾನಾಯಕ್ ವರ್ಗಾವಣೆ, ನೂತನ ಅಧಿಕಾರಿ ಅಧಿಕಾರ ಸ್ವೀಕಾರ
ಇಂದಿನ ಸುದ್ದಿ
Gold Rate | ಬಂಗಾರದ ಬೆಲೆಯಲ್ಲಿ ಏರಿಕೆ
ಇಂದಿನ ಸುದ್ದಿ
POWER CUT | ಇಂದಿನಿಂದ ಎರಡು ದಿನ ಬೆಳಗ್ಗೆಯಿಂದ ಸಂಜೆವರೆಗೂ ಕರೆಂಟ್ ಇರಲ್ಲ
ಇಂದಿನ ಸುದ್ದಿ
Adike rate | ಅಡಿಕೆ ಬೆಲೆಯಲ್ಲಿ ಇಳಿಕೆ
ಅಡಿಕೆ ಧಾರಣೆ

Kannada News (ಕನ್ನಡ ಸುದ್ದಿ): Get the latest updates of karnataka news, world news, india news, political News and celebrity Kannada news and more on Nammajana (nammajana.com).

Sign Up for Our Newsletter

Subscribe to our newsletter to get our newest articles instantly!

Namma JanaNamma Jana
© 2025 NammaJanna. Kannada News Portal. All Rights Reserved.
adbanner
AdBlock Detected
Our site is an advertising supported site. Please whitelist to support our site.
Okay, I'll Whitelist
Welcome Back!

Sign in to your account

Lost your password?